Friday, September 09, 2022

*DADHI VAAMANA AVATAARA ತ್ರಿವಿಕ್ರಮ ವಾಮನ ಅವತಾರ

Please listen video of this post on YouTube channel....click here ...
   ವಾಮನ ಅವತಾರ, ಸ್ತೋತ್ರಂ
(ಜಯಂತಿ - ಭಾದ್ರಪದ ಶುದ್ಧ ದ್ವಾದಶಿ)                                                         

     
ಪರಮಾತ್ಮನ ದಶವಾತರಾಗಳಲ್ಲಿ ಅತ್ಯಂತ ವಿಶಿಷ್ಟವಾದ ಅವತಾರ ಅದುವೇ ವಾಮನ ಅವತಾರ. ಒಂದೇ ಅವತಾರದಲ್ಲಿ ಎರಡು ರೂಪ ತೋರಿಸಿದ ಅವತಾರ ಅದುವೇ ವಾಮನಾವತಾರ. ಈ ವಾಮನ ಅವತಾರ ಎರಡನೇ ಮಹಾಯುಗ ಅಥವಾ ತ್ರೇತಾಯುಗದ ಪೂರ್ವಭಾಗದಲ್ಲಿ ಆದ ಅವತಾರ ಎಂದು ಪುರಾಣಗಳಲ್ಲಿ ನೋಡಬಹುದು.
ಭಗವಂತನ ಅನಂತ ಅವತಾರಗಳಲ್ಲಿ ದಶಾವತಾರಗಳು ಪ್ರಮುಖ ಅದರಲ್ಲೂ ಮತ್ಸ್ಯ ಕೂರ್ಮ ವರಾಹ ನರಸಿಂಹ ನಂತರದ ಮಾನವ ರೂಪದ ಪೂರ್ಣಾವತಾರ ವಾಮಾನವತಾರ. ಪರಮಾತ್ಮ ಬಾಲ ವಟುವಾಗಿ ಬಂದು ಮೂರಡಿ ಪಾದದಷ್ಟು ಭೂಮಿ ಬೇಡಿ ಕಡೆಗೆ ಮೂರುಲೋಕವನ್ನೇ ಅಳೆದು  ತನ್ನ ದಿವ್ಯವಾದ ಲೀಲೆಯನ್ನೇ ತೋರಿದ ಅವತಾರ ವಾಮಾನವಾತಾರ.
ವಾಮನವತಾರದ ಹಿನ್ನೆಲೆ
ಶ್ರೀಮದ್ಭಾಗವತ ಮತ್ತು ವಾಮನಪುರಾಣದಲ್ಲಿ ಆಧಾರವಾಗಿ ತಿಳಿಯುವಂತೆ ಬಲಿ ರಾಜನು ಅದ್ಭುತವಾದ ಏಕಾಗ್ರತೆ, ಪುಣ್ಯ, ಗುರು ಭಕ್ತಿ ಹಾಗೂ ಗುರುಗಳ ಆಜ್ಞಾಪಾಲನೆ ಇವುಗಳಿಂದ ಪುನೀತನಾಗಿದ್ದನು.  ಗುರುಗಳ ಮೇಲೆ ಇರುವ ಶ್ರದ್ಧಾ ಭಕ್ತಿಯನ್ನು ಮೆಚ್ಚಿದ ಶುಕ್ರಾಚಾರ್ಯರು ಬಲಿ ರಾಜನಿಗೆ ಸದಾಕಾಲ ಹೂ ಬಿಡುವಂತಹ ಹಾರ ಹಾಗೂ ಶಂಖವನ್ನು ಉಡುಗೊರೆಯನ್ನಾಗಿ ನೀಡಿದರು. ಶುಕ್ರಾಚಾರ್ಯರ ಆಶೀರ್ವಾದದಿಂದ ಅದ್ಭುತ ಶಕ್ತಿಯನ್ನು ಪಡೆದುಕೊಂಡನು. ಈ ಹಿಂದೆ ಸಮುದ್ರ ಮಂಥನದಲ್ಲಿ ಅಮೃತವನ್ನು ಪಡೆದ ದೇವತೆಗಳು, ಅಮೃತವನ್ನು ಕುಡಿದು ಅಮರರಾಗಿದ್ದರು. ನಂತರ ಅಮರರಾದ ದೇವತೆಗಳು ಅಸುರರ ರಾಜನಾದ ವಿರೋಚನನ ಸೈನ್ಯದ ಮೇಲೆ ದಾಳಿ ಮಾಡಿದರು. ನಂತರ ಇಂದ್ರ ದೇವನು ವಿರೋಚನನ್ನು ಕೊಂದಿದ್ದನು. 
