Friday, June 06, 2025

SHANAISHCHARA CHARITAM IV ( 01 - 8೦ ) ಶ್ರೀ ಶನೈಶ್ಚರ ಚರಿತಂ ೪

SHANAISHCHARA CHARITAM IV (01 - 8೦)

                ಶ್ರೀ ಶನೈಶ್ಚರ ಚರಿತಂ. ೪
                   || श्री शनैश्चर देवताभ्यो नमः ||
 
                        
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ  ಒಟ್ಟು ಹತ್ತು ಸಂಧಿಗಳು  ). ( ಶ್ರೀ ಶನೈಶ್ಚರ ಪ್ರತಿಮಾ ಪ್ರಾಣಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರ ಅಷ್ಟಕಂ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ, ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್, ಶ್ರೀ ಮಹರ್ಷಿ ವೇದವ್ಯಾಸ ವಿರಚಿತ  ಶ್ರೀ ಶನೈಶ್ಚರ ಚಕ್ರ ಸಹಿತ )
ಚತುರ್ಥ ಸವಿಗಥಾ ಸಂಧಿ ೪
( ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ )

ಘನ ಮಹಿಮ ಗುಣ ಅಧಿಪತಯೆ ಗಾ-
ಯನವ ಕೇಳುತ ವಿದ್ಯೆ ಹಲವಾ -
ಹನವೆ ಮೂಷಕ ನಿಲದೆ ನಲಿವ ಚರದಿ ಚಂಚಲವ ೧
ಶ್ರವಣ ಮನ ಆಹ್ಲಾದವೀವುದು
ಭುವನ ಪಾವನೆ ವಾಣಿ ದೇವಿಯೆ 
ಧವಲ ಮಂಗಲ ವಸ್ತ್ರ ಸಹ ಗ್ರಂಥ ಧಾರಿಣಿಯೆ.  ೨
ವಿಕಟ ಭಂಜನ ನಿಖಿಲ ಜೀವರ
ನಿಕಟವಿರೆ ತಾನೆಂದು ಲೋಕಕೆ
ಪ್ರಕಟನಾಗದೆ ಸರ್ವ ಕರ್ಮವ ದೇವ ಮಾಡಿಸುತ. ೩
ಜೀವ ಅಂತ್ಯರ್ಯಾಮಿ ಗುರುಗಳೆ
ಭಾವ ಬೀರುವ ಗ್ರಂಥ ರುಚಿಸುವ
ತಾ ವಿಹಾರವಗೈದು ಜಿಹ್ವೆಯ ಮೇಲೆ ಇರುವ ಗುರುವೆ ೪
ನಾವು ಬಗೆಯುವುದೊಂದು ಬೇರೆ  | 
ದೈವ ಮಾಡುವುದೊಂದು ಬಗೆಯು. |
ಆವ  ಅಂಬಿಗರವನೋ ಆ ಕುಂಬಳವನೇಕಸಿದ. ೫
ಎನ್ನ ಕರ್ಮಕ್ಕೆ ಏನು ಮಾಡುವು..| 
