Monday, February 04, 2019

GAYATRI MANTRA I ( ಗಾಯತ್ರಿ ಮಂತ್ರದ ವ್ಯಾಪ್ತಿ )

                                                                                                                        ಸಂಗ್ರಹಿತ 
GAYATRI MANTRA ( ಗಾಯತ್ರಿ ಮಂತ್ರದ ವ್ಯಾಪ್ತಿ ) 

ಗಾಯತ್ರಿ ಮಂತ್ರದಿಂದ ದೇಹದ ನಾಡಿಗಳು ಶುದ್ಧಿಯಾಗುವ ಬಗೆ
ಗಾಯತ್ರಿ ಮಂತ್ರದ ಜಪದ ಸಂಖ್ಯೆ ಎಷ್ಟು? 
ಈ ಪ್ರಶ್ನೆಗೆ ಕರಾರುವಾಕ್ಕಾದ ಗಣಿತ ಇದೆ. ಗಾಯತ್ರಿ ಮಂತ್ರನ್ನು ದಿನದಲ್ಲಿ 
ಮೂರು ಕಾಲ (ತ್ರಿಸಂಧ್ಯಾ) ದಲ್ಲಿ ಜಪಿಸುತ್ತಾರೆ.. 
(ಪ್ರಾತಃ , ಮಧ್ಯಾಹ್ನ ಮತ್ತು ಸಾಯಂಕಾಲ…)
ಒಂದು ಬಾರಿ ಹೆಚ್ಚೆಂದರೆ 1000 ಗಾಯತ್ರಿ ಮಾಡಬೇಕು. ಆಗ ದಿನಕ್ಕೆ 3000 
ಆಯಿತು  ಇದಕ್ಕಿಂತ ಹೆಚ್ಚಿಗೆ ಮಾಡಬಾರದು..
ಏಕೆಂದರೆ ಆಯುರ್ವೇದ ಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿರುವ ಪ್ರಧಾನ 
ನಾಡಿಗಳು 72000 (ದ್ವಾಸಪ್ತತಿಸಹಸ್ರಾಣಿ ಹೃದಯಸ್ಯ ನಾಡ್ಯಃ) ಅದು ನಮ್ಮ 
ದೇಹದ ಬಲಭಾಗದಲ್ಲಿ 36000 , ಎಡಭಾಗದಲ್ಲಿ 36000 ಎಂದು 
ವಿಭಾಗಿಸಲ್ಪಟ್ಟಿದೆ. ಆದ್ದರಿಂದಲೇ ನಮ್ಮ ಪ್ರಾಚೀನರು ಆದೇಶ ಮಾಡಿದರು 
ಒಂದು ದಿನದಲ್ಲಿ ನಾವು ಮಾಡತಕ್ಕ ಗಾಯತ್ರಿ ಮಂತ್ರ ಜಪ, ಒಟ್ಟು ಅಕ್ಷರ 
ಸಂಖ್ಯೆಯಲ್ಲಿ ಈ ಸಂಖ್ಯೆಯನ್ನು (72000) ಮೀರಬಾರದು ಎಂದು…
ಆದ್ದರಿಂದ ಗಾಯತ್ರಿ ಸಂಖ್ಯೆ 24 ಅಕ್ಷರ * 3000ಜಪ ದಿನಕ್ಕೆ =72000 ಅಕ್ಷರ ಜಪವಾಯಿತು…!
ವೇದದಲ್ಲಿ ಒಂದು ಮಾತಿದೆ…
||  ವೇದಾಕ್ಷರಾಣಿ ಯಾವಂತಿ ಪಠಿತಾನಿ ದ್ವಿಜಾದಿಭಿಃ |
।। ತಾವಂತಿ ಹರಿನಾಮಾನಿ ಪಠಿತಾನಿ ನಸಂಶಯಃ |      ಅಂತ…
ಹಾಗೆ ಗಾಯತ್ರಿಯ ಒಂದೊಂದು ಅಕ್ಷರ ಒಂದೊಂದು ಹರಿ ನಾಮ ಆದಾಗ ಅದು ನಮ್ಮ ದೇಹದ 72000 ಪ್ರಧಾನ 
ನಾಡಿಗಳಲ್ಲಿರುವ ಭಗವಂತನ 72000 ರೂಪಗಳ ಅನುಸಂಧಾನವೂ ಆಯಿತು…!
