Tuesday, June 10, 2025

SHANAISHCHARA CHARITAM X ( 01 - 80) ಶ್ರೀ ಶನೈಶ್ಚರ ಚರಿತಂ ೧೦

 SHANAISHCHARA CHARITAM  X ( 01 - 80)
                 ಶ್ರೀ ಶನೈಶ್ಚರ ಚರಿತಂ ೧೦
                 || श्री शनैश्चर देवताभ्यो नमः || 

   ( ಕನ್ನಡ ಭಾಮಿನಿ ಮತ್ತು ವಾರ್ಧಿಕ ತ್ರಿಪದಿಗಳಲ್ಲಿ  )
   ( ಶ್ರೀ ಶನೈಶ್ಚರ ಪ್ರತಿಮಾ ಪ್ರಾಣಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರ ಅಷ್ಟಕಂ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ, ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್, ಶ್ರೀ ಶನೈಶ್ಚರ ಅಷ್ಟಕಂ, ಶ್ರೀ ಮಹರ್ಷಿ ವೇದವ್ಯಾಸ ವಿರಚಿತ  ಶ್ರೀ ಶನೈಶ್ಚರ ಚಕ್ರ  ಶ್ರೀ ಶನಿದೇವ ಚಾಲೀಸಾ  ಸಹಿತ )


ದಶಮ ಸವಿಗಥಾ ಸಂಧಿ ೧೦
( ಋಗ್ವೇದ ಸಂಹಿತಾ ಭಾಷ್ಯಾಚಾರ್ಯ ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ )

ಶ್ರೀ ಋದ್ಧಿ ಸಿದ್ಧಿ ರಮಣ ನಿನ್ನಯ
ತಾರತಮ್ಯವನರಿತು ಬರೆಯುವ
ಸಾರ ಕಥೆಯನು ತೋರಿಕೊಂಬೆನು ನಿನ್ನ ಸನ್ನಿಧಿಯ ೧
ಏನು ಕರುಣೆಯೋ ನಿನ್ನ ಆಶಿಷ 
ನಿನ್ನ ವೀಣೆಯ ಮೀಟಿದಂದ್ಯದಿ
ಸ್ಥಾನವನು ನೀಡು ತಾಯಿಯೆ ಓದುಗರ ಮನದಿ ೨
ಒಂಭತ್ತನೇ ಸಂಧಿ ಕೊನೆಯಲಿ
ಸಂಧಿಸುತ್ತಿರೆ ದಿವಿಜ ಮನುಜರ
ಇಂಬು ಶಾಸನ ಇತ್ತ ತಾ ಖಗಸುತನ ಲೀಲೆಗಳು  ೩
ಮಗಳ ಮನೆಯಲ್ಲಿ ಹೆಳವನು 
ಸೊಗಸುರಾಗನು ಮಾಳ್ಪ ಅವನ
ಬಗೆಯ ನೋಡಲು ಚಂದ್ರಸೇನನು ಬೆಳಗಿನಲಿ ಬಂದ  ೪
ದಿವ್ಯ ದೇಹವು ಪ್ರಾಪ್ತವಾಗಿರೇ
ನವ್ಯ ಕೈ ಕಾಲುಗಳು ಚಿಗುರಿವೆ 
ಭವ್ಯ ಮೂರ್ತಿ ಮದನ ಸುಂದರ ರಾಯ ನೋಡಿದನು ೫
ಸೂರ್ಯ ಕೋಟಿ ಪ್ರಕಾಶ ತುಂಬಿದ
ವೀರ್ಯವಂತನ ಮುಖವು ನೋಡಿ 
ಧೈರ್ಯ ತಾಳದೆ ಚಂದ್ರಸೇನನು ವಿನಯ ತಾಳಿದನು  ೬