ಎನ್ನ ಸ್ವಾಮಿಯು ಮುನಿದಿಹನು ತಾ  | 
ಬಣ್ಣ ಬಡ ಜೀವನಕೆ ರಾಜನೇನೆಂದು ಕೊಟ್ಟಿರುವ. ೬
ಹೋಗಲಿ ಬಿಡಿ ಎನ್ನ ರಾಜನೆ|  
ಆಗದದು ಎಮ್ಮಗಳ ಸ್ವಾರ್ಥಕೆ.  |
ದಿಗಿಲುಗೊಂಡಿಹ ಪತಿಗೆ ಸಂತೈರಣೆಯ ಹೇಳಿದಳು  ೭
ತಮ್ಮ ಬವಣೆಗೆ ಇವರು ಈರ್ವರು  ಸಮ್ಮತದಿಯಾಗಲದು ಪರಿಹರ   |
ಒಮ್ಮನದಿ ನಿಜ ನಿತ್ಯ ಸ್ತೋತ್ರವ ಪಠಿಸಿ ಸೌರಿಯಲಿ. ೮
ಅಂದು ಗ್ರಹ ಗತಿ ಮುಂದೆ ದಾಟಿರೆ  |
ಮಂದ ದೇವನು ರಾಶಿ ಸಿಂಹಕೆ | 
ಕುಂದು ತರಲದು ಕರ್ಕ ರಾಶಿಗೆ ಬಲವು ಗ್ರಹದಿಂದ ೯
ಸಪ್ತಮಿಯ ಮಧ್ಯಾಹ್ನ ಇಂದೇ  |
ತಪ್ತ ವಿಪ್ರನ  ರಾಶಿಯಿಂದಲೇ | 
ಸಪ್ತ ವಿನ್ನರೆ ಅರ್ಧಸಂವತ ಉರುಳಿ ಪೀಡೆಯದು ೧೦
ಪೀಡೆಯವಧಿಯ ಕೊನೆಗೆ ಸೌರಿಯ |
ಮಾಡಲದು ಕೃಪೆಗಾಗಿ ಜಪ ತಪ  |
ಗಡನೆ ವಿಷ್ಣು ಸ್ವಾಮಿ ತಾ ಪೂಜೆಯನೆ ಕೈಕೊಂಡ
 ೧೧
ಇಳಿ ಹೊತ್ತಿನೊಳು ಅರಸ ದ್ವಿಜನನು | 
ಕಳುಹಿದನು ಭಟರಿಂಗೆ ಕರೆಯಲು  |
ಬಳಿಕ ಪೇಳಿದ ರವರು ತವ ರಾಜಾಜ್ಞೆ ಬರಬೇಕು. ೧೨
ಮತ್ತೇಕೆ ಕರೆದಿಹನು ನೃಪವರ    |
ಇತ್ತು ಆಗಲೇ ಹೋಗಿ ಬಂದುದು  |
ಹೊತ್ತು ಇಳಿತದಿ ಕಾರ್ಯವೇನುಂದನುತ ಮನದಲ್ಲೇ. ೧೩
ವ್ಯಗ್ರ ಚಿತ್ತದಿ ಹೊರಟ ಭಟರೊಡೆ| 
ಅಗ್ರ ಭಾಗದಿ ಇರುವ ವಿಪ್ರನ  |
ನಿಗ್ರಹದಿ ಕಂಡಂಬಿಗನು ಓಡುತಲೆ ಬಂದಿಹನು ೧೪
ಆದರದೀ ಅಂಬಿಗನ ಮಾತದು  |
ಸಾಧು ಮಹನೀಯ ಎನಗೆ ಕ್ಷಮಿಸಿರಿ  |
ಬೂದುಗುಂಬಳ ಕಸಿದೆ ಮುಂಜಾವದಲಿ ನಿಮ್ಮದನು. ೧೫
ಎನ್ನ ಚಪ್ಪರ ಮೇಲೆ ಕುಂಬಳ  |
ತನ್ನ ರಕ್ಷದಿ ಭದ್ರವಾಗಿರೆ |
ಭಿನ್ನಕಾಯಿ ಇದೆಂದು ಅಂಬಿಗ ತಿರುಗಿ ನೀಡಿದನು. ೧೬
ಅಂಬಿಗನ ಕುಂಬಳವ ಕೊಟ್ಟೊಡೆ | 
ಅಂಬರಕೆ  ಕೈ ಮುಗಿದು ಪ್ರಾರ್ಥಿಸೆ  |
ತುಂಬುಗುಂಬಳ ಪಿಡಿದು ಹಾಗೆಯೇ ಹೋದ ನೋಲಗಕೆ. ೧೭
ರಾಜ ಸಭೆಗೆ ನಮನಗಳ ಅರ್ಪಿಸಿ| 
