Tuesday, October 29, 2019

SUDARSHANA CHAKRA ಹರಿಗೆ ಸುದರ್ಶನ ಚಕ್ರ ಪ್ರದಾನ

ಹರಿಗೆ ಸುದರ್ಶನ ಚಕ್ರ ಪ್ರದಾನ 
ಶಿವ ಪುರಾಣದ ಪ್ರಕಾರ, ವಿಷ್ಣು ವಿಶ್ವವನ್ನು ಎಲ್ಲಾ ದುಷ್ಟಶಕ್ತಿಗಳಿಂದ ರಕ್ಷಿಸಲು ಒಂದು ಅತ್ಯಂತ ಶಕ್ತಿಶಾಲಿಯಾದ ಆಯುಧ ಹೊಂದಲು ಬಯಸಿದನು.ಇದಕ್ಕಾಗಿ ವಿಷ್ಣು ಒಂದು ಸಾವಿರ ಹೂವುಗಳಿಂದ ಶಿವನನ್ನು ಪೂಜೆ ಮಾಡಿ ವರವನ್ನು ಕೋರುವುದಾಗಿ ತೀರ್ಮಾನ ಮಾಡಿದನು.
ವಿಷ್ಣು ಪೂಜೆಗೆ ಅಗತ್ಯವಿದ್ದ ಸಾಮಗ್ರಿಗಳೊಂದಿಗೆ, ಒಂದು ಸಾವಿರ ಕಮಲದ ಹೂಗಳನ್ನು ಸಂಗ್ರಹಿಸಿ ಪೂಜೆ ಪ್ರಾರಂಭಿಸಿದನು.  ಆದರೆ ಪೂಜೆ ಕೊನೆಗೊಳ್ಳುವ ವೇಳೆಯಲ್ಲಿ ಒಂದು ಹೂವು ಕಡಿಮೆ ಇರುವುದು ವಿಷ್ಣುಗೆ ತಿಳಿಯಿತು.
ತನ್ನ ಪ್ರಾರ್ಥನೆಯನ್ನು ನಿಲ್ಲಿಸದೆ, ಪೂಜೆಗೆ ತಡೆಬಾರದಂತೆ ಹೂವಿನ ಬದಲಾಗಿ ವಿಷ್ಣು ಶಿವನಿಗಾಗಿ ತನ್ನ ಕಣ್ಣನ್ನು ಕಿತ್ತು ಹೂವಿನಂತೆ ಪೂಜೆಯಲ್ಲಿ ಕೊನೆಯ ಕಮಲದ ಹೂವಾಗಿ ಅರ್ಪಿಸಿದನು. ಕಮಲದ ಹೂವಿನ ಬದಲಾಗಿ ತನ್ನ ಕಣ್ಣನ್ನೇ  ಕೊಟ್ಟ ವಿಷ್ಣುಗೆ 'ಪದ್ಮಾಕ್ಷ' ಎಂಬ ಹೆಸರು ಬಂತು. 
(ಪದ್ಮ ಅಂದರೆ ಕಮಲ ಹಾಗು ಅಕ್ಷಿ ಅಂದರೆ ಕಣ್ಣು ಎಂದು)

