Saturday, June 07, 2025

SHANAISHCHARA CHARITAM IX ( 01 - 90) ಶ್ರೀ ಶನೈಶ್ಚರ ಚರಿತಂ ೯

SHRI SHANAISHCHARA CHARITAM  IX ( 01 - 90)
                ಶ್ರೀ ಶನೈಶ್ಚರ ಚರಿತಂ  ೯
                   || श्री शनैश्चर देवताभ्यो नमः ||
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತ್ರಿಪದಿಗಳಲ್ಲಿ  )
( ಶ್ರೀ ಶನೈಶ್ಚರ ಪ್ರತಿಮಾ ಪ್ರಾಣಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ,  ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ, ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್, ಶ್ರೀ ಶನೈಶ್ಚರ ಅಷ್ಟಕಂ, ಶ್ರೀ ಮಹರ್ಷಿ ವೇದವ್ಯಾಸ ವಿರಚಿತ  ಶ್ರೀ ಶನೈಶ್ಚರ ಚಕ್ರ  ಶ್ರೀ ಶನಿದೇವ ಚಾಲೀಸಾ  ಸಹಿತ )

ನವಮ ಸವಿಗಥಾ ಸಂಧಿ ೯
( ಋಗ್ವೇದ ಸಂಹಿತಾ ಭಾಷ್ಯಾಚಾರ್ಯ ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ )

ಶ್ರೀ ಗಜಾನನ ನಮಿಪೆ ಮೊದಲಲಿ 
ನಾಗಭೂಷಣ ಗೌರಿಯೊಂದಿಗೆ 
ಬಾಗುವೆನು ರಚನೆಯಲಿ ನಿಮ ಸ್ಫೂರ್ತಿ  ಇರಲೆಂದು. ೧
ಧವಲ ವಸ್ತ್ರಾವೃತಳೆ ವಾಣಿ ಯೇ
ಧವಲ ಅರಲಾಸಿನೇ ದೇವಿಯೇ
ಧವಳಸರ ರಾಜಿಪಳೆ ನಮಿಸುವೆ ನೀಡು ಪ್ರೇರಣೆಯ ೨
ಶ್ರೀ ಯತಿರಾಜ ಗುರುವೇ ನಮಃ 
ಮಾಯತೀತರೇ ಜ್ಞಾನ ದೀಪರೇ
ಧೈರ್ಯ ಸಾರ್ಥಕ ಬರಹದಲಿ ಕೊಡಿರೆಂದು ನಂಬಿರುವೆ ೩
ಗೋವಿಂದರಾಜಂಗೆ ಪ್ರಣಿಪಂ 
ಕೋವಿದನೆ ನಿನ ಕೃಪೆಯ ಬೇಡುವೆ 
ಸೇವಿಸುವೆ ಮಠ ಉತ್ತರಾದಿಗೆ ಕರುಣೆಯಂ ಪಡೆಯೇ ೪
ಅಷ್ಟಮದ ಸಂಧಿಯಲಿ ಪಿಂಗಲ
ದೃಷ್ಟಿಯಿಂ ಗುರು ಪೀಡೆ ಅನುಭವ 
ಸ್ಪಷ್ಟವಿದು ಹಿರಿಯರಲಿ ತಾ ಛಲವ ಸಾಧಿಸಲು  ೫
ಆಲಿಸಿದ ಸವಿಗತೆಯು ಗುರುವಿಗೆ 