ಅದನ್ನು ನೆನಪಿನಲ್ಲಿ ಇಟ್ಟುಕೊಂಡ ಬಲಿ ರಾಜನು ದೇವತೆಗಳ ವಿರುದ್ಧ ಹೋರಾಡಿದನು. ಆಗ ದೇವತೆಗಳನ್ನು ಬಲಿ ರಾಜನು ಸುಲಭವಾಗಿ ಸೋಲಿಸಿ, ಸ್ವರ್ಗವನ್ನು ಗೆದ್ದುಕೊಂಡನು. ಇಂದ್ರನು ಆಚಾರ್ಯ ಬಹಸ್ಪತಿಯ ಸಹಾಯದಿಂದ ಯುದ್ಧಭೂಮಿಯನ್ನು ಬಿಟ್ಟು ಓಡಿಹೋದನು. ಶುಕ್ರಾಚಾರ್ಯರು ಬಲಿ ರಾಜನಿಗೆ ಅಶ್ವಮೇಧ  ಯಜ್ಞಮಾಡಲು ಆದೇಶಿಸಿದ್ದರು. ಆ ಯಾಗ ಮಾಡುವಾಗ ಬ್ರಾಹ್ಮಣರಿಗೆ ನಿಯಮಿತವಾಗಿ ದಾನ ನೀಡಬೇಕು, ಎಂದಿಗೂ ಅವರನ್ನು ಬರಿಗೈಯಲ್ಲಿ ಕಳುಹಿಸಬಾರದು ಎಂದು ಹೇಳಿದ್ದರು. ಹಾಗೊಮ್ಮೆ ಬರಿಗೈಯಲ್ಲಿ ಕಳುಹಿಸಿದರೆ ಹಿಂದೆ ಪಡೆದ ಶಕ್ತಿಗಳೆಲ್ಲವೂ ನಾಶವಾಗುವುದು
ಬಲಿ ರಾಜನ ಉದಾರ ಬುದ್ಧಿ, ಗುರು ಭಕ್ತಿ ಹಾಗೂ ದಾನ ಗುಣದಿಂದಾಗಿ ಪ್ರಪಂಚದಾದ್ಯಂತ ಪ್ರಶಂಸೆ ಹಾಗೂ ಜನಪ್ರಿಯತೆಯನ್ನು ಪಡೆದುಕೊಂಡಿದ್ದನು. ಮಹಾನ್ ಶಕ್ತಿ , ಪುಣ್ಯ ಹಾಗೂ ಆಶೀರ್ವಾದವನ್ನು ಪಡೆದ ಬಲಿಯನ್ನು ಸೋಲಿಸಲು ಸಾಧ್ಯವಿಲ್ಲ ಎನ್ನುವುದು ವಿಷ್ಣು ದೇವರು ಸಹ ತಿಳಿದಿದ್ದರು. ಬಲಿ ರಾಜನು ಯಾವುದೇ ಅನ್ಯಾಯ‌, ತಪ್ಪುಗಳನ್ನು ಮಾಡಿರಲಿಲ್ಲ. ದೇವರ ವಿರುದ್ಧ ಹೋರಾಡಿದಾಗಲೂ ತಮ್ಮ ನ್ಯಾಯಯುತ ಪಾಲನ್ನು ಮಾತ್ರ ಪಡೆದುಕೊಂಡಿದ್ದನು. ಬಲಿಯು ಬ್ರಾಹ್ಮಣರು ಏನೇ ಕೇಳಿದರೂ ತಿರಸ್ಕರಿಸದೆ ದಾನ ಮಾಡುತ್ತಾನೆ ಎನ್ನುವುದು ವಿಷ್ಣು ದೇವರಿಗೆ ತಿಳಿದಿತ್ತು. ಇದು ಬಲಿರಾಜನ 99 ನೇ ಯಜ್ಞ ಮತ್ತು 100 ಯಜ್ಞಗಳು ಪೂರೈಸಿದರೆ ಪುರಂದರ (ಇಂದ್ರನು) ತನ್ನ ಸ್ಥಾನವನ್ನು  ಬಿಡಕೊಡಬೇಕಾಗುತ್ತಿತ್ತು.
ವಾಮನವಾತಾರ
ಇತ್ತ ನರ್ಮದಾ ನದಿ ತೀರದಲ್ಲಿ ಅದಿತಿ ಮತ್ತು ಕಶ್ಯಪರು ತಾವು ಪರಮಾತ್ಮನಲ್ಲಿ ತಪಸ್ಸನ್ನು ಆಚರಿಸಿ ಪರಮಾತ್ಮನನ್ನು ಹೋಲುವ ಅಂದರೆ ಸಾಕ್ಷಾತ್ ಪರಮಾತ್ಮನನ್ನೇ ಪುತ್ರನನ್ನಾಗಿ ಪಡೆಯುವ ವರವನ್ನು ಕೇಳಿದರು. ಇವರಿಗೆ ಸಾಕ್ಷಾತ್ ಪರಮಾತ್ಮ ಮೂಲರೂಪದಿಂದ ಬಂದು ಇವರ ಮುಂದೆ 5 ವರ್ಷದ ಹುಡುಗನಾಗಿ ನಿಂತನು, ಸ್ವತಹ ತಾನೇ ನನಗೆ ಉಪನಯನ ಮಾಡಿಯೆಂದು ಕೇಳಿದನು. ಅದಿತಿ ಕಶ್ಯಪರು ಸಂತಸದಿಂದ ಉಪನಯನ ಮಾಡಿದರು ಆ ಸಮಯದಲ್ಲಿ ಬೃಹಸ್ಪತ್ಯಚಾರ್ಯರು ಉಪವೀತ (ಜನಿವಾರ) ವನ್ನು ತಂದು ಕೊಟ್ಟರು. ಬ್ರಹ್ಮ ದೇವರು ತಾಳೆಯ ಗರಿಯ ಛತ್ರಿಯನ್ನು ಕೊಟ್ಟರು. ಹಾಗೆ ರುದ್ರಾದಿಗಳು ಕಮಂಡಲವನ್ನು ಕೊಟ್ಟರು. ಇಂದ್ರಾದಿ ದೇವತೆಗಳು ಪಾದುಕೆಗಳನ್ನು ಕೊಟ್ಟರು, ಇವೆಲ್ಲವನ್ನೂ ಧರಿಸಿದ ವಾಮನ  ಸಾಕ್ಷಾತ  ವಿಷ್ಣು ದೇವರಂತೆ ಕಂಗೊಳಿಸಿದನು.

