SHANAISHCHARA CHARITAM IV (01 - 8೦)
ಎನ್ನ ಕರ್ಮಕ್ಕೆ ಏನು ಮಾಡುವು..|
ಹೋಗಲಿ ಬಿಡಿ ಎನ್ನ ರಾಜನೆ|
ತಮ್ಮ ಬವಣೆಗೆ ಇವರು ಈರ್ವರು ಸಮ್ಮತದಿಯಾಗಲದು ಪರಿಹರ |
ಅಂದು ಗ್ರಹ ಗತಿ ಮುಂದೆ ದಾಟಿರೆ |
ಸಪ್ತಮಿಯ ಮಧ್ಯಾಹ್ನ ಇಂದೇ |
೧೧
ಇಳಿ ಹೊತ್ತಿನೊಳು ಅರಸ ದ್ವಿಜನನು |
ಮತ್ತೇಕೆ ಕರೆದಿಹನು ನೃಪವರ |
ವ್ಯಗ್ರ ಚಿತ್ತದಿ ಹೊರಟ ಭಟರೊಡೆ|
ಎನ್ನ ಚಪ್ಪರ ಮೇಲೆ ಕುಂಬಳ |
ಅಂಬಿಗನ ಕುಂಬಳವ ಕೊಟ್ಟೊಡೆ |
ರಾಜ ಸಭೆಗೆ ನಮನಗಳ ಅರ್ಪಿಸಿ|
ಕುಂಬಳವ ಮತ್ತೇಕೆ ತಂದಿರಿ |
ಅನ್ನದಾತನೆ ಯನಗೆ ತಾಂ ಕೊ- |
ಹಾಗೆಯೇ ಆಂ ಮನೆಗೆ ಹೋಗಲು |
ಭಟರ ಜೊತೆಯಲ್ಲಿ ಹೊರಟ ನನ್ನನು|
ಇಷ್ಟರಲ್ಲಿಯೇ ಘಟನೆ ನಡೆಯಲು|
ಅರ್ಧ ಪ್ರಹರದ ಹಿಂದೆ ಶನಿ. |
ಈಗೆನಗೆ ಅವನಿಂದ ಬಲವದು |
ಕೋಪಿಸಿರೆ ಪಿಂಗಳನು ಆಗಲೇ |
ಕಾಲನಾಗ್ರಜ ನೋಟ ತಿರುವಲು |
ಏಕೆ ಕಾಡುವ ನವನು ದೇವರು ಅ- |
ವಿಪ್ರನೂ ಸಹ ನೃಪಗೆ ಪೇಳಿ- |
ನೃಪನೆ ಶನಿ ನಿಂದೆಯದು ಸಲ್ಲದು |
ಆಕಟಕ್ಕಟ ಆ ಪ್ರಭಾವವೇ |
ಸದಯದಿಂದಲೇ ನೃಪತಿ ವಿಪ್ರಗೆ |
ಕುಂಬಳವು ದಕ್ಷಿಣೆಯು ಕೂಡಿಯೇ |
ವಿಷ್ಣು ಸ್ವಾಮಿಯು ಹೊರಟ ಮನೆಯೆಡೆ |
ಮನೆಗೆ ಬರುತಲೇ ಸತಿಯೆ ಕೇಳು. |
ಸ್ವಲ್ಪ ದಕ್ಷಿಣೆ ಮತ್ತೆ ಇತ್ತನು |
ಸತಿಗೆ ಕುಂಬಳ ಕೊಡಲು ವಿಪ್ರನು. |
ಆಕೆ ಕೈಗದು ಭಾರ ಎನಿಸಿತೋ |
ಗಟ್ಟಿ ಕುಂಬಳ ಜಾರಿ ಬಿದ್ದಿತು |
ಮಿಕ್ಕಿ ಬಿದ್ದಾ ದೃಶ್ಯ ಕಂಡರು |
ಸಂತಸಕ್ಕೆ ಎಣೆ ಅವರಿಗಿಲ್ಲವೂ |
ಮುಳುಗಲಿರುವ ಮರೀಚ ನೆಡೆಗೆ |
ದೇವಾಧಿ ದೇವ ಪೂಷ್ಣಸುತನೆ |
ತಪದಿ ಕರುಣೆಯ ಪಡೆಯಲು ನಾಂ. | ಜಪಗೊಳಿಪ್ಪತ್ಮೂರು ಸಾಸಿರ |
ನಿನ್ನ ಕೃತಿಯು ಅಗಾಧವಾದದು. |
