Saturday, October 21, 2017

ASHWATHA VRUKSHA SANDESHA ( वृक्ष संदॆश )GOVINDA

ಶ್ರೀ ಅಶ್ವತ್ಥ ವೃಕ್ಷ ಸಂದೇಶ


ಶ್ರೀ ಗುರುಭ್ಯೋ ನಮಃ ಹರಿ ಓಂ 

ಓಂ ಶ್ರೀ ಓಂ ಏಹಿ ಮಮ ಹೃತ್ಪದ್ಮಸ್ಥಿತ ಶ್ರೀ ಗೋವಿಂದಪುರವರಾಧೀಶಃ  ॥  
ಯೋ ಅಶ್ವತ್ಥ ರೂಪೇಣ ನದೀ ತಟಾಕೆ ವಿರಾಜತೆ ಸರ್ವ ಜಗನ್ನಿವಾಸ: | ಬ್ರಹ್ಮಾಧಿದೇವಾಚ್ಯುತ ಪಾದಪಲ್ಲವೋ ಗೋವಿಂದರಾಜೋ ವತು ಮಾಂ ಪರೇಶ:
ಅಶ್ವತ್ಥರೂಪ ತ್ರಯಾತ್ಮಕಬಿಂಬ ರೂಪಿಣಂಚ ಶ್ರೀ ಲಕ್ಷ್ಮೀಗೋವಿಂದರಾಜ ಪೀಠಸ್ಥಿತೈಃ ॥  ಉದ್ಧೃತ್ಮಯಾದಿ ಪ್ರತಿಮಾಂತ ಸ್ಥಿತ ಓಜಃ ಸ್ಸಾರಮಯ ಪ್ರತಿಮಾಂತ ಸ್ಥಿತ ಚತುರ್ಭುಜ ॥  
ಶಂಖ ಚಕ್ರ ಗದಾ ಪದ್ಮ ವನಮಾಲಾ ವಿಭೂಷಿತ ಚಾಪ ಬಾಣ ಶಾರ್ಂಗ ತಾರ್ಕ್ಷ ನಂದಕಿ ॥  ಅಭಯ ಹಸ್ತಕಿ ದಕ್ಷಿಣಾವಾಹ್ಯ ಭೀಮರಥಿ ತೀರೇ ಸ್ವಪ್ರತಿಮಾಯಾಮ್ ಆವಾಹಯಾಮಿ ॥

         ನಿರಾಕಾರ ಅಭಿವ್ಯಕ್ತಿಯ ಆರಾಧನೆಯು ಮಾನವನ ಲಕ್ಷವಿದ್ದರೂ, ಸಾಕಾರ ರೂಪದ ಸೋಪಾನಗಳನ್ನು ಸಮರ್ಥ ರೀತಿಯಿಂದ ನಿಸ್ವಾರ್ಥದಿಂದ ಪೂರ್ತಿಗೊಳಿಸುವುದಕ್ಕೆ ಒಂದು ವೇಳೆ ಅಡೆತಡೆಗಳಿದ್ದರೆ ನಿಸರ್ಗನಿರ್ಮಿತ ಪಂಚಮಹಾಭೂತಗಳ ಪೂಜೆ ಸರ್ವಥಾ ಉತ್ತಮ. ನಿಸರ್ಗ ಸಾನಿಧ್ಯದಲ್ಲಿ ನಮ್ಮನ್ನು ನಾವು ಮರೆತು ಬೆರೆಯುವುದೇ ಅಂತಿಮಲಕ್ಷ...........ಅಶ್ವತ್ಥ ವೃಕ್ಷ

        ಪಾಷಾಣದಂತೆ ಪ್ರತಿಕೂಲ ವಸ್ತುವಿನ ಮೇಲೆ ಕಾಲು ಮೆಟ್ಟಿ "ನಾನು" ಎಂದು ತಲೆಯೆತ್ತಿ ಸ್ವಾಭಿಮಾನದಿಂದ ಜೀವನಸಾಗಿಸುವುದೇ ನನ್ನ ಉದ್ದೇಶ. ಪ್ರತಿಯೊಂದಕ್ಕೂ ಅನ್ಯರನ್ನು ಅವಲಂಬಿಸಿ ಇರುವುದು ಬೇಡ.  
ನಾನು ಆಹಾರಕ್ಕೇಂದು, ನೀರಿಗೆಂದು ಭೂಮಿಯ ಆಳಕ್ಕೆ ಇಳಿಯುವುದಿಲ್ಲ. ನನ್ನ ಬೇರುಗಳು ಕೇವಲ ಮೇಲ್ಮೇಲೆಯೇ ಹರಡಿರುತ್ತವೆ. ವಾತಾವರಣದಲ್ಲಿಯ ಆರ್ದ್ರತೆಯನ್ನೇ ಹೀರಿಕೊಂಡು ಕೋಂಬೆ ಕೋಂಬೆಯಾಗಿ ಆಕಾಶದೆತ್ತರಕ್ಕೆ ಹರಡುತ್ತ ಬೆಳೆಯುತ್ತೇನೆ.  ಯಾವಾಗಲೂ ಪರಿಸ್ಥಿತಿಯ ದುಃಖಾರ್ತಗಳನ್ನು ನೆನಪಿಸಿಕೊಂಡು ಕೂಡುವುದರಲ್ಲಿ ಏನು ಅರ್ಥವಿಲ್ಲ. ಗರುಡನಂತೆ ಧೃವಮಂಡಲದ ಕಡೆಗೆ ದೃಷ್ಟಿಯಿರಲಿ. .....ಅಶ್ವತ್ಥ ವೃಕ್ಷ