ಶೂಲವೇರುವ ಕಾಲು ಒದಗಿತು
ನೀಲಿ ಮೂರುತಿ ಹೇಳಿರುವ ಕಥೆ ಮುಂದೆ ಸಾಗಿರಲು ೬
ಆಲಿಸೈ ವಿಕ್ರಮನೆ ನಿನ್ನಯ
ಒಲುಮೆ ಮೇರೆಗೆ ಮುಂದುವರಿಸುವೆ
ಒಲುಮೆ ನಮ್ಮಯದೆಂದು ನಡೇವವರನ್ನು ಮುರಿಯುವೆನು ೭
ಒಂದು ಸಲ ಕೈಲಾಸ ಗಿರಿಯೊಳು
ಸಂಧಿಸಿದೆ ಶಂಭುವಿನ ವಂದಿಸಿ
ನಿಂದು ಕೇಳಿದೆ ವಿನಯದಲಿ ನಿಮಗಿಂದು ನಾ ಬರುವೆ ೮
ಕೇಳಿ ಸಂಭುವು ನಮ್ಮೊಳೇನಿದೆ 
ಹಾಳು ಮಸಣವೇ ಬೂದಿ ಭೂತ ಗ-
ಳಾಳುವುದೆ ನೀನ್ನೊಬ್ಬ ನಿಂದೆನಿರುವುದದು ಕಾಟ ೯
ಆದರೂ ಸಹ ತಿಳಿಸಿ ಬಾರೈ
ಬಾಧೆ ನೀ ಮಾಡುವುದು ನರರಿಗೆ 
ಸಾಧಿಸಿದ ಪರಿ ನೋಡಬೇಡೈ ನನಗೆ ಶನಿರಾಯ  ೧೦
ಮಾರನೆಯ ದಿನ ಮತ್ತೆ ಪೊದೆನು 
ಎರಗಿದೆನು ಈ ಕ್ಷಣವೇ ಬರುವೆ 
ತೋರುವೆನು ನಿಮ ರಾಶಿಭೋಗಕೆ ಗ್ರಹದ ಕೈಚಳಕ ೧೧
ಪೀಡೆ ಕಾಲದು ತಿಳಿದ ಶಂಭುವು
ಕೂಡಲೇ ಕೈಲಾಸ ದಡಿಯೊಳು 
ಅಡಗಲೆಂದು ಹುಡುಕ ಹೊರಟನು ಯಾರ ಕಾಣದೆಡೆ ೧೨
ಕಳ್ಳಿ ಮುಳ್ಳಿನ ಕಂಟಿ ಒಳಗೆಂ
ಒಳ್ಳೆ ಗವಿಯಂದರಿದು ಸ್ಥಳವನು 
ತಳ್ಳಿ ಪೊಗುತಿರೆ ಖೊಳ್ಳೆಂದು ನಗು ನಕ್ಕ ಪಿಂಗಳನು  ೧೩
ದಡವಡಿಸಿ ಶಿವ ಹೊರಳುವುದರೊಳು 
ಎಡವಿ ಬಿದ್ದನು ಮುಳ್ಳು ಬಡಿದವು 
ಕಡೆಗೆ ಬರುವುದರೊಳಗೆ ಸೌರಿಯು ಒಡನೆ ಕೈ ಹಿಡಿದ ೧೪
ಸಾಕು ನಡೆಯಿರಿ ಎಂದು ಕರೆ ಪಿ -
ನಾಕಿ ಕೇಳಲು ನೀನೇನು ಗೈದೆಯೆ ?
ಕಾಕು ದೃಷ್ಟಿಯು ನನ್ನ ಮೇಲೆ ಎಂತು ನಡೆದೀತು ? ೧೫
ಮರುಳ ಶಂಕರ ನುಡಿದ ಮಾತಿಗೆ 
ಮರು ನುಡಿದ  ಸಂಸ್ತುತನು ಇಂತೆಂ-
ಪುರಹರನೇ ವರ ನೀಲಕಂಠನೆ ಕೇಳಿ ನನ್ನಣೆಯ  ೧೬
ನಿಮ್ಮ ಅಂಜಿಕೆ ತ್ರಿ ಭುವನದೊಳು 
ಬ್ರಹ್ಮಸಹ ನಡುಗುವನು ಗಡಗಡ 
ಎಮ್ಮಭಯ ನಿಮಗುಂಟು ಸಾಕು ಕಡಿಮೆಇದು ಏನು ? ೧೭
ಚಂದ್ರ ಮೌಳಿಯು ನಗುತ ಸೌರಿಯ 
ಅಂದ ಮಾತಿಗೆ ತೂಗಿ ತಲೆಯನು 
ಮಂದಚರ ನಿನಸಾಟಿ ದೇವತೆ ಇಲ್ಲ ಲೋಕದೊಳು ೧೮