ವಾಮಂ ಕಲ್ಯಾಣಂ ನಯತಿ ಭಕ್ತಾನಿತಿ ವಾಮನ: |
ವಾಮನ ಎಂದರೆ  ಸುಂದರ, ಕಲ್ಯಾಣ  
ವಾಮ: ಅಭೀಷ್ಟಂ ಜಾತಂ ನಯತಿ ಇತಿ ವಾಮನ:
ವಾಮ ಎಂದರೆ ಇಷ್ಟಾರ್ಥ ಅದನ್ನು ತಂದು ಕೊಡುವವನು ವಾಮನ
ವಾಮ: ಅಭೀಷ್ಟಂ ಜಾತಂ ನಯತಿ ಇತಿ ವಾಮನ:
ವಾಮನ ಎಂದರೆ ಶತ್ರುಗಳನ್ನು ತಮೋಲೋಕಕ್ಕೆ ಕಳುಹಿಸಿ ಕೊಡುವವನು.
ಹೀಗೆ ವಟು ರೂಪದಿಂದ ವಾಮನದೇವರು ಬಲಿರಾಜ ಮಾಡುತಿದ್ದ ಯಜ್ನ್ಯಕ್ಕೆ ಹೋದನು. ಆಗ ಬಲಿರಾಜನು ಅವನನ್ನು ಸ್ವಾಗತಿಸಿದನು. ತನಗಾಗಿ ಒಂದು ಸಹಾಯ ಮಾಡಬೇಕು ಎಂದು ಬಲಿರಾಜನಲ್ಲಿ ವಾಮನನು ಕೇಳಿದನು. ಬ್ರಾಹ್ಮಣನ ಮಾತನ್ನು ಮೀರದ ಬಲಿರಾಜ ಏನು ಬೇಕೆಂದು ಕೇಳಿದನು. ಆಗ ವಾಮನನು ತನ್ನ ಮೂರು ಅಡಿಯಷ್ಟು ಜಾಗವನ್ನು ದಾನ ಮಾಡಬೇಕು ಎಂದು ಕೇಳಿದನು. ಅದನ್ನು ಕೇಳಿದ ಬಲಿ ರಾಜನು ಅತ್ಯಂತ ಸಂತೋಷ ದಿಂದ ದಾನ ಮಾಡುವುದಾಗಿ ಒಪ್ಪಿಕೊಂಡನು.
ತ್ರಿವಿಕ್ರಮಾವತಾರ
ವಾಮನನಿಗೆ ನಿನಗೆ ಬೇಕಾದ ಮೂರು ಅಡಿಯನ್ನು ತೆಗೆದುಕೊಳ್ಳಲು ಅನುಮತಿ ನೀಡುತ್ತಿದ್ದಂತೆ, ಶುಕ್ರಾಚಾರ್ಯರಿಗೆ " ಬಂದಿದ್ದು ಯಾರು " ಎಂದು ಗೊತ್ತಾಗಿ ದಾನ ಸಂಕಲ್ಪಕ್ಕೆ ಬಲಗೈಯಲ್ಲಿ ಬಿಳಿ ಅಕ್ಷತೆ ಹಿಡಿದು ಕಮಂಡಲು ವಿನಿಂದ ನೀರು ಬಿಡಬೇಕಾ ದುದರಿಂದ  ಆ ಕ್ರಿಯೆ ನಡೆಯದಂತೆ ಅವರು ಒಂದು ಕೀಟವಾಗಿ ಕಮಂಡುಲುವಿನ ನೀರು ಬೀಳುವ ಭಾಗದಲ್ಲಿ ಕುಳಿತರು. ಸಂಕಲ್ಪ ಪೂರ್ತತೆಗೆ ನೀರು ಬೀಳದೆ ಇರುವ ಕಾರಣ ಅಲ್ಲಿರುವ ದರ್ಭೆಯಿಂದ ಕಮಂಡುಲುವಿನ ಬಾಯಲ್ಲಿ ಚುಚ್ಚಿದರು. ಅದು ಶುಕ್ರಾಚಾರ್ಯರ ಒಂದು ಕಣ್ಣಿಗೆ ಚುಚ್ಚಿ ಗಾಯ ಮಾಡಿತು. ಆಗ ಗಾಯದಿಂದ ಹೊರಟು ರಕ್ತಯುಕ್ತ ನೀರು ಬಿಳಿ ಅಕ್ಕಿ ಯ ಮೇಲೆ ಬಿದ್ದು ಸಂಕಲ್ಪ ಪೂರ್ತತೆಯಾಯಿತು. ಅಂದಿನಿಂದ ಬಿಳಿ ಅಕ್ಕಿಯು ಕೆಂಪಾಗಿ ಅಕ್ಷತೆಯಾಯಿತು.   