ಕುವರಿಯನ್ನು ಕೇಳಿದನು ಬಗೆ 
ಇವರ ಪರಿಚಯ ಪೇಳೆ ಎನುತಿರೆ
ತವ ಕಳವು ಮಾಡಿದ ಕಳ್ಳನವ ಎಂದಳಾ ಕನ್ಯೆ  ೭
ಚಂದ್ರಸೇನನು ಚಕಿತ ಮನದಿಂ 
ಸುಂದರಾಂಗನೇ ಮುಂಚೆ ಹೆಳವ -
ನೆಂದು ತಿಳಿದೊಡೆ ಗುರುತಿಸಿಯೆ ಮುಂದರಿದ ಮಾತಾಡಿ ೮ 
ಬೆಳಗುವುದರೊಳು ಬೇರೆ ರೂಪವು 
ತಳೆದ ಕಾರಣವೇನು ಎನುತಿರೆ 
ಕಳೆಯ ವಿಕ್ರಮ ತನ್ನ ಕಥೆಯನು ವಿವರ ಪಡಿಸುವನು. ೯
ಶ್ರೀಪತಿಯ ಮನೆ ಕಳ್ಳ ನಾನಿರೆ 
ತಾಪದಲಿ ಕಡು ನೊಂದು ಬಳಲಿದೆ 
ಭೂಪ ಕೈಕಾಲುಗಳ ಕಡಿದಿಹ ಹೆಳವ ನಾನಿರುವೆ ೧೦
ಕರಚರಣಗಳ ತಳೆ ಪವಾಡವು
ಕರೆಸಿದರೆ ತಿಳಿಯುವುದು ವೈಶ್ಯನ
ದೊರೆಗೆ ಪೇಳಲು ಸೇವಕರು ಕರೆದಾಜ್ಞೆಯಂ ಮಾಡಿ ೧೧
ಆವ ಕಾರಣ ಇರದೆ ಆಜ್ಞೆಯ
ನಾವು ತಪ್ಪಿದುದೇನು ಇಲ್ಲದೆ 
ಈವುದಕೆ ನಡುಗಿದನು ಒಡನೆಯೆ ಬಂದು ನಮಿಸಿದನು ೧೨
ಸರವ ಕದ್ದವ ನೀತನೆ ಏಂ -
ಪರುಕಿಸಿಯೇ ನೋಡೆಂದ ಸೇನನು 
ಗುರುತಿಸಿದ ಅಹುದೆಂದು ಸಿರಿಪತಿ ತಡವ ಮಾಡದಲೇ ೧೩
ಹೌದು ಎಂದೊಡೆ ವಿಕ್ರಮನು ತಾ
ಮಹಿಪತಿಯೇ ನಡೆ ಚಿತ್ರ ಶಾಲೆಗೆ 
ಮಹತಿ ತಿಳಿವುದು ಎನ್ನ ಕೈ ಕಾಲುಗಳು ಬಂದಿರುವ  ೧೪
ಬಹುಜನರು ಪರಿವಾರ ಎಲ್ಲವೂ 
ಗಹನವೇನದು ಎಂದು ನೆರೆದರು 
ವಿಹಿತ ವಿಹ ಸಿಂಹಾಸನಂಗಳ ಮಂಡಿಸಿದ ವಣಿಕ  ೧೫
ಕಿಕ್ಕಿರಿದು ನೆರೆದಿರುವ ಸ್ತೋಮದಿ 
ತಕ್ಕವರ ವರ ಸ್ಥಾನ ಮಾನದಿ
ಅಕ್ಕುದಾಗಿಯೇ ಕುಳಿತು ಕೊಂಡಿಹರವರ ಮಧ್ಯದೋಳು. ೧೬
ಧೀರ ವಿಕ್ರಮ ಎಲ್ಲರೆದುರೊಳು
ಸಾರಿ ನುಡಿದನು ಕೇಳಿ ಜನರೇ !!
ಹಾರ ಚೋರನು ನಾನೇ ಮುಂಚಿನ ಹೆಳವ ಹಿರಿಗಳ್ಳ ೧೭
ದೆಸೆಯು ಗ್ರಹ ಬಲ ವಕ್ರವಾಗಿರೆ
ನಿಶೆಯನೊಂದನು ಇಲ್ಲಿ ಕಳೆದೆನು
ವಿಷಯ ವಾಸನೆ ಇಲ್ಲದೆಯೇ ತಾ ಏರಿ ಬಂದಿತ್ತು. ೧೮
ರಾತ್ರಿ ಮೂರರ ಜಾವದೊಳು ತಾ-
ಚಿತ್ರ ಶಾಲೆಯ ಚಿತ್ರ ಹಂಸ ವಿ -
ಚಿತ್ರಜೀವವು ತಳೆದು ಬಂದಿಳಿ ಮುತ್ತು ನುಂಗಿತ್ತು  ೧೯
ನನಗೆ ಗ್ರಹ ಬಲವಿಲ್ಲದಿರೇ ನಿಜ 
