Wednesday, September 11, 2024

*PAVAMANA " ಪವಮಾನ ಜಗದ ಪ್ರಾಣ "

 ಹರಿ ಸರ್ವೋತ್ತಮ ವಾಯು ಜೀವೋತ್ತಮ  ತರ್ಕ ಮಂತ್ರ. ಪ್ರಾಣದೇವರಿಗೆ ಸಮರ್ಪಿತ ಈ ಭಕ್ತಿ ಗೀತೆಯ ರಚನೆಯು ವಿಜಯದಾಸರದು.

          ಪವಮಾನ ಜಗದ ಪ್ರಾಣ 

ಪವಮಾನ ಪವಮಾನ ಜಗದಾ ಪ್ರಾಣಾ

ಸಂಕರುಷಣ ಭವಭಯಾರಣ್ಯ ದಹನ |ಪ|

ಶ್ರವಣವೆ ಮೊದಲಾದ ನವವಿಧ ಭಕುತಿಯ

ತವಕದಿಂದಲಿ ಕೊಡು ಕವಿಗಳ ಪ್ರಿಯ ||ಅ ಪ||


ಹೇಮ ಕಚ್ಚುಟ ಉಪವೀತ ಧರಿಪ ಮಾರುತ 

ಕಾಮಾದಿ ವರ್ಗ ರಹಿತ. sss

ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ

 ರಾಮಚಂದ್ರನ ನಿಜದೂತ. sss

ಯಾಮ ಯಾಮಕೆ ನಿನ್ನಾರಾಧಿಪುದಕೆ. 

ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ. 

ಈ ಮನಸಿಗೆ ಸುಖಸ್ತೋಮವ ತೋರುತ

ಪಾಮರ ಮತಿಯನು ನೀ ಮಾಣಿಪುದು |೧|

ಪವಮಾನ ಪವಮಾನ ಜಗದಾ ಪ್ರಾಣಾ

ಸಂಕರುಷಣ ಭವಭಯಾರಣ್ಯ ದಹನ |ಪ|


ವಜ್ರ ಶರೀರ ಗಂಭೀರ ಮುಕುಟಧರ 

ದುರ್ಜನವನ ಕುಠಾರ sss 

ನಿರ್ಜರ ಮಣಿದಯಾ 

ಪಾರ ವಾರ ಉದಾರ 

ಸಜ್ಜನರಘವ ಪರಿಹಾರ. sss 

ಅರ್ಜುನಗೊಲಿದಂದು  

ಧ್ವಜವಾನಿಸಿ ನಿಂದು. 

ಮೂರ್ಜಗವರಿವಂತೆ ಗರ್ಜನೆ ಮಾಡಿದಿ. 

ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ. 

ಮಾರ್ಜನದಲಿ ಭವ ವರ್ಜಿತನೆನಿಸೊ |೨|

ಪವಮಾನ ಪವಮಾನ ಜಗದಾ ಪ್ರಾಣಾ

ಸಂಕರುಷಣ ಭವಭಯಾರಣ್ಯ ದಹನ |ಪ|


ಪ್ರಾಣ ಅಪಾನ ವ್ಯಾನೋದಾನ 

ಸಮಾನ ಆನಂದ ಭಾರತಿ ರಮಣ. sss

ನೀನೆ ಶರ್ವಾದಿ. ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯsss. 

ನಾನು ನಿರುತದಲಿ ಏನೇನೆಸಗಿದೆ. 

ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ. 

ಪ್ರಾಣನಾಥ ಸಿರಿವಿಜಯವಿಠಲನ. 

ಕಾಣಿಸಿ ಕೊಡುವುದು ಭಾನು ಪ್ರಕಾಶ |೩|

ಪವಮಾನ ಪವಮಾನ ಜಗದಾ ಪ್ರಾಣಾ

ಸಂಕರುಷಣ ಭವಭಯಾರಣ್ಯ ದಹನ |ಪ|

ಶ್ರವಣವೆ ಮೊದಲಾದ ನವವಿಧ ಭಕುತಿಯ

ತವಕದಿಂದಲಿ ಕೊಡು ಕವಿಗಳ ಪ್ರಿಯ ||ಅ ಪ||

ಪವಮಾನ ಪವಮಾನ ಜಗದಾ ಪ್ರಾಣಾ

ಸಂಕರುಷಣ ಭವಭಯಾರಣ್ಯ ದಹನ |ಪ|



No comments:

Post a Comment