ಆ ಕ್ಷಣದಲ್ಲಿ  ವಾಮನನು ಆಕಾಶದ ಎತ್ತರಕ್ಕೆ ಬೆಳೆದು ದಾನ ರೂಪವೆಂದು ಒಂದು ಹೆಜ್ಜೆಯನ್ನು ಭೂಮಿಯ ಮೇಲೆ ಇಟ್ಟನು. ನಂತರ ಇನ್ನೊಂದು ಹೆಜ್ಜೆಯನ್ನು ದೇವಲೋಕ ದಲ್ಲಿ ಇಟ್ಟನು. ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕು ಎಂದು ವಾಮನ ಕೇಳಿದನು. ಆಗ ಬಲಿ ರಾಜನು ಶುಕ್ರಾಚಾರ್ಯರು ಹೇಳಿದ ಮಾತುಗಳನ್ನು ನೆನೆಸಿಕೊಂಡನು. ನಂತರ ವಾಮನನ ಮುಂದೆ ಕುಳಿತು ಕೈಗಳನ್ನು ಮುಗಿದು ತನ್ನ ತಲೆಯ ಮೇಲೆ ಇನ್ನೊಂದು ಹೆಜ್ಜೆ ಇಡುವಂತೆ ಹೇಳಿದನು. ಆಗ ವಾಮನನು ಬಲಿರಾಜನ ತಲೆಯ ಮೇಲೆ ಕಾಲನ್ನು ಇಡುತ್ತಿದ್ದಂತೆಯೇ ಪಾತಾಳಕ್ಕೆ ಹೋದನು. ಹೀಗೆ ವಾಮನ ತ್ರಿವಿಕ್ರಮನಾದನು. ಬಲಿ ರಾಜನ ಶ್ರದ್ಧೆ ಹಾಗೂ ಭಕ್ತಿಯನ್ನು ಮೆಚ್ಚಿದ ವಿಷ್ಣು ದೇವರು ಬಲಿ ರಾಜನು ಪಾತಾಳ ಲೋಕದ ಆಡಳಿತ ಮಾಡಲು ಹೇಳಿ ವರವಾಗಿ ನಿನ್ನ ಭವನದ ದ್ವಾರದಲ್ಲಿ ಅಂತರ್ಧಾನ ವಾಗಿರುವೆ ಎಂದು  ಆಶೀರ್ವದಿಸಿದನು. 
ದೇವತೆಗಳಿಗೆ ಸ್ವರ್ಗದ ಆಡಳಿತ ಮಾಡಲು ಹೇಳಿದನು. ವಾಮನ ಅವತಾರವನ್ನು ಉಪೇಂದ್ರ ಹಾಗೂ ತ್ರಿವಿಕ್ರಮ ಎಂದು ಸಹ ಕರೆಯಲಾಗುತ್ತದೆ. ಭೂಮಿ, ಪಾತಾಳ ಹಾಗೂ ಸ್ವರ್ಗ ಲೋಕವನ್ನು ಆಳುವವನು ಎಂದು ಹೇಳಲಾಗುವುದು. ಹೀಗೆ ವಾಮನದೇವರ ಮಹಿಮೆ ಅತ್ಯಂತ ಶುಭಕರ ಮತ್ತು ಮಂಗಳ ಮಯವಾದದ್ದು. ಪುರಾಣಗಳು ಮತ್ತು ನಮಗೆ ಉಪಲಬ್ಧವಿರುವ ಗ್ರಂಥಗಳಲ್ಲಿ ವಾಮನ ದೇವರ ಚಿಂತನೆ

