ಶ್ರೀ ವ್ಯಾಸಸ್ತುತಿ:
ನಮ್ಮ ನುಡಿಗಳನ್ನು ಅರ್ಥಪೂರ್ಣ ಹಾಗೂ ಸತ್ವಯುತವನ್ನಾಗಿ ಅನುಗ್ರಹಿಸುವ ಸ್ತೋತ್ರ ಮಂಜರಿ.ವಾಕ್ ಸಂಬಂಧ ಏನೇ ದೋಷಗಳಿದ್ದರೂ ಇದರ ನಿವಾರಣೆಗಾಗಿ ಶ್ರೀವಾದಿರಾಜರು ರಚಿಸಿರುವ ಶ್ರೀವ್ಯಾಸಸ್ತುತಿಯ ಪಠಣ ವಾಕ್ ಸಿದ್ಧಿಗೆ ಉತ್ಕೃಷ್ಟ ಮಂತ್ರ ಎಂದು ಅಪರೋಕ್ಷ ಜ್ಞಾನಿಗಳು ಈ-ಮಂತ್ರವನ್ನು ವಿಶೇಷವಾಗಿ ಕೊಂಡಾಡಿದ್ದಾರೆ.
ಶ್ರೀ ಗುರುಭ್ಯೋ ನಮಃ. ಹರಿಃ ಓಂ
ಶ್ರೀಶಂ ವಿಚಿತ್ರಕವಿತಾರಸಪೂರಿತಾಶಂ ಶ್ರೀ ಶಂಕರೋರಗ ಖಗೇಂದ್ರಹೃದಬ್ಜವಾಸಮ್ಆಶಂಕ ಮಾನಜನತೃಪ್ತಿಕರೋಕ್ತಿಹಾಸಂ ವ್ಯಾಸಂ ನತೋsಸ್ಮಿ ಹರಿತೋಪಲಸನ್ನಿಕಾಶಮ್ I
ವೇದಾಂತಸೂತ್ರಪವನೋದ್ಧೃತಪಂಚವೇದಾಮೋದಾಂಶತೋಷಿತ ಸುರರ್ಷಿನರಾದಿ ಭೇದಾ ಮ್ಬೋಧಾಂ ಬುಜಾತಲಸಿತಾಂ ಸರಸೀಮಗಾಧಾಂ ಶ್ರೀದಾಂ ಶ್ರೀತೋsಸ್ಮಿ ಶುಕ ತಾತ ಪದಾ ಮಖೇದಾಮ್ I
ದ್ವೈಪಾಯನೋ ಜಯತಿ ಯನ್ನಿಜಶಕ್ತಿದೀಪ: ಪಾಪಾಭಿವರ್ಧಿತಕುವಾದಿತಮಿಸ್ರತಾಪ: ಪಾಪಾಖ್ಯ ದುರ್ಭ ಗದಶಾ ಕೃತತೀವ್ರ ಕೋಪ: ಪಾಪಾದ್ಭುತೌಷಧಿರಗೇ ಶ್ವಸನಾಂಶರೂಪ: I
ಇಂದ್ರಾದಿದೈವತಹೃದಾಖ್ಯಚಕೋರಚಂದ್ರಾಮಂದಾಂಶುಕಲ್ಪಶುಭಜಲ್ಪಿತಪುಷ್ಪವೃಂದ:ವೃಂದಾರ ಕಾಂಘ್ರ್ಯುಪಲತಾ ಗಣರತ್ನ ಸಾಂದ್ರೋ ಮಂದಾಯ ಮೇ ಫಲತು ಕೃಷ್ಣತರು: ಫಲಂ ದ್ರಾಕ್ I
ಮಾತಾ ಹಿತೇವ ಪರಿರಕ್ಷತಿ ಯೇನ ಗೀತಾ ಗೀತಾಗ್ರ್ಯಭಾರತಪುರಾಣಕೃತಾsವಿಗೀತಾ ವಾತಾಂಶು ಮಧ್ವವರದ: ಸ ಗಿರೋ ಮಮೈತಾ: ಖ್ಯಾತಾ: ಪರಾಶರಸುತೋ ವಿದಧಾತು ಧಾತಾ I