ನಮ್ಮ ಗಾಯತ್ರಿ ಜಪದಿಂದ ಉತ್ಪತ್ತಿಯಾದ ತೇಜಸ್ಸು ಆ 72000 ನಾಡಿಗಳ ಶುದ್ಧಿಗೆ ಕಾರಣವಾಗಿ ಸುಗಮ ರಕ್ತ ಸಂಚಾರಕ್ಕೆ 
ಅನುವು ಮಾಡಿಕೊಟ್ಟಿತು ಅದು ಶಕ್ತಿ ರೂಪವಾಗಿ ನಮ್ಮಲ್ಲಿ ಕೆಲಸಮಾಡುತ್ತದೆ.. ಆದ್ದರಿಂದಲೇ ನಮ್ಮ ಜಪ ಸಂಖ್ಯೆ 72000ವನ್ನು
 ಮೀರಬಾರದು..
ಹೆಚ್ಚು ಜಪದಿಂದ ತೇಜಸ್ಸು ಹೆಚ್ಚಾಗುವುದಲ್ಲ , ಹೆಚ್ಚು ವೋಲ್ಟೇಜ್ ಸಪ್ಲೈನಿಂದ ಬಲ್ಬು ಬರ್ನಾದಂತೆ…!
ಆದ್ದರಿಂದಲೇ ಹಿಂದಿನವರು ಗಾಯತ್ರಿಗೆ ಇಷ್ಟು ಮಹತ್ವ ಕೊಟ್ಟದ್ದು…
ಓಂಕಾರದ ಮೂರು ಅಕ್ಷರಗಳೇ (ಅ, ಉ, ಮ) ಮೂರು ವ್ಯಾಹೃತಿಗಳಾದವು (ಭೂಃ ಭುವಃ ಸುವಃ) 
ಮೂರು ವ್ಯಾಹೃತಿಗಳು ಬೆಳೆದು ಮೂರು ಪಾದದ ಗಾಯತ್ರಿಯಾಯಿತು… 
ಈ ಮೂರು ಪಾದದ ಗಾಯತ್ರಿಯೇ ಬೆಳೆದು ಮೂರು ವರ್ಗದ ಪುರುಷಸೂಕ್ತ ಆಯಿತು
… ಮೂರು ವರ್ಗದ ಪುರುಷಸೂಕ್ತ ಬೆಳೆದು ಮೂರು ವೇದಗಳಾದವು… ಆದ್ದರಿಂದಲೇ ಗಾಯತ್ರಿಯನ್ನು “ವೇದಮಾತಾ” 
ಅಂತಲೂ ಕರೆಯುತ್ತಾರೆ…!! 

ಮೊದಲು ಏಂಟು ವರ್ಷಕ್ಕೆ ಮಕ್ಕಳಿಗೆ ಬ್ರಹ್ಮೋಪದೇಶ ಮಾಡಬೇಕು. ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಏನು ಸಂಸ್ಕಾರ ಕೊಡಬೇಕೊ ಅದನ್ನು ಕೊಡಬೇಕು.... ಮಕ್ಕಳಿಗೆ ಸರಿ ವಯಸ್ಸಿಗೆ ಉಪನಯನ ಮಾಡುವದರಿಂದ ಮತ್ತು ಪ್ರತಿ ದಿನ ಗಾಯತ್ರೀ ಮಂತ್ರ ಪಠಣೆಯಿಂದ ದೈಹಿಕ ,ಮಾನಸಿಕ ವಿದ್ಯೆ ಬುದ್ಧಿ ಏಲ್ಲದರಲ್ಲೂ ತೆಜಸ್ಸನ್ನು ಪಡಿತಾರೆ.
ವಿಶ್ವಾಮಿತ್ರ ಮಹರ್ಷಿಗಳ ವಿರಚಿತ ಈ ಮಂತ್ರ ಹೇಳುವಂತೆ 
ನಾಲ್ಕು ವೇದಗಳು ಹುಡುಕಿದರೂ ಈ ಮಂತ್ರಕ್ಕೆ ಸರಿ ಹೊಂದುವ ಬೇರೆ ಮಂತ್ರವಿಲ್ಲ , ಸಮಸ್ತ ವೇದಗಳು , ಯಜ್ಞಗಳೂ , ದಾನಗಳೂ, ವಿವಿಧ ತಪಸ್ಸುಗಳು ದಾನಗಳು ಸೇರಿಸಿದರೂ ಈ ಗಾಯತ್ರೀ ಮಂತ್ರದ ಮಹಾತ್ಮೆಗೆ ಸಮವಾಗಲಾರದು..
ಸ್ವತಃ ಬ್ರಹ್ಮನೇ ಗಾಯತ್ರೀ ಮಂತ್ರದ ಮಹಾತ್ಮೆ ಯನ್ನು ಹೀಗೆ ವರ್ಣಿಸಿದ್ದಾನೆ...