ಬಾಪು ಬಾಪು ಎಂದು ಬೆನ್ನನು
ಚಪ್ಪರಿಸಿ ಶಿವ ಸೆಳೆದು ಅಪ್ಪಿದ 
ಪಿಪ್ಪಲನು ತಲೆವಾಗಿ ಆಶಿಷ ಪಡೆದು ನಡೆದಾಗ   ೧೯
ಹರಿಯೆಡೆಗೆ ನಾ ದೃಷ್ಟಿ ಬದಲಿಸೆ
ಬರುತನಾದನು  ಭೃಗುವು ಋಷಿಯು 
ಬೆರೆತ ನಿದ್ರೆಯ ಅವತೆ ಇರುತಿರೆ ಬಿಡರು ಜಯವಿಜಯ ೨೦ 
ಇತ್ತ ದರ್ಶನ ತಡೆದ ಕಾರಣ 
ದೈತ್ಯರಾಗುವ ಶಾಪವಾಯಿತು 
ಕೃತ್ಯ ಸಂತಾಪದಲಿ ಒಳ ಬರೆ ಕೇಳುವವರಾರು ? ೨೧
ಲಕ್ಷ್ಮಿ ಪಾದದ ಸೇವೆಯಲ್ಲಿರೆ 
ದಕ್ಷ ವಿಷ್ಣುವು ಕಣ್ಣು ಮುಚ್ಚಿರೆ
ದಕ್ಷ ಋಷಿ ಭೃಗು ಪಾದ ಎತ್ತಿದ ಒತ್ತಿ ಹೃದಯದಲಿ  ೨೨
ಎಚ್ಚರಾದೊಡೆ ದಡವಡಿಸಿ ಬಿಗಿ-
ಅಚ್ಯುತನು ಋಷಿ ಪಾಗವನು ಪಡೆ
ವಚ್ಛಲಾಂಛನ ನಾಗಿ ದಶ ಜನ್ಮಗಳ ದುಃಖವದು. ೨೩
ವಿಕ್ರಮನೆ ಕೇಳ್ ಸೃಷ್ಟಿಕರ್ತನು 
ವಕ್ರದೃಷ್ಟಿಯ ಸಿಲುಕಿ ಕಾಮುಕ 
ಅಕ್ರಮದಿ ಪಾರ್ವತಿಯ ರೂಪವ ನೋಡಿ ಬೆರಗಾದ  ೨೪
ಉಗುರಿ ನೊಳಗಿನ ಪೀಡಕನು ನಾ -
ನಾಗಿರಲು ಕೆರೆ ಶಿವನು ಕೋಪದಿ 
ಬಗೆಯೆ ಬ್ರಹ್ಮನು ಕಳೆದುಕೊಂಡನು ಒಂದು ಶಿರಕಮಲ  ೨೫
ಗ್ರಹ ದೆಸೆಯೂ ಇಂದ್ರನಿಗೆ ಹೊರಳಿತು 
ಅಹಿಳೆಯನು ಭೋಗಿಸುವ ಕುಕೃತಿ
ಸಹನೆ ಮೀರಿದ ಗೌತಮನ ಕೋಪಕ್ಕೆ ಗುರಿಯಾದ  ೨೬
ಸುರ ರೊಳಗೆ ಸುಂದರನು ಇಂದ್ರನ 
ಭರಿತ ಅಂಗವು ಭಗಿತ ಕಂಗಳ 
ಕುರುಹು ಉಳಿದು ಕುರೂಪತನವು ಪ್ರಾಪ್ತಿಯಾಗಿಹುದು ೨೭ 
ಚೆಲುವು ತನ ಚಂದ್ರನಿಗೆ ಗರ್ವವು 
ಒಲವು ಗುರು ಪತ್ನಿಯೊಳು ಆಗಲು 
ಮಿಲಿತ ಮಾಡಿದೆ ಕೆಟ್ಟ ದೃಷ್ಟಿಯ ಚರಿಸಿ ಸ್ಥಾನದಲಿ ೨೮
ತಾಯಿ ತಾರಾದೇವಿ ಸ್ಪರ್ಶವು 
ಬಯಸಿ ಪೋದೆಡೆ ಉರಿವ ಇಂಧನ 
ಕಾಯಕದಿ ಬೀಸಿದಳು ಬಡಿಯಿತು ಮೋರೆ ಕಪ್ಪಾಗಿ ೨೯
ಕೋಪದಿಂದಲೇ ಕ್ಷಯದ ಬೇನೆಯು 
ಶಾಪ ನಿನಗಿದು ಎಂದು ಹಳಿದಳು 
ತಾಪತಾಳದೆ ಚಂದ್ರ ಕ್ಷಮೆಯನು ಯಾಚಿಸಿದ ಬಳಿಕ ೩೦
ತಾರೆ ನುಡಿದಳು ಪಿಂಗಳನ ಜಪ 
ತಾರಿಪುದು ತಿಳಿ ಎಂದು ಹೇಳಲು 