ಪಾರಂ ಭವಾಖ್ಯಜಲಧೇರ್ಭುವನೈಕಸಾರಂ ಸ್ವೈರಂ ಕೃತೋರುವಿಧವೇದಪಥ: ಪ್ರಚಾರಮ್ಆರಿಂಜ ತಾಮ ರಜನಂ ಸುಖಚಿಚ್ಛರೀರಂ ಧೀರಂ ಸ್ಮರಾಮಿ ಹೃದಿ ಸತ್ಯವತೀಕುಮಾರಮ್ I
ಭಾವಾಶ್ರಿತಂ ಯಮನುಸೃತ್ಯ ಭಜಂತಿ ದೇವಾ: ಸೇವಾರತಾಶ್ಚ ಮುನಯ: ಕವಯೋ ನೃದೇವಾ:ಯೋ ವಾಸುದೇವವಪುರಸ್ಯ ಮಹಾನುಭಾವಾಂಚ್ಛ್ರೀ ಬಾದರಾಯಣಹರೇರ್ನ ಗೃಣೀತ ಕೋ ವಾ I
ಜ್ಞಾನಂ ಪ್ರದೇಹಿ ಭವದಾಗವಾರ್ಧ್ಯಧೀನಂ ಶ್ರೀನಂದಸೂನುಪದಭಕ್ತಿನದೀನಿದಾನಮ್ಆನಂದತೀರ್ಥವರದೋಚ್ಚಮಹಾಧ್ವನೀನಂ ದೀನಂ ಬದರ್ಯಧಿಪತೇ ಕುರು ಮಾಮಮಾನಮ್ I
ವಾಸಿಷ್ಠವಂಶತಿಲಕಸ್ಯ ಹರೇರ್ಮನೋಜ್ಞಂ ದೋಷೌಘಖಂಡನವಿಶಾರದಮಷ್ಟಕಂ ಯೇದಾಸಾ: ಪಠಂತ್ಯನುದಿನಂ ಭುವಿ ವಾದಿರಾಜಧೀಸಂಭವಂ ಪರಿಭವೋ ನ ದಿಶಾಸು ತೇಷಾಮ್ I
II ಇತಿ ಶ್ರೀ ವಾದಿರಾಜಪೂಜ್ಯಚರಣವಿರಚಿತಾ ವ್ಯಾಸ ಸ್ತುತಿ: ಸಂಪೂರ್ಣಾ II
ಶ್ರೀವೇದವ್ಯಾಸ ಮಹರ್ಷಿಗಳು
ಭಗವಾನ್ ವೇದವ್ಯಾಸದೇವರು ಸಾಕ್ಷಾತ್ ನಾರಾಯಣನ ಅವತಾರರಾಗಿದ್ದರು. ವ್ಯಾಸರ ತಂದೆಯ ಹೆಸರು ಪರಾಶರ ಋಷಿ ಮತ್ತು ತಾಯಿಯ ಹೆಸರು ಸತ್ಯವತಿಯೆಂದಿತ್ತು. ಇವರು ಪ್ರಕಟರಾಗುತ್ತಲೇ ತಂದೆ-ತಾಯಿಯಲ್ಲಿ ತಪಸ್ಸಿಗಾಗಿ ಕಾಡಿಗೆ ಹೋಗಲು ಅಪ್ಪಣೆ ಕೇಳಿದರು. ತಾಯಿ ಸತ್ಯವತಿಯು ಇವರನ್ನು ತಡೆಯಲು ಪ್ರಯತ್ನಿಸಿದಳು. ಆದರೆ ಕೊನೆಗೆ ಅಮ್ಮಾ! ನೀನು ಸ್ಮರಿಸಿದಾಗ ನಿನ್ನ ಬಳಿಗೆ ಬರುವೆನೆಂದು ಮಾತು ಕೊಟ್ಟಾಗ ತಪಸ್ಸಿಗೆ ಹೋಗಲು ಅನುಮತಿ ದೊರೆಯಿತು.