ಶಿವನು ಈ ತೀವ್ರವಾದ ಭಕ್ತಿಯನ್ನು ಮೆಚ್ಚಿ, ತಕ್ಷಣ ವಿಷ್ಣು ದೇವನಿಗೆ ಬಯಸಿದ್ದನ್ನು ವರವಾಗಿ ನೀಡುವುದಾಗಿ ತಿಳಿಸಿದನು .ವಿಷ್ಣು ಅಸುರರನ್ನು ನಾಶ ಮಾಡಲು ಸಹಾಯವಾಗುವ ಒಂದು ಶಸ್ತ್ರದ ಅಗತ್ಯವನ್ನು ವ್ಯಕ್ತಪಡಿಸಿದನು. ಶಿವನು ವಿಷ್ಣುಗೆ ಸುದರ್ಶನ ಚಕ್ರವನ್ನು ವರವಾಗಿ ನೀಡಿದನು.ಶಿವನ ಅಂಗುಷ್ಠದಿಂದ ಸೃಷ್ಟಿಸಲಾದ ಪ್ರಬಲವಾದ ಶಸ್ತ್ರವೇ ಈ ಸುದರ್ಶನ ಚಕ್ರ. 
 ಇನ್ನೊಂದು ಕಥೆ ಆಧಾರವಾಗಿ  ಸುರಾಸುರರ ಯುಧ್ದದಲ್ಲಿ ಎಲ್ಲ ಅಸ್ತ್ರ ಶಸ್ತ್ರ ಗಳನ್ನೂ ಕಳೆದುಕೊಂಡು ಸೋತ ವೇಳೆಯಲ್ಲಿ ತ್ರಿಮೂರ್ತಿಗಳ ಸಹಿತ ದೇವೇಂದ್ರನು ದಧೀಚಿ ಋಷಿಗಳಹತ್ತಿರ ಲೋಕಕಲ್ಯಾಣಾರ್ಥವಾಗಿ ಶಸ್ತ್ರಾಸ್ತ್ರಗಳನ್ನು ದಯಪಾಲಿಸಲು ಕೇಳಿಕೊಂಡಾಗ  ನಾನು ನನ್ನ ತಪಶ್ಯಕ್ತಿಯ ದೇಹವನ್ನು ತ್ಯಜಿಸುತ್ತೇನೆ ನನ್ನಯ ಎಲುಬುಗಳಿಂದ ಶಸ್ತ್ರಗಳನ್ನು ತಯಾರಿಸಿಕೊಳ್ಳಿ ಎಂದು ಹೇಳಿ ಯೋಗಸಮಾಧಿಯಲ್ಲಿ ದೇಹ ತ್ಯಾಗ ಮಾಡಿದರು ವಜ್ರಾಯುಧ,ತ್ರಿಶೂಲ, ಶಾರಂಗ,ಭೃಶುಂಡಿ, ಗದೆ ಎಲ್ಲರೂ ಒಂದೊಂದು ಆಯುಧ ತಯಾರಿಸಿಕೊಂಡು ತೆಗೆದುಕೊಂಡಾದ ನಂತರ ವಿಷ್ಣು ಸಂಪೂರ್ಣ ಶರೀರದ ಕೈ ಕಾಲ್ಬೆರಳುಗಳ ಚಿಕ್ಕ ಚಿಕ್ಕ ಎಲುಬುಗಳಿಂದ  ಮಹಾ ಶಕ್ತಿ ಶಾಲಿಯಾದ ಸುದರ್ಶನ ಚಕ್ರವನ್ನು ತಯಾರಿಸಿ ಪೂಜಿಸಿ ಪ್ರಾಣ ಪ್ರತಿಷ್ಠಾಪನ ಮಾಡಿ ಧರಿಸಿದನು ಆದರೂ ಅದು ಯಾವಾಗಲೂ ಪ್ರಕಟವಾಗದೆ ಇದ್ದು ಬೇಕೆಂದಾಗಲೇ ಪ್ರಕಟವಾಗಿ ಕಾರ್ಯ ಮುಗಿದ ತಕ್ಷಣ ಮೂಲದಲ್ಲಿ ಬಂದು ಸೇರುತ್ತಿತ್ತು ಎನ್ನಲಾಗುತ್ತದೆ.           
ರಾಕ್ಷಸ ಜಲಂಧರನನ್ನು ಈ ಅಸ್ತ್ರದಿಂದ ನಾಶ ಮಾಡಲಾಯಿತು. 
ಈ ಸುದರ್ಶನ ಚಕ್ರದಲ್ಲಿ ಎರಡು ವಿರುದ್ಧ ದಿಕ್ಕಿನಲ್ಲಿ ಚಲಿಸುವ, ಹತ್ತು ದಶಲಕ್ಷ ಮುಳ್ಳಿನ ಇರಿಗಳು ಸದಾ ಕಾಲ ಸುತ್ತು ಹೊಡೆಯುತ್ತಿರುತ್ತದೆ.
ಈ ಶಸ್ತ್ರ ಶತ್ರುವಿನ ಕಡೆಗೆ ಎಸೆಯುವುದಷ್ಟೆ ಅಲ್ಲ, ಇದು ಸಂಪೂರ್ಣವಾಗಿ ಮನೋನಿಶ್ಚಯದಿಂದ ಪ್ರಯೋಗಿಸಿ, ಶತ್ರುವನ್ನು ಅಟ್ಟಿಸಿಕೊಂಡು ಹಿಂಬಾಲಿಸುವ ಅಸ್ತ್ರವಾಗಿದೆ. ವಿಷ್ಣುವಿನ ಎಲ್ಲಾ ಶತ್ರುಗಳನ್ನು, ಅವರು ಸಂಖ್ಯೆ ಎಷ್ಟೇ ಇದ್ದರು - ವಶಪಡಿಸಿಕೊಳ್ಳಲು ಸಹಾಯ ಮಾಡುವುದ ಈ ಒಂದು ಶಸ್ತ್ರ.
ಈ ಅಸ್ತ್ರ ಎಷ್ಟು ಪ್ರಬಲವಾದದ್ದು ಎಂದರೆ, ಇದನ್ನು ಕೂಡ ಒಂದು ದೇವರಂತೆ ಪೂಜಿಸಲಾಗುತ್ತದೆ.
ವಾಸ್ತವವಾಗಿ, ಸುದರ್ಶನ ಹೋಮ ದಕ್ಷಿಣ ಭಾರತದ ಅನೇಕ ವಿಷ್ಣು ದೇವಾಲಯಗಳಲ್ಲಿ ಮತ್ತು ಶಿವನ ದೇವಸ್ಥಾನಗಳಲ್ಲಿ ಅತ್ಯಂತ ಜನಪ್ರಿಯ ಹೋಮ ಆಗಿದೆ