ಪಾರಯಣ ಗೈದುದಕೆ ಷೋಡಶ ಕಲೆಯು ರೂಪಾಗಿ ೩೧
ಪುತ್ರ ಗರ್ವವು ಮುನಿ ವಶಿಷ್ಟಗೆ 
ನೆತ್ತಿಗೇರಿದುದನ್ನು ತಿಳಿದೊಡೆ 
ಬಿತ್ತು ಚಿತ್ತವು ನೂರು ಮಕ್ಕಳ ನಾಶವಂ ಗೈದೆ   ೩೨
ಹೀಗಿರಲು ಪರಾಶರ ಋಷಿಗಳ 
ಸೋಗು ಡಂಭಕ ವೃತ್ತಿ ಸಹಿಸದೆ 
ಬೇಗ ನೋಡಿದೆ ಮತ್ಸಗಂಧೆಯ ಕೂಡ ಒಡನಾಟ ೩೩
ನಯ ವಿನಯ ಜಪ ತಪವ ಗೈವರ 
ದಯವ ತೋರುವೇ ಸೌಮ್ಯನಿರುವೆ 
ನಿಯಮ ತಪ್ಪಲು ಪುಷ್ಕರನ ಕೈ ನಡೆಯ ನನ್ನಿಂದ  ೩೪
ದ್ಯೂತ ಸಮಯದಿ ಶುಚಿಯು ಅಳಿಯಲು 
ಜಾತಕರದಿ ಕಿರಿ ಸ್ಥಳದೊಳಿರೆ ನಳ 
ಸೋತು ಸತಿ ದಮಯಂತಿಯೊಡೆ ವನವಾಸ ನಿಕ್ಕಿದೆನು ೩೫
ಹನ್ನೆರಡನೆಯ ಕ್ರೂರ ಸ್ಥಾನದಿ 
ನನ್ನಿ ನುಡಿಯುವ ಹರಿಶ್ಚಂದ್ರನ 
ದಾನ ಕನಸಿನ ಒಳಗಣದುವೆ ಜಾಗೃತದಿ ಬೇಡಿ  ೩೬
ಕೌಶಿಕಗೆ ಪ್ರೇರಣೆಯ ನಿತ್ಯೆ
ಕೋಶಗಾರವೇಧಾರೆ ಎರೆದು 
ತೋಷಣೆಯ ಗೈವುದರ ಹೆಮ್ಮೆಗೆ ರಾಜ್ಯ ಕಳೆಕೊಂಡ ೩೭
ಸತ್ಯ ಬಿರುದಿಗೆ ಸತಿಯು ಸುತರನು 
ಎತ್ತಿ ಮಾರಿದ ತಾನು ದೊಂಬಿಗ
ಅತ್ತೆ ವಿಕ್ರಯವಾಗಿ ಸಂಕಟ ಪಡೆದ ಕಾಶಿಯಲಿ   ೩೮
ಮಗುವು ಮಡಿಯಿತು ಸತಿಗೆ ವಧಿಸುವ 
ದುಗುಡ ಬಂದಿತು ಕೈಯ ಎತ್ತಲು 
ಬಗೆಯ ನೈಜ ನಿಷ್ಠೆ ಕಂಡೊಡೆ ಕರುಣೆ ತೋರಿದೆನು ೩೯
ಏಕಬಾಣಿಯು ಏಕನಿಷ್ಠನು 
ಏಕತೆಯ ಪ್ರಕಟಿಸಲು ಪರುಕಿಸಿ 
ಕಾಕು ಸ್ಥಾನಕ್ಕೆ ನಾನು ಬರೆ ವನವಾಸ ರಾಮನಿಗೆ  ೪೦
ದೇವಿ ಸೀತೆಗೆ ಆಸೆ ಕುಪ್ಪಸ 
ಭಾವ ಹೀನತೆ ಕಂಡೆ ಗತಿಯಂ 
ರಾವಣನು ಕದ್ದೊಯ್ದು ಆಗಲೇ ನನ್ನ ಲೀಲೆಯದು  ೪೧
ರಾವಣನ ಪಲ್ಲಂಗ ಕೆಳಗಡೆ 
ನಾವು ಗ್ರಹಗಳು ಬೋರಲಾಗಿರೆ
ದೇವ ಋಷಿ ನಾರದರು ಬಂದೊಡೆ ಉರುಳಿಸಿದೆ ನಾನು ೪೨ 
ಕೇಳುತಿಹ ಮಾಳವೆಯ ಅರಸನು 
ತಾಳಿ ಶಂಕೆಯು ಇಂತು ಉಸುರಿದ 
ಬೀಳುವುದು ರಾವಣಲಿ ನೀವೇನು ಕಾರಣವು ? ೪೩
ಅಮರಗೋಳು ಗ್ರಹ ಬಲರು ನೀವು 
ಅಮಿತ ಶೌರ್ಯರು ಏನು ಕಾರಣ  ?