ದಧಿಮಧ್ಯೇ ವಾಮನಂ ತು ಘೃತೇ ಕೃಷ್ಣಂ ತು ಸಂಸ್ಮರೇತ್ |ವಾರಾಹಂ ಮೃತ್ತಿಕಾಸ್ನಾನೇ ಹ್ಯುಪೇಂದ್ರಂ ವಸ್ತ್ರಧಾರಣೇ |
ದದಿವಾಮನ ಎಂದೇ ಪ್ರಸಿದ್ಧ ನಾದ ವಾಮನ ದೇವರಿಗೆ ಪ್ರಿಯವಾದ ವಸ್ತು ಎಂದರೇ ಮೊಸರು, ಮೊಸರಿನಿಂದ ಮಾಡಿದ ರಸಗಳು ಮತ್ತು ಭಕ್ಷಗಳು ಪ್ರಿಯವಾದದ್ದು. ಹೇಗೆ ಕೃಷ್ಣನಿಗೆ ನವನೀತ, ವರಹಾದೇವರಿಗೆ ಮೃತ್ತಿಕಸ್ನಾನ ಮತ್ತು ಉಪೇಂದ್ರನಾಮಕ ವಿಷ್ಣು ಅಥವಾ ನಾರಾಯಣನಿಗೆ ವಸ್ತ್ರಾಲಂಕಾರ ಹೇಗೆ ಪ್ರಿಯವೋ ಹಾಗೆ ವಾಮನನಿಗೆ ಮೊಸರು ತುಂಬಾ ಇಷ್ಟ. ಮೊಸರನ್ನು ಕಡೆಯುವಾಗ ವಾಮನನ ಸ್ಮರಣೆ ಅವಶ್ಯಮಾಡಲೇ ಬೇಕು.
ಸುಮಧ್ವವಿಜಯದಲ್ಲಿ ವಾಮನದೇವರ ಚಿಂತನೆಯನ್ನು ಶ್ರೀನಾರಾಯಣ ಪಂಡಿತಾಚಾರ್ಯರು ಹೀಗೆ ಹೇಳುತ್ತಾರೆ.
ಅಪಿ ವಾಮನೋ ಲಲಿತಬಾಲ್ಯವಾನಯಂ ಪ್ರತಿಭಾಬಲೇನ ಕೃತದೈತ್ಯಕೌತುಕ: |ಉಪ ಧೇರಧ: ಕೃತಬಲೀಂದ್ರಶಾತ್ರವ: ಸ್ವಜನಾಯ ಕೇವಲಮದಾತ್ ಪರಂ ಪದಂ |
ನಾರಾಯಣ ಅತಿಸುಂದರನಾದ ವಾಮನ ರೂಪಧರಿಸಿ ಮತ್ತು ಅತಿಬುದ್ದಿವಂತಿಕೆಯಿಂದ ರಸಾತಳ ಪಾತಾಳ ಲೋಕಕ್ಕೆ ತಳ್ಳಿ ಪುನಃ ಇಂದ್ರನಿಗೆ ಅಮರವತಿಯನ್ನು ಕೊಟ್ಟು ಸ್ವರ್ಗಾಧಿಪತ್ಯವನ್ನು ಕೊಟ್ಟವನು.
ಇನ್ನು ದ್ವಾದಶ ಸ್ತೋತ್ರಗಳಲ್ಲಿ ಶ್ರಿಮದಾಚಾರ್ಯರು ಹೀಗೆ ವರ್ಣಿಸುತ್ತಾರೆ.
ವಾಮನ ವಾಮನ ಭಾಮನ ವಂದೇ ಸಾಮನ ಸೀಮನ ಶಾಮನ ಸಾನೋ |ಶ್ರೀಧರ ಶ್ರೀಧರ ಶಂಧರ ವಂದೇ ಭೂಧರ ವಾರ್ಧರ ಕಂದರಧಾರೀನ್ |
ವಾಮನ ವಾಮನ ಮಾಣವವೇಷ ದೈತ್ಯವರಾಂತಕ ಕಾರಣ ರೂಪ |ಬಲಿಮುಖ ದಿತಿಸುತ ವಿಜಯ ವಿನಾಶನ ಜಗದವನಾಜಿತ ಭವ ಮಮ ಶರಣಂ |ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮ ರಮಾರಮಣ ||
ಯಾದವಾರ್ಯರು ತಮ್ಮ ಕರಾವಲಂಭನಾ ಸ್ತೋತ್ರದಲ್ಲಿ ಹೀಗೆ ಚಿಂತಿಸುತ್ತಾರೆ.
ದೇವೇಂದ್ರರಾಜ್ಯಹರದಾನವರಾಜಯಜ್ಞ-ಶಾಲಾರ್ಥಿರೂಪಧರ ವಜ್ರಧರಾರ್ಥಿಹಾರಿನ್ |
ಯಾಂಚಾಮಿಷಾದಸುರವಂಚಕ ವಾಮನೇಶ ವಾಸಿಷ್ಠ ಕೃಷ್ಣ ಮಮ ದೇಹಿ ಕರಾವಲಂಬಂ |
ಶ್ರೀವಾದಿರಾಜ ತೀರ್ಥರು ದಶಾವತಾರ ಸ್ತುತಿಯಲ್ಲಿ ಹೀಗೆ ಚಿಂತಿಸುತ್ತಾರೆ