ಯಮುನೆಯ ದ್ವೀಪದಲ್ಲಿ ಹುಟ್ಟಿದ್ದರಿಂದ ವ್ಯಾಸರಿಗೆ ಕೃಷ್ಣದ್ವೈ ಪಾಯನರೆಂದೂ, ಬದರೀವನದಲ್ಲಿ ತಪಸ್ಸು ಮಾಡಿದ್ದರಿಂದ ಬಾದರಾಯಣವ್ಯಾಸರೆಂದೂ ಹೆಸರಾಯಿತು. ಇವರಿಗೆ ಸಮಸ್ತ ಸಾಂಗವೇದಗಳ, ಪುರಾಣಗಳ, ಇತಿಹಾಸ ಮತ್ತು ಪರಮಾತ್ಮತತ್ತ್ವಗಳ ಜ್ಞಾನವು ತಾನಾಗಿಯೇ ಪ್ರಾಪ್ತವಾಗಿತ್ತು. ಮನುಷ್ಯರ ಆಯುಸ್ಸು ಇನ್ನು ಮುಂದೆ ಕ್ಷೀಣಿಸುವುದೆಂದು ತಿಳಿದು ಇವರು ವೇದವನ್ನು ವಿಭಾಗಮಾಡಿದರು. ಇದರಿಂದ ವೇದವ್ಯಾಸರೆಂಬ ಹೆಸರಿನಿಂದ ಪ್ರಸಿದ್ದರಾದರು. ವೇದಾಂತದರ್ಶನದೊಂದಿಗೆ ಅನಾದಿ ಪುರಾಣವು ಲುಪ್ತವಾಗುವುದನ್ನು ನೋಡಿ ಭಗವಾನ್ ಕೃಷ್ಣ ದ್ವೈಪಾಯನರು ಹದಿನೆಂಟು ಪುರಾಣಗಳನ್ನು ರಚಿಸಿದರು. ಇವರಿಂದ ರಚಿತವಾದ ಮಹಾಭಾರತವನ್ನು ಪಂಚಮ ವೇದವೆಂದು ಹೇಳಲಾಗುತ್ತದೆ. ಶ್ರೀಮದ್ಭಾಗವತದ ರೂಪದಲ್ಲಿ ಭಕ್ತಿಯ ಸಾರ-ಸರ್ವಸ್ವವನ್ನು ಇವರು ಎಲ್ಲ ಜನರಿಗೆ ಸುಲಭವಾಗಿಸಿದರು ಮತ್ತು ಬ್ರಹ್ಮಸೂತ್ರದ ರೂಪದಲ್ಲಿ ತತ್ತ್ವ ಜ್ಞಾನದ ಅನುಪಮ ಗ್ರಂಥ-ರತ್ನವನ್ನು ಕರುಣಿಸಿದರು.
ಶುದ್ಧಾತ್ಮರಾದ ವೇದವ್ಯಾಸರು ವಿಪತ್ತಿನಲ್ಲಿ ಸಿಲುಕಿದ ಪಾಂಡವರಿಗೆ ಆಗಾಗ ಪೂರ್ಣ ಸಹಾಯಮಾಡುತ್ತಾ 'ಇದ್ದರು. ಇವರು ಸಂಜಯನಿಗೆ ದಿವ್ಯದೃಷ್ಟಿಯನ್ನು ಕರುಣಿಸಿದ್ದರು. ಅದರಿಂದ ಸಂಜಯನು ಮಹಾಭಾರತ ಸಂಗ್ರಾಮವನ್ನು ಪ್ರತ್ಯಕ್ಷ ನೋಡುವುದರ ಜೊತೆಗೆ ಶ್ರೀಕೃಷ್ಣನ ಮುಖಾರವಿಂದದಿಂದ ಹೊರಟ ಶ್ರೀಮದ್ಭಗವದ್ಗೀತೆಯನ್ನೂ ಶ್ರವಣಿಸಿದನು. ಮಹರ್ಷಿವ್ಯಾಸರ ಶಕ್ತಿಯು ಅಲೌಕಿಕವಾಗಿತ್ತು. ಒಮ್ಮೆ ಇವರು ಧೃತರಾಷ್ಟ್ರ ಗಾಂಧಾರಿಯರನ್ನು ಭೆಟ್ಟಿಯಾಗಲು ವನಕ್ಕೆ ಹೋದಾಗ ಪರಿವಾರಸಹಿತ ಯುಧಿಷ್ಠಿರನೂ ಅಲ್ಲಿಗೆ ಬಂದಿದ್ದನು. ಧೃತರಾಷ್ಟ್ರನು