ರಾಜಗಭಿನಂದಿಸಿದ ಪೂರ್ವದಿ   |
ಸೋಜಿಗದಿ ನೃಪ ಕಂಡು ಕುಂಬಳ ಸಹಿತ ಭೂಸುರನ ೧೮
ಕುಂಬಳವ ಮತ್ತೇಕೆ ತಂದಿರಿ | 
ತುಂಬು ಕಾಣಿಕೆ ಮೊದಲು ಕೊಟ್ಟುದು  |
ಎಂಬುದನು ನೃಪ ಅರುಹಲದು ದ್ವಿಜ ರೀತಿ ಉತ್ತರವ  ೧೯
ಅನ್ನದಾತನೆ ಯನಗೆ ತಾಂ ಕೊ-  |
ಟ್ಪೆನ್ನ ಕಾಣಿಕೆ ಕ್ಷುದ್ರವದು ತಾ -  |
ತನ್ನದೆಂದಂಬಿಗನು ಒಬ್ಬನು ಕಸಿದು ಬಿಟ್ಟಿದ್ದ  ೨೦
ಹಾಗೆಯೇ ಆಂ ಮನೆಗೆ ಹೋಗಲು  |
ಸಾಗಿ ವೇಳೆಯ ಕಳೆಯುತಿರಲಿಂ -    |
ತಾಗಿರಲು ಭಟರಿವರು ಬಂದರುಹಿ ದರು ನಿಮ್ಮಾಜ್ಞೆ  ೨೧
ಭಟರ ಜೊತೆಯಲ್ಲಿ ಹೊರಟ ನನ್ನನು|  
ದಿಟದಿ ಅಂಬಿಗ ನೋಡಿ ಬಂದನು   |
ಸಟೆಇದಲ್ಲವು ಎಂದು ತಿರುಗಿಯೇ ಕೊಟ್ಟ ಕುಂಬಳವ. ೨೨
ಇಷ್ಟರಲ್ಲಿಯೇ ಘಟನೆ ನಡೆಯಲು| 
ಎಷ್ಟು ತಾರಕವೀ ಪ್ರಭಾವ ವಿ - |
ಶಿಷ್ಟ್ಯವದು ಪಿಂಲಗನ ಕೃತಿಯು ಖಂಡಿತದಿ ನಿಜವು. ೨೩
ಅರ್ಧ ಪ್ರಹರದ ಹಿಂದೆ ಶನಿ. |
ಮರ್ದನವ ಗೈಯಲು ಸಿಂಹ ರಾಶಿಗೆ | 
ನಿರ್ದಯದಿ ಪೋಗಿಹ ಮೊದಲ ರಾಶಿಗೆ ಕೃಪೆಯು ಅವನಿಂದ. ೨೪
ಈಗೆನಗೆ ಅವನಿಂದ ಬಲವದು | 
ಆಗೆನೆಗೆ ಅವನಿಂದ ದುಃಖವು. |
ಈಗ ನಗೆಹೊಗೆ ಆಗಬಾರದು ದುಃಖದೋಳುಲಿ ವು ೨೫
ಕೋಪಿಸಿರೆ  ಪಿಂಗಳನು ಆಗಲೇ | 
ಅಪಹರಿಸಿ ದಂಬಿಗನು ಕುಂಬಳ  |
ವಿಪರೀತವದು ಅಂಬಿಗನು ನಂಬಿದ ದೃಷ್ಟಿ ಬದಲಾಗಿ. ೨೬
ಕಾಲನಾಗ್ರಜ ನೋಟ ತಿರುವಲು  |
ಪಾಲಿಸುವನತಿ ದಯದಿ ಭೂ |
ಪಾಲನೇ ಇದು ಬಭ್ರುದೇವನ ಮಹತಿ ಉಂಟೆಂದ. ೨೭
ಏಕೆ ಕಾಡುವ ನವನು ದೇವರು ಅ-  |
ದೇಕೆ ದುಃಖವನುಂಟು ಮಾಳ್ಪನು  |
ಬೇಕೆ ಮೋಡಿ ಆಟವಾತಗೆ ಎಂದನಾ ದೊರೆಯು ೨೮
ವಿಪ್ರನೂ ಸಹ ನೃಪಗೆ ಪೇಳಿ- |
ದ  ಪ್ರಬುದ್ಧದಿ ನಿಂದೆಗಳ ನುಡಿ |
ಕುಪ್ರ ಘಾತವು ಬೇಡ ಭೂಪತಿ ಪೀಡೆಯಾಗುವುದು ೨೯