ಸುದರ್ಶನ ಚಕ್ರ 
ಸುದರ್ಶನ ಎಂಬ ಪದವು ಎರಡು ಪದಗಳಿಂದ ಆಗಿದೆ. ಸು ಮತ್ತು ದರ್ಶನ. ಸು ಎಂದರೆ ಮಂಗಳಕರವಾದುದು. ದರ್ಶನ ಎಂದರೆ ಕಾಣುವುದು. 

ಸುದರ್ಶನ ಚಕ್ರ ಎಂಬುದು ವಿಷ್ಣುವಿನ ಆಯುಧ. ಈ ಆಯುಧವನ್ನು ವಿಷ್ಣು ದುಷ್ಟ ಸಂಹಾರಕ್ಕಾಗಿ ಬಳಸುತ್ತಿದ್ದ. ಇದರ ಮೂಲದ ಬಗ್ಗೆ ಹಲವು ಕಥೆಗಳಿವೆ. ಒಂದು ಕಥೆಯ ಪ್ರಕಾರ ಬ್ರಹ್ಮ, ವಿಷ್ಣು, ಮಹೇಶ್ವರ ಮೂವರ ಸಂಯೋಜನೆ ಶಕ್ತಿಯಿಂದ ಸುದರ್ಶನ ಚಕ್ರವು ಸೃಷ್ಟಿಯಾಯಿತು.
                                 ಆಯಾ ಕಥೆಗೆ ಅನುಸಾರವಾಗಿ ಸುದರ್ಶನ ಚಕ್ರದಲ್ಲಿ 6,12 ಅಥವಾ 27 ಮಾನಚಾದ ಆರೆಗಳಿವೆ ಎನ್ನಲಾಗುತ್ತದೆ. ಪ್ರತಿಯೊಂದು ಆರೆಯು ಪುರುಷ ಮತ್ತು ಸ್ತ್ರೀ ತತ್ವವನ್ನು ಹೇಳುತ್ತವೆ. ಸೂರ್ಯನಂತೆ ಬೆಳಕು ಗೋಚರಿಸುತ್ತದೆ. ಮೋಕ್ಷ ಸಾಧನೆಯ ಕಠಿಣ ಹಾದಿಯಲ್ಲಿ ಸಾಗಲು ಭಕ್ತರಿಗೆ ನೆರವಾದ ಕಾರಣದಿಂದ ಸುದರ್ಶನ ಚಕ್ರವನ್ನು ದೇವರ ರೊಪದಲ್ಲಿಯು ಪೂಜಿಸಲಾಗಿತ್ತು.

 ಸುದರ್ಶನ ಹೋಮ ಮಾಡುವುದರಿಂದ ಮನೆ ಮತ್ತು ಕೆಲಸದ ಸ್ಥಳ ಗಳಲ್ಲಿ ಇರುವ ಕೆಟ್ಟ ಶಕ್ತಿಯನ್ನು ಹೊಡೆ ದೋಡಿಸಬಹುದು ಎಂಬ ನಂಬಿಕೆಯಿದೆ.