ಗಾಯತ್ರ್ಯಾಃ ನ ಪರಂಜಪ್ಯಂ 
ಗಾಯತ್ರ್ಯಾಃ ನ ಪರಂ ತಪಃ l
ಗಾಯತ್ರ್ಯಾಃ ನ ಪರಂ ದ್ಯೇಯಂ 
ಗಾಯತ್ರ್ಯಾಃ ನ ಪರಂ ಹುತಃ ll
ಅರ್ಥಾತ
ಗಾಯತ್ರೀ ಮಂತ್ರ ಜಪಕ್ಕಿಂತಲೂ ಹೆಚ್ಚಿನ ಮಂತ್ರ ಜಪ ಮತ್ತೊಂದಿಲ್ಲ, ಅದಕ್ಕಿಂತಲೂ ತಪಸ್ಸೂ ಬೇರೆ ಇಲ್ಲ . ಆ ಮಂತ್ರಕ್ಕಿಂತಲೂ ಧ್ಯೇಯವಾದುದು ಇನ್ನಿಲ್ಲ . ಗಾಯತ್ರೀ ಹೋಮಕ್ಕಿಂತಲೂ ಹಿರಿದಾದ ಬೇರೆ ಹೋಮವೇ ಇಲ್ಲ ..
ಹಾಗಾದರೆ ಈ ಗಾಯತ್ರೀ ಮಂತ್ರದ ಮಹತ್ವ ಏನು ?
ಗಾಯತ್ರೀ ಮಹಾ ಮಂತ್ರ....
ಓಂ ಭೂರ್ಭುವಸ್ಸುವಃ 
ತತ್ಸುವಿತುರ್ವರೇಣ್ಯಂ 
ಭರ್ಗೋ ದೇವಸ್ಯ ಧೀಮಹಿ 
ಧೀಯೋ ಯೋ ನಃ ಪ್ರಚೋದಯಾತ್
ಇದು ಗಾಯತ್ರೀ ಮಹಾ ಮಂತ್ರ.....ಈ ಮಹಾಮಂತ್ರದಲ್ಲಿ ಮಹಾಶಕ್ತಿ ಅಡಗಿದೆ . ಹೇಗೆ ಅಂದರೆ ಆ ಮಂತ್ರದ ಪ್ರತಿಯೊಂದು ಅಕ್ಷರವೂ ಒಂದೊಂದು ದೇವರ ಬೀಜಾಕ್ಷರವೇ ಆಗಿದೆ . ಈ ಇಪ್ಪತ್ತನಾಲ್ಕು ಅಕ್ಷರಗಳ ಸಮಷ್ಟೀ ಗಾಯತ್ರೀ ಮಂತ್ರ ದಲ್ಲಿ ಗಾಯತ್ರೀ ,ಸಾವಿತ್ರೀ , ಸರಸ್ವತೀ , ಮತ್ತು ಸಂದ್ಯಾ ದೇವತೆಗಳಲ್ಲದೇ ಗಣಪತಿ ಯಿಂದ ಆರಂಭಿಸಿ ತುಲಸಿವರೆಗೆ ಇಪ್ಪತ್ತನಾಲ್ಕು ಪ್ರಮುಖ ದೇವತೆಗಳ ಮತ್ತು ದೈವಿ ಶಕ್ತಿಯ ಉಪಾಸನೆ ಇದೆ. ಆದುದರಿಂದ ಶ್ರದ್ಧಾ ಭಕ್ತಿಯಿಂದ ಮಾಡಿದ ಗಾಯತ್ರೀ ಜಪದ ಪರಿಣಾಮ ವಾಗಿ ಸಾಧಕನಿಗೆ ಇಪ್ಪತ್ತನಾಲ್ಕು ದೇವತೆಗಳನ್ನು ಆರಾಧಿಸಿದ ಶಕ್ತಿಯು ಸಮನ್ವಯವಾಗುತ್ತದೆ. ಗಾಯತ್ರೀ ಮಂತ್ರದ ಪ್ರತಿಯೊಂದು ಅಕ್ಷರವನ್ನು ಬಿಡಿಸಿ ನೋಡಿದಾಗ...‌
1) ತ 2) ತ್ಸ 3) ವಿ 4 )ತು 5 ರ್ವ 6 ರೇ 7 ಣಿ 8 ಯಂ 9 ಭ 10 ರ್ಗೋ 11 ದೇ 12 ವ 13 ಸ್ಯ 14 ಧೀ 15 ಮ 16 ಹೀ 17 ಧೀ 18 ಯೋ 19 ಯೋ 20 ನಃ 21 ಪ್ರ 22ಚೋ 23 ದ 24 ಯಾತ್....