ಪುತ್ರಶೋಕ ದಿಂದ ಅತ್ಯಂತ ವ್ಯಾಕುಲನಾಗಿದ್ದನು. ಅವನು ಶ್ರೀವೇದವ್ಯಾಸರಲ್ಲಿ ಸತ್ತುಹೋಗಿರುವ ತನ್ನ ಮಕ್ಕಳನ್ನು, ಸ್ವಜನರನ್ನೂ ನೋಡಬೇಕೆಂಬ ಇಚ್ಛೆಯನ್ನು ಪ್ರಕಟಿಸಿದನು. ಮಹರ್ಷಿ ವ್ಯಾಸರ ಅಪ್ಪಣೆಯಂತೆ ಧೃತರಾಷ್ಟ್ರರೇ ಮುಂತಾದವರು ಗಂಗಾತೀರಕ್ಕೆ ಹೋದರು. ವ್ಯಾಸರು ಗಂಗಾನದಿಯಲ್ಲಿ ಪ್ರವೇಶಿಸಿದರು ಹಾಗೂ ದಿವಂಗತ ಯೋಧರನ್ನು ಕರೆದರು. ನೀರಿನಿಂದ ಯುದ್ಧಕಾಲದಲ್ಲಿ ಇದ್ದಂತೆ ಕೋಲಾಹಲವು ಕೇಳಿ ಬರತೊಡಗಿತು. ನೋಡುನೋಡುತ್ತಲೇ ಭೀಷ್ಮ ಮತ್ತು ದ್ರೋಣರೊಂದಿಗೆ ಎರಡೂ ಪಕ್ಷಗಳ ವೀರರು ಕಾಣಿಸಿಕೊಂಡರು. ಎಲ್ಲರ ವೇಶ-ಭೂಷಣಗಳು ಹಾಗೂ ವಾಹನಾದಿ ಗಳೂ ಹಿಂದಿನಂತೆಯೇ ಇತ್ತು. ಎಲ್ಲರೂ ಈರ್ಷಾ ದ್ವೇಷದಿಂದ ಶೂನ್ಯರಾಗಿ ದಿವ್ಯ ದೇಹಧಾರಿಗಳಾಗಿದ್ದರು. ಅವರೆಲ್ಲರೂ ರಾತ್ರಿಯಲ್ಲಿ ತಮ್ಮ ಹಿಂದಿನ ಸಂಬಂಧಿಗಳೊಂದಿಗೆ ಭೆಟ್ಟಿಯಾಗಿ ಸೂರ್ಯೋದಯದ ಮೊದಲೇ ಭಾಗೀರಥೀ ಗಂಗೆಯಲ್ಲಿ ಪ್ರವೇಶಿಸಿ ತಮ್ಮ ದಿವ್ಯಲೋಕಗಳಿಗೆ ಹೊರಟುಹೋದರು. ಭಗವಾನ್ ವ್ಯಾಸರ ಈ ಚಮತ್ಕಾರಿಕ ಪ್ರಭಾವವನ್ನು ನೋಡಿ ಯುಧಿಷ್ಠಿರಾದಿಗಳು ಆಶ್ಚರ್ಯಚಕಿತರಾದರು.
ಭಗವಾನ್ ವ್ಯಾಸರು ಇಂದೂ ಕೂಡ ಅಮರರಾಗಿದ್ದಾರೆ. ಆಗಾಗ ಪ್ರಕಟರಾಗಿ ಅಧಿಕಾರಿ ಪುರುಷರಿಗೆ ದರ್ಶನ ಕೊಟ್ಟು ಕೃತಾರ್ಥರನ್ನಾಗಿಸಿದ್ದಾರೆ. ಭಗವಾನ್ ಆದಿಶಂಕರಾಚಾರ್ಯರಿಗೆ, ಮಂಡನಮಿಶ್ರರಿಗೆ, ಶ್ರೀಮಧ್ವಾಚಾರ್ಯರಿಗೆ ಇವರ ದರ್ಶನವಾಗಿತ್ತು. ಮನುಷ್ಯ ಜಾತಿಯ ಮೇಲೆ ಭಗವಾನ್ ವೇದವ್ಯಾಸರ ಅನಂತ ಉಪಕಾರವಿದೆ. ಸಮಸ್ತ ಜಗತ್ತು ಅವರಿಗೆ ಕೃತಜ್ಞವಾಗಿದೆ. 'ವ್ಯಾಸೋಚ್ಛಿಷ್ಟಂ ಜಗತ್ಸರ್ವಮ್' ಎಂಬ ಉಕ್ತಿ ತ್ರಿಕಾಲ ಸತ್ಯವಾಗಿದೆ
No comments:
Post a Comment