ತಮಗೆ ತಾವೇ ಕಾಡುವುದು ಎಂತಿಹುದು ಬಿಡುಗಡೆಯು ೪೪ 
ಜಾಣರಾಯನೇ ಶಂಕೆ ಯೋಗ್ಯವು 
ಮಾಣು ಮತಿತಾರ್ಥವನು ಧೀವರ 
ಪುಣ್ಯ ಘನವಾಗಿರುವ ಮಾನವ ಮಾನ್ಯ ನಮಗೆಲ್ಲ ೪೫
ಶಕ್ತಿ ಇದೆ ಅದು ಲೋಕ ಕಾರ್ಯಕೆ
ಯುಕ್ತಿಯಿಂ ಉಪಯೋಗ ಮಾಳ್ಪುದು 
ಶಕ್ತಿ ಶೌರ್ಯವು ದಾಟಿ ಪಾಪಕೆ ತಡೆಯೆ ಕೇಡಹುದು ೪೬
ಘನತೆ ಪುಣ್ಯಕ್ಕೆ ಇರುವವರೆಗೆ 
ವಿನತರಾಗಿರುತಿದ್ದೇವೈ ಅದು -
ಅನತಿ ಗಂಡವು ಬರಲು ನಮ್ಮಯ ದೃಷ್ಟಿ ವಕ್ರತೆಯ  ೪೭
ಹಳಿದುಕೊಂಡೆವು ನಮ್ಮನಮ್ಮೊಳು 
ಉಳಿಯುವುದೆಂತಿ ಪುಣ್ಯ ಅಳಿಯುತ 
ಹಳಿವ ಕಾರ್ಯವು ಸೀತೆ ಕದ್ದುದು ಯನಗೆ ಅನುವಾಗಿ  ೪೮
ದೇವ ಮುನಿ ನಾರದರು ಬಂದರು 
ಠಾವ ಬದಲಿಸಿ ಕೊಂಕು ನೋಡಿದೆ 
ಭಾವ ನಾರದರಲ್ಲಿ ಪ್ರೇರಣೆ ಇತ್ತು ಗ್ರಹಚಾರ  ೪೯
ಏಕೆ ಬಿದ್ಧಿಹಿರೆಲ್ಲ ಗ್ರಹಗಳೇ   ?
ಸಾಕು ಮನುಜನ ಮೇಲೆ ನಡೆಸಿದ 
ಧಕ್ಕೆ ಕೊಡುವುದು ಶಕ್ತಿ ಹೋಯ್ತೆ ಎಂದು ಕೇಳಿದರು  ೫೦
ನಾರದರು ಎನ್ನ ನೋಡಿ ಏನಿದು ?
ಘೋರ ಪೀಡಕ ವೃತ್ತಿ ಎಲ್ಲಿದೆ   ?
ನೇರ ಕೇಳಲು ಚಿತ್ತು ಮಾಡಿ ನೋಡಿರಾ ಲೀಲೆ  ೫೧
ಇತ್ತ ಪುಣ್ಯವು ಘಟತವಾಗಲು
ಚಿತ್ತು ಮಾಡದೆ ಚಿತ್ತ ಹತ್ತದು
ಮತ್ತೆ ಕೂಡಿದೆ ಯೋಗ ಗ್ರಹಗಳ ಕೃತಿಯ ನೋಡೆಂದ ೫೨
ಎನಲು ನಾರದ ಮುಂದುವರಿದರು 
ವಿನಯ ತೋರುತ ರಾವಣೇಶ್ವರ ?
ಸನಿಹ ಬರುತಲೆ ಕೈ ಪಿಡಿದು ಸ್ವಾಗತವ ಮಾಡಿದನು ೫೩
ರಾವಣಾಧೀಶ್ವರನೇ ಏನಿದು  ?