ತನದಿ ನುಡಿದರೆ ಸುಳ್ಳು ಎನಿಪುದು 
ಯನಗುಪಾಯವು ಇಲ್ಲದೇ ಹೊಡೆತಕ್ಕೆ ಗುರಿಯಾದೆ  ೨೦
ಸತ್ಯ ಸಂಗತಿ ಸೌಖ್ಯ ಗತಿಯಿಂ
ಸತ್ಯ ತಿಳಿವುದು ಎಂದ ವಿಕ್ರಮ 
ಚಿತ್ತ ಬಿತ್ತಿಯ ಮೇಲೆ ಮಾಡುತ ಧ್ಯಾನ ಸೌರಿಯಲಿ. ೨೧
ಕೋಣಸ್ಥ ಪಿಂಗಳನೇ ಸೌರಿಯೇ 
ಭಾಣುಸುತ ತಿಳ ಮಾಷ ಪ್ರೀಯನೆ
ಕಾಣುತಿರುವ ಚಿತ್ರಹಂಸಕೇ ಜೀವಕಳೆ ಬರಲಿ  ೨೨
ಚಿತ್ರಹಂಸವೇ ಇಳಿದು ಬಾರೈ
ಚಿತ್ರಹಿಂಸೆಯು ಎನಗೆ ಕೊಡದಿರು 
ಮಿಥ್ಯsಪಾದನೆ ನೀಗಿಸೈ ಗ್ರಹ ದೇವ ಶನಿರಾಯ. ೨೩
ಭಿತ್ತಿಯಿಂದಿಳಿಯುತಲಿ ಚಿತ್ರವು 
ಮತ್ತೆ ಜೀವದ ಕಳೆಯು ತಳೆಯುತ
ಸುತ್ತು ಹಾರಿತು ಗೂಟ ಮೇಲೆಡೆ ಬಂದು ಕುಳಿತಿರಲು  ೨೪
ಅಚ್ಚರಿಯನೇ ಪಡುತ ಎಲ್ಲರೂ 
ಬಿಚ್ಚು ಕಂಗಳ ತೆರೆದು ನೋಡುತೆ
ಅಚ್ಚಳಿಯದಿಹ ಮುತ್ತುಗಳ ಒಂದೊಂದು ಬಿಡುತಿರಲು  ೨೫
ಉಗುಳಿ ಉಂಟಾಗಿರುವ ಮಾಲೆಯ 
ಮುಗಿಸಿ ಹಾರಿತು ಹಂಸ ಪಕ್ಷಿಯು 
ತೆಗೆದ ಚಿತ್ರದ ಸ್ಥಳದಿ ಅಡಗಿತು ಬಣ್ಣ ಚಿತ್ರಾಗಿ. ೨೬
ಸಿರುಪತಿಗೆ ಕರೆದು ಇತ್ತು ರತ್ನದ 
ಸರವ ಕೊಟ್ಟನು ಲೋಕದೆದುರೊಳು
ಸರಿ ಮಹಾಪುರುಷೆಂದು ಬಗೆದರು ಧನ್ಯವಾದಗಳು  ೨೭
ಇವನು ದೇವತೆ ಎಂದು ತಿಳಿದರು 
ಭವಕೆ ಬಂದಿಹ ಕಿಂ ಪುರುಷ ನೆಂ
ಇವ ದೇವನರ ಎನ್ನುತಲೆ ತಮ ತಮಗೆ ತಿಳಿದಂತೆ  ೨೮
ಎಂತು ಘಟಿಸಿತು ಅಘಟಿತವು ತಾ-
ಬಂತು ಚಿತ್ರವು ಜೀವ ಪಕ್ಷಿಯು 
ಇಂತು ವ್ಯರ್ಥದಿ ದೂಷಣೆಯನು ಇತ್ತು ಕಾಡಿದೆವು. ೨೯
ನಾಮ ಗ್ರಾಮಗಳಾವವೈ ಕುಲ -
ನೇಮ ಗೋತ್ರಗಳೇನು ದೇಶವು 
ಪ್ರೇಮದಿಂದಲಿ ಎಲ್ಲ ವಿಷಯವ ಸೇನ ಕೇಳಿದನು   ೩೦
ಏನು ಕೇಳ್ವುದು ವಿಚಕ್ಷಣವದು
ನಾನು ಭೂಪತಿ ಸಾರ್ವಭೌಮನು 
ಜ್ಞಾನ ಕೇಂದ್ರವು ಉಜ್ಜಯಿನಿ ಸಿಂಹಾಸನಾಸೀನ. ೩೧
ಕೇಳಿದೊಡೆ ಸಾಷ್ಟಾಂಗ ನಮನವ 
ಮಾಳವೆಯ ಅರಸನಿಗೆ ಮಾಡಿದ 
ಆಳು ಅರಸ ಮಾನ ಮನ್ನಣೆ ಹೊಡೆಪರಾಕುಗಳು. ೩೨
ತಿಳಿಯದೆಯೇ ತಪ್ಪಾಗಿ ನಡೆದೆವು 