ನೃಪನೆ ಶನಿ ನಿಂದೆಯದು ಸಲ್ಲದು   |
ಪಾಪ ಪ್ರಾಯಶ್ಚಿತ್ತ ನೀಡುವ   |
ಕಪಟವಲ್ಲದು ಪ್ರತ್ಯಕ್ಷದೀ ವಿದಿತ ಕೇಳೆಂದ. ೩೦
ಆಕಟಕ್ಕಟ ಆ ಪ್ರಭಾವವೇ  |
ನಾ ಕಾಣೆ ಶನಿ ಕಾಟ ನೀವುದು  |
ನಾಕದೇವರು ನರರ  ಶಪಿಸಲು ಏನು ಕಾಣುವರು. ೩೧
ಸದಯದಿಂದಲೇ ನೃಪತಿ ವಿಪ್ರಗೆ  |
ಮಧುಪರ್ಕವನು ಮಾಡಿ ಕೂಡ್ರಿಸಿ. |
ಪದಕೆರಗಿ ದಕ್ಷಿಣೆಯಿತ್ತು ಬಿಳ್ಕೊಟ್ಟ ಸ್ನೇಹದಲಿ. ೩೨
ಕುಂಬಳವು ದಕ್ಷಿಣೆಯು ಕೂಡಿಯೇ | 
ಮುಂಬಂದು ನಮಿಸಿದನು ವಿನಯದಿ  |
ತುಂಬ ಉಪಕಾರೆಂದು ಅಪ್ಪಣೆ ಕೇಳಿ ನಡೆ ವಿಪ್ರ. ೩೩
ವಿಷ್ಣು ಸ್ವಾಮಿಯು ಹೊರಟ ಮನೆಯೆಡೆ  |
ಪೂಷ್ಣ ತವ ನಡೆ ಅಸ್ತ ಮಾರ್ಗದಿ   |
ತೀಕ್ಷ್ಣ ಚಿತ್ತದಿ ವಿಪ್ರ ನಿರುತಿರೆ ದಾರಿ ನಿರ್ಜನವು. ೩೪
ಮನೆಗೆ ಬರುತಲೇ ಸತಿಯೆ  ಕೇಳು. |
ಕೊನೆಗೆ ದೊರೆಯಿತು ಅಲ್ಪವೇ ತಾ  |
ಎನುತಿರಲು ಆ ನಡೆದ ಸಂಗತಿ ತಿಳಿಸೆ ಭೂಸುರನು. ೩೫
ಸ್ವಲ್ಪ ದಕ್ಷಿಣೆ ಮತ್ತೆ ಇತ್ತನು  |
ಅಲ್ಪ ಮೌಲ್ಯದ ಮೊದಲ ಕುಂಬಳ  |
ಕಲ್ಪನೆಯು ಮಾಡಿದೆನು ನಾನು ಸಂಜೆ ಗಂಜಿಗೆಯ ೩೬
ಸತಿಗೆ ಕುಂಬಳ ಕೊಡಲು ವಿಪ್ರನು. |
ಕಥನದಿಂದ ಜಿಗುಪ್ಸೆ ಗೊಂಡಿಹ   |
ಸತಿಯು ರುಕ್ಮಿಣಿ ಪಿಡಿಯೆ ಎನುತಿರೆ ತೆಗೆದುಕೊಂಡಳದು. ೩೭
ಆಕೆ ಕೈಗದು ಭಾರ ಎನಿಸಿತೋ  |
ಸಾಕಿದೆಂ ಜೀವನವು ಗೈದಳೋ | 
ತಾಕದೆಯೆ ಕೈಯಿಂದ ಬೀಳಲು ಕುಂಬಳವು ಅವಳ ೩೮
ಗಟ್ಟಿ ಕುಂಬಳ ಜಾರಿ ಬಿದ್ದಿತು   |
ಸೊಟ್ಟೆ ಮೇಲಣ ಒಡೆದು ಹೋಯಿತು. |
ಒಟ್ಟಿಗೆ  ನಿಧಿ ದ್ರವ್ಯ ಚೆಲ್ಲಾ ಪಿಲ್ಲಿ ಯಾಯಿತದು ೩೯ 
ಮಿಕ್ಕಿ ಬಿದ್ದಾ ದೃಶ್ಯ ಕಂಡರು  | 
ಬಿಕ್ಕಿಬಿಮ ನಿರ್ಘಾಂತವಾಗಿಯೇ  | 
ಕುಕ್ಕು ಕಂಗಳ ನಂಬದೆಯೆ ದಂಪತಿಗಳು ನೋಡಿ. ೪೦
ಸಂತಸಕ್ಕೆ ಎಣೆ ಅವರಿಗಿಲ್ಲವೂ  |
ಅಂತ್ಯದಲ್ಲಿ ಶನಿ ಕೃಪೆಯು ನೀಡುವ   |