ತಾವು ಗ್ರಹಗಳ ಬಗ್ಗಿಸಿರುವುದು 
ನೋವು ಇಲ್ಲದ ಬೆನ್ನ ಮೇಲೆ ಮಾಡಿ ಇರಿಸಿದುದ   ೫೪
ನಿಲ್ಮೇ ಯೋಗ್ಯವು ಶೌರ್ಯ ದರ್ಶಕ 
ಮೇಲ್ಮೆ ಏನಿಸದು ಬೆನ್ನ ಮೇಲಡಿ 
ಗೆಲ್ಮೆ ಲಕ್ಷಣ ಹೊಟ್ಟೆ ಮೇಲಡಿ ಇಟ್ಟು ಸಾಗುವುದು  ೫೫
ಉಬ್ಬಿ ರಾವಣ ಸಲಹೆ ಮನ್ನಿಸಿ 
ಎಬ್ಬಿಸಿದ ಗ್ರಹಗಳನ್ನು ಮೇಲ್ಮುಖ 
ಉಬ್ಬರವು ಉಂಟಾಗಿ ಬೊಬ್ಬುಳಿ ಎತ್ತು ಲಂಕೆಯಲಿ ೫೬
ದಂಶ ಪಾಪದ ಫಲಕೆ ಕಾರಣ 
ವಂಶ ವೃಕ್ಷವೇ ಕಡಿದುಕೊಂಡನು 
ಸಂಶಯಿದರೋಳ್ ಆವುದಿಲ್ಲವು ತಿಳಿ ತ್ರಿವಿಕ್ರಮನೆ ೫೭
ವಿದುರ ನೀತಿಗೆ ಧರ್ಮ ಮೀರಿದ 
ಅದುವೇ ಕಾರಣ ದ್ಯೂತದಾಟವು
ನೆದರು ಬದಲಿಸಿದೊಡನೆ ಶಕುನಿಯ ಕವಡೆ ಹಾರಿದವು ೫೮ 
ತನ್ನ ಬಳಗದ ಮುಂದೆ ದ್ರೌಪದಿ 
ಸನ್ನುತಿಸುತಿರೆ ವಸ್ತ್ರ ಹರಣದಿ 
ಎನ್ನ ವಕ್ರತೆ ಪುರುಷ ಕಂಡೊಡೆ ನಕ್ಕ ಕಾರಣವು ೫೯
ನನ್ನ sನುಗ್ರಹವೂ ಆಗುವರೆಗೆ
ಮನ್ನಿಸಿಯೆ ವನವಾಸ ಕಾಣಲು 
ಎನ್ನ ವ್ರತವನು ಗೈದು ಪಾಂಡವ ರಾಜ್ಯ ಪಡೆದಿಹರು ೬೦
ತಾಯಿ ಕಾಣುವ ಕೂಸಿನಂದದಿ 
ನ್ಯಾಯ ವಿರಲದು ಸುಯೋಧನ ನಲಿ 
ಮಾಯೆ ಮುದ್ರೆಯ ಮುಚ್ಚಿದೆನು ಗ್ರಹದೃಷ್ಟಿ ಬಹುಕ್ರೂರ ೬೧ 
ವಜ್ರವಲ್ಲದ ಮಾಂಸ ಸ್ಥಳವದು 
ಒಜ್ಜೆ ತಾಳದೆ ಭೀಮ ಗದೆಗೆ
ಜಜ್ಜಿ ಹೋಯಿತು ಕೌರವನ ಸಂಕುಲವು ಹಾಳಾಗಿ  ೬೨
ನೃಪನೇ ಕೇಳು ಚವತಿ ಚಂದ್ರನ 
ಗೋಪದುಮದಲಿ ನೋಡಬಾರದು 
ಶಾಪವಿತ್ತಿಹ ಗಣಪ ವಚನವ ಮೀರಿದನು ಕೃಷ್ಣ   ೬೩
ಹಿರಿಯರುಸಿರನು ಅಲ್ಲಗಳೆದಿರೆ 
ಸರಿದು ನೋಡುವೆ ಕೊಂಕು ಗ್ರಹ ದೆಸೆ 
ಅರಿಯದಿಹ ಶ್ರೀ ಕೃಷ್ಣ ಸಂಕಟ ಪಟ್ಟ ಅಪವಾದ   ೬೪
ದೊರೆಯು ಸತ್ರಾಜಿತ ಶ್ಯಮಂತಕ
ದೊರೆಯದಾಗಲು ಕಳ್ಳತನವದು
ಕಿರಿಯ ತಮ್ಮನ ಕೊಂದನೆಂದಪವಾದ ಕೊಟ್ಟಿರಲು  ೬೫
ಬಳಿಕ ಒಳ್ಳೆಯದಾಗೆ ಮುರುಳಿಗೆ 
ತಳೆದು ಬಂದಿತು ರೌದ್ರ ಪಿಂಗಲ 
