ಮಂದಿರವೊಂದರ ಪ್ರಾಂಗಣದಿಂದ ಘಂಟಾನಾದವು ಕೇಳುತಿದೆ
ಹಕ್ಕಿಗಳಿಂಚರ ನಭಸವ ಮೀರಿ ಚಾರುನಿನಾದವು ಏಳುತಿದೆ
ತೇಜೋಯಾಮವನೇರಿದ ಜೀವನ ಮೂಡಣದಲ್ಲಿ ಮೂಡುತಿದೆ
ಕೋಕಿಲ ವೀಣಾನಾದವ ನುಡಿಸುತ ಸೃಷ್ಟಿಯು ಭೂಪದಿ ಹಾಡುತಿದೆ
ಕೆಂಬಿಸಿಲಿನ ಬಿಸಿ ಬೇಗೆಯ ನಡುವೆಯು ಮಾಮರ ಚಾಮರ ಬೀಸುತಿದೆ
ಬಯಲಲಿ ಮೇಯುತ ದಣಿದಾ ದನವದು ತಂಗೊಳದಲ್ಲಿ ಈಸುತಿದೆ
ಹಾಲುಗಾಳು ಮೈತುಂಬಿಸಿಕೊಂಡ ಜೋಳದ ತೆನೆಗಳು ಕುಣಿಯತಿವೆ
ಅಲ್ಲಿ ಇಲ್ಲಿ ತುಸುನಿಂತ ನೀರಿನಲಿ ಹಕ್ಕಿ ಬಾಯಿರಿಸಿ ತಣಿಯುತಿವೆ
ಸುಂದರ ಚಿಗುರಿನ ಹಂದರಿನಡಿಯಲಿ ಹಂಗಗಳೆರಡು ಉಲಿಯುತಿವೆ
ಸೃಷ್ಠಿಯ ಸಿಂಗರದಾಟವ ನೋಡುತ ಸಿಂಗರದಾಟದಿ ನಲಿಯುತಿವೆ
ಕ್ಷಣಗಳು ಹುಟ್ಟುವ, ಉರುಳುವ, ಕಳೆಯುವ ಪ್ರಗಮನ ಹೊಸತನ ತರುತಲಿದೆ
ಬನ್ನಿರಿ ಬನ್ನಿರಿ ಸಿಹಿಯನು ತನ್ನಿರಿ ನವ ಯುಗದಾದಿಯು ಬರುತಲಿದೆ
ಜಾನಕಿರಾಮಹಕ್ಕಿಗಳಿಂಚರ ನಭಸವ ಮೀರಿ ಚಾರುನಿನಾದವು ಏಳುತಿದೆ
ತೇಜೋಯಾಮವನೇರಿದ ಜೀವನ ಮೂಡಣದಲ್ಲಿ ಮೂಡುತಿದೆ
ಕೋಕಿಲ ವೀಣಾನಾದವ ನುಡಿಸುತ ಸೃಷ್ಟಿಯು ಭೂಪದಿ ಹಾಡುತಿದೆ
ಕೆಂಬಿಸಿಲಿನ ಬಿಸಿ ಬೇಗೆಯ ನಡುವೆಯು ಮಾಮರ ಚಾಮರ ಬೀಸುತಿದೆ
ಬಯಲಲಿ ಮೇಯುತ ದಣಿದಾ ದನವದು ತಂಗೊಳದಲ್ಲಿ ಈಸುತಿದೆ
ಹಾಲುಗಾಳು ಮೈತುಂಬಿಸಿಕೊಂಡ ಜೋಳದ ತೆನೆಗಳು ಕುಣಿಯತಿವೆ
ಅಲ್ಲಿ ಇಲ್ಲಿ ತುಸುನಿಂತ ನೀರಿನಲಿ ಹಕ್ಕಿ ಬಾಯಿರಿಸಿ ತಣಿಯುತಿವೆ
ಸುಂದರ ಚಿಗುರಿನ ಹಂದರಿನಡಿಯಲಿ ಹಂಗಗಳೆರಡು ಉಲಿಯುತಿವೆ
ಸೃಷ್ಠಿಯ ಸಿಂಗರದಾಟವ ನೋಡುತ ಸಿಂಗರದಾಟದಿ ನಲಿಯುತಿವೆ
ಕ್ಷಣಗಳು ಹುಟ್ಟುವ, ಉರುಳುವ, ಕಳೆಯುವ ಪ್ರಗಮನ ಹೊಸತನ ತರುತಲಿದೆ
ಬನ್ನಿರಿ ಬನ್ನಿರಿ ಸಿಹಿಯನು ತನ್ನಿರಿ ನವ ಯುಗದಾದಿಯು ಬರುತಲಿದೆ
( ಸೀತಾರಾಮ ಸುಧೀರ ಕಟ್ಟಿ)

No comments:
Post a Comment