Monday, September 11, 2023

GARUNI PARA VIDYA ಗಾರುಣಿ ಪರಾವಿದ್ಯಾ

GARUNI PARA VIDYA 

ಗಾರುಣಿ ಪರಾವಿದ್ಯಾ

ಗರುಡನು ಶ್ರೀ ಮಹಾವಿಷ್ಣುವಿನ ಬಳಿ ಎಂತಹದೇ ಕಷ್ಟದ ಕಾಲದಲ್ಲಿ, ಎಂತಹ ಪರಿಸ್ಥಿತಿಯಲ್ಲೂ ಏನು ಆಗಬಾರದು ಅಂತಹ ಒಂದು ಮಂತ್ರವನ್ನು ತಿಳಿಸಿಕೊಡಿ ಎಂದು ಕೇಳಿದಾಗ, ಗರುಡನಿಗೆ ಮಹಾವಿಷ್ಣು ಈ ಮಂತ್ರವನ್ನು ಹೇಳುತ್ತಾರೆ. ಈ ಮಂತ್ರವನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ. ಗರುಡ ಪುರಾಣದಲ್ಲಿ ಉಲ್ಲೇಖವಾಗಿರುವ ಈ ಮಂತ್ರದ ಹೆಸರು ಏನಂದರೆ ಗಾರುಣಿ ಪರಾವಿದ್ಯಾ ಮಂತ್ರ. ಈ ಮಂತ್ರವನ್ನು ಪ್ರತಿನಿತ್ಯ ಹೇಳುವುದರಿಂದ ಆರೋಗ್ಯವು ವೃದ್ಧಿಯಾಗುತ್ತದೆ. ಈ ಮಂತ್ರದಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ. ಈ ಮಂತ್ರವನ್ನು ಹೇಳಬೇಕಾದರೆ ಶ್ರದ್ಧಾಭಕ್ತಿಯಿಂದ ನಂಬಿಕೆಯನ್ನು ಇಟ್ಟು ಹೇಳಬೇಕು. ದೇವರನ್ನು ನಂಬಿ ಈ ಮಂತ್ರವನ್ನು ಹೇಳಿದರೆ ಎಲ್ಲವೂ ಒಳ್ಳೆಯದಾಗುತ್ತದೆ.

ಓಂ ಯಕ್ಷಿ ಓಂ ಅಂ ಸ್ವಾಹಾ 

ಈ ಮಂತ್ರವನ್ನು ಪ್ರತಿನಿತ್ಯ ಮುಂಜಾನೆ ಸ್ನಾನ ಮಾಡಿದ ನಂತರ 108 ಬಾರಿ ಹೇಳುವುದರಿಂದ ಜೀವನದಲ್ಲಿ ತುಂಬಾ ಒಳ್ಳೆಯದಾಗುತ್ತದೆ. ಒಂದು ವೇಳೆ 108 ಬಾರಿ ಜಪಿಸುವುದಕ್ಕೆ ಸಮಯವಿಲ್ಲ ಎಂದರೆ ಕನಿಷ್ಠ 21 ಬಾರಿ ಜಪಿಸಬೇಕು. ಈ ಮಂತ್ರವನ್ನು ಸಮಯ ಸಿಕ್ಕಾಗಲೆಲ್ಲಾ ಯಾವುದೇ ಜಾಗದಲ್ಲಿ ಇದ್ದರು ಜಪಿಸಬಹುದು. ಒಂದು ವೇಳೆ ಯಾರಾದರೂ ಆರೋಗ್ಯದ ಸಮಸ್ಯೆಯಿಂದ ಹಾಸಿಗೆಯನ್ನು ಹಿಡಿದಿದ್ದರೆ ಅಂತವರು ಮಲಗಿಕೊಂಡೆ ಈ ಮಂತ್ರವನ್ನು ಜಪಿಸಬಹುದು. ಇದರಿಂದ ಅವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ.

