Sunday, October 13, 2024

RSS prayer in Kannada. ಸಂಘ ಪ್ರಾರ್ಥನೆ ಕನ್ನಡ ತರ್ಜುಮೆ..

 ಸಂಘ ಪ್ರಾರ್ಥನೆ. ಕನ್ನಡ ತರ್ಜುಮೆ..   

 (ಒಂದು ಪ್ರಯತ್ನ)


ಭಾರತ ಮಾತೆಯ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಭಾವನೆ ಏನೆಂದು ಯೋಚಿಸಿ, ಮನವರಿಕೆ ಮಾಡಿಕೊಳ್ಳುವುದು ಅವಶ್ಯಕ.


इयं राष्ट्रीय स्वयंसेवक संघस्य प्रार्थना:। अस्य प्रणेता नरहरि नारायण भिड़े आसीत। १९३९ तमे वर्षे फेब्रुअरी मासे रचिता इयं प्रार्थना पुणे संघ शिक्षा वर्गे प्रथम अवसरे प्रस्तुतवान।

ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರ್ಥನೆ: ಪ್ರಾರ್ಥನೆಯನ್ನು ರಚಿಸಿದವರು  ಶ್ರೀ ನರಹರಿ ನಾರಾಯಣ ಭಿಡೆ ರವರು.  ಫೆಬ್ರವರಿ 1939 ರಲ್ಲಿ ರಚಿಸಲಾದ ಈ ಪ್ರಾರ್ಥನೆಯನ್ನು ಪುಣೆ ಸಂಘವು ತನ್ನ ಶಿಕ್ಷಣ ಶಿಬಿರದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಸ್ತುತಪಡಿಸಿತು.


1. नमस्ते सदा वत्सले मातृभूमे, त्वया हिन्दुभूमे सुखं वर्धितोsहम्। 

ಓ ಪ್ರೀತಿಯ ಮಾತೃಭೂಮಿಯೇ!  ನಾನು ನಿಮಗೆ ಯಾವಾಗಲೂ ವಂದಿಸುತ್ತೇನೆ.  ನೀವು ನನ್ನನ್ನು ಸುಖ ಸಂತೋಷದಿಂದ ಬೆಳೆಸಿದ್ದೀರಿ. 


2. महामङ्गले पुण्यभूमे त्वदर्थे, पतत्वेष कायो नमस्ते नमस्ते।। १।। 

ಓ ಮಂಗಳಕರ ಪವಿತ್ರ ಭೂಮಿಯೇ!  ನನ್ನ ಈ ದೇಹವು ನಿಮ್ಮ ಕೆಲಸಕ್ಕಾಗಿ ಮಾತ್ರ ಸಮರ್ಪಿತವಾಗಿದೆ.  ನಾನು ನಿಮಗೆ ಮತ್ತೆ ಮತ್ತೆ ನಮಸ್ಕರಿಸುತ್ತೇನೆ. 


3. प्रभो शक्ति मन्हिन्दुराष्ट्राङ्गभूता, इमे सादरं त्वाम नमामो वयम् यत्वदीयाय कार्याय बध्दा कटीयं, शुभामाशिषम देहि तत्पूर्तये तत्। 

ಓ ಸರ್ವಶಕ್ತ ದೇವರೇ!  ಹಿಂದೂ ರಾಷ್ಟ್ರದ ಮಕ್ಕಳಾದ ನಾವು ನಿಮಗೆ ಗೌರವಪೂರ್ವಕವಾಗಿ ನಮಸ್ಕರಿಸುತ್ತೇವೆ.  ನಿಮ್ಮ ಕೆಲಸಕ್ಕೆ ಮಾತ್ರ ನಾವು ಸಜ್ಜಾಗಿದ್ದೇವೆ.  ಆ ಕೆಲಸದ ನೆರವೇರಿಕೆಗಾಗಿ ನಿಮ್ಮ ಆಶೀರ್ವಾದವನ್ನು ನಮಗೆ ನಿರಂತರವಾಗಿ ನೀಡುತ್ತಲಿರಿ.


4. अजय्यां च विश्वस्य देहीश शक्तिम, सुशीलं जगद्येन नम्रं भवेत्, श्रुतं चैव यत्कण्टकाकीर्ण मार्गं, स्वयं स्वीकृतं नः सुगं कारयेत्।। २।। 

ಓ ಸೃಷ್ಟಿ ಕರ್ತನೇ!  ಜಗತ್ತಿನಲ್ಲಿ ಯಾರೂ ಎಂದಿಗೂ ಪ್ರಶ್ನೆ ಮಾಡದಂತಹ ಶಕ್ತಿಯನ್ನು ನಮಗೆ ನೀಡು , ಅಂತಹ ಪರಿಶುದ್ಧತೆಯ ಮುಂದೆ  ಇಡೀ ಜಗತ್ತು ತಲೆಬಾಗಬೇಕು, ಅಂತಹ ಜ್ಞಾನವನ್ನು ತಮ್ಮಿಂದ ಬೇಡಿಕೊಳ್ಳುತ್ತೇನೆ. ಅದರ ದೆಸೆಯಿಂದಾಗಿ ನಾನೇ ಸ್ವತಃ ಸ್ವೀಕರಿಸಿದ ಈ ಮುಳ್ಳಿನ ಮಾರ್ಗವು ಸುಲಭವಾಗುತ್ತದೆ. 


5. समुत्कर्षनिःश्रेयसस्यैकमुग्रं, परं साधनं नाम वीरव्रतम्

तदन्तः स्फुरत्वक्षया ध्येयनिष्ठा, हृदन्तः प्रजागर्तु तीव्राsनिशम्। 

ಅತ್ಯುನ್ನತ ಆಧ್ಯಾತ್ಮಿಕ ಸಂತೋಷ ಮತ್ತು ಶ್ರೇಷ್ಠ ಲೌಕಿಕ ಸಮೃದ್ಧಿಯನ್ನು ಪಡೆಯುವ ಏಕೈಕ ಅತ್ಯುತ್ತಮ ಸಾಧನವಾದ ಉಗ್ರ ಶೌರ್ಯದ ಮನೋಭಾವವು ನಮ್ಮಲ್ಲಿ ಜಾಗೃತಗೊಳ್ಳಬೇಕು.  ತೀವ್ರವಾದ ಮತ್ತು ಅಚಲವಾದ ನಿರ್ಣಯವು ಯಾವಾಗಲೂ ನಮ್ಮ ಹೃದಯದಲ್ಲಿ ಎಚ್ಚರವಾಗಿರುವಂತೆ ಕೃಪೆ ಮಾಡು 


6. विजेत्री च नः संहता कार्यशक्तिर्, विधायास्य धर्मस्य संरक्षणम्। परं वैभवं नेतुमेतत् स्वराष्ट्रं, समर्था भवत्वाशिषा ते भृशम्।। ३।। ।। भारत माता की जय।। 

ಓ ತಾಯಿಯೇ, ನಿಮ್ಮ ಕೃಪೆಯಿಂದ, ನಮ್ಮ ಈ ವಿಜಯಶಾಲಿಯಾದ ಸಂಘಟಿತರಾಗಿ ದುಡಿಯುವ ಶಕ್ತಿಯು ನಮ್ಮ ಧರ್ಮವನ್ನು ರಕ್ಷಿಸಲು ಮತ್ತು ಈ ರಾಷ್ಟ್ರವನ್ನು ವೈಭವದ ಅತ್ಯುನ್ನತ ಶಿಖರಕ್ಕೆ ಕೊಂಡೊಯ್ಯಲು ಸಾಧ್ಯವಾಗುವಂತೆ ಕೃಪೆ ಮಾಡು ತಾಯಿ .  ಭಾರತ ಮಾತೆಯೇ ನಿನಗೆ ಜಯವಾಗಲಿ 

              ದ್ವೇಷ ಮತ್ತು ದ್ವೇಷದ ಕನ್ನಡಕವನ್ನು ತೆಗೆದುಹಾಕಿ ಸಂಘವನ್ನು ಅದರ ಕಾರ್ಯವನ್ನೂ ನೋಡಲು ಪ್ರಯತ್ನಿಸಬೇಕು ಹಾಗೆಯೇ ಸಂಘವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಸಂಘದ ಶಾಖೆಗಳಿಗೆ ಬಂದು ನಿಜವನ್ನು ತಿಳಿದುಕೊಳ್ಳುವುದು ಉತ್ತಮ, ಏನನ್ನೂ ತಿಳಿದುಕೊಳ್ಳದೆ ಅಪಾರ್ಥ ಮಾಡಿಕೊಳ್ಳುವುದು ತಪ್ಪು.

         ಸಂಘವು ತಾವು "ಹಿಂದೂ ಸಮಾಜವನ್ನು ಪ್ರತಿನಿಧಿಸುತ್ತೇವೆ" ಎಂದು ಎಂದಿಗೂ ಎಲ್ಲಿಯೂ ಹೇಳಿಕೊಂಡಿಲ್ಲ ಆದರೆ ಸಂಘವು ಸಮಾಜದ ಒಂದು ಭಾಗವಾಗಿದ್ದು  ರಾಷ್ಟ್ರೀಯ ಸಮಾಜಿಕ, ರಾಜನೈತಿಕ.  ಸಮಸ್ಯೆಗಳಿಗೆ ಪ್ರತಿನಿಧಿಸುತ್ತಿಲಿರಬೇಕು ಎಂದು  ಮಾತ್ರ ಅರ್ಥಮಾಡಿಕೊಂಡಿದೆ.  ಅಲ್ಲದೆ ಸಂಘವು ರಾಷ್ಟ್ರದ ಪ್ರಮುಖ ಘಟಕವಿರುವ ವೈಯಕ್ತಿಕ ಅಭಿವೃದ್ಧಿಯತ್ತಲೂ ತನ್ನ ಗಮನವನ್ನು ಕೇಂದ್ರೀಕರಿಸುತ್ತದೆ.  

ಸಮಾಜವನ್ನು ದೂಷಿಸುವುದು ನಿಷ್ಕ್ರಿಯ ಜನರ ಕೆಲಸವಾಗಿದೆ, ಸಮಾಜವು ಶಕ್ತಿಯುತವಾಗಿರಬೇಕು, ಸಂಘಟಿತವಾಗಿರಬೇಕು ಮತ್ತು ವೈಯಕ್ತಿಕ ಅಭಿವೃದ್ಧಿಯ ಪಥದಲ್ಲಿ ರಾಷ್ಟ್ರಕ್ಕಾಗಿ ಕೆಲಸ ಮಾಡುತ್ತಲಿರಬೇಕು.  ಸಾಮಾನ್ಯವಾಗಿ ಸಂಘವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡವನು  ಅದರ ಮೇಲೆ ಜಾತಿಯ ಆರೋಪವನ್ನು ಎಂದಿಗೂ ಮಾಡುವುದಿಲ್ಲ ಏಕೆಂದರೆ ಸಂಘದಲ್ಲಿ ಜಾತೀಯತೆಗೆ ಸ್ಥಾನವಿಲ್ಲ ಎಂದು ತಿಳಿದಿರುತ್ತಾನೆ.  


RSS  राष्ट्रीय स्वयम् सेवक संघ सदस्य 



No comments:

Post a Comment