ಬಳಗ ಗ್ರಹಗಳ ನಡುವೆ ಶ್ರೇಷ್ಠನು ಎಂದು ಕೊಂಡಾಡಿ ೬೬
ಹೀಗೆ ದೇವತೆಗಳಿಗೆ ತೊಂದರೆ 
ಭೋಗಿಸುವ ವೇಳೆಗಳು ಬಂದವು 
ಆಗತಿಯು ಒಳಗಿನ ಕಿಂತು ಭಾಗ ನಿನಗೆ ಇತ್ತಿರುವೆ. ೬೭
ಲೀಲೆಯೊಳಗಣ ನೀಚ ಸ್ಥಾನದಿ 
ಸಾಲಾಗಿ ಹನ್ನೆರಡೆಲ್ಲ ಬಂದವು
ಕಾಲು ಮೂರಿರೆ ಎರಡುವರೆಗಳು ಏಳುವರೆಯಾಗಿ ೬೮
ಪಂಚಮದಿ ಅಷ್ಟಮದಿ ಚತುರದಿ 
ಪಂಚಪ್ರಾಣಗಳನು ನೀಗಿಪೇ
ಸಂಚಿತಾರ್ಥ ನಿರ್ಮಿಸುವೆ ನಾ ಗ್ರಹ ಚರಾಂತರದಿ ೬೯
ಮಾರ್ಗಿ ವಕ್ರೀಗೆ ಅಸ್ತ ಉದಯಕೆ
ವರ್ಗ ಮಾಡಿಯೇ ಕಾಡುವುದರೊಳು 
ತಿರ್ಗಿ ಬರುವಾ ಬಳಗದವರ ಗುಣಗಳsನುಸರಿಸಿ  ೭೦
ರಾಮ ರಾವಣ ಒಂದು ರಾಶಿಯೆ
ರಾಮಪ್ರಥಮದಿ ಶಿಲುಕಿ ತೊಂದರೆ 
ಕಾಮ್ಯ ಸುಖ ರಾವಣಗೆಬರೆ  ಮರಣ ಸೂಚಿಪುದು ೭೧
ರಾಮ ರಾವಣ ಮೊದಲ ಅಕ್ಷರ 
ಯೋಮ ಚಿತ್ರಾ ತೃತೀಯ ಚರಣದಿ
ರಾಮ ಮೊದಲಿಗೆ ರಾವಣಗೆ ಕೊನೆ ಪೀಡೆ ಏಕಿಹುದು? ೭೨
ರಾಮನಲಿ ಸಂಚಿತದ ದೋಷವು 
ನೈಮಿತದ ಕರ್ಮದ ಪಾಪ ಕಾಣದೆ 
ನೇಮ ಪ್ರಾರಬ್ಧವೇ ಉಳಿಯಿತು ಮೊದಲು ತಾನಾಗಿ ೭೩
ವಿಪ್ರ ರಾವಣನಲ್ಲಿ ಹಿಂದಿನ
ಕುಪ್ರದೋಷವು ಕಾಣದಿರಲು 
ಅಪ್ರಬುದ್ಧದ ಶೇಖರಣೆ ಆಗುತ್ತಿರಲು ಕೃತಿಯಲ್ಲಿ. ೭೪
ಅಪ್ರಯೋಜನ ಚಯನದಿಂದಲಿ
ವಿಪ್ರ ಹೋಮದ ಯಾಗ ನಾಶದಿ
ಕುಪ್ರತಿಷ್ಠೆಯ ಪಡೆದ ತಾ ಸ್ತ್ರೀಯಳಪಹರಣ. ೭೫
ಸಂಚಯದಿ ಪ್ರಾರಭ್ದ ಕಂಡೊಡೆ
ವಂಚನೆಯ ಕರ್ಮ ದೋಷ ನಿರಸನ 
ಸಂಚಿತದ ಪೀಡೆಯು ಕೊನೆಗೆ ಕಂಡನು ತಾನೇ ದಶಮುಖನು. ೭೬
ವಿವಿಧ ಪರಿ ಜಾತಕ ಸೂಚಿಪ 
ಅವತೆ ಮಾನವನೊಳಗೆ ತಿಳಿಯುವ 
ಭವದಿ ದೂರಿಹ ವಿಧ ಉಪಗ್ರಹಗಳನು ಕೂಡಿಹೆನು  ೭೭
ಹರುಷದಿಂದಲೇ ಒಂದು ಮಾತು ವಿ -
ವರಿಪ ಕಥೆಯನು ನನ್ನ ನಿನ್ನಯ 
ಅರಿತು ಕೊಳ್ವಗೆ ಯಾವ ಭಾಧೆಯು ಬಾರದೆಂದಭಯ ೭೮
ಶ್ರವಣಮನ ನಿಜ ಧ್ಯಾನ ಮಾಳ್ಪ
ಕವನ ಕೀರುತಿ ಭಜನೆ ಭಕ್ತಿಯ 