ಹಾಗಾದರೆ ಈ ಇಪ್ಪತ್ತನಾಲ್ಕು ಅಕ್ಷಗಳಲ್ಲಿ ಇಪ್ಪತ್ತನಾಲ್ಕು ದೇವತೆಗಳ ಶಕ್ತಿ ಹೇಗೆ ಅಂತ ಬಿಡಿಸಿ ಹೇಳುತ್ತೇನೆ ಕೇಳಿ
ಮೊದಲನೇ ಅಕ್ಷರ  ತ ಕಾರ ಇದು ಅಂಧಕಾರವನ್ನು ತೊಲಗಿಸುತ್ತದೆ. ಇದು ಗಣೇಶ ಗಾಯತ್ರೀ..
ಓಂ ಏಕದಂತಾಯ_ವಿದ್ಮಹೇ_ವಕ್ರತುಂಡಾಯ_ಧಿಮಹೀ_ತನ್ನೋದಂತೀ_ಪ್ರಚೋದಯಾತ್
ಎರಡನೇಯ ಅಕ್ಷರ *ತ್ಸ * ಇದು ಉಪಪಾತಕವನ್ನು ಹೋಗಲಾಡಿಸುತ್ತದೆ. ಇದು ನೃಸಿಂಹ ಗಾಯತ್ರೀ
ಓಂ_ಉಗ್ರನೃಸಿಂಹಾಯ_ವಿದ್ಮಹೇ_ವಜ್ರನಖಾಯ____ಧೀಮಹಿ_ತನ್ನೋ_ನೃಸಿಂಹ_ಪ್ರಚೋದಯಾತ್
ಮೂರನೇಯ ಅಕ್ಷರ *ವಿ * ಇದು ವಿಕಾರ ವಿಪತ್ತನ್ನು ಹೋಗಲಾಡಿಸುತ್ತದೆ. ವಿಷ್ಣು ಗಾಯತ್ರೀ
ಓಂ_ನಾರಾಯಣಾಯ_ವಿದ್ಮಹೇ_ವಾಸುದೇವಾಯ___ಧೀಮಹಿ_ತನ್ನೋ_ವಿಷ್ಣುಃ_ಪ್ರಚೋದಯಾತ್
ನಾಲ್ಕು * ತು * ಕಾರ ದುಷ್ಟ ಗ್ರಹ ದೋಷವನ್ನು ಹೋಗಲಾಡಿಸುತ್ತದೆ. ಶಿವ ಗಾಯತ್ರೀ
ತತ್ವುರುಷಾಯ_ವಿದ್ಮಹೇ_ಮಹಾದೇವಾಯ_ಧೀಮಹಿ_ತನ್ನೋ_ರುದ್ರಃ_ಪ್ರಚೋದಯಾತ್
ಐದು ಅಕ್ಷರ * ರ್ವ* ಕಾರ ಇದು ಭ್ರೂಣ ಹತ್ಯಾ ದೋಷ ಪರಿಹರಿಸುತ್ತದೆ. ಇದು ಕೃಷ್ಣ ಗಾಯತ್ರೀ.
ದೇವಕಿನಂದಾಯ_ವಿದ್ಮಹೇ_ವಸುದೇವಾಯ_ಧೀಮಹಿ_ತನ್ನೋ_ಕೃಷ್ಣ_ಪ್ರಚೋದಯಾತ್
ಆರು ಅಕ್ಷರ * ರೇ * ಕಾರ ಆಗಮ್ಯಾಗಮನ ದೋಷ ಪರಿಹಾರ ಇದು ರಾಧಾ ಗಾಯತ್ರೀ
ಓಂ_ವೃಷಭಾನುಜಾಯ_ವಿದ್ಮಹೇ_ಕೃಷ್ಣಪ್ರೀಯಾಯ_ಧೀಮಹಿ_ತನ್ನೋ_ರಾಧಾ_ಪ್ರಚೋದಯಾತ್
ಏಳು ಅಕ್ಷರ * ಣಿ * ಕಾರ ಅಭಕ್ಷ್ಯಾಭಕ್ಷಣ ದೋಷ ಪರಿಹಾರ ... ಇದು ಲಕ್ಷೀ ಗಾಯತ್ರೀ.