ಜೀವನವೆಂಬ ಸಮರಾಂಗಣದಲ್ಲಿ ಪ್ರಾಪ್ತ ಪರಿಸ್ಥಿತಿಗಳನ್ನು, ಆಹ್ವಾನಗಳನ್ನು ಎದುರಿಸಿ ಅನಾನುಕೂಲತೆಗಳಲ್ಲಿ ಅನುಕೂಲತೆಗಳನ್ನು ಕಂಡುಕೊಂಡು ಸಾಧನೆ ಮಾಡುವುದರಲ್ಲಿಯೇ ಪುರುಷಾರ್ಥವಿದೆ ವಿನಃ ಪಲಾಯನವಾದದಲ್ಲಿ ಇಲ್ಲ. ಹೆಜ್ಜೆ ಹೆಜ್ಜೆಗೂ ಇನ್ನೊಬ್ಬರ ಸಹಾಯ ಸಹಕಾರಗಳ ಅಪೇಕ್ಷೆ ಮಾಡದೆ ಸ್ವಯಂಭು ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸ್ವಾವಲಂಬಿಯಾಗಿರಬೇಕು. ಬೇಡುವುದಕ್ಕಿಂತ ಪಡೆದುಕೊಳ್ಳುವುದರ ಕಡೆಗೆ ಹೆಚ್ಚಿನ ಗಮನವಿರಲಿ ............ಅಶ್ವತ್ಥ ವೃಕ್ಷ

ಜೀವನದಲ್ಲಿ ಒಂದೇ ಒಂದು ಏಳೆ ಸುಖದಾಯಕವಿದ್ದು, ಉಳಿದ ಎರಡು ಏಳೆಗಳು ದುಃಖಪ್ರದಾಯಕ ಇರುತ್ತವೆ. ಈ ಮೂರು ಏಳೆಗಳ ಸಿಹಿ-ಕಹಿ ಪರ್ಯಾಯದ ಸಂಮಿಶ್ರ ಹೊಡೆತದ ದುಃಖಪೂರ್ಣ ಮತ್ತು ಆವೇಷದ ಕ್ಷಣಗಳಲ್ಲೂ ಮಾನಸಿಕ, ಶಾರೀರಿಕ ಸ್ಥಿರತೆಯಿಂದ ದೃಢತೆಯನ್ನು ನೀಡುವುದಲ್ಲದೆ, ಜೀವನದಲ್ಲಿ ಬರುವ ಕಹಿಗಳಿಂದಲೇ ಸಿಹಿಗಳ  ಅಂತಿಮ  ಪೂರ್ಣಾನುಭೂತಿಯನ್ನು ಹೊಂದುವ, ಭವಿಷ್ಯದಲ್ಲಿ ಪೂರ್ಣವಿರಾಮವನ್ನು ಆರೋಗ್ಯಪೂರ್ಣವಾಗಿ ಕಂಡುಕೊಳ್ಳುವುದೇ ಮಾನವನ ಅಂತಿಮ ಲಕ್ಷವಾಗಿರಬೇಕು............ನಿಂಬಕ ವೃಕ್ಷ

ಸ್ವಸಂರಕ್ಷಣೆಗಾಗಿ ಪ್ರತಿಭಟನೆ ಅನಿವಾರ್ಯ. ಅಹಿಂಸೆಯೆಂದು ತಟಸ್ಥವಾಗಿರುವುದು ಸಲ್ಲ. ಸ್ವಯಂ ಶೋಷಣೆ, ವಂಚನೆ ಇವೆಲ್ಲ ಇನ್ನೊಬ್ಬರಿಗೆ ಹೇಗೆ ಹಿಂಸೆಯೋ ಹಾಗೆ ಸ್ವಂತಕ್ಕೂ ಹಿಂಸೆಯೇ. ಅದಕ್ಕೆ ಎದುರಿಸಿ ಹೋರಾಡುವುದು ನನ್ನ ಮೂಲ ಗುರಿ .............ಅಶ್ವತ್ಥ ವೃಕ್ಷ