*"ಶ್ರೀ ಸುದರ್ಶನ ಸ್ತೋತ್ರ" ಮತ್ತು ವಿಶೇಷತೆಗಳು* 

"ಹದಿನಾಲ್ಕು ಲೋಕಗಳಿಗೂ ಒಡೆಯರಾದ 
" ಶ್ರೀ ಲಕ್ಷ್ಮೀನಾರಾಯಣ" ರು ಆಯುಧಗಳಲ್ಲಿ   ಚಕ್ರಗಳಿಗೇ ರಾಜನಾದ 
"ಶ್ರೀ ಸುದರ್ಶನ" ಚಕ್ರವನ್ನು ಹೊಂದಿದ್ದಾರೆ ಎಂದರೆ "ಶ್ರೀ ಸುದರ್ಶನ" ಚಕ್ರದ ಮಹಿಮೆ ಎಷ್ಟಿರಬಹುದು ಅಲ್ಲವೇ..!

ಸುದರ್ಶನ ಚಕ್ರಕ್ಕೆ ಎದುರು ನಿಂತು ಬದುಕಿ ಉಳಿದವರು ಯಾರೂ ಇಲ್ಲ..
"ಶ್ರೀ ಸುದರ್ಶನ ಚಕ್ರದ ಮುಖ್ಯ ಉದ್ಧೇಶ "ದುಷ್ಟ ಶಿಕ್ಷಣೆ, ಶಿಷ್ಠ ರಕ್ಷಣೆ, ಅಧರ್ಮಿಗಳ ನಾಶ..!

" ಶ್ರೀ ಸುದರ್ಶನ ಪೂಜೆಯನ್ನು ಹಲವಾರು ರೀತಿಯಲ್ಲಿ ಮಾಡುತ್ತಾರೆ..

೧. ಶ್ರೀ ಸುದರ್ಶನ ಚಕ್ರ ಪೂಜೆ,
೨. ಶ್ರೀ ಸುದರ್ಶನ ಸಾಲಿಗ್ರಾಮ ಪೂಜೆ..
೩. ಶ್ರೀ ಸುದರ್ಶನ ಆರಾಧನೆ ಪೂಜೆ.
೪. ವಿಗ್ರಹ ಪೂಜೆ..

"ಶ್ರೀ ಸುದರ್ಶನ" ಚಕ್ರಪೂಜೆಯಲ್ಲಿ ಹಲವಾರು ತರಹ ಇದೆ..

೧. ಎಲ್ಲರೂ ಮಾಡುವಂತಹ ಸಾಮಾನ್ಯ ಪೂಜೆ..
೨. ಶ್ರೀ ಸುದರ್ಶನ ಸದಾಚಾರ ಪೂಜೆ..
೩. ಶ್ರೀ ಸುದರ್ಶನ ವಾಮಾಚಾರ ಪೂಜೆ..
೪. ಶ್ರೀ ಸುದರ್ಶನ ಶನಸಾತ್ವಿಕ ಪೂಜೆ..
೫. ಶ್ರೀ ಸುದರ್ಶನ ರಾಜಸ ಪೂಜೆ..
೬. ಶ್ರೀ ಸುದರ್ಶನ ತಾಮಸ ಪೂಜೆ..

ಪ್ರಸ್ತುತ "ಶ್ರೀ ಸುದರ್ಶನ" ಚಕ್ರ ಸ್ತೋತ್ರದ ಬಗ್ಗೆ ತಿಳಿದುಕೊಳ್ಳೋಣ..
"ಶ್ರೀ ಸುದರ್ಶನ " ಚಕ್ರ ಸ್ತೋತ್ರವನ್ನು ಓದಿದರೆ ಏನು ಫಲ, ..?
೧. ಯಾರಿಗೆ ಓದುವಾಗ ಜ್ಞಾಪಕವಿದ್ದು ನಂತರ ಮರೆತುಹೋಗುತ್ತಾರೋ ಅಂಥವರು ಓದಿದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ..

೨. ಯಾರಿಗೆ ಮತ್ತು ಯಾರ ಮನೆಯಲ್ಲಿ ಮಾಂತ್ರಿಕ ದೋಷಗಳಿದ್ದರೆ ಅಂಥವರು ಓದಿದರೆ ಮಾಂತ್ರಿಕ ದೋಷ ಪೂರ್ಣವಾಗಿ ನಿವಾರಣೆಯಾಗುತ್ತದೆ..