ಪಿಂಗಾಕ್ಷವಿಕ್ರಮತುರಂಗಾದಿ ಸೈನ್ಯ ಚತುರಂಗಾವಲಿಪ್ತದನುಜಾ-
ಸಾಂಗಾಧ್ವರಸ್ಥ ಬಲಿಸಾಂಗಾ ವಪಾತ ಹೃಷಿತಾಂಗಾಮರಾಲಿನುತ ತೇ |
ಶೃಂಗಾರ ಪಾದ ನಖತುಂಗಾಗ್ರಭಿನ್ನ ಕನಕಾಂಗಾಂಡ ಪಾತಿತಟಿನೀ-
ತುಂಗಾ ತಿಮಂಗಲ ತರಂಗಾಭಿಭೂತ ಭಜಕಾಂಗಾಂಘವಾಮನ ನಮ:
ಶ್ರೀ ಆಚಾರ್ಯ ಮಧ್ವರು ತಮ್ಮ ತಂತ್ರಸಾರ ಸಂಗ್ರಹದಲ್ಲಿ ಕೊಟ್ಟಿರುವ ವಾಮನ ದೇವರ ಧ್ಯಾನ ಶ್ಲೋಕ
ಧ್ಯಾಯೇತ್ ಸುಶುಕ್ಲಮರವಿಂದ ದಲಾ ಯತಾಕ್ಷಂ ಸೌವರ್ಣಪಾತ್ರ ದಧಿ ಭೋಜ್ಯ ಮಥಾಮೃತಂ ಚ |ದೋರ್ಭ್ಯಾಂ ದಧಾನ ಮಖಿಲೈಶ್ಚ ಸುರೈ: ಪರೀತಂ |ಶೀತಾಂಶು ಮಂಡಲ ಗತಂ ರಮಯಾ ಸಮೇತಂ |
ಉದ್ಯದ್ರವಿಪ್ರಭಮರೀಂದ್ರದರೌ ಗದಾಂ ಚ | 
ಜ್ಞಾನಂ ಚ ವಿಭ್ರತಮಜಂ ಪ್ರಿಯಯಾ ಸಮೇತಂ |ವಿಶ್ವಾವಕಾಶ ಮಭಿತ: ಪ್ರತಿಪೂರ ಯಂತಂ ಭಾಸಾ ಸ್ವಯಾ ಸ್ಮರತ ವಿಷ್ಣುಮಜಾದಿ ವಂದ್ಯಂ |
ಬಂಗಾರದ ಬಟ್ಟಲಲ್ಲಿರುವ ಮೊಸರನ್ನವನ್ನೂ, ಅಮೃತವನ್ನೂ, ತನ್ನೆರಡು ಕೈಗಳಿಂದ ಹಿಡಿದುಕೊಂಡಿರುವ, ತನ್ನ ಸಮಸ್ತ ದೇವತಾ ಪರಿವಾರದೊಡನೆ, ರಮಾದೇವಿಯೊಡನೆ, ಚಂದ್ರಮಂಡಲದಲ್ಲಿ ಕುಳಿತಿರುವ, ಕಮಲದಂತೆ ವಿಶಾಲವಾದ ಕಣ್ಣುಗಳಿಂದ  ಪ್ರಕಾಶಿಸುತ್ತಿರುವ   ವಾಮನನನ್ನು ಧ್ಯಾನಿಸಬೇಕು
ಆಗ ತಾನೇ ಉದಯಿಸುತ್ತಿರುವ ಸೂರ್ಯನಂತೆ ಬೆಳಗುವ ತನ್ನ ಚತುರ್ಭುಜಗಳಲ್ಲಿ ಚಕ್ರ ಶಂಖ ಗದಾ ಜ್ಞಾನಮುದ್ರೆಗಳನ್ನು ಧರಿಸಿರುವ, ತನ್ನ ಪ್ರಭೆಯಿಂದ ಜಗತ್ತನ್ನೆಲ್ಲ ವ್ಯಾಪಿಸುತ್ತಿರುವ, ಬ್ರಹ್ಮ ರುದ್ರಾದಿ ದೇವತೆಗಳಿಂದಲೂ ವಂದ್ಯನಾದ, ರಮಾದೇವಿ ಸಹಿತನಾದ ವಾಮನನನ್ನು ಧ್ಯಾನಿಸಬೇಕು.
ಎಲ್ಲರಿಗು ವಾಮನ ದೇವರು ದಿವ್ಯಜ್ನ್ಯಾನ ಭಕ್ತಿ ಆಯುರಾರೋಗ್ಯ ಕೊಡಲಿ, ಹಾಗೆ ಪ್ರತಿದಿನ ಆದಷ್ಟು ದದಿವಾಮನ ಸ್ತೋತ್ರ ಜಪ ಮಾಡುವುದು ಅವಶ್ಯಕ , ಅದರಲ್ಲೂ ಪ್ರಾತಃಕಾಲ ವಿಶೇಷ ಫಲವನ್ನು ಕೊಡುತ್ತದೆ. ಶ್ರೀ ವಾದಿರಾಜ ಮಠ ಸಾನಿಧ್ಯದ ಸೊಂದಾ ಗ್ರಾಮದೇವರೇ ಶ್ರೀ ರಮಾ ಸಮೇತ ತ್ರಿವಿಕ್ರಮ ದೇವರು ಭೂತರಾಜನಿಂದ ಒಡಗೂಡಿದ ಪುರಾತನ ಮಂದಿರವನ್ನು  ನೋಡಬಹುದಾಗಿದೆ. 