ಓಂ ಶ್ರೀ ಅಶ್ವತ್ಥ ನಿಂಬಕಾವಿರ್ಭವ ಶ್ರೀ ರಾಮಕೃಷ್ಣ ವೇದವ್ಯಾಸಾತ್ಮಕ ಹನುಮದ್ ಭೀಮ ಮಧ್ವಾಂತರ್ಗತ ಭಾರತಿರಮಣ  ಮುಖ್ಯ ಪ್ರಾಣಾಂತರ್ಗತ ಶ್ರೀ ಚಂದ್ರಲಾಂಬಾ ಸಹಿತ ಲಕ್ಷ್ಮೀ ಗೋವಿಂದರಾಜ ದೇವತಾಭ್ಯೋ ನಮಃ ॥ ಶ್ರೀ ಕೃಷ್ಣಾರ್ಪಣಮಸ್ತು ॥  
॥ ಓಂ ಶ್ರೀ ಅಶ್ವತ್ಥವೃಕ್ಷಾಯ ನಮಃ ॥
              ಸಿಂಧೂ-ಸರಸ್ವತಿ ಸಂಸ್ಕೃತಿಯ ಜನರಿಗೆ ಕೃಷ್ಣನಿಗೆ ಸಂಬಂಧಿಸಿದ ಕಥೆಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತದೆ. ಅದೇ ಸಮಯದಲ್ಲಿ ಸಂಬಂಧಿತ ಹುಡುಕಾಟದಲ್ಲಿ ಮತ್ತೊಂದು ಪರೋಕ್ಷ ಸಾಕ್ಷ್ಯವನ್ನು ಕಂಡುಕೊಂಡಾಗ ಅದನ್ನು ನಿರ್ಲಕ್ಷಿಸಲಾಗುವುದೇ ಇಲ್ಲ. ಸಿಂಧೂ-ಕಣಿವೆಯ ಮುದ್ರೆಗಳು ದೇವತಾ ಸ್ವರೂಪವಾದ ವೃಷಭನಿಂದ ಕುದುರೆಗಳು ಮೀನುಗಳವರೆಗೆ ಹೇರಳವಾಗಿ ಪ್ರಾಣಿ ರೂಪಗಳನ್ನು ನಮಗೆ ತೋರಿಸುತ್ತವೆ; ಆದಾಗ್ಯೂ, ಕುತೂಹಲಕಾರಿಯಾಗಿ, ಒಂದು ನಿರ್ದಿಷ್ಟ ರೀತಿಯ ಮರದ ಕೆತ್ತನೆ ಮತ್ತು ಅದರ ಎಲೆಗಳು ಎಲ್ಲಾ ಸಿಂಧೂ ತಾಣಗಳಲ್ಲಿ ಏಕರೂಪವಾಗಿ ಕಂಡುಬರುತ್ತವೆ ಅದುವೆ ಪೀಪಲ್ ಲೀವ್ಸ್ (ಅಶ್ವತ್ಥ ಎಲೆ)
          ಶ್ರೀಮದ್ ಭಗವದ್ಗೀತೆಯ 10 ನೇ ಅಧ್ಯಾಯದಲ್ಲಿ, ಮರಗಳ ನಡುವೆ ತಾನು ಅಶ್ವತ್ಥ ಅಥವಾ ಪಿಪ್ಪಲ ವನ್ನು ಪ್ರತಿನಿಧಿಸುತ್ತೇನೆ ಎಂದು ಶ್ರೀ ಕೃಷ್ಣ ಹೇಳುತ್ತಾನೆ  ಅದೇ ಸಿಂಧೂ ಮುದ್ರೆಯ ಮೇಲೆ ಪ್ರತಿನಿಧಿಸಿರುವ  ಏಕೈಕ ಎಲೆ- ಅಶ್ವತ್ಥ ಎಲೆ. ಇದು ಕೃಷ್ಣನನ್ನು ಮಾನವ ಸ್ವರೂಪದಿಂದಲ್ಲದ ವಿಶೇಷ  ನೈಸರ್ಗಿಕ ರೂಪದಲ್ಲಿ ಚಿತ್ರಿಸಲಾಗಿದೆ, 

ಋಷಿ ಮಾರ್ಕಂಡೇಯನ ಕಥೆಯಲ್ಲಿ, ಪ್ರಪಂಚದ ಅಂತ್ಯದ ಸಮಯ ನೀರಿನಲ್ಲಿ ತೇಲುತ್ತಿರುವ ಅಶ್ವತ್ಥ ಎಲೆಯ ಮೇಲೆ ಮಲಗಿರುವ ಮಗುವಿನಂತೆ ಕೃಷ್ಣನು ಋಷಿಗೆ ಗೋಚರಿಸಿದ್ದ. 
ಶ್ರೀ ಕೃಷ್ಣಾರ್ಪಣಮಸ್ತು

No comments:

Post a Comment