ಕಷ್ಟಗಳು ಪೋಗಿರಲು ವಿಪ್ರರ. |
ನಮಿಸಿ ಅರಸಗೆ ಪೇಳ್ದ ವೃತ್ತವ |
ಸಂಕೋಚವೇಕೇ ನಿಮ್ಮ ಕಾಣಿಕೆ |
ನಾನು ನಿಮ್ಮೊಳು ಬಹಳ ಉಪಕೃತ |
ವಿಪ್ರನಾಡಿದ ಮಾತಿಗೆ ನೃಪ. |
ದೇವ ಶನಿ ಅತಿ ದುಃಖ ಕೊಡ ಲನು - |
ನಮಿಸಿ ವಿಪ್ರನು ಸಭಿಕರವರಿಗು. |
-----------
ಶ್ರೀ ಶನೈಶ್ಚರ ಪಂಚದಶ ಸ್ತುತಿ:
ಓಂ ಶ್ರೀ ರೌದ್ರಕೃಷ್ಣಾಂಗ ಮಂದ ಪಿಂಗಲ ಸೌರಿ
ಸೂರ್ಯನಾತ್ಮಜ ಬಭೃ ಶನೈಶ್ಚರ ತಿಪ್ಪಲನೆ
ಅರ್ಕಸುತ ಕೋಣಸ್ಥ ಅಂತ್ಯ ಯಮ ಮಾರ್ತಾಂಡ ಸಂಭೂತ ಒಂದಿಸುವೆನು || ೧ ||. ೫೫
ಹತ್ತು ಹೆಸರುಗಳುಳ್ಳ ಮೂರ್ತಿ ಹಯಲಾಳ ಆ-
ದಿತ್ಯಸುತ ಚತು ಹಸ್ತ ಪಿಡಿದಿರುವೆ ಶರ ಶೂಲ
ಇತ್ತವರ ಹಸ್ತ ಧನು ಹದ್ದು ವಾಹನ ದೇವ ಕಶ್ಯಪಜ ಸೌರಾಷ್ಟ್ರ ದೇಶಿ || ೨ ||. ೫೬
ಕಪ್ಪು ವಸನವು ಮೇಲೆ ಚಿನ್ನ ಲೋಹದ ನೇಹಿ
ಕಪ್ಪು ಹೂವದು ನೀಲ ರತ್ನಮಣಿ ಎಣ್ಣೆ ರಸ
ಇಪ್ಪತ್ತರಿಂ ಮೇಲೆ ಮೂರುಸಾಶಿರ ಜಪವು ನಿತ್ಯವೂ ಸ್ತುತಿಯನುತಿಸೆ || ೩ ||. ೫೭
ಬೆಲ್ಲ ಬೆರೆತಿಹ ಅನ್ನ ಉದ್ದ ತಿಳ ಪ್ರಿಯಕರ ನೇ
ನಿಲ್ಲು ನಡಿಗೆಯು ವಕ್ರ ದೃಷ್ಟಿ ತಾ ವಕ್ರತೆಯು
ಇಲ್ಲದೆಯೇ ಮಾಳ್ಪುದಕೆ ದಾನ ಧರ್ಮಂಗಳನು ಜಪ ತಪವ ಗೈಯ ಬೇಕು || ೪ ||. ೫೮
ಮೂವತ್ತರಿಂ ಮೇಲೆ ಮೂರು ಕೋಟಿಗಳುಳ್ಳ
ದೇವರುಗಳಲ್ಲದೆಯೆ ಬ್ರಹ್ಮ ಶಿವ ವಿಷ್ಣುವುಂ
ಭಾವಿಸುತ ನಿನ್ನs ಭಯ ದೇವಋಷಿ ರಾಜಋಷಿ ಪೂಜಿಪರು ಸಂಜ್ಞ ಸುತನೆ || ೫ ||. ೫೯
ಯಜು ಅಥರ್ವಣ ವೇದ ಸಾಮ ಋಗ್ವೇದಗಳು
ಭಜಿಪವವು ನೀನೆ ಗತಿ ಉಪನಿಷತ್ ಆಗಮಂ
ಅಜಿತಮತಿ ಶಾಪದಪಿ ಶರದಪಿಗೆ ತಾಗಿರಲು ವ್ಯಥೆಯು ಈ ದೃಷ್ಟಿಯಿಂದ || ೬ ||. ೬೦
ಅಸುರ ಸುರ ಅಷ್ಟ ವಸು ಗಂಧರ್ವ ಕಿನ್ನರಂ