ಇಂತೂ ಮಾತದು ತ್ರಿಕಾಲಕ್ಕೆ ಸತ್ಯವಹುದೆಂದ  ೪೧
ಮುಳುಗಲಿರುವ ಮರೀಚ ನೆಡೆಗೆ | 
ಒಲವಿನಿಂ ಕೈಮುಗಿದು ವಿಪ್ರನು. | 
ಮಳೆಯು ಬಂದಂತಾಯ್ತು ನಮ್ಮಯ ಬಾಳು ಕ್ಷಾಮದಲಿ ೪೨
ದೇವಾಧಿ ದೇವ ಪೂಷ್ಣಸುತನೆ   |
ವ ಮಾಯದಿ ಗೈದ ಕಾರ್ಯಕೆ   |
ಯಾವ ದೆಸೆ ಸುಖ ದುಃಖವೀಯುವೆ  ತಿಳಿಯ ದುಂಟೆಂದ  ೪೩
ತಪದಿ ಕರುಣೆಯ ಪಡೆಯಲು ನಾಂ. | ಜಪಗೊಳಿಪ್ಪತ್ಮೂರು ಸಾಸಿರ   | 
ತಪಿಸಿ ಸಂಕಟ ಕಳೆದ ಬಳಿಕೀ ಫಲವನಿತ್ತಿರುವೀ ೪೪
ನಿನ್ನ ಕೃತಿಯು ಅಗಾಧವಾದದು. | 
ಮುನ್ನ ಈ ನಿಧಿ ಅಗಲಿ ನನ್ನಿಂ- | 
ತನ್ನ ತಾನೇ ಬಪ್ಪಗೈಮೆಯು ಪ್ರಣಿಪಗಳು ನಿನಗೆ  ೪೫
ಕಷ್ಟಗಳು ಪೋಗಿರಲು ವಿಪ್ರರ. |
ನಿಷ್ಠೆ ದ್ರವ್ಯವು ಬರಲು ತಾನೇ. | 
ಸ್ಪಷ್ಟವಾಗಿಯೇ ಅವರ ಜೀವನ ಸುಖವ ಪಡೆಯುತ್ತಲಿ ೪೬
ಕೃತಜ್ಞತೆಯನು ತೊರೆ ಸುಗುಣವು.  |
ಪ್ರತಿಯ ಕೃತಿ ಈ ರೀತಿ ಯಾದುದ   |
ಅತಿಯ ಅವಸರಗೊಂಡು ವಿಪ್ರನು ಅರಸನಡೆ ೪೭
ನಮಿಸಿ ಅರಸಗೆ ಪೇಳ್ದ ವೃತ್ತವ   | 
ಗಮನವಿಡಿ ನುಡಿಯನ್ನ ಕಡೆಯಿಂದ.  | 
ಸಮವೇ ಫಲ ಕೂಷ್ಮಾಂಡ ದ್ರವ್ಯವು ದೊರೆಯೇ ಅಪರೋಕ್ಷ. ೪೮
ಸಂಕೋಚವೇಕೇ ನಿಮ್ಮ ಕಾಣಿಕೆ   |
ಮಂಕವಂ ತೋರುವರೆ ಎನ್ನೊಳು | 
ರಂಕರೆಂದು ತಾವು ಕಾಣಲು ಅವನತಿಯು ಎನಗೆ. ೪೯
ನಾನು ನಿಮ್ಮೊಳು ಬಹಳ ಉಪಕೃತ  |
ಉನ್ನತಿಯ ಪಡೆ ಧವಲ ಕೀರ್ತಿಯು   |
ಅನುಗಮನದಾ ಚಂದ್ರಾರ್ಕಕವಾಗಿ ಸುಖವ ನೀ ಭವಿಸು ೫೦
ವಿಪ್ರನಾಡಿದ ಮಾತಿಗೆ ನೃಪ. |
ಸುಪ್ರಯೋಗ ಭಿದಾನವನೆ ಕೊಡೆ  |ಸುಪ್ರಫುಲ್ಲತೆಯಿಂದ ರಾಜನು ನಮಿಸಿ ಕೇಳಿದನು ೫೧
ದೇವ ಶನಿ ಅತಿ ದುಃಖ ಕೊಡ ಲನು -  |
ಗಾವಸ್ತುತಿ ಸ್ತೋತ್ರಗಳು ಮಾಡಿರೆ. |
ನೀವು ನುಡಿಯುವ ಭಾವವನು ನಾ ಕೇಳ ಬಯಸಿರುವೆ. ೫೨