ಗಾರುಣಿ ಪರಾವಿದ್ಯಾ ಮಂತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ಆರೋಗ್ಯ ಸ್ಥಿರವಾಗಿರುತ್ತದೆ ಹಾಗೂ ಯಾವುದೇ ರೀತಿಯ ಆರೋಗ್ಯದ ಸಮಸ್ಯೆಯೂ ಬರುವುದಿಲ್ಲ.ಗಾರುಣಿ ಪರಾವಿದ್ಯ ಮಂತ್ರವನ್ನು ಜಪಿಸುವ ದಿನ ಮುಂಜಾನೆ ಎದ್ದು, ಮನೆಯನ್ನು ಶುಚಿ ಮಾಡಿ, ದೇವರಿಗೆ ತುಪ್ಪದ ದೀಪವನ್ನು ಹಚ್ಚಿ ಈ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಜಪಿಸುವುದರಿಂದ ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ 

ಗರುಡ ಮಂತ್ರ :

"ಕುಂಕುಮಾಂಕಿತ ವರ್ಣಾಯ ಕುದೆಂದು ಧವಳಾಯಚ!, ವಿಷ್ಣುವಾಹನ ನಮಸ್ತುಭ್ಯಂ; ಪಕ್ಷೀರಾಜಾಯ ತೇ ನಮಃ"

ಶ್ರೀಗರುಡ ದೇವರ ಮಂತ್ರ ಅಷ್ಟೋತ್ತರ ಫಲ !

೧. ಕಣ್ಣಿಗೆ ಸಂಭಂದ ಪಟ್ಟ ಸಮೀಪ ದೃಷ್ಟಿದೋಷ, ದೂರದೃಷ್ಟಿದೋಷ ನಿವಾರಣೆಯಾಗುತ್ತದೆ.. ಕಣ್ಣು ಕೆಂಪಾಗುವುದು, ನೋವು, ಉರಿ ನಿವಾರಣೆಯಾಗುತ್ತದೆ..

೨. ದ್ವಿತೀಯ ರಾಹು, ಪಂಚಮ ರಾಹು, ಸಪ್ತಮ ರಾಹು,

ದ್ವಾದಶ ರಾಹು ದೋಷಗಳು, ಸರ್ವರೀತಿಯ ಸರ್ಪದೋಷಗಳೂ ನಿವಾರಣೆಯಾಗುತ್ತದೆ..

೩. ಮನಸ್ಸಿನಲ್ಲಿ ನೋವು, ಅಸಮಾಧಾನ , ಬೇಸರ ಇಟ್ಟುಕೊಂಡು ಮನದಲ್ಲೇ ಕೊರಗುವವರು ಓದಿದರೆ ಮನಸ್ಸು ನಿರ್ಮಲವಾಗುತ್ತದೆ.. ಶಾಂತವಾಗಿರುತ್ತಾರೆ..

೪. ಸರ್ಪದೋಷ, ಕಾಳಸರ್ಪದೋಷ, .. ಇತ್ಯಾದಿ ಸರ್ಪದೋಷಗಳ ಪೂರ್ಣವಾಗಿ ನಿವಾರಣೆಯಾಗುತ್ತದೆ..

೫. ಸಮಸ್ತ ಕುಜದೋಷಗಳು ನಿವಾರಣೆಯಾಗುತ್ತದೆ..

೬. ಸರ್ಪಸುತ್ತು ವಾಸಿಯಾಗುತ್ತದೆ..

೭. ರಾಹು ನಕ್ಷತ್ರಗಳಲ್ಲಿ ಜನಿಸಿದ್ದರೆ ಆರಿದ್ರಾ, ಸ್ವಾತಿ, ಶತಭಿಷ..! ಕೇತು ನಕ್ಷತ್ರಗಳಲ್ಲಿ ಜನಿಸಿದ್ದರೆ ಅಶ್ವಿನಿ, ಮಖಾ, ಮೂಲಾ ..! ಕುಜನ ನಕ್ಷತ್ರಗಳಲ್ಲಿ ಜನಿಸಿದ್ದರೆ ಮೃಗಶಿರ, ಚಿತ್ತ, ಧನಿಷ್ಟ..! ಆದವರ ನಕ್ಷತ್ರಗಳ ದೋಷ ನಿವಾರಣೆಯಾಗುತ್ತದೆ..

೮. ಮಿಥುನಲಗ್ನದಲ್ಲಿ ಜನಿಸಿದ ಎಲ್ಲರೂ, ವಿವಾಹದ ನಂತರ ಜೀವನದಲ್ಲಿ ನೆಮ್ಮದಿ ಇಲ್ಲದವರು ಓದಿದರೆ ನೆಮ್ಮದಿ ಹಾಗೂ ಶಾಂತಿಯಿಂದ ಜೀವನ ಮಾಡುತ್ತಾರೆ..

