Monday, June 19, 2023

PUJAA VIDHI, SANKALPA ಪೂಜಾ ವಿಧಿ, ಸಂಕಲ್ಪಃ

PUJAA VIDHI, SANKALPA  ಪೂಜಾ ವಿಧಿ, ಸಂಕಲ್ಪಃ

01.ಮೃತ್ಯುಂಜಯ ಸ್ತೋತ್ರಂ
02.ಹೋಲಿಕಾ ಪೂಜಾ ವಿಧಿ 
03.ರಥ ಸಪ್ತಮಿ ದಿವಸ ಸ್ನಾನ ವಿಧಿ 
04.ಭೂಮಿ ಪೂಜಾ ವಿಧಾನ
05.ಮಾಘ ಸ್ನಾನ ವಿಧಿ 
06.ಸ್ನಾನಗಳಲ್ಲಿ ವಿವಿಧತೆಗಳು :
07.ಅಶೌಚ ವಿಚಾರಃ  
08.ಅಶೌಚದಲ್ಲಿ ಮಾಡುವ ವಿಧಿಗಳು
09.ಮೂಲಪುರುಷರಿಂದ 8 ನೆಯ ತಲೆಯವರು ಅಶೌಚವನ್ನು ಕಡಿಮೆ ಮಾಡಿಕೊಳ್ಳುವ ವಿಧಾನ 
10.ಭಂಡಾಸುರ ವಧೆ
11.ಕಾರ್ತೀಕ ಸ್ನಾನ ವಿಧಿ :         
12.ಶ್ರೀ ಮೃಣ್ಮಯ ವೃಷಭಪೂಜಾ ವಿಧಿ ( ಮಣ್ಣೆತ್ತಿನ ಅಮಾವಾಸ್ಯಾ )   
13.ವೈಶಾಖ ಸ್ನಾನ ಸಂಕಲ್ಪ                   
14.ಶ್ರೀ ದತ್ತ ಸ್ತೋತ್ರಂ 
15.ನವಗ್ರಹ ಕವಚ
16.ಕಾಳಿಕಾ ಸ್ತೋತ್ರಂ 
17.ರೇಣುಕಾ ಸ್ತೋತ್ರಂ
18.ಮಂತ್ರಾತ್ಮಕ ಶ್ಲೋಕಂ 
19.ಇಂದ್ರಾಕ್ಷಿ ಸ್ತೋತ್ರಂ 
20.ಶಿವ ಪೂಜಾ ಸಂಕಲ್ಪಃ 
21.ವೈಕುಂಠ ಚತುರ್ದಶಿ ವಿಧಿ 
22.ಕಾಲ ಭೈರವ ಜಯಂತಿ 
23.ಶ್ರೀ ಮಲ್ಹಾರಿ ವಜ್ರ ಪಂಜರ ಸ್ತೋತ್ರಂ 
24. ಉಪಾಂಗ ಲಲಿತಾ ವ್ರತ ವಿಧಾನ 
24. ಉಮಾಮಹೇಶ್ವರ ವ್ರತ ಸಂಕಲ್ಪ 
25. ಶ್ರಾದ್ಧ ವಿಚಾರ

PUJAA VIDHI, SANKALPA  ಪೂಜಾ ವಿಧಿ, ಸಂಕಲ್ಪಃ

ಮೃತ್ಯುಂಜಯ ಸ್ತೋತ್ರಂ          
ಇದನ್ನು ಅಪಮೃತ್ಯು ನಿವಾರಣೆಗೋಸ್ಕರ ಪ್ರಯಾಣಕ್ಕೆ ಹೋಗಬೇಕಾದರೆ ಹಾಗು ಶಸ್ತ್ರಚಿಕಿತ್ಸೆಯಾದಾಗ ಪಠಿಸಬೇಕು.
ರುದ್ರಂ ಪಶುಪತಿಂಸ್ಥಾಣುಂ ನೀಲಕಂಠಂ ಉಮಾಪತಿಂ | ನಮಾಮಿ ಶಿರಸಾದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ || ೧ ||
ಕಾಲಕಂಠಂ  ಕಾಲಮುರ್ತಿಂ ಕಾಲಾಗ್ನಿಂ ಕಾಲನಾಶನಂ |  ನಮಾಮಿ ಶಿರಸಾದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ || ೨ ||
ವಾಮದೇವಂ ಮಹಾದೇವಂ ಲೋಕನಾಥಂ ಜಗದ್ಗುರುಂ | ನಮಾಮಿ ಶಿರಸಾದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ || ೩ ||
ದೇವ ದೇವಂ ಜಗನ್ನಾಥಂ ದೇವೇಶಂ ವೃಷಭ ಧ್ವಜಂ | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ || ೪ ||
ಗಂಗಾಧರಂ ಮಹಾದೇವಂ ಶಂಕರಂ ಶೂಲಪಾಣಿಮ್| ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ || ೫ ||
ಭಸ್ಮೊಧ್ಧೂಲಿತ ಸರ್ವಾಂಗಂ ನಾನಾಭರಣ ಧಾರಿಣಂ | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ || ೬ ||
ಆನಂದಂ ಪರಮಾನಂದಂ ಕೈವಲ್ಯಂ ಪದಗಾಮಿನಂ |  ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ || ೭ ||
ಸ್ವರ್ಗಾಪವರ್ಗ ದಾತಾರಂ ಸೃಷ್ಟಿ ಸ್ಥಿತ್ಯಂತ ಕಾರಿಣಂ |  ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ || ೮ ||
ಪ್ರಲಯ ಸ್ಥಿತಿ ಸಂಹಾರಂ ಆದಿ ಕರ್ತಾರಮೀಶ್ವರಂ  | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ || ೯ ||
ಸತ್ಯಂ ಸತ್ಯಂ ಪುನಃಸತ್ಯಂ ಉದ್ಹೃತ್ಯ ಭುಜಮುಚ್ಯತೆ | ವೇದಶಾಸ್ತ್ರಾತ್ಪರಮ್ ನಾಸ್ತಿ ನ ದೇವಃ ಶಂಕರಾತ್ಪರಃ || ೧೦