ಓಂ_ಮಹಾಲಕ್ಷೀ_ಚ_ವಿದ್ಮಹೇ_ವಿಷ್ಣುಪತ್ನಿ_ಚ_ಧೀಮಹಿ_ತನ್ನೋ_ಲಕ್ಷೀ_ಪ್ರಚೋದಯಾತ್
ಏಂಟು ಅಕ್ಷರ * ಯಂ.* ಕಾರ ಇದು.ಬ್ರಹ್ಮ ಹತ್ಯಾಪಾತಕಗಳನ್ನು ಹೋಗಲಾಡಿಸುತ್ತದೆ
ಇದು ಅಗ್ನಿ ಗಾಯತ್ರೀ
ಓಂ_ಮಹಾಜ್ವಾಲಾಯ_ವಿದ್ಮಹೇ_ಅಗ್ನಿಜ್ವಾಲಾಯಚ ಧೀಮಹಿ_ತನ್ನೋ ಅಗ್ನಿ_ಪ್ರಚೋದಯಾತ
ಒಂಬತ್ತು ಅಕ್ಷರ * ಭ *ಕಾರ ಇದು ಪುರುಷ ಹತ್ಯಾಪಾತಕವನ್ನು ನಾಶಮಾಡುತ್ತದೆ..ಇದು ಇಂದ್ರ ಗಾಯತ್ರೀ
ಓಂ_ಸಹಸ್ರನೇತ್ರಾಯ_ವಿದ್ಮಹೇ_ವಜ್ರನಖಾಯ__ಧೀಮಹಿ_ತನ್ನೋ_ಇಂದ್ರಃ_ಪ್ರಚೋದಯಾತ್
ಹತ್ತು ಅಕ್ಷರ *ರ್ಗೋ*ಕಾರ ಗೋಹತ್ಯಾ ದೋಷದಿಂದ ವಿಮುಕ್ತಿಗೊಳಿಸುತ್ತದೆ. ಇದು ಸರಸ್ವತೀ ಗಾಯತ್ರೀ
ಓಂ_ಸರಸ್ವತ್ತೈ_ಚ_ವಿದ್ಮಹೇ_ಬ್ರಹ್ಮಪತ್ನಿ_ಚ_ಧೀಮಹಿ ತನ್ನೋ_ವಾಣಿ_ಪ್ರಚೋದಯಾತ್
ಹನ್ನೊಂದು * ದೇ * ಕಾರ ಇದು ಸ್ತ್ರೀ ಹತ್ಯಾದೋಷವನ್ನು ನಿವಾರಿಸುತ್ತದೆ. ಇದು ದುರ್ಗಾ ಗಾಯತ್ರೀ..
ಓಂ_ಗಿರಿಜಾಯೈಚ ವಿದ್ಮಹೇ_ಶಿವಪ್ರೀಯಾಯೈಚ _ಧೀಮಹಿ_ತನ್ನೋ_ದುರ್ಗಾ_ಪ್ರಚೋದಯಾತ್
ಹನ್ನೆರಡು ಅಕ್ಷರ * ವ *ಕಾರ ಇದು ಕೂಡಾ ಸ್ತ್ರೀ ಹತ್ಯಾದೋಷವನ್ನು ಹೋಗಲಾಡಿಸುತ್ತದೆ. ಇದು ಹನುಮದ್ಗಾಯತ್ರೀ
ಓಂ_ಅಂಜನೀ ಸುತಾಯ_ವಿದ್ಮಹೇ_ವಾಯುಪುತ್ರಾಯ_ಧೀಮಹಿ_ತನ್ನೋ_ಆಂಜನೇಯ_ಪ್ರಚೋದಯಾತ್
ಹದಿಮೂರು ಅಕ್ಷರ * ಸ * ಕಾರ ಇದು ಗುರುಹತ್ಯಾ ದೋಷದಿಂದ ಪಾರುಮಾಡುತ್ತದೆ. ಇದು ಪೃಥ್ವಿ ಗಾಯತ್ರೀ
ಓಂ_ಪೃಥ್ವಿದೇವೈ ಚ ವಿದ್ಮಹೇ ಸಹಸ್ರಮೂರ್ತೈಚ ಧೀಮಹೆ_ತನ್ನೋ_ಪೃಥ್ವಿ_ಪ್ರಚೋದಯಾತ್
ಹದಿನಾಲ್ಕು ಅಕ್ಷರ *ಧೀ * ಕಾರ ಮಾತೃ ಮತ್ತು ಪಿತೃ ನಿಂದಾ ಪಾಪವನ್ನು ನಾಶಮಾಡುತ್ತದೆ...
ಇದು ಸೂರ್ಯ ಗಾಯತ್ರೀ
ಓಂಭಾಸ್ಕರಾಯವಿದ್ಮಹೇ ದಿವಾಕರಾಯಧೀಮಹಿ ತನ್ನೋಸೂರ್ಯಃ ಪ್ರಚೋದಯಾತ್
ಹದಿನೈದು ಅಕ್ಷರ * ಮ* ಕಾರ ಇದು ಪೂರ್ವ ಜನ್ಮಾರ್ಜಿತ ಪಾಪವನ್ನು ನಾಶಮಾಡುತ್ತದೆ. ಇದು ರಾಮ ಗಾಯತ್ರೀ....
