Wednesday, August 06, 2025

*JESHTA DEVI Dora Bandhan ಶ್ರೀ ಜ್ಯೇಷ್ಠಾಗೌರಿ ದಾರ ಕಟ್ಟಿಕೊಳ್ಳುವ ಹಾಡು

  ಅಣ್ಣೀಗೇರಿ ಸೌ.ಲಕ್ಷ್ಮೀದೇವಿಯವರಿಂದ ರಚಿತವಾದ 
       ಶ್ರೀ ಜ್ಯೇಷ್ಠಾಗೌರಿ ದಾರ ಕಟ್ಟಿಕೊಳ್ಳುವ ಹಾಡು 
ಪಂಕಜನಾಭಗೆ ಶಂಕಿಸಿ ಶರಣೆಂಬೆ | ಪಂಕಜೋದ್ಭವಗೆ ಶರಣೆಂಬೆ |ಪಂಕಜೋದ್ಭವಗೆ ಶರಣೆಂದು ಪೇಳುವೆ ಅಂಬಿಕೆಗೆ ಕರವ ಮುಗಿವೆನು | 

ಹಿರಿಯ ಹೆಂಡತಿ ವೈದು ಮುಳ್ಳು ಬೇಲಿಯಲಿಟ್ಟು ಸಿರಿ ವೈದು ಕೊಟ್ಟು ಶ್ರೀಕಾಂತ |ಸಿರಿವೈದುಕೊಟ್ಟು ಶ್ರೀಕಾಂತೆಂಬ ಅರಸಿಯ ಮನೆಯೊಳಗಿರುತಿದ್ದ ಅರಸು ||1

ಹೊರಟನೆ ರಾಯ ತಾ ಮೃಗದ ಬೇಟೆಯನಾಡಿ ಕೆರೆ ಇಲ್ಲ ಭಾವಿ ಮೊದಲಿಲ್ಲ |ಕೆರೆಯಿಲ್ಲ ಭಾವಿ ಮೊದಲಿಲ್ಲದಿದ್ದರೆ ಬಿಡುವೆ ನಾ ಪ್ರಾಣಗಳನೆಂದ ||2

ಹೋಗುವ ದೂತನ ಬೇಗದಲಿ ಕರೆದರು | ಕರದಲ್ಲಿ ದಾರ ಕಟ್ಟಿ |ಕರದಲ್ಲಿ ದಾರ ಕಟ್ಟಿ ಕೂಗಣಿ ಕುರುಳಿಯಲಿ ಉದಕ ಕೊಡುವೋರು ||3

ಹಿಂದಕ್ಕೆ ತಿರುಗಿ ನೀ ನೋಡಬೇಡ ಎನುತಲಿ | ಹಿಂದಕ್ಕೆ ತಿರುಗಿ ಬಿಸಲಿಗೆ |ಹಿಂದಕ್ಕೆ ತಿರುಗಿ ಬಿಸಲಿಗೆ ಕೂಗಣಿ ಒಡೆದು ನದಿಯಾಗಿ ಹರಿದೀತು ||4

ನದಿಯ ನೀರನೆ ಕುಡಿದು ಕರೆದನು ದೂತನ್ನ | ಕರದಲ್ಲಿ ನೀನು ಕಟ್ಟಿದ್ದ |ಕರದಲ್ಲಿ ನೀನು ಕಟ್ಟಿದ್ದ ದಾರವನು ಇದೇನೆಂದು ಬೆಸಗೊಂಡ ||5

ನಾಗ ಕನ್ನಿಕೆಯರು ಲಕ್ಷ್ಮೀ ಧಾರವೆಂದು ಲಕ್ಷಣವುಳ್ಳ ಅರಸಿಗೆ |ಲಕ್ಷಣವುಳ್ಳ ಅರಸಿಗೆ ಕೊಡು ಎಂದು ಕೊಟ್ಟರು ಲಕ್ಷ್ಮೀ ವರಗಳನು ||6

ಬೇಟೆಯಾಡಿ ರಾಯ ಬಳಲಿ ಮನಿಗೆ ಬಂದ | ಬಂದು ರಾಣಿಯ ತೊಡೆಯ ಮೇಲೆ |ಬಂದು ರಾಣಿಯ ತೊಡೆಯಮೇಲೆ ಮಲಗಲು ಧಾರ ಇದೇನೆಂದು ಬೆಸಗೊಂಡ್ಲು ||7

ಕಾಂತೆಯ ಮೇಲೆ ಸುಕಾಂತೆಯ ತಂದೀರಿ ಕರದಲ್ಲಿ ನೀವು ಕಟ್ಟಿದ್ದ |ಕರದಲ್ಲಿ ನೀವು ಕಟ್ಟಿದ್ದ ಧಾರದ ಮಹಿಮೆಗಳೆನಗೆ ತಿಳಿದೀತು ||8

ದೃಷ್ಟಿಸಿ ಕಾಂತೆ ತಾ ಸಿಟ್ಟಿಲಿ ಹರಿದಳು ಹಿತ್ತಲಾಗಿದ್ದ ಪಡವಲ |ಹಿತ್ತಲಾಗಿದ್ದ ಪಡವಲ ಬಳ್ಳಿಯ ಹಂದರದ ಮೇಲೆ ಎಸೆದಾಳು ||9