ತಳೆದ ನಿಲುಮೆಗೆ ಕ್ಷಮೆಯು ಮಾಳ್ಪುದು 
ಗಳಿತ ಮಾನಸರಾಗಿ ರಾಜನು ವಣಿಕನು ಸಹಿತ  ೩೩
ನನಗೆ ಗ್ರಹಗತಿ ಬಳಸಿ ಬಂದುದು 
ಶನಿಯ ಪೂಜಿಸದಿರುವsನಿಷ್ಠವು
ಇನಿತು ತೊಂದರೆಗೀಡು ಮಾಡಿದೆ ನನ್ನ ಕರ್ಮದೊಳು. ೩೪
ಈಗ ಪಿಂಗಳ ಕೃಪೆಯು ಏನಗಿದೆ
ಆಗು ಹೋಗುಗಳೆಲ್ಲ ಸರಳದಿ 
ಸಾಗುತಿಹವು ಇದಕೆ ನೀವು ಏನು ಹೊಣೆಯಲ್ಲ. ೩೫
ಬುದ್ಧಿ ಬದಲಿಸಿದುದಕೆ ನೀವು 
ನಿದ್ದೆಯಿಂದ್ದೆವರ ಕನಸಿನ 
ಸುದ್ದಿ ಆಯಿತು ನನ್ನ ಕಥೆಯದು ಸಾಕು ಸಾಕೆಂದ   ೩೬
ವೈಶ್ಯ ಕ್ಷಮೆಯನು ಯಾಚಿಸಿದ ತಾ 
ನಿಶ್ಚಯಿಸಿ ಲಗ್ನವನು ಲೋಲಿಕೆ 
ಇಷ್ಟ ಬಾಂಧವರಲ್ಲಿ ಅರುಹಿದ ಪೂರ್ವ ವೃತ್ತಾಂತ  ೩೭
ಅರಸನರಮನೆ ಗೈದು ತಂದರು
ಸರಸರಾಗ ಪ್ರಿಯ ಪದ್ಮಿನಿ 
ಬೆರೆಸು ಶುಭ ವಿವಾಹವಾಯಿತು ರಾಜ ವೈಭವದಿ  ೩೮
ತಾಳ ತಮ್ಮಟೆ ಕರಡಿ ಮದ್ದಳೆ 
ಮೇಳ ಮೆರವಣಿ ಭರದಿ ನಡೆದವು 
ಮೇಲು ಮಂಟಪ ರಂಜಿಸುವ ವಿನೋದ ಮೊದಲಾಗಿ  ೩೯
ಪದ್ಮ ಸೇನೆಗೆ ಸಿಂಗರಿಸಿ ಶಿರ-
ಪದ್ಮಭಾಗಿಸಿ ಕನ್ಯದಾನವ
ಭದ್ರವಹ ಗಜ ಅಶ್ವ ದಾಸಿ ದಾಸರಥ ಸಹಿತ   ೪೦
ಮಾಡಿ ವಿಧಿ ವಿಧಾನ ಮಂತ್ರದ 
ನೀಡಿ ಬಡ ಬಗ್ಗರಲಿ ದಾನವ 
ಕೂಡಿ ಧರ್ಮದ ಕಾರ್ಯ ಬ್ರಾಹ್ಮಣ ಭೂರಿ ಭೋಜನವ. ೪೧
ರಾಣವಿಕ್ರಮ ನೆನೆದ ಉಪಕೃತಿ 
ಗಾಣಿಗರ ಸೊಸೆ ಜನರ ಕರೆಯಿಸಿ 
ಕಾಣಿಕೆಯ ನೀಡಿದನು ಒಂದು ದೇಶಮುಖಿ ಕೊಟ್ಟು ೪೨
ಸೊಸೆಯು ಮಾವರಿಗರುಹಿ ತನ್ನಯ 
ದೆಸೆಯು ತಪ್ಪಿದ ವೇಳೆ ಗಾದವ-
ರಾಸೆ ಪೂರೈಸುವುದು ಆಗದು ಆದರೂ ಸೇವೆ   ೪೩
ಜಾಮಾತನಿರಿಸಿ ತಿಂಗಳು 
ಪ್ರೇಮದಿಂದಲೇ ಕಾಲ ಕಳೆದು
ಕಾಮನಾ ಪರಿಪೂರ್ಣವೆನಿಷಿ ಧನ್ಯತಾ ಸೇನ  ೪೪
ಭಾಗ್ಯವಂತನು ತಾನು ತಿಳಿದು 
ಯೋಗ್ಯವಹ ಚತುರಂಗ ದಳವನು
ಶ್ಲಾಘ್ಯವೆನಿಪರಿ ಚಂದ್ರಸೇನನು ಮನ್ನಣೆಯ ಗೈದ  ೪೫
ವನಿಜ ಶ್ರೀಪತಿ ಮಗಳಿಗಾಗಿಯೇ 
ಮಣಿ ಮುತ್ತು ವರ ವಜ್ರ ವೈಢೂ -
ರ್ಯಣಿಮಾಡಿ ಅನರ್ಘ್ಯ ರತ್ನಗಳನು ಕೊಡ ಮಾಡಿ ೪೬