ಓಂ_ದಾಶರಥ್ಯಾಯ_ವಿದ್ಮಹೇ_ಸೀತಾವಲ್ಲಭಾಯ_ಧೀಮಹಿ_ತನ್ನೋರಾಮಃ_ಪ್ರಚೋದಯಾತ್
ಹದಿನಾರು ಅಕ್ಷರ * ಹಿ* ಕಾರ ಇದು ಅಶೇಷ ಪಾಪ ಸಮೂಹವನ್ನು ನಾಶಪಡಿಸುತ್ತದೆ.ಇದು ಸೀತಾ ಗಾಯತ್ರೀ
|| ಓಂ ಜನಕನಂದಿನ್ನೈಚ ವಿದ್ಮಹೇ ಭೂಮಿಜಾಯೈ ಚ ಧೀಮಹಿ ತನ್ನೋ ಸೀತಾ ಪ್ರಚೋದಯಾತ್ ||
ಹದಿನೇಳು ಅಕ್ಷರ * ಧೀ* ಕಾರ . ಪ್ರಾಣಿ ವಧಾಪಾಪವನ್ನು ನಾಶಮಾಡುತ್ತದೆ. ಇದು ಚಂದ್ರ ಗಾಯತ್ರೀ
ಓಂ_ಕ್ಷೀರಪುತ್ರಾಯ_ವಿದ್ಮಹೇ_ಅಮೃತತತ್ವಾಯ__ಧೀಮಹಿ_ತನ್ನೋ_ಚಂದ್ರಃ_ಪ್ರಚೋದಯಾತ್
ಹದಿನೆಂಟನೇಯ ಅಕ್ಷರ * ಯೋ* ಕಾರ ಇದು ಪ್ರತಿಗ್ರಹ ಪಾಪವನ್ನು ನಾಶಮಾಡುತ್ತದೆ...ಇದು ಯಮ ಗಾಯತ್ರೀ..
ಓಂ_ಸೂರ್ಯಪುತ್ರಾಯ_ವಿದ್ಮಹೇ_ಮಹಾಕಾಲಾಯ_ಧೀಮಹಿ_ತನ್ನೋ_ಯಮಃ_ಪ್ರಚೋದಯಾತ್
ಹತ್ತೊಂಬತ್ತು ಅಕ್ಷರ * ಯೋ* ಕಾರ ಸರ್ವಪಾಪ ನಿವಾರಕ. ಇದು ಬ್ರಹ್ಮ ಗಾಯತ್ರೀ
ಓಂ_ಚತುರ್ಮುಖಾಯ_ವಿದ್ಮಹೇ_ಹಂಸರೂಢಾಯಧೀಮಹಿ_ತನ್ನೋ_ಬ್ರಹ್ಮ_ಪ್ರಚೋದಯಾತ್
ಇಪ್ಪತ್ತನೇಯ ಅಕ್ಷರ * ನ *ಕಾರ , ಇದರಿಂದ ಈಶ್ವರ ಪ್ರಾಪ್ತಿ ಇದು ವರುಣ ಗಾಯತ್ರೀ
ಓಂ_ಜಲಬಿಂಬಾಯ_ವಿದ್ಮಹೇ_ನೀಲಪುರುಷಾಯ ಧೀಮಹಿ_ತನ್ನೋ_ವರುಣ_ಪ್ರಚೋದಯಾತ್
ಇಪ್ಪತ್ತೊಂದು ಅಕ್ಷರ * ಪ್ರ * ಕಾರ .ವಿಷ್ಣುಲೋಕ ಪ್ರಾಪ್ತಿಯಾಗುತ್ತದೆ. ಇದು ನಾರಾಯಣ ಗಾಯತ್ರೀ
ಓಂ_ನಾರಾಯಣಾಯ_ವಿದ್ಮಹೇ_ವಾಸುದೇವಾಯ ಧೀಮಹಿ_ತನ್ನೋ_ನಾರಾಯಣ_ಪ್ರಚೋದಯಾತ್
ಇಪ್ಪತ್ತೇರಡು ಅಕ್ಷರ *ಚೋ* ಕಾರ
ಓಂ_ವಾಗೀಶ್ವರಾಯ_ವಿದ್ಮಹೇ_ಹಯಗ್ರೀವಾಯ_ಧೀಮಹಿ_ತನ್ನೋ_ಹಯಗ್ರೀವಃ_ಪ್ರಚೋದಯಾತ್
ಇಪ್ಪತ್ತಮೂರು ಅಕ್ಷರ " ದ " ಕಾರ ಬ್ರಹ್ಮ ಪದ ಪ್ರಾಪ್ತಿಗೆ ಸಹಾಯಕ. ಇದು ಹಂಸ ಗಾಯತ್ರೀ
ಓಂ ಹಂಸ ಹಂಸಾಯ ದ್ಮಹೇ ಪರಮ ಹಂಸಾಯ ಧೀಮಹಿ ತನ್ನೋ ಶ್ರೀ ಗುರು ಮಧ್ವಃ ಪ್ರಚೋದಯಾತ್
ಇಪ್ಪತ್ತನಾಲ್ಕು ಅಕ್ಷರ " ಯಾತ್" ಕಾರ ತ್ರಿಮೂರ್ತಿಗಳ ಪ್ರಸಾರ ಸಿಧ್ದಿಯಾಗಲು ಇದು ಉಪಯುಕ್ತ . ಇದು ತುಲಸೀ ಗಾಯತ್ರೀ.‌‌‌....
