ದಿವಶಿ ಗೌರಿ ಹಾಡು ಭೀಮನ ಅಮವಾಸ್ಯೆ ದಿನ ಹಾಡಬೇಕು
ಭೀಮನ ಅಮಾವಾಸ್ಯೆ ಹಾಡು
ಗಜಮುಖ ಗಣಪನ ಭಜನೆಯ ಮಾಡುತ ಅಜನಸತಿಗೆನಮಿಸಿ ನಿಜಭಕ್ತಿಯಿಂದಲಿ ಪೇಳುವೆನಿಮಗೆ ದಿವುಸಿಗೌರಿಕಥೆಯ||ಪಲ್ಲ||
ಆಷಾಢಮಾಸದ ಅಮಾವಾಸ್ಯೆದಿನದಿ ಸೋಸಿಲಿಮಾಡಲೆಂದು ಹುಟ್ಟಿದಾಗಿನಿಂದ ಹೆಣ್ಣುಮಗುವು ಮದುವೆಆಗುವ ವರೆಗು||೧||
ಭೀಮನ ಅಮಾವಾಸ್ಯೆ ಎಂದು ಕೆಲವರು ಭಕ್ತಿಂದಪೂಜಿಪರು ದೀಪಸ್ಥಂಭಗೌರಿಯೆಂದು ನಿಷ್ಟೆಯಲಿ ಪೂಜಿಪರು||೨||
ಕತ್ಲರಾಯನೆಂಬ ರಾಜನ ಪತ್ನಿಗೆ ಪುತ್ರ ಸಂತಾನವಾಗಲು ಅರ್ಥಿಯಿಂದಲಿ ಮೂರು ಬಟ್ಟಲೀರಲು ಮಾಡಿ ವಸ್ತ್ರದಾನವ
ಮಾಡಿ||೩||
ದಿನದಿನ ಬೆಳೆದನು ಕಾಳಿಂನೆಂಬ ಹೆಸರಿಂದಹರುಷವಗೈದರೆಲ್ಲ
ಘನವಾಗಿತಿರುಗಿದ ಗಿರಿಕಾನನಗಳ ಬೇಟೆಯಾಡುವ ನೆವದಿ||೪||
ಒಂದು ದಿನ ಅಡವಿಗೆ ಹೋದ ಸಮಯದಿ ವ್ಯಾಘ್ರದ ಧ್ವನಿ ಕೇಳಲು ಹಿಂದಲೆ ಭಯಗೊಂಡು ಕಾನನದಿ ಮೂರ್ಛೆಯಗೊಂಡನಾಗ||೫||
ಅರಸಗೆ ತಿಳಿಸೆ ಮೃತನಾದ ಮಗನಿಗೆ ಕನ್ಯ ಕೊಡೆರೆಂದು ಪ್ರಕಟಿಸಿದ ಸತತ ದ್ರವ್ಯ ಬೆಳ್ಳಿ ಬಂಗಾರ ಸಹಿತ ಕೊಡುವುದಾಗಿ ತಿಳಿಸಿದ||೬||
ಬಡ ಬ್ರಾಹ್ಮಣ ನೊಬ್ಬ ತೀರ್ಥಯಾತ್ರೆಗೆ ಹೊರಡೆ ಮಗನ ಬಳಿ ತಂಗಿ ಇರಲು ಧನದಾಸೆಗೆ ಅಣ್ಣನು ತಾನು ಕನ್ಯದಾನವ ಮಾಡಿದ||೭||
ಹೋಗುತ ರಾಜನು ಸೊಸೆಯನ್ನ ನೋಡಿ ಬಾ ಎಂದುಕರೆದ ನಾಗಪತಿಯ ಬಿಟ್ಟು ನಾನು ಹೋದರೆ ಸದ್ಗತಿ ಯು ಇಲ್ಲವೆನಲು||೮||
ಭೋರೆಂಬೊ ಮಳೆಯು ಸುರಿಯತ್ತಲಿರಲು ಕಾನನದಿ ಒಬ್ಬಳಿರಲು ಕನ್ನಿಕೆಯರು ಬಂದು ಅಲ್ಲಿ ದಿವುಸಿಗೌರಿ ಪೂಜೆಯಮಾಡಲು||೯||
ಪೂಜೆಯ ವಿವರವ ತಿಳಿದುಕೊಂಡು ತಾನು ವ್ರತವನ ಆಚರಿಸಿ. ನಾರು ಬಟ್ಟೆಮಾಡಿ ನೀರು ಎಣ್ಢೆಮಾಡಿ ಪೂಜೆಯಗೈದಳಾಗ||೧೦||
ಅಣ್ಣ ಭಂಡಾರವ ವಡೆಯುತಿದ್ದನೆಂದು ಮನದಲ್ಲಿ ಆಲೋಚಿಸೆ. ಶಿವ ಪಾರ್ವತಿಯರು ಬಂದರು ಅಲ್ಲಿಗೆ ಶಿವನು ಭಂಡಾರವಡೆದ||೧೧||
ಪಾರ್ವತಿಯು ತಾನು ಪೂಜೆಯ ಮಾಡಿಸೆ ಕಾಳಿಂಗನೆದ್ದುಕೂಡಲು ಅತಿ ಸಂತೋಷದಿ ಶಿವ ಪಾರ್ವತಿಯರು ಹರಸುತ್ತ ಹೊರಟರಾಗ||೧೨||
ಸತಿ ಪತಿಯರು ಬಹಳ ಸಂತೋಷದಿ ತಮ್ಮ ಊರಿಗೆ ಬರಲು ಮಗಸೊಸೆಯನು ಕಂಡು ರಾಜನು ಹರುಷವಗೊಂಡನಾಗ|೧೩||
ಹಿರಿಯರ ದಯವ ದಿವುಸಿಗೌರಿ ಪೂಜೆ ಫಲಿಸಿತು ನಮಗೆನುತ ಪೂರ್ವದ ಹಿರಿಯರು ಮಾಡಿದ ಕಾರ್ಯವ ನಡೆಸಬೇಕೆನ್ನುತ||೧೪||
ಕನ್ಯಾಮಣಿಗಳು ತಾವು ದಿವುಸಿಗೌರಿ ಪೂಜೆ ಅರ್ಥಿಂದ ಮಾಡಿದರೆ ದಂಪತಿಗಳು ಸುಖದಿಂದಿರುವರೆಂದು ಮಧ್ವೇಶಕೃಷ್ಣನು
ಹರಸುವನು||೧೫||
......ಮಧ್ವೇಶ ಕೃಷ್ಣ
No comments:
Post a Comment