ಕಹಳೆಯೂದುತ ಕಳಿಸಿಕೊಟ್ಟರು 
ಬಹಳ ಭಾಗ್ಯವಿದೆಂದು ತಿಳಿದರು 
ವಿಹಿತ ವಿಹ ಸಂಸಾರಿ ವರ್ಗವು ವೈಶ್ಯವರ ನೃಪರ ೪೭
ದಂಡಗಳು ದಾಸಿಯರು ಸೇವಕ 
ಗೊಂಡುಜ್ಜಯಿನಿಪುರ ಪ್ರವೇಶವು 
ಕೊಂಡು ಬಂದನು ಬಹು ವರುಷದಲಿ ರಾಯ ವಿಕ್ರಮನು  ೪೮
ಮತ್ತೆ ಮಂಗಲ ಮೂರ್ತದೊಳಗೆ
ಛತ್ರ ಚಾಮರಸಿಂಹ ಆಸನ 
ವಿತ್ತ ವಿಕ್ರಮ ರಾಜ ಪಡೆದ ಶನಿಯ ಕೃಪೆಯಿಂದ  ೪೯
ಶನೈಶ್ಚರ ವ್ರತ ನಿಯಮಗಳನೇ 
ಮನಪೂರ್ವಕವಾಗಿ ಪಾಲಿಸಿ 
ವಿನಾಶತೆ ಇಹ ಕೇಡು ಹೋಗಲು ಸೌಖ್ಯವಾಗಿದ್ದ. ೫೦
ದೇವ ಶ್ರೀ ಶನಿದೇವ ಚರಿತೆಯ 
ಆವ ನಿಜ ಕಥೆ ಪಠಣ ಮಾಡಲು 
ಭಾವ ಭಕ್ತಿಯ ತಪದಿ ಅಗಣಿತದಿ ವರ ಗಳಿಸೆ. ೫೧
ಮಂದ ಗ್ರಹದ ಸೌರsವಸ್ಥೆಯ
ಅಂದದಿ ಉಪಗ್ರಹಗಳೂ ಇರೇ
ಸಂದ ಮಹತಿಯ ದೂರ,ಗತಿ,ಘನತೆ ಎಂತಿಹುದು ೫೨
ಮಾನವರು ತಮ್ಮಗಳ ಜೀವಿತಾವಧಿಯಲ್ಲಿ
ಮೀನಮೇಷಗಳೊಳಗೆವರುಷ ತ್ರಿದಶಕಗಳ
ಯಾನವದು ಒಂದುಸಲ ರಾಶಿ ನಮ್ಮಲಿ ಬರುವ ಗತಿಯು ಇದೆ ವಿಧಿಯ ಆಟ   ೫೩
ತಾನೆತನ ದೃಷ್ಟಿಯಲಿ ಕೆಳಗೆ ಇಳಿಯದ ತೆರದಿ
ಮಾನವೀಯತೆ ಮೆರೆದು ಉತ್ತಮಾಚರಣೆ ಇರೆ
ತಾನೆ ರವಿಜನು ತೃಪ್ತ ಶುಭ ಫಲದ ನಂಬಿಕೆಯು ನೀಡುವನು ಬಲವತ್ತರ  ೫೪
ಆಂತರಿಕ ವ್ಯಕ್ತಿತ್ವ ಪ್ರತಿನಿಧಿಪ ಮಂದಗ್ರಹ
ಅಂತರದಿ ಮನಧೃಡತೆ ಕಾರ್ಯ ಕ್ಷಮತೆಯ
ಇಂತಿರಲು ಅರ್ಕಸುತ ಸ್ವ ಜನುಮ ರಾಶಿಯಲಿ ಸೌಮ್ಯ ತಾನಿರುವನು.  ೫೫
ಪ್ರಥಮ ದ್ವಿತಿ ಚತುರ್ಥಪಂಚ ಸಪ್ತಮದಲ್ಲಿ 
ಮಥಿಸಿ ಅಷ್ಟಮ ನವಮ ದ್ವಾದಶ ಸ್ಥಾನಗಳು
ಗತಿ ಇರುವ ಶನಿಚರನು ಸಮಯ ಕುಂಡಲಿಯಲ್ಲಿ ಪೀಡೆಕಾರಕನು. ೫೬
ಶನಿಯು ಶುಭಗ್ರಹಗಳ ಒಡೆಗೂಡಿ ಸ್ಪಂದಿಸಲು 
ಮನೆ ಪ್ರಥಮ ಪಂಚಮದ ನವಮ ಕ್ಷೇತ್ರದಲಿರಲು 
ಏನು ಪೀಡೆಯೂ ಕೊಡದೆ ಸಪ್ತಾರ್ಧಗೊಳೆ ವಕ್ರ ದೃಷ್ಟಿಯ ತೊರೆವನು  ೫೭
ಜನ್ಮ ಕುಂಡಲಿಯಲ್ಲಿ ಸೋಮ ಮಂದರ ಯೋಗ 
ತಾನೇ ಅಶುಭ ಗ್ರಹಗಳೊಡಗೂಡಿ ಅಶುಭ ನವ 