|| ಓಂ ತುಲಸ್ಮೈ ಚ ವಿದ್ಮಹೇ ವಿಷ್ಣುಪ್ರೀಯಾಯೈಚ ಧೀಮಹಿ ತನ್ನೋ ಬೃಂದಾ ಪ್ರಚೋದಯಾತ್ ||
ಇವು ಇಪ್ಪತ್ತನಾಲ್ಕು ಅಕ್ಷರ ಗಾಯತ್ರೀ ಮಂತ್ರದಲ್ಲಿ ಇಡೀ ದೇವ ಸಮೂಹವನ್ನೇ ಆರಾದಿಸಿದ ಪುಣ್ಯ ಪ್ರಾಪ್ತಿ ಈ ಒಂದು ಗಾಯತ್ರೀ ಮಂತ್ರದಿಂದ ಇಪ್ಪತ್ತನಾಲ್ಕು ದೇವತೆಗಳು ಅನುಗ್ರಹಿಸುವ ಶಕ್ತಿ ಯ ಪ್ರಾಪ್ತಿ ಗಾಯತ್ರೀ ಮಂತ್ರ ಜಪ ಮಾಡುವವನಿಗೆ ಲಬ್ಯ ವಾಗುತ್ತದೆ.....
ಇನ್ನು ಸಂದ್ಯಾವಂದನೆ ಸಮಯದ ಬಗ್ಗೆ ತಿಳಿಸಿ ಕೊಡುತ್ತೇನೆ
ಸಂಧ್ಯಾವಂದನೆ ಸಮಯ ಮತ್ತು ಮಹತ್ವ.....
ಶ್ಲೋಕ ll ಉತ್ತಮಾ ತಾರಕೋಪೇತಾ ಮಧ್ಯಮಾಲುಪ್ತತಾರಕಾಃ l
ಅಧಮಾ ಸೂರ್ಯಸಹಿತ ಪ್ರಾತಃ ಸಂಧ್ಯಾ ತ್ರಿಧಾಮತಾ ll ..
.ಅಂದರೆ ಪ್ರಾತಃಕಾಲದಲ್ಲಿ ಅರುಣೋದಯ ಮೊದಲು ನಕ್ಷತ್ರ ಗಳಿರುವಾಗಲೇ ಸಂಧ್ಯಾವಂದನೆ ಪ್ರಾರಂಭಮಾಡಿ ಸುರ್ಯೋದಯವಾಗುವವರೆಗೆ ಮುಗಿಸುವದು ಉತ್ತಮ ಪರ್ಯಾಯ . "ಸಂಧೌಭವಾಸಂಧ್ಯಾ" ಎಂಬ ಅವಯವಾರ್ಥದ ಪ್ರಕಾರ ‌ಸಂಧಿ ಕಾಲದಲ್ಲಿ ಉತ್ಪನ್ನವಾಗುವ ಪರಮೇಶ್ವರಿ ಶಕ್ತಿಯು "ಸಂಧ್ಯಾ"ಎನಿಸಿಕೊಳ್ಳುವದು. ಈ ಶಕ್ತಿಗೆ ವಂದನೆ ಮಾಡುವದಕ್ಕೆ ಸಂಧ್ಯಾವಂದನೆ ಎನ್ನುವರು.ಬೆಳಗಿನ ಝಾವ ನಾಲ್ಕು ಗಂಟೆಗಳ ಕಾಲ "ಸತ್ವಗುಣ"ಎನಿಸಿಕೊಳ್ಳುವದು. ಈ ಕಾಲದಲ್ಲಿ ನಕ್ಷತ್ರಗಳು ಮುಳುಗುವದರೊಳಗಾಗಿ ಪ್ರಾತಃಸಂಧ್ಯಾವಂದನೆಯನ್ನು ಮಾಡುವದು ಉತ್ತಮ. ನಕ್ಷತ್ರಗಳು ಮುಳುಗಿ ಸೂರ್ಯನು ಉದಯಿಸುವದರೊಳಗಾಗಿ ಸಂಧ್ಯಾವಂದನೆ ಯನ್ನು ಪುರೈಸುವದು ಮಧ್ಯಮ. ಸೂರ್ಯನು ಹುಟ್ಟಿದ ಮೇಲೆ ಸಂಧ್ಯಾವಂದನೆ ಯನ್ನು ಸತ್ವಗುಣಕಾಲವು ಮುಗಿಯುವದರೊಳಗಾಗಿ ಮುಗಿಸುವದು ಅಧಮ ಪರ್ಯಾಯ..