ಅಸಮತರ ಎಸೆಯುತಿಹ ಕಂಗಳಿಗೆ ಮರುತಗಣ
ಪಸರಿಪುದೆ ವಿದ್ಯಧರ ಮಾನವರು ಸುಪ್ರಭಾತದಿ ಪಠಿಸೆ ದುಃಖವಿಲ್ಲ || ೭ ||. ೬೧
ನಮಿಸುವರು ಕದ್ರುಸುತ ಬೇತಾಳ ಯಕ್ಷರು
ಗಮಿಪದ್ವಯ ಅಶ್ವಿನಿಯ ಶಾಕಿನಿಯ ಪೂತನೆಯ
ಸಮವಿಲ್ಲ ಯೋಗಿನಿಂ ಸಪ್ತತಾಮಾತೆಯರು ಜಲ ಜಂಭಕಿರೆಲ್ಲರೂ. || ೮ ||. ೬೨
ನಿ : ಶ್ಯಬ್ದ ಇಹ ಸಸ್ಯ ಚಲನಚಿತ್ರ ವಸ್ತುಗಳು
ಮಯೂರ ಭೂತವಂ ಪಿಶಾಚಿಯ ಪ್ರೇತವಂ
ಮುಯ್ಯವಂ ಬಿಡದ ಅರಿ ದುಷ್ಟ ಜನರಿಂ ಭಯವು
ಗಯ್ಯೋಳೀ ಸ್ಮೃತಿ ಗೈಯಲು ಹಿರಣ್ಯ ಗರ್ಭಾತ್ಮಜನೆ ನಿನ್ನಿಂದ ಹನನವು || ೧೦ || ೬೪
ಮಂದ ಕಿವಿ ಕೇಳಿಪನು ಮೂಕನಿಗೆ ಮಾತಹುದು
ಅಂದ ಕಣ್ ಕಾಣುವನು ಅರಾಯುಷ್ಯದ ಚಿಂತೆ
ನಂದಖಗನ ಪಠಿಸೆ ದುಷ್ಕರ್ಮ ದೋಷಗಳು ನಿ:ಪಾತ ವ್ಯಾಧಿಗಳು. || ೧೧ || ೬೫
ಭಾಸ್ಕರಾತ್ಮಜ ನೀನು ಸಾರ್ಧಸಪ್ತಕ ಕೊನೆಗೆ
ನಿಷ್ಕಾಮ ಭಾವದಿಂ ಪೂಜಿಪರ ದುಃಖ ಹರ
ಅಸ್ಖಲಿತ ಭಾಷೆಯಂ ಚಾತುರ್ಯ ಐಶ್ವರ್ಯ ತ್ರಿಕರಣದ ಶುದ್ಧಿಪ್ರದನೇ || ೧೨ || ೬೬
ಆದಿ ಆತ್ಮಿಕ ಕರ್ಮ ಪರಿಹರಿಸಿ ಸತ್ತೀರ್ಥ
ಆದಿ ದೈವಿಕ ದುಃಖ ಭೋಗ ಪ್ರಾಯಶ್ಚಿತ್ತ
ಆದಿ ಭೌತಿಕ ಕೃತಿಗೆ ಧೈರ್ಯವನ್ನಿತ್ತು ನೀ ಕಾಪಾಡು ಶನಿದೇವನೇ || ೧೩ || ೬೭
ಶನಿದೇವ ಪದ ಪದ್ಮ ದಿವ್ಯನುಷ್ಠಾನವನೇ
ಅನುಗೋಳಿಸೆ ಸುಜ್ಞಾನ ಸದ್ಭಕ್ತಿ ತಾ ಪುಣ್ಯ
ತನು ಆತ್ಮ ಅಂತ್ಯದಲಿ ಮೋಕ್ಷವಂ ದೊರೆಯುವುದಕೆ ಕರುಣಿಸೈ ಭವದ ಭವಿಗೆ || ೧೪ || ೬೮
ಇಂತಿ ಶ್ರೀ ಶನೇಶ್ಚರ ಸತತ ಆರಾಧನೆಯ
ನಿಂತು ನರಗೈವವಗೆ ಇಹಪರದ ಸಾರ್ಥಕ್ಯ
ಮುಂದೆ ಸುಖವನು ಪಡೆಯಲು ನರ |
ಅಂದದಿಂದಲೇ ನುತ್ತಿಸುವ ಸ್ತುತಿ |
ಕುಂದದೆ ನೃಪ ಕೇಳಿದೇನದು ಪೂರ್ಣ ಮನಗೊಟ್ಟು || ೭೦ ||
ಸ್ತಬ್ಧ ಮಾನಸನಾಗಿ ನೃಪನು |