ಒಣಗಿದ್ದ ಬಳ್ಳಿಯು ಚಿಗಿತು ಫಲವಾಯಿತು | ಅದು ಕಂಡು ರಾಯ ಮನದಲಿ |ಅದು ಕಂಡು ರಾಯ ಮನದಲ್ಲಿ ಕ್ಲೇಶ ಪಡುತ್ತಿದ್ದ ||10

ದಿನದ ಪಡಿಗಳಿಗಾಗಿ ಬಂದಳಾ ದಾಸಿಯು ಪಡುವಲ ಬಳ್ಳಿಯ ಮೇಲಿದ್ದ |ಪಡುವಲ ಬಳ್ಳಿಯ ಮೇಲಿದ್ದ ಧಾರವನು ಕಂಡು ಸಂತೋಷ ಪಡುತಿದ್ಲು ||11

ಕೈಯಲ್ಲಿ ಮುಟ್ಟಿದರೆ ಕಳ್ಳಿ ಎಂದಾರೆಂದು ಕಾಲಲ್ಲಿ ಮುಟ್ಟಿ ಲಕ್ಷ್ಮೀ ಧಾರ |ಕಾಲಲ್ಲಿ ಮುಟ್ಟಿ ಲಕ್ಷ್ಮೀ ಧಾರವೆಂದು ಮರದ ಕೊನೆಯಲ್ಲಿ ತೆಗೆದಾಳು ||12

ತೆಗೆದು ಧಾರವನು ಉಡಿಯೊಳಗಿಟ್ಟಳು ದಿನದ ಪಡಿಗಳನು ಕೇಳಿದರೆ |ದಿನದ ಪಡಿಗಳನು ಕೇಳಿದರೆ ಚಾರಕರು ರಾಗಿ ಪಡಿ ತಂದು ಕೊಡುವೋರು ||13

ರಾಗಿ ಪಡಿ ತಂದು ಕೊಡುವೋದು ರಾಯ ತಾ ನೋಡಿದ ನನಗಲ್ಲದರಸಿ ನಿಮಗೆಲ್ಲಿ |ನನಗಲ್ಲದರಸಿ ನಿಮಗೆಲ್ಲಿ ಎಂದೆನುತ ರಾಯ ಕೋಪದಲಿ ನುಡಿದಾನು ||14

ತರಿಸಿದ ರಾಯ ತಾ ಅಕ್ಕಿ ಗೋದಿ ಬೆಲ್ಲ ತರಿಸಿ ತುಂಬಿಸೀ ದಾಸೀಗೆ |ತರಿಸಿ ತುಂಬಿಸೀ ದಾಸಿಗೆ ಹೊರಿಸಿ ಮನಿತನಕಾ ಕಳಿಸೀದ ||15

ಒಕ್ಕಲಗಿತ್ತಿಯು ಹೊತ್ತಳು ಹೆಡಗಿಯನ್ನು ಮಿತ್ರೆ ಸುಕಾಂತೆ ಮನೆಗಾಗಿಬಂದಿನ್ನು ಇಳಿಸವ್ವ ಭತ್ತದ ಹೆಡಗಿಯನು ||16

ಅಂದ ಮಾತಿಗಾಗಿ ನೊಂದಾಗ ಮನದಲ್ಲಿ ಮಂದಿಯ ಒಳಗೆನಗೆಗೇಡು ಮಾಡುವುದು ದಾಸಿ ನಿನಗಿದು ತರವೇನೆ||17

ಚಕ್ಕಂದವಲ್ಲವೇ ತಾಯೇ ನೀ ಕೇಳವ್ವ ಒಡೆಯರು ಕೊಟ್ಟಂಥ ಪಡಿಗಳನು |ಒಡೆಯರು ಕೊಟ್ಟಂಥ ಪಡಿಗಳ ನೋಡೆಂದು ಅಕ್ಕಿ ಗೋದಿಯನೆ ತೆಗೆದಾಳು ||18

ತೆಗೆದು ಧಾರವನು ಹರದಿಗೆ ಕೊಟ್ಟಳು ಮಿತ್ರೆ ಸುಕಾಂತೆ ಧಾರದ |ಮಿತ್ರೆ ಸುಕಾಂತೆ ಧಾರದ ತೊಡಕನ್ನು ಬಲ್ಲ ಹಿರಿಯರಿಗೆ ಅರುಹಿದಳು ||19

ಭಾದ್ರಪದ ಶುದ್ಧ ಅಷ್ಟಮಿಯ ದಿನದಲ್ಲಿ ಮುತ್ತೈದೆ ನನಗೆದೊರಕ್ಯಾಳು ಇಂದಿನ್ನು ಸೌಭಾಗ್ಯಳೆಂದು ನುಡಿದಾಳು ||20