ನಮಿಸಿ ವಿಪ್ರನು ಸಭಿಕರವರಿಗು. |
ಗಮನದಲಿ ಸ್ತುತಿಯನ್ನೇ ಪಠಿಸಲು | 
ತಮರಿಸುತನ ಪಂಚದಶ ಸ್ತೋತ್ರ ಸನ್ನಿಧಿಗೆ  ೫೩
ರಾಯಕೇಳ್ ಕದಡದೆಯೆ ಮನವನು  |
ಈಯು ಭಕುತಿಯ ರೂಪದಲಿ ಶನಿ   |
ಮಾಯದಲಿ ಭೂಸುರನು ತಾನು ಸ್ತುತಿಯನು ನುತಿಸೆ. ೫೪
-----------
ಶ್ರೀ ಶನೈಶ್ಚರ ಪಂಚದಶ ಸ್ತುತಿ:
ಓಂ ಶ್ರೀ ರೌದ್ರಕೃಷ್ಣಾಂಗ ಮಂದ ಪಿಂಗಲ ಸೌರಿ
ಸೂರ್ಯನಾತ್ಮಜ ಬಭೃ ಶನೈಶ್ಚರ ತಿಪ್ಪಲನೆ 
ಅರ್ಕಸುತ ಕೋಣಸ್ಥ ಅಂತ್ಯ ಯಮ ಮಾರ್ತಾಂಡ ಸಂಭೂತ ಒಂದಿಸುವೆನು  || ೧ ||. ೫೫
ಹತ್ತು ಹೆಸರುಗಳುಳ್ಳ ಮೂರ್ತಿ ಹಯಲಾಳ ಆ-
ದಿತ್ಯಸುತ ಚತು ಹಸ್ತ ಪಿಡಿದಿರುವೆ ಶರ ಶೂಲ 
ಇತ್ತವರ ಹಸ್ತ ಧನು ಹದ್ದು ವಾಹನ ದೇವ ಕಶ್ಯಪಜ ಸೌರಾಷ್ಟ್ರ ದೇಶಿ || ೨ ||. ೫೬
ಕಪ್ಪು ವಸನವು ಮೇಲೆ ಚಿನ್ನ ಲೋಹದ ನೇಹಿ 
ಕಪ್ಪು ಹೂವದು ನೀಲ ರತ್ನಮಣಿ ಎಣ್ಣೆ ರಸ 
ಇಪ್ಪತ್ತರಿಂ ಮೇಲೆ ಮೂರುಸಾಶಿರ ಜಪವು ನಿತ್ಯವೂ ಸ್ತುತಿಯನುತಿಸೆ  || ೩ ||. ೫೭
ಬೆಲ್ಲ ಬೆರೆತಿಹ ಅನ್ನ  ಉದ್ದ ತಿಳ ಪ್ರಿಯಕರ ನೇ 
ನಿಲ್ಲು ನಡಿಗೆಯು ವಕ್ರ ದೃಷ್ಟಿ ತಾ ವಕ್ರತೆಯು
ಇಲ್ಲದೆಯೇ ಮಾಳ್ಪುದಕೆ ದಾನ ಧರ್ಮಂಗಳನು ಜಪ ತಪವ ಗೈಯ ಬೇಕು || ೪ ||. ೫೮
ಮೂವತ್ತರಿಂ ಮೇಲೆ ಮೂರು ಕೋಟಿಗಳುಳ್ಳ
ದೇವರುಗಳಲ್ಲದೆಯೆ ಬ್ರಹ್ಮ ಶಿವ ವಿಷ್ಣುವುಂ
ಭಾವಿಸುತ ನಿನ್ನs ಭಯ ದೇವಋಷಿ ರಾಜಋಷಿ ಪೂಜಿಪರು ಸಂಜ್ಞ ಸುತನೆ || ೫ ||. ೫೯
ಯಜು ಅಥರ್ವಣ ವೇದ ಸಾಮ ಋಗ್ವೇದಗಳು 
ಭಜಿಪವವು ನೀನೆ ಗತಿ ಉಪನಿಷತ್ ಆಗಮಂ
ಅಜಿತಮತಿ ಶಾಪದಪಿ ಶರದಪಿಗೆ ತಾಗಿರಲು ವ್ಯಥೆಯು ಈ ದೃಷ್ಟಿಯಿಂದ || ೬ ||.    ೬೦
ಅಸುರ ಸುರ ಅಷ್ಟ ವಸು ಗಂಧರ್ವ ಕಿನ್ನರಂ 
ಅಸಮತರ ಎಸೆಯುತಿಹ ಕಂಗಳಿಗೆ ಮರುತಗಣ 