ತನುವ ಕ್ಷೀಣಿಸುತಲೆ ದ್ವಿತೀಯ ಅಷ್ಟಮ ಪತಿಯ ಪೀಡೆ ಫಲವು ಖಂಡಿತವೆ.  ೫೮
ಎರಡುವರೆ ಮೊದಲಾಗಿ ವೃಷಭ ಧನು ಮಕರಗಳು 
ಎರಡುವರೆ ಕೊನೆ ಮಿಥುನ ತೂಳ ಮೀನವು ಕುಂಭ 
ಎರಡುವರೆ ನಡುವಲ್ಲಿ ಅಜ ಅರ್ಕಸಿಂಹ ವೃಶ್ಚಿಕ ಕನ್ಯಕೆ ತ್ರಾಸದಾಯಕ ನು. ೫೯
ಪೀಡೆ ನಿರ್ವಹಿಸುವುದಕ್ಕೆ ದಾನ ವಸ್ತುಂಗಳವು 
ನಾಡ ಚಿನ್ನವು ಲೋಹ ನೀಲಮಣಿ ಎಣ್ಣೆರಸ 
ಕಾಡು ನೀಲದ ಪುಷ್ಪ ಕಪ್ಪುಹೊದ್ದಿಕೆ ಉದ್ದು  ಮಹಿಷನಿಂ ಪರಿಹಾರವು ೬೦
ಸೂರ್ಯನಿಂ‌ಪನ್ನೊಂದು ಕೋಟಿ ಯೋಜನೆ
ಸೂರ್ಯ ಪುತ್ರನ ದೂರ ಅಕ್ಷದಲಿ ಯೋಜನೆಯ 
ಕಾರ್ಯಪಲ ಅಧಿಪತಿಯ ಕಾಲು ಯೋಜನೆ ಕಡಿಮೆ ರೇಖಾಂಶದಲಿ ಇರ್ಪುದು. ೬೧
ಪಿಂಗಳನು ಸುಂದರನು ಮಾರೀಚನಾಛಾಯೆ
ಸಂಘದಲಿ ಕಂಕಣದ ತೆರದಲ್ಲಿ ಸಾಸಿರದ
ಕಂಗಳವು ಮಿಂಚುತಿರೆ ಪೀನದಲಿ ಹೊಳೆಯುತ್ತ ನಿಮ್ನದಲಿ ಕಾಣದಾಗಿ  ೬೨
ಪ್ರತೀಕಾತ್ಮನೇ ಸೌರಿದೇವನು 
ಪ್ರತಾಡಿಸುತ್ತಿರೇ ನೀಚ ಬುದ್ಧಿಗೆ 
ಪ್ರತಿಯಾಗಿ ಸಂಘರ್ಷ ಕಲಿಸುವ ಕರ್ಮಫಲ ದೇವ ೬೩
ಮರಣ ನಂತರ ಅಗ್ರಜನ ಫಲ 
ಸರಣಿ ಜೀವಿತದಲಿ ಅಸಿತ ನಾ ಫಲ
ತಿರುವು ಜೀವನದಲ್ಲಿ ನೀಡುವ ಸಾರ್ಧ ಸಪ್ತಕವು.  ೬೪
ಕರ್ಮ ಹಿನ್ನಲೆಯಲ್ಲಿ ಒಳ್ಳೆಯ 
ನಿರ್ಮಲದಿ ತಾ ನ್ಯಾಯ ಬದ್ಧತೆ 
ಕರ್ಮ ದುಷ್ಟತೆಯಿಂದ  ಪೀಡೆಯ ಪಾಟಲಿಂತಿಹುದು ೬೫
ಪಾಪ ಪುಣ್ಯದ ಮಿಶ್ರ ಮಾನವ 
ಕಾಪದೊಳ್ಳೆಯ ಕೆಟ್ಟ ಫಲಿತವು
ಪಾಪ ಶಮನಕ್ಕೆ ನೀಚ ಕಾರ್ಯಕೆ ಪೂರ್ವ ಕರ್ಮವಿದೆ ೬೬
ನೀಲ ವರ್ಣ ನಿರಭ್ರ ಭಾವವು 
ಮೇಲು ಸದೃಢ ಕಪ್ಪುವಸನವು
ಸಾಲು ದೂರದ ದೃಷ್ಟಿಯದು ಕಠಿಣ ತೀಕ್ಷಣತೆಯ. ೬೭
ಮೇರು ಹಾರಿಕೆ ಮಂದ ಚಲನೆಯ 
ಸಾರುವನು ಹಣೆಬರಹ ನ್ಯಾಯವು 
ಕಾರ್ಯಶಿಷ್ಟತೆಯಿಂದ ಪೀಡೆಯು ತೊರೆದು ಶಮನಾಗಿ. ೬೮
ಶ್ರವಣ ಮಾಡಲು ಇದುವೇ ಗ್ರಂಥವು 
ಬವಣೆ ವಿಘ್ನಗಳೆಲ್ಲ ನಾಶವು 
ತವ ಪೀಡೆ ಬಾಧಿಸದು ಕಲ್ಪಾಂತರದಿ ಮಾನವಗೆ. ೬೯
ಗ್ರಹ ನವಂಗಳ ಕಥೆಯು ವಿಸ್ತರ 
ವಿಹುದು ಕೇಳಲು ಕ್ಲೇಶ ಪೋಪುದು