ಮಧ್ಯಾಹ್ನಿಕ ಸಂಧ್ಯಾಕಾಲ
ಸೂರ್ಯನು ನೆತ್ತಿಯ ಮೇಲೆ ಇರುವ ಕಾಲವೇ ಮಧ್ಯಾಹ್ನಿಕಕ್ಕೆ ಮುಖ್ಯವಾದ ಕಾಲ .ಇದಕ್ಕಿಂತ ಮುಂಚಿತವಾಗಲೀ ಅಥವಾ ಅನಂತರ ವೇ ಆಗಲಿ ಶ್ರೇಷ್ಠವಲ್ಲ...
ಸಾಯಂ ಸಾಂಧ್ಯಾಕಾಲ
ಶ್ಲೋಕ ll ಉತ್ತಮ ಸೂರ್ಯ ಸಹಿತಾ ಮಧ್ಯಮಾಲುಪ್ತಸೂರ್ಯಕಾ l
ಅಧಮಾ ತಾರಕೋಪೇತಾ ಸಾಯಂಸಂಧ್ಯಾ ತ್ರಿಧಾಮತಾll
ಅಂದರೆ ಸೂರ್ಯನು ಅರ್ದ ಮುಳುಗುತ್ತಿರುವಾಗಲೇ ಸಂಧ್ಯಾವಂದನೆ ಮಾಡುವುದು ಉತ್ತಮ. ಸೂರ್ಯನು ಅಸ್ತಮಿತನಾಗಿ ನಕ್ಷತ್ರಗಳು ಹುಟ್ಟುವದಕ್ಕೆ ಮುಂಚೆಯೇ ಸಂಧ್ಯಾವಂದನೆ ಮಾಡುವದು ಮಧ್ಯಮ. ನಕ್ಷತ್ರಗಳು ಹುಟ್ಟಿದ ಮೇಲೆ ಮಾಡುವದು ಅಧಮ. ಮಧ್ಯಾಹ್ನ ನಾಲ್ಕು ಘಂಟೆ ಯಿಂದ ರಾತ್ರಿ ಎಂಟು ಘಂಟೆಯವರೆಗೆ *ಸಾತ್ವಿಕ ಕಾಲ * ಎನಿಸಿಕೊಳ್ಳುವದು. ನಿರ್ದಿಷ್ಟ ಕಾಲದಲ್ಲಿ ಪ್ರಾತಃ ಸಂಧ್ಯಾವಂದನೆ ಯನ್ನಾಗಲಿ, ಸಾಯಂಸಂಧ್ಯಾವಂದನೆಯನ್ನಾಗಲಿ ಸತ್ವಗುಣಕಾಲದ ಒಳಗಾಗಿ ಮಾಡಲು ಅಶಕ್ತರಾದ ಪಕ್ಷದಲ್ಲಿ ಕರ್ಮವನ್ನು ಖಂಡಿತ ವಾಗಿ ಬಿಡದೆ ಅಧಮ ಪಕ್ಷವಾದ ಸತ್ವಗುಣಕಾಲಾವಕಾಶ ನಂತರವಾದರೂ ಆಚರಿಸಬೇಕು. ಸಂಧ್ಯಾಕರ್ಮವನ್ನು ಆಚರಿಸದೆ ಇತರ ಯಾವ ದೇವತಾ ಪೂಜೆಯನ್ನಾಗಲೀ ,ದಾನ, ಧರ್ಮ ,ಪರೋಪಕಾರಗಳನ್ನಾಗಲಿ ಮಾಡಿದರೂ ಸಾರ್ಥಕವಾಗುವದಿಲ್ಲ . ಇಹಪರಗಳೆರಡಕ್ಕೂ ಸಾಧನವಾದ ಸಂಧ್ಯಾಕರ್ಮವನ್ನು ಪ್ರತಿ ನಿತ್ಯವೂ ಅವಶ್ಯಕವಾಗಿ ಆಚರಿಸಬೇಕು.

























































































































































No comments:

Post a Comment