ಪಸರಿಪುದೆ ವಿದ್ಯಧರ ಮಾನವರು ಸುಪ್ರಭಾತದಿ ಪಠಿಸೆ ದುಃಖವಿಲ್ಲ || ೭ ||.    ೬೧
ನಮಿಸುವರು ಕದ್ರುಸುತ ಬೇತಾಳ ಯಕ್ಷರು 
ಗಮಿಪದ್ವಯ ಅಶ್ವಿನಿಯ ಶಾಕಿನಿಯ ಪೂತನೆಯ
ಸಮವಿಲ್ಲ ಯೋಗಿನಿಂ ಸಪ್ತತಾಮಾತೆಯರು ಜಲ ಜಂಭಕಿರೆಲ್ಲರೂ. || ೮ ||.    ೬೨
ನಿ : ಶ್ಯಬ್ದ ಇಹ ಸಸ್ಯ ಚಲನಚಿತ್ರ ವಸ್ತುಗಳು  
ನಿ : ಶಂಕ ಕೀಟ ಪಶು ಪಕ್ಷಿಗಳು ಮನೆಗಳಾಂ -   
ತ : ಕರಣ ಸೆಲೆ ನಿನ್ನ ಕರ್ತವ್ಯ ಮಾಡಲು ಪುರದುರ್ಗ ಸೈನ್ಯ ಸಹಿತ. || ೯ ||   ೬೩
ಮಯೂರ ಭೂತವಂ ಪಿಶಾಚಿಯ ಪ್ರೇತವಂ 
ಮುಯ್ಯವಂ ಬಿಡದ ಅರಿ ದುಷ್ಟ ಜನರಿಂ ಭಯವು 
ಗಯ್ಯೋಳೀ ಸ್ಮೃತಿ ಗೈಯಲು ಹಿರಣ್ಯ ಗರ್ಭಾತ್ಮಜನೆ ನಿನ್ನಿಂದ ಹನನವು || ೧೦ || ೬೪
ಮಂದ ಕಿವಿ ಕೇಳಿಪನು ಮೂಕನಿಗೆ ಮಾತಹುದು
ಅಂದ ಕಣ್ ಕಾಣುವನು ಅರಾಯುಷ್ಯದ ಚಿಂತೆ 
ನಂದಖಗನ ಪಠಿಸೆ ದುಷ್ಕರ್ಮ ದೋಷಗಳು ನಿ:ಪಾತ ವ್ಯಾಧಿಗಳು. || ೧೧ || ೬೫
ಭಾಸ್ಕರಾತ್ಮಜ ನೀನು ಸಾರ್ಧಸಪ್ತಕ ಕೊನೆಗೆ 
ನಿಷ್ಕಾಮ ಭಾವದಿಂ ಪೂಜಿಪರ ದುಃಖ ಹರ 
ಅಸ್ಖಲಿತ ಭಾಷೆಯಂ ಚಾತುರ್ಯ ಐಶ್ವರ್ಯ ತ್ರಿಕರಣದ ಶುದ್ಧಿಪ್ರದನೇ || ೧೨ || ೬೬
ಆದಿ ಆತ್ಮಿಕ ಕರ್ಮ ಪರಿಹರಿಸಿ ಸತ್ತೀರ್ಥ
ಆದಿ ದೈವಿಕ ದುಃಖ ಭೋಗ ಪ್ರಾಯಶ್ಚಿತ್ತ 
ಆದಿ ಭೌತಿಕ ಕೃತಿಗೆ ಧೈರ್ಯವನ್ನಿತ್ತು  ನೀ ಕಾಪಾಡು ಶನಿದೇವನೇ || ೧೩ || ೬೭
ಶನಿದೇವ ಪದ ಪದ್ಮ ದಿವ್ಯನುಷ್ಠಾನವನೇ
ಅನುಗೋಳಿಸೆ ಸುಜ್ಞಾನ ಸದ್ಭಕ್ತಿ ತಾ ಪುಣ್ಯ 
ತನು ಆತ್ಮ ಅಂತ್ಯದಲಿ ಮೋಕ್ಷವಂ ದೊರೆಯುವುದಕೆ ಕರುಣಿಸೈ ಭವದ ಭವಿಗೆ || ೧೪ || ೬೮
ಇಂತಿ ಶ್ರೀ ಶನೇಶ್ಚರ ಸತತ ಆರಾಧನೆಯ
ನಿಂತು ನರಗೈವವಗೆ ಇಹಪರದ ಸಾರ್ಥಕ್ಯ
ಅಂತಸ್ಥ ಸ್ಪೂರ್ತಿ ತ್ರಿಪದಿ ವಾರ್ಧಿಕ ಸ್ತುತಿಯು ಇಂದು ಸುತ ಧೀರನಿಂದ || ೧೫ || ೬೯
--------