ಸಹನೆ ಮೀರಿದ ದುಃಖವಾರ್ತೆಯು ನಶಿಸಿ ಕೃಪೆಯಾಗಿ ೭೦
ಶ್ರವಣ ಮನನದಿ ನಿಜ ಧ್ಯಾಸದಿ
ಭವಿಗಳೋದುವ ಬರೆಯುವವರಿಗೆ
ಕವನ ಗ್ರಂಥವು ರಕ್ಷಿಪರಿಗೆ ಇಲ್ಲ ವಿಘ್ನಗಳು. ೭೧
ಶ್ರೀ ಶನೇಶ್ವರ ಖ್ಯಾತಿ ಮೂರ್ತಿಯ
ಧ್ಯಾಸ ಗೈವರ ಹಗಲು ಇರುಳು 
ನಿಸ್ಸೀಮ ರಕ್ಷಿಪ ಸಕಲ ದುಃಖಗಳನು ಶನಿರಾಯ ೭೨
ಒಂದೇ ಮನದಲಿ ಕೇಳುವವರಿಗೆ
ಬಂಧುರತೆಯಿಂ ಬಿಡುವು ಅಕ್ಕುದು
ಸಂದುವದು ಸುಫಲ ಪ್ರಾಪ್ತಿಯು ಶನಿಯ ದಯೆಯಿಂದ  ೭೩
ಓಂ  ಶಂ  ಶನೈಶ್ಚರಾಯ ನಮಃ 
ನೀಂ ತಾನೇ ಜಪತಪವಗೈಯಲು
ತಾಂ ಶನಿಯು ತಾನಾಗೆ ಹರಿಸುವ ಚರಿತೆ ಬರೆಹಕ್ಕೆ. ೭೪
ಭಕ್ತ ವತ್ಸಲ ಭಾಗ್ಯ ಪೂರಕ
ವಿಕ್ತ ವಿಶ್ವಾಧಾರ ಸರ್ವೋ -
ದ್ರಿಕ್ತ ದೋಷವಿದೂರ  ದುರ್ಗಮ ವೃಂದನಂದವರ. ೭೫
ತಾತಾರ್ಯ ಮಹಿಪತಿಯು ಮಹರಠಿ
ಹೇತು ಪೂರ್ವಕವಾಗಿ ಕನ್ನಡ 
ಮಾತಿನಿಂ ರೂಪಿಸಿದ ತುಳಸಾತ್ಮಜನು ಸಿರಿರಾಯ ೭೬
ಸರಳಗನ್ನಡ ಭಾಷೆಯಲಿ ಕಥೆ 
ಬರೆಹದಿಂ ವರ್ಣಿಸಿದೆ ನ್ಯೂನತೆ 
ಬರದ ತೆರೆ ಅರ್ಥವನು ಬುದ್ಧಿಗೆ ನೀಡಿ ಶನಿದೇವ   ೭೭
ಪಿತರು ಓದಿದುದಂತೆ ಪೇಳಿದ 
ಕಥೆಯು ರಂಜಿಸುವಂತೆ ಕನ್ನಡ 
ಮತಿಯರಸ ಭಾಷೆಯಲಿ ಲೇಖಿಸಿ ಇತ್ತ ಸಿರಿರಾಯ  ೭೮
ಇಂತಿ ಶ್ರೀ ಶನೈಶ್ಚರಚರಿ ತಾ -
ದ್ಯಂತ ಸ್ಪೂರ್ತಿಯು ನೀಡುತಿರೆ ತಾ-
ಆಂತು ಮಹತಿಯು ಗೈಮೆ ಶ್ರೀ ಗೋವಿಂದರಾಜ ಮರ ೭೯
ಇತಿ ಪುರಾಣೈತಿಹದ ಕಥೆಗಳು 
ಮಥಿಸಿ ಸೀತಾರಾಮ ತುಳಸಾ-
ಸುತನ ಸವಿಗತೆ ಚತುರ್ಥದ ಶ್ರೀ ಕೃಷ್ಣ ಅರ್ಪಣೆಯ  ೮೦

ಇಂತಿ ಶ್ರೀ ಶನೇಶ್ಚರ ಚರಿತ ಪುರಾಣದೊಳು ದಶಮ  ಸವಿಗಥಾಸಂಧಿ ಪರಿಪೂರ್ಣಂ  ಶುಭಮಸ್ತು  
                 ಶ್ರೀ ಕೃಷ್ಣಾರ್ಪಣಮಸ್ತು
