Wednesday, August 06, 2025

DIVASHI GOWRI HAADU BHEEMANA AMAVASYA ಭೀಮನ ಅಮವಾಸ್ಯೆ ದಿವಶಿ ಗೌರಿ ಹಾಡು


ದಿವಶಿ ಗೌರಿ ಈ ಹಾಡು ಭೀಮನ ಅಮವಾಸ್ಯೆ ದಿನ ಹಾಡಬೇಕು 


ಭೀಮನ ಅಮಾವಾಸ್ಯೆ ಹಾಡು 

ಗಜಮುಖ ಗಣಪನ ಭಜನೆಯ ಮಾಡುತ ಅಜನಸತಿಗೆನಮಿಸಿ ನಿಜಭಕ್ತಿಯಿಂದಲಿ ಪೇಳುವೆನಿಮಗೆ ದಿವುಸಿಗೌರಿಕಥೆಯ||ಪಲ್ಲ||


ಆಷಾಢಮಾಸದ ಅಮಾವಾಸ್ಯೆದಿನದಿ ಸೋಸಿಲಿಮಾಡಲೆಂದು  ಹುಟ್ಟಿದಾಗಿನಿಂದ ಹೆಣ್ಣುಮಗುವು ಮದುವೆಆಗುವ ವರೆಗು||೧||


ಭೀಮನ ಅಮಾವಾಸ್ಯೆ  ಎಂದು ಕೆಲವರು ಭಕ್ತಿಂದಪೂಜಿಪರು ದೀಪಸ್ಥಂಭಗೌರಿಯೆಂದು ನಿಷ್ಟೆಯಲಿ ಪೂಜಿಪರು||೨||


ಕತ್ಲರಾಯನೆಂಬ ರಾಜನ ಪತ್ನಿಗೆ ಪುತ್ರ ಸಂತಾನವಾಗಲು ಅರ್ಥಿಯಿಂದಲಿ ಮೂರು ಬಟ್ಟಲೀರಲು ಮಾಡಿ ವಸ್ತ್ರದಾನವ

ಮಾಡಿ||೩||


ದಿನದಿನ ಬೆಳೆದನು ಕಾಳಿಂನೆಂಬ ಹೆಸರಿಂದಹರುಷವಗೈದರೆಲ್ಲ

ಘನವಾಗಿತಿರುಗಿದ ಗಿರಿಕಾನನಗಳ ಬೇಟೆಯಾಡುವ ನೆವದಿ||೪||


ಒಂದು ದಿನ ಅಡವಿಗೆ ಹೋದ ಸಮಯದಿ  ವ್ಯಾಘ್ರದ ಧ್ವನಿ ಕೇಳಲು ಹಿಂದಲೆ ಭಯಗೊಂಡು ಕಾನನದಿ ಮೂರ್ಛೆಯಗೊಂಡನಾಗ||೫||


ಅರಸಗೆ ತಿಳಿಸೆ ಮೃತನಾದ ಮಗನಿಗೆ ಕನ್ಯ ಕೊಡೆರೆಂದು ಪ್ರಕಟಿಸಿದ ಸತತ ದ್ರವ್ಯ ಬೆಳ್ಳಿ  ಬಂಗಾರ ಸಹಿತ ಕೊಡುವುದಾಗಿ ತಿಳಿಸಿದ||೬||


ಬಡ ಬ್ರಾಹ್ಮಣ ನೊಬ್ಬ ತೀರ್ಥಯಾತ್ರೆಗೆ ಹೊರಡೆ ಮಗನ ಬಳಿ ತಂಗಿ ಇರಲು ಧನದಾಸೆಗೆ ಅಣ್ಣನು ತಾನು ಕನ್ಯದಾನವ ಮಾಡಿದ||೭||


ಹೋಗುತ ರಾಜನು ಸೊಸೆಯನ್ನ ನೋಡಿ ಬಾ ಎಂದುಕರೆದ ನಾಗಪತಿಯ ಬಿಟ್ಟು ನಾನು ಹೋದರೆ ಸದ್ಗತಿ ಯು ಇಲ್ಲವೆನಲು||೮||


ಭೋರೆಂಬೊ ಮಳೆಯು ಸುರಿಯತ್ತಲಿರಲು ಕಾನನದಿ ಒಬ್ಬಳಿರಲು ಕನ್ನಿಕೆಯರು ಬಂದು ಅಲ್ಲಿ ದಿವುಸಿಗೌರಿ ಪೂಜೆಯಮಾಡಲು||೯||


ಪೂಜೆಯ ವಿವರವ ತಿಳಿದುಕೊಂಡು ತಾನು ವ್ರತವನ ಆಚರಿಸಿ. ನಾರು ಬಟ್ಟೆಮಾಡಿ ನೀರು ಎಣ್ಢೆಮಾಡಿ ಪೂಜೆಯಗೈದಳಾಗ||೧೦||


ಅಣ್ಣ ಭಂಡಾರವ ವಡೆಯುತಿದ್ದನೆಂದು ಮನದಲ್ಲಿ ಆಲೋಚಿಸೆ. ಶಿವ ಪಾರ್ವತಿಯರು ಬಂದರು ಅಲ್ಲಿಗೆ ಶಿವನು ಭಂಡಾರವಡೆದ||೧೧||


ಪಾರ್ವತಿಯು ತಾನು ಪೂಜೆಯ ಮಾಡಿಸೆ ಕಾಳಿಂಗನೆದ್ದುಕೂಡಲು ಅತಿ ಸಂತೋಷದಿ ಶಿವ ಪಾರ್ವತಿಯರು ಹರಸುತ್ತ ಹೊರಟರಾಗ||೧೨||


ಸತಿ ಪತಿಯರು ಬಹಳ ಸಂತೋಷದಿ ತಮ್ಮ ಊರಿಗೆ ಬರಲು ಮಗಸೊಸೆಯನು ಕಂಡು ರಾಜನು ಹರುಷವಗೊಂಡನಾಗ|೧೩||


ಹಿರಿಯರ ದಯವ ದಿವುಸಿಗೌರಿ ಪೂಜೆ ಫಲಿಸಿತು ನಮಗೆನುತ ಪೂರ್ವದ ಹಿರಿಯರು ಮಾಡಿದ ಕಾರ್ಯವ ನಡೆಸಬೇಕೆನ್ನುತ||೧೪||


ಕನ್ಯಾಮಣಿಗಳು ತಾವು ದಿವುಸಿಗೌರಿ ಪೂಜೆ ಅರ್ಥಿಂದ ಮಾಡಿದರೆ ದಂಪತಿಗಳು ಸುಖದಿಂದಿರುವರೆಂದು ಮಧ್ವೇಶಕೃಷ್ಣನು

ಹರಸುವನು||೧೫||

                                             ......ಮಧ್ವೇಶ ಕೃಷ್ಣ

No comments:

Post a Comment