ಮುಂದೆ ಸುಖವನು ಪಡೆಯಲು ನರ |

ಅಂದದಿಂದಲೇ ನುತ್ತಿಸುವ ಸ್ತುತಿ |

ಕುಂದದೆ ನೃಪ ಕೇಳಿದೇನದು ಪೂರ್ಣ ಮನಗೊಟ್ಟು || ೭೦ ||

ಸ್ತಬ್ಧ ಮಾನಸನಾಗಿ ನೃಪನು  |

ಅಬ್ದಿ ಅಂದದಿ ಇಹುದು ವಿದ್ಯೆಯು |

ಶಬ್ದ ಸತ್ಯವು ಮಂದದೇವನ ಅಭಿಧಾನವೀತೆರದೀ. ||೭೧ ||

ದ್ವಿಜನಿಗಾದರ ಗೈದು ರಾಜನು  |

ಅಜಯವಾಗಿಹ ನಿಮ್ಮ ಬುದ್ಧಿಯ |

ಸುಜನದಿಮ್ ಸುಹೃದಯದಿಂದ ಪಣವಿತ್ತು ಬೀಳ್ಕೊಟ್ಟ || ೭೨ ||

ನಮಿಸಿ ಅಪ್ಪಣೆ ಪಡೆದು ವಿಪ್ರನು |

ಗಮಿಸಿ ತನ್ನಯ ಮನೆಯ ಎಡೆಗೆ |

ತಮವು ತಳೆದಿಹ ತನ್ನ ಬಾಳ್ವೆಗೆ ಬೆಳಕು ಬಿತ್ತೆಂದ || ೭೩ ||

ವೃದ್ಧಿಸಿದ ಆ ದ್ರವ್ಯ ಭೋಗಿಸಿ |

ಸಿದ್ಧಿ ಇಹುದದು ಸರ್ವ ಎಡೆಯಲಿ |

ಬುದ್ಧಿಯಿಂ ದಂಪತಿಗಳೀರ್ವರು ಸುಖವಗೊಳುತಿರುವ || ೭೪ ||

ವಿಪ್ರಪೇಳಿದ ಬೋಧೆಯಿಂದಲಿ |

ವಿಪರೀತದ ಸಂಶಯದಿ ವಿಕ್ರಮ |

ವಿಪರಿಯಾಸವ ಪುಟ್ಟಿ ಆಲೋಚನೆಗೆ ಈಡಾದ || ೭೫ ||

ವಿಷ್ಣು ಸ್ವಾಮಿಯ ಗತಿಯು ಆಲಿಸಿ |

ಪೂಷ್ಣಸುತ ಮುಂತಾದ ಗ್ರಹಗಳ |

ತೃಷ್ಣೆ ನರನಲಿ ಏಕೆ ? ಸಂಶಯ ತಾಳಿ ವಿಕ್ರಮನು ||೭೬||

ಶ್ರೀ ಮಠಾಧಿಪತಿಗಳು ಸೀತಾ - |

ರಾಮ ಆಚಾರ್ಯರಲಿ ಗ್ರಂಥಿಯ |

ಸ್ತೋಮದಲಿ ನಿಧಿಯುಕ್ತ ಕೂಷ್ಮಾಂಡೆಂಬಕತೆ ಇಹುದು||೭೭||

ಪಿತರು ಓದಿದುದಂತೆ ಪೇಳಿದ |

ಕಥೆಯು ರಂಜಿಸುವಂತೆ ಕನ್ನಡ |

ಮತಿಯರಸ ಭಾಷೆಯಲಿ ಲೇಖಿಸಿ ಇತ್ತ ಸಿರಿರಾಯ || ೭೮||

ಇಂತಿ ಶ್ರೀ ಶನೈಶ್ಚರಚರಿ ತಾ - |

ದ್ಯಂತ ಸ್ಪೂರ್ತಿಯು ನೀಡುತಿರೆ ತಾ- |

ಆಂತು ಮಹತಿಯು ಗೈಮೆ ಶ್ರೀ ಗೋವಿಂದರಾಜ ಮರ || ೭೯ ||

ಇತಿ ಪುರಾಣೈತಿಹದ ಕಥೆಗಳು  |

ಮಥಿಸಿ ಸೀತಾರಾಮ ತುಳಸಾ- |ರ

ಸುತನ ಸವಿಗತೆ ಚತುರ್ಥದ ಶ್ರೀ ಕೃಷ್ಣ ಅರ್ಪಣೆಯ || ೮೦ ||


ಇಂತಿ ಶ್ರೀ ಶನೇಶ್ಚರ ಚರಿತ ಪುರಾಣದೊಳು ಚತುರ್ಥ ಸಂಧಿ ಪರಿಪೂರ್ಣಂ  ಶುಭಮಸ್ತು  ಕೃಷ್ಣಾರ್ಪಣಮಸ್ತು



No comments:

Post a Comment