ಗೈವ ನರನಿಗೆ ಕೃಪೆಯು ಕರುಣೆಯು ತೋರುವೆನು ಎಂದ. ೭೯
ನಿತ್ಯ ಪಾಠವು ಪೂಜೆ ಇಲ್ಲವೇ 
ವೃತ್ತಿ ಸಾಪ್ತಾಹಿಕಕೆ ಓದುವ 
ಅತ್ಯಧಿಕವಿಹ ಉಪೋಷಣೆಯ ಸುಖವು ಉಂಟಹುದು ೮೦
ಹಗಲು ಇರುಳಲಿ ಇಂಥ ಅವರಿಗೆ
ಮಿಗಿಲು ಗೈವೆನು ಇದುವೇ ಶಾಶ್ವತ 
ಮಿಗಿಲು ಆಶ್ವಾಸನವೆ ಕೊಡುವೆನು ಆಶಿಷಂಗಳಲಿ ೮೧
ಎಂದು ಹೇಳಲು ವಿಕ್ರಮನು  ತಾ-
ಒಂದನೆಯ ಸಾಷ್ಟಾಂಗಗಳು ಆ-
ನಂದಾಶ್ರುಗಳ ಸುರಿಸಿ ಸೌರಿಯ ಪಾದವನೆ ತೊಳೆದ  ೮೨
ಪಿಂಗಳನೇ ಪಾವನವ ಮಾಡಿದೆ 
ಸಂಘ ಲಭಿಸಿತು ಧನ್ಯ ಧನ್ಯನು 
ಮಂಗಳಾಂಗನೆ ಕ್ಷಮೆಯ ತೋರಿಸಿ ಕೃಪೆಯ ಮಾಡೆಂದು  ೮೩
ಅಖಿಲಜೀವರ ಜೋಕೆ ಮಾಳ್ಪುದೆ
ನಿಖರ ಭಾಷೆಯ ಇತ್ತು ಸೌರಿಯು 
ಸುಖಿಭವ ವೆಂ ಹರಿಸಿ ಸ್ವಸ್ಥಾನಕ್ಕೆ ಬಿಜೆಯಿಸಿದ. ೮೪
ಹರಿಸಿ ಹೋದ ಶ್ರೀ ಶನೈಶ್ಚರ
ವಿರಹದಿಂ ನೆನೆಯುತಲೇ ವಿಕ್ರಮ 
ಬರುವ ನಿದ್ರಾನಂದ ಕಳೆಯಲು ಬೆಳಗು ತಾನಾಯ್ತು ೮೫
ತಾತಾರ್ಯ ಮಹಿಪತಿಯು ಮಹರಠಿ
ಹೇತು ಪೂರ್ವಕವಾಗಿ ಕನ್ನಡ 
ಮಾತಿನಿಂ ರೂಪಿಸಿದ ತುಳಸಾತ್ಮಜನು ಸಿರಿರಾಯ ೮೬
ಸರಳಗನ್ನಡ ಭಾಷೆಯಲಿ ಕಥೆ 
ಬರೆಹದಿಂ ವರ್ಣಿಸಿದೆ ನ್ಯೂನತೆ 
ಬರದ ತೆರೆ ಅರ್ಥವನು ಬುದ್ಧಿಗೆ ನೀಡಿ ಶನಿದೇವ   ೮೭
ಪಿತರು ಓದಿದುದಂತೆ ಪೇಳಿದ 
ಕಥೆಯು ರಂಜಿಸುವಂತೆ ಕನ್ನಡ 
ಮತಿಯರಸ ಭಾಷೆಯಲಿ ಲೇಖಿಸಿ ಇತ್ತ ಸಿರಿರಾಯ  ೮೮
ಇಂತಿ ಶ್ರೀ ಶನೈಶ್ಚರಚರಿ ತಾ -
ದ್ಯಂತ ಸ್ಪೂರ್ತಿಯು ನೀಡುತಿರೆ ತಾ-
ಆಂತು ಮಹತಿಯು ಗೈಮೆ ಶ್ರೀ ಗೋವಿಂದರಾಜ ಮರ ೮೯
ಇತಿ ಪುರಾಣೈತಿಹದ ಕಥೆಗಳು 
ಮಥಿಸಿ ಸೀತಾರಾಮ ತುಳಸಾ-
ಸುತನ ಸವಿಗತೆ ಚತುರ್ಥದ ಶ್ರೀ ಕೃಷ್ಣ ಅರ್ಪಣೆಯ  ೯೦

ಇಂತಿ ಶ್ರೀ ಶನೇಶ್ಚರ ಚರಿತ ಪುರಾಣದೊಳು ನವಮ  ಸವಿಗಥಾಸಂಧಿ ಪರಿಪೂರ್ಣ  ಶುಭಮಸ್ತು  ಕೃಷ್ಣಾರ್ಪಣಮಸ್ತು


No comments:

Post a Comment