ದಧಿ ವಾಮನ ಸ್ತೋತ್ರಮ್

ಹೇಮಾದ್ರಿ-ಶಿಖರಾಕಾರಂ ಶುದ್ಧ-ಸ್ಫಟಿಕ-ಸನ್ನಿಭಮ್ |ಪೂರ್ಣಚಂದ್ರ-ನಿಭಂ ದೇವಂ ದ್ವಿಭುಜಂ ವಾಮನಂ ಸ್ಮರೇತ್ || ೧ ||


ಪದ್ಮಾಸನಸ್ಥಂ ದೇವೇಶಂ ಚಂದ್ರಮಂಡಲ-ಮಧ್ಯಗಮ್ |ಜ್ವಲತ್ಕಾಲಾನಲ-ಪ್ರಖ್ಯಂ ತಟಿತ್ಕೋಟಿ-ಸಮಪ್ರಭಮ್ || ೨ ||


ಸೂರ್ಯಕೋಟಿ-ಪ್ರತೀಕಾಶಂ ಚಂದ್ರಕೋಟಿ-ಸುಶೀತಲಮ್ |ಚಂದ್ರಮಂಡಲ-ಮಧ್ಯಸ್ಥಂ ವಿಷ್ಣುಮಚ್ಯುತಮವ್ಯಯಮ್ || ೩ ||


ಶ್ರೀವತ್ಸ-ಕೌಸ್ತುಭೋರಸ್ಕಂ ದಿವ್ಯರತ್ನ-ವಿಭೂಷಿತಮ್ |ಪೀತಾಂಬರಧರಂ ದೇವಂ ವನಮಾಲಾ-ವಿಭೂಷಿತಮ್ || ೪ ||


ಸುಂದರಂ ಪುಂಡರೀಕಾಕ್ಷಂ ಕಿರೀಟೇನ ವಿರಾಜಿತಮ್ |ಷೋಡಶಸ್ತ್ರೀ ಪರಿವೃತಮ್-ಅಪ್ಸರೋಗಣ-ಸೇವಿತಮ್ || ೫ ||


ಸನಕಾದಿಭಿರನ್ಯೈಶ್ಚ ಸ್ತೂಯಮಾನಂ ಸಮಂತತಃ |ಋಗ್ಯಜುಸ್ಸಾಮಾ ಥರ್ವಾಭಿರ್-ಗೀಯಮಾನಂ ಜನಾರ್ದನಮ್ || ೬ ||