ಓಂ ಶ್ರೀ ಹಿಮವತ್ ಯಮುನೋತ್ತರೀಯ ಖುರ ಛಾಯಾವಳಿ ಕ್ಷೇತ್ರ ಸುಪ್ರತಿಷ್ಟ ಪ್ರಸನ್ನಾತ್ಮ ವೀರಾಸನ ವಿರಾಜಿತ ಸರ್ವ ಗ್ರಹ ಸಾರ್ವಭೌಮ ಮಂದಲೋಕಾಧೀಶ  "ಶ್ರೀ ಶನೈಶ್ವರ ಚರಿತಂ " ಪುರಾಣ ವಿರಚಿತದ ಪ್ರಥಮ ಸಂಧಿ ಪ್ರಾರಂಭ ಮಿತಿ ಶ್ರೀ ಶಕದ ಸಾವಿರದ ಎಂಟುನೂರರ ಮೇಲ್ ತೊಂಭತ್ತೇಳು ರಾಕ್ಷಸ ನಾಮ ಸಂವತ್ಸರದ ಆಷಾಢ ಶುಕ್ಲ ಪೌರ್ಣಮಿ ಬುಧವಾಸರ:  ತದ್ದಿನೇ ಶನಿ ಗ್ರಹ ರಾಶ್ಯಾಂತರ ಮಪ್ಪ ಮಿಥುನಾಂತರದೋಳ್ ಕರ್ಕಸ್ಥ ಪಲ್ಲಟ ಪ್ರಸಂಗ ದಿನದೋಳ್ ಕಿರಿಕವಿ ಸೀತಾರಾಮಾಚಾರ್ಯ ಸುತ ತುಳಸಾತ್ಮಕ ಶ್ರೀಧರಾಚಾರ್ಯರಿಂ ಸ್ಫಟಿಕ ಪತ್ರದೋಳ್ ವ್ಯಾಘ್ರದುರ್ಗ ಗ್ರಾಮೇ ಲಿಖಿತಾತ್ ಸ್ವಸ್ತಿ... ತತ್ ಸಂವತ್ಸರೇ  ಭಾದ್ರಪದ ಶುಕ್ಲ ಪ್ರತಿಪತ್ ಶನಿವಾಸರೇ  ಸಂಪೂರ್ಣಾ ಸಂತು ಇತಿ....

ಶ್ರೀ ಶನೈಶ್ಚರ ಸ್ತವನಮ್.    श्री शनैश्चर स्तवनम्
ಶ್ರೀ ಗುರುಭ್ಯೋ ನಮಃ ಹರಿ: ಓಂ 
ನಮ: ಕೃಷ್ಣಾಯ ನೀಲಾಯ ಶಿತಿಕಂಠನಿಭಾಯ ಚ|
ನಮ: ಕಾಲಾಗ್ರಿರೂಪಾಯ ಕೃತಾನ್ತಾಯ ಚ ವೈ ನಮ:||
ನಮೋ ನಿರ್ಮಾಸದೇಹಾಯ ದೀರ್ಘಶ್ಮಶ್ರುಜಟಾಯ ಚ| ನಮೋ: ವಿಶಾಲನೇತ್ರಾಯ ಶುಷ್ಕೋದರ ಭಯಾಕೃತೇ|| ೧ ||
ನಮ: ಪುಷ್ಕಲಗಾತ್ರಾಯ ಸ್ಥೂಲರೋಮ್ಣೇ ಚ ವೈ ಪುನ:| ನಮೋ ದೀರ್ಘಾಯ ಶುಷ್ಕಾಯ ಕಾಲದಷ್ಟ್ರಂ ನಮೋಸ್ತುತೇ|| ನಮಸ್ತೇ ಕೋಟರಕ್ಷಾಯ ದುರ್ನಿರೀಕ್ಷ್ಯಾಯ ವೈ ನಮ:| ನಮೋ ಘೋರಾಯ ರೌದ್ರಾಯ ಭೀಷಣಾಯ ಕರಾಲಿನೇ|| ೨ ||
ನಮಸ್ತೇ ಸರ್ವಭಕ್ಷಾಯ ವಕ್ರದೃಷ್ಟ ನಮೋಸ್ತುತೇ|
ಸೂರ್ಯಪುತ್ರ ನಮಸ್ತೇಸ್ತು ಭಾಸ್ಕರೇಅಭಯದಾಯ ಚ|| ಅಧೋದೃಷ್ಟೇ ನಮಸ್ತೇಸ್ತು ಸಂವರ್ತಕ ನಮೋಸ್ತುತೇ| ನಮೋ ಮಂದಗತೇ ತುಭ್ಯಂ ನಿಸ್ತ್ರಿಂಶಾಯ ನಮೋಸ್ತುತೇ|| ೩ ||
ನಮಸ್ತೇ ದು:ಖನಾಶಾಯ ದುರಿತ ತಿಮಿರಹಾರಕ. |
ವಿದಾರಕಾ ವಿಘ್ನಹರ್ತಾ ಪಿಪ್ಪಲಾದಾಯತೇ ನಮಃ ||
ಜ್ಞಾನ ಚಕ್ಷುರ್ನಮಸ್ತೇಸ್ತು ಕಶ್ಪಾತ್ಮಜಸೂನವೇ|
ತುಷ್ಟೋ ದದಾಸಿ ವೈ ರಾಜ್ಯಂ ರುಷ್ಟೋ ಹರಿಸ ತತ್ಕ್ಷಣಾತ್‌|| ೪ ||
                ಶ್ರೀ ಶನೈಶ್ಚರಾರ್ಪಣಮಸ್ತು







No comments:

Post a Comment