೯. ದೈವದೋಷವಿರುವವರು, ದೈವಶಾಪವಿರುವವರು, ಆಶ್ಲೇಷ ಬಲಿ ಮಾಡಿಸಿದ್ದರೂ ದೋಷ ಹೋಗದೇ ಕಷ್ಟ ಅನುಭವಿಸುತ್ತಿದ್ದರೆ ಅಂತವರು ಗರುಡ ಅಷ್ಟೋತ್ತರ ಓದಿದರೆ ಸರ್ವ ದೋಷಗಳು ನಿವಾರಣೆಯಾಗುತ್ತದೆ..

೧೦. ಸರ್ಪಸಂಸ್ಕಾರ ಮಾಡಿಸಿಯೂ ದೋಷ ಹೋಗದಿದ್ದರೆ, ನೆನೆದ ಕಾರ್ಯಗಳು ಆಗದೇ ಇದ್ದರೆ ಅಂತವರು ಓದಿದರೆ ಶುಭವಾಗುತ್ತದೆ..

೧೧. ಸತಿಪತಿಗಳ ಜಗಳ ನಿವಾರಣೆಯಾಗುತ್ತದೆ.. ರಾಹು-ಕೇತು ದೋಷಗಳು ನಿವಾರಣೆಯಾಗುತ್ತದೆ..

೧೨. ಅನುಮಾನ, ಒಳಜಗಳ, ಪರದಾಟಗಳು ನಿವಾರಣೆಯಾಗುತ್ತದೆ..

೧೩. ಪ್ರಸವ ಕಾಲದಲ್ಲಿ ಶಿಶುವು ಮಾಲೆಯನ್ನು ಹಾಕಿಕೊಂಡು ಜನಿಸಿದ್ದರೆ, ಕರುಳಬಳ್ಳಿ ಸುತ್ತಿ ಹುಟ್ಟಿದೆ ಅನ್ನುವ ದೋಷಗಳೆಲ್ಲವೂ ನಿವಾರಣೆಯಾಗುತ್ತದೆ..

೧೪. ಮಕ್ಕಳು ತುಬಾ ಅನಾರೋಗ್ಯದಿಂದ ಇದ್ದು, ಜ್ವರ ಬಂದು ವಾಸಿಯಾಗದೇ ಇದ್ದರೆ, ಮಗುವಿನ ಕತ್ತು ಮತ್ತು ಸೊಂಟ ಸರಿಯಾಗಿ ನಿಲ್ಲದಿದ್ದರೆ, ಆ ಮನೆಯವರು, ಶಾಸ್ತ್ರೋಕ್ತವಾಗಿ ಗರುಡದೇವರನ್ನು ಪೂಜಿಸಿ, ಯಾವುದಾದರೂ ಎಣ್ಣೆಯಲ್ಲಿ ಅಭಿಮಂತ್ರಿಸಿ ಹಚ್ಚಿದರೆ ಬಹಳ ಬೇಗ ಮಗು ಆರೋಗ್ಯವಂತರಾಗುತ್ತಾರೆ..

೧೫. ಕಣ್ಣಿನಲ್ಲಿ ಪೊರೆ ಬರುತ್ತಿರುವವರು, ಕಣ್ಣು ಕೆಂಪಗೆ ಆಗುತ್ತಿದ್ದರೆ, ಉರಿ ಬರುತ್ತಿದ್ದರೆ, ಗರುಡ ಮಂತ್ರವನ್ನು ನೀರಿನಲ್ಲಿ ಅಭಿಮಂತ್ರಿಸಿ, ಆ ನೀರಿನಿಂದ ಕಣ್ಣು ಶುದ್ಧ ಮಾಡಿಕೊಂಡರೆ, ಸಮಸ್ತ ನೇತ್ರದೋಷ ಪೂರ್ಣವಾಗಿ ನಿವಾರಣೆಯಾಗುತ್ತದೆ..

ॐ तुभ्यं नमामि नारायणाय

तुभ्यं नमामि जगदीश्वराय ।

हे लक्ष्मीकांतम तुभ्यं नमामि

हे शांताकारम तुभ्यं नमामि ।।

ॐ ಶ್ರೀ ಪಕ್ಷಿರಾಜ ದೇವತಾ ಪ್ರಸೀದತು

No comments:

Post a Comment