ಚತುರ್ಮುಖಾದ್ಯೈರ್ದೇವೇಶೈಃ ಸ್ತೋತ್ರಾ ರಾಧನ ತತ್ಪರೈಃ |ತ್ರಿಯಂಬಕೋ ಮಹಾದೇವೋ ನೃತ್ಯತೇ ಯಸ್ಯ ಸನ್ನಿಧೌ || ೭ ||


ದಧಿಮಿಶ್ರಾನ್ನಕವಲಂ ರುಗ್ಮಪಾತ್ರಂ ಚ ದಕ್ಷಿಣೇ ಕರೇಽಪಿ ಚಿಂತಯೇದ್ವಾಮೇ ಪೀಯೂಷ ಮಮಲಂ ಸುಧೀಃ || ೮ ||


ಸಾಧಕಾನಾಂ ಪ್ರಯಚ್ಛಂತಮನ್ನಪಾನ ಮನುತ್ತಮಮ್ |ಬ್ರಾಹ್ಮೇ ಮುಹೂರ್ತೇ ಚೋತ್ಥಾಯ ಧ್ಯಾಯೇದ್ದೇವಮಧೋಕ್ಷಜಮ್

ಆಯುರಾರೋಗ್ಯಮೈಶ್ವರ್ಯಂ ಲಭತೇ ಚಾನ್ನಸಂಪದಮ್ || ೯ ||


ಅತಿಸುವಿಮಲಗಾತ್ರಂ ರುಗ್ಮಪಾತ್ರಸ್ಥಮನ್ನಂ

ಸುಲಲಿತದಧಿಖಂಢಂ ಪಾಣಿನಾ ದಕ್ಷಿಣೇನ |

ಕಲಶಮಮೃತಪೂರ್ಣಂ ವಾಮಹಸ್ತೇ ದಧಾನಂ

ತರತಿ ಸಕಲದುಃಖಾದ್ವಾಮನಂ ಭಾವಯೇದ್ಯಃ || ೧೦ ||


ಇದಂ ಸ್ತೋತ್ರಂ ಪಠೇದ್ಯಸ್ತು ಪ್ರಾತಃಕಾಲೇ ದ್ವಿಜೋತ್ತಮಃ | ಅಕ್ಲೇಶಾದನ್ನಸಿದ್ಧ್ಯರ್ಥಂ ಜ್ಞಾನಸಿದ್ಧ್ಯರ್ಥಮೇವ ಚ || ೧೧ ||


ಅಭ್ರಶ್ಯಾಮಃ ಶುಭ್ರಯಜ್ಞೋಪವೀತೀ ಸತ್ಕೌಪೀನಃ ಪೀತ-ಕೃಷ್ಣಾಜಿನಶ್ರೀಃ | ಛತ್ರೀ ದಂಡೀ ಪುಂಡರೀಕಾಯತಾಕ್ಷಃ ಪಾಯಾ ದ್ದೇವೋ ವಾಮನೋ ಬ್ರಹ್ಮಚಾರೀ || ೧೨ ||


ಅಜಿನದಂಡ-ಕಮಂಡಲು-ಮೇಖಲಾ-ರುಚಿರ-ಪಾವನ-ವಾಮನ-ಮೂರ್ತಯೇ | ಮಿತ ಜಗತ್ತ್ರಿತಯಾಯ ಜಿತಾರಯೇ ನಿಗಮ ವಾಕ್ಪಟವೇ ವಟವೇ ನಮಃ || ೧೩ ||


ಶ್ರೀಭೂಮಿಸಹಿತಂ ದಿವ್ಯಂ ಮುಕ್ತಾಹಾರ-ವಿಭೂಷಿತಮ್ | ನಮಾಮಿ ವಾಮನಂ ದೇವಂ ಭುಕ್ತಿಮುಕ್ತಿ-ವರಪ್ರದಮ್ || ೧೪ ||


ವಾಮನೋ ಬುದ್ಧಿದಾತಾ ಚ ದ್ರವ್ಯಸ್ಥೋ ವಾಮನಃ ಸ್ಮೃತಃ | ವಾಮನಸ್ತಾರ ಕೋಭಾಭ್ಯಾಂ ವಾಮನಾಯ ನಮೋ ನಮಃ || ೧೫ ||


|| ಇತಿ ಶ್ರೀವಾಮನಪುರಾಣೇ ದಧಿವಾಮನ ಸ್ತೋತ್ರಂ ಸಂಪೂರ್ಣಮ್ ||

ಶ್ರೀ ಕೃಷ್ಣಾರ್ಪಣಮಸ್ತು


No comments:

Post a Comment