ಅರಸಿನ ಮನೆಗಾಗಿ ಬಂದಳೆ ಮಹಾಲಕ್ಷ್ಮೀ ವೃದ್ಧ ಮುತ್ತೈದೆ ರೂಪವನೆ |ವೃದ್ಧ ಮುತ್ತೈದೆ ರೂಪವನೆ ತಕ್ಕೊಂಡು ಶ್ರೀಕಾಂತೆಯ ಬಳಿಗೆ ನಡೆತಂದ್ಲು ||21

ಮಾಸಿದ್ದು ಉಟ್ಟಿದ್ದು ಮೈಲಿಗೆ ತೊಟ್ಟಿದ್ದು | ಸೂಸುವ ಮಾರೀ ಸಿಂಬಳದ |ಸೂಸುವ ಮಾರೀ ಸಿಂಬಳದ ಜೋರಿನ್ನು | ಹೇಸಿ ಹೋಗೆಂದು ನುಡಿದಳು ||22

ಅಂದ ಮಾತಿಗಾಗಿಗೆ ಕೊಡುವಳೆ ಶಾಪವ ಹಂದಿಯ ಮಾರಿ ಮಂದಿಯ |ಹಂದಿಯ ಮಾರಿ ಮಂದಿಯ ರೂಪವು ಇಂದು ನಿನಭಂಗ ಧೃಢವಾಗಲಿ ||23

ನುಡಿದ ಮಾತಿಗಾಗಿ ಕೊಡುವಳೆ ಶಾಪವ ಮಿತ್ರೆ ಸುಕಾಂತೆ ಮಿಂದ |ಮಿತ್ರೆ ಸುಕಾಂತೆ ಮಿಂದ ನೀರೊಳು ಅಂದು ನಿನಭಂಗ ಧೃಢವಾಗ್ಲಿ ||24

ಹಿರಿಯ ಹೆಂಡತಿ ಮನೆಗೆ ಬಂದಳಾ ಮಹಲಕ್ಷ್ಮೀ ವೃದ್ಧ ಮುತ್ತೈದೆ ರೂಪವನೆ|ವೃದ್ಧ ಮುತ್ತೈದೆ ರೂಪವನೆ ತಕ್ಕೊಂಡು ಸುಕಾಂತಿದ್ದ ಬಳಿಗೆ ನಡೆತಂದ್ಲು ||25

ಹರಸಿ ಮುತ್ತೈದೆಗೆ ಮುದದಿಂದ ಎರೆದಳು ಹದಿನಾರು ಎಳೆಯ ಧಾರವನು |ಹದಿನಾರು ಎಳೆಯ ಧಾರವನೆ ಗಂಟು ಹಾಕಿ ಮುದದಿಂದ ಆರತಿಯ ಬೆಳಗಿದಳು||26

ಮರುದಿನ ಅಷ್ಟಮಿಯಲ್ಲಿ ಮೂಲ ನಕ್ಷತ್ರದಲ್ಲಿ ಒಡನೆ ಮಿಕ್ಕಂಥ ಅಷ್ಟಮಿಯ ಶೇಷವನು | ಒಡನೆ ಮಿಕ್ಕಂಥ ಅಷ್ಟಮಿಯ ಶೇಷವನು ಒಡನೆ ಮಹಾಲಕ್ಷ್ಮೀ ಉಣುತಿದ್ಲು ||27

ಭೋಗುಳ್ಳ ಅರಸುತನ ರಾಜ್ಯವನೆ ಕಳಕೊಂಡು ಪಾದಚಾರಿಯಾಗಿ ಪರಮ | ಪಾದಚಾರಿಯಾಗಿ ಪರಮ ಕಷ್ಟದಿಂದ ಭೂಮಿಯಲಿ ಕೃತಘ್ನಗೆ ನೆರಳಿಲ್ಲ ||28

ಭೂಮಂಡಲೇಶನಾದ ಗಂಡನ ಕಾಣದೆ ಬೆಂಡಾಗಿ ರಾಯ | ಬಳಲುತಿಪ್ಪುದು ಕಂಡು ತಂಗಿಗೆ ವಿಶಾಪ ಕೊಟ್ಟಳು ಅಣ್ಣಿಗೇರಿಯಲ್ಲಿ ಅಮೃತ||29

ಭೂಮಿಯಲ್ಲಿ ಲಕ್ಷ್ಮೀದೇವಿಯ ಕಥೆಯ ಮಾಡಿದನು |
ಮಾಡಿದನು ತಿರುಮಲ ಲಕ್ಷಣವುಳ್ಳವರು ಕಿವಿಗೊಟ್ಟು ಕೇಳೆ ಹರಿ‌ಒಲಿವ ||30

                                  ........ಅಣ್ಣೀಗೇರಿ ಲಕ್ಷ್ಮೀ ದೇವಿ

Please click for...

JeshtaDevi Vrata Pujavidhi श्री ज्येष्ठादेवी व्रत पूजा विधान. आरती सहित 

JeshtaDevi Aradhana Method श्री ज्येष्ठादेवी आराधना पद्धती 

JeshtaDevi Vrata Katha श्री ज्येष्ठादेवी व्रत कथा 

...ನೀವರಗಿ ತುಳಸಕ್ಕ / ನೀವರಗಿ ಜಯಕ್ಕ 






No comments:

Post a Comment