ಅಬ್ದಿ ಅಂದದಿ ಇಹುದು ವಿದ್ಯೆಯು |
ಶಬ್ದ ಸತ್ಯವು ಮಂದದೇವನ ಅಭಿಧಾನವೀತೆರದೀ. ||೭೧ ||
ದ್ವಿಜನಿಗಾದರ ಗೈದು ರಾಜನು |
ಅಜಯವಾಗಿಹ ನಿಮ್ಮ ಬುದ್ಧಿಯ |
ಸುಜನದಿಮ್ ಸುಹೃದಯದಿಂದ ಪಣವಿತ್ತು ಬೀಳ್ಕೊಟ್ಟ || ೭೨ ||
ನಮಿಸಿ ಅಪ್ಪಣೆ ಪಡೆದು ವಿಪ್ರನು |
ಗಮಿಸಿ ತನ್ನಯ ಮನೆಯ ಎಡೆಗೆ |
ತಮವು ತಳೆದಿಹ ತನ್ನ ಬಾಳ್ವೆಗೆ ಬೆಳಕು ಬಿತ್ತೆಂದ || ೭೩ ||
ವೃದ್ಧಿಸಿದ ಆ ದ್ರವ್ಯ ಭೋಗಿಸಿ |
ಸಿದ್ಧಿ ಇಹುದದು ಸರ್ವ ಎಡೆಯಲಿ |
ಬುದ್ಧಿಯಿಂ ದಂಪತಿಗಳೀರ್ವರು ಸುಖವಗೊಳುತಿರುವ || ೭೪ ||
ವಿಪ್ರಪೇಳಿದ ಬೋಧೆಯಿಂದಲಿ |
ವಿಪರೀತದ ಸಂಶಯದಿ ವಿಕ್ರಮ |
ವಿಪರಿಯಾಸವ ಪುಟ್ಟಿ ಆಲೋಚನೆಗೆ ಈಡಾದ || ೭೫ ||
ವಿಷ್ಣು ಸ್ವಾಮಿಯ ಗತಿಯು ಆಲಿಸಿ |
ಪೂಷ್ಣಸುತ ಮುಂತಾದ ಗ್ರಹಗಳ |
ತೃಷ್ಣೆ ನರನಲಿ ಏಕೆ ? ಸಂಶಯ ತಾಳಿ ವಿಕ್ರಮನು ||೭೬||
ಶ್ರೀ ಮಠಾಧಿಪತಿಗಳು ಸೀತಾ - |
ರಾಮ ಆಚಾರ್ಯರಲಿ ಗ್ರಂಥಿಯ |
ಸ್ತೋಮದಲಿ ನಿಧಿಯುಕ್ತ ಕೂಷ್ಮಾಂಡೆಂಬಕತೆ ಇಹುದು||೭೭||
ಪಿತರು ಓದಿದುದಂತೆ ಪೇಳಿದ |
ಕಥೆಯು ರಂಜಿಸುವಂತೆ ಕನ್ನಡ |
ಮತಿಯರಸ ಭಾಷೆಯಲಿ ಲೇಖಿಸಿ ಇತ್ತ ಸಿರಿರಾಯ || ೭೮||
ಇಂತಿ ಶ್ರೀ ಶನೈಶ್ಚರಚರಿ ತಾ - |
ದ್ಯಂತ ಸ್ಪೂರ್ತಿಯು ನೀಡುತಿರೆ ತಾ- |
ಆಂತು ಮಹತಿಯು ಗೈಮೆ ಶ್ರೀ ಗೋವಿಂದರಾಜ ಮರ || ೭೯ ||
ಇತಿ ಪುರಾಣೈತಿಹದ ಕಥೆಗಳು |
ಮಥಿಸಿ ಸೀತಾರಾಮ ತುಳಸಾ- |ರ
ಸುತನ ಸವಿಗತೆ ಚತುರ್ಥದ ಶ್ರೀ ಕೃಷ್ಣ ಅರ್ಪಣೆಯ || ೮೦ ||
ಇಂತಿ ಶ್ರೀ ಶನೇಶ್ಚರ ಚರಿತ ಪುರಾಣದೊಳು ಚತುರ್ಥ ಸಂಧಿ ಪರಿಪೂರ್ಣಂ ಶುಭಮಸ್ತು ಕೃಷ್ಣಾರ್ಪಣಮಸ್ತು
No comments:
Post a Comment