೩. ಯಾರಿಗೆ ವೈದ್ಯರಿಂದಲೂ ವಾಸಿಯಾಗದ ಖಾಯಿಲೆಗಳಿದ್ದರೆ , ಅಂತವರು ಓದಿದರೆ ಬಹಳ ಬೇಗ ಆರೋಗ್ಯಭಾಗ್ಯ ಪಡೆಯುತ್ತಾರೆ..

೪. ವಿವಾಹಕ್ಕಿರುವ ಅಡೆತಡೆಗಳೆಲ್ಲಾ ನಿವಾರಣೆಯಾಗಿ ಬಹಳ ಬೇಗ ವಿವಾಹವಾಗುತ್ತದೆ..

೫. ಯಾರ ಮನೆಯಲ್ಲಿ ವಿವಾಹವಾದ ಮೇಲೆ ಪ್ರತಿದಿನವೂ ಮನೆಯಲ್ಲಿ ಜಗಳ ಆಡುತ್ತಿದ್ದರೆ, ಮನೆಯಲ್ಲಿ ಶಾಂತಿ ನೆಮ್ಮದಿ ಇಲ್ಲದಿದ್ದರೆ, ಇಂಥವರು ಓದಿದರೆ ಮನೆಯಲ್ಲಿ ಬಹಳ ಶಾಂತಿದೊರೆತು ನೆಮ್ಮದಿಯಿಂದ ಜೀವನ ಮಾಡುತ್ತಾರೆ..

೬. ಯಾರಿಗೆ ತುಂಬಾ ಸಿಟ್ಟು, ಕೋಪ, high BP, ಸಿಡುಕುವ ಸ್ವಭಾವ ಇದ್ದವರು ಓದಿದರೆ , ಮನಸ್ಸಿಗೆ ನೆಮ್ಮದಿ ದೊರೆತು ಶಾಂತಿಯ ಜೀವನ ನಡೆಸುತ್ತಾರೆ..

೭. ನೂತನವಾಗಿ ಕಟ್ಟಿಸಿದ ಮನೆಯ ಗೃಹಪ್ರವೇಶ ಕಾಲದಲ್ಲಿ "ಶ್ರೀ ಸುದರ್ಶನ" ಸ್ತೋತ್ರದಿಂದ ಹೋಮ ಮಾಡಿದರೆ ಮನೆಯು ತುಂಬಾ ಅಭಿವೃದ್ಧಿಯಾಗಿ ಬಹಳ ಶ್ರೇಯಸ್ಸಾಗುತ್ತದೆ..

೮. ಹೆಣ್ಣು ಮಕ್ಕಳು 15 ವರ್ಷವಾದ ನಂತರವೂ  ಋತುಮತಿಯಾಗದೇ ಇದ್ದರೆ ,ಅಂಥವರು ಓದಿದರೆ   ಬಹಳ ಬೇಗ ಋತುಮತಿಯಾಗುತ್ತಾರೆ..

ವಿಶೇಷ ವಿಷಯ : ಕೆಲವು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ, ತುಂಬಾ ಅನಾರೋಗ್ಯ, ಫಿಡ್ಸ್ ತರಹದ ಖಾಯಿಲೆ, ವಿಚಿತ್ರ ಖಾಯಿಲೆಗಳು ಬಂದಿರುತ್ತವೆ, ಅಂಥವರು ಶ್ರೀ ಸುದರ್ಶನ ದೇವರ ಪೂಜೆ ಮಾಡಿ, ನಂತರ "ಶ್ರೀ ಆಂಜನೇಯ ಸ್ವಾಮಿ ಪೂಜಿಸಿದರೆ ಅಥವಾ ಹರಕೆ ಮಾಡಿಕೊಂಡರೆ, ೩ ತಿಂಗಳೊಳಗಾಗಿ ಮಗು ಆರೋಗ್ಯದಿಂದ ಇದ್ದು ದೇಹವು ವಜ್ರಕಾಯವಾಗುತ್ತದೆ..

ಸರ್ವೇಜನಾ ಸುಖಿನೋಭವಂತು 
ಕೃಷ್ಣಾರ್ಪಣಮಸ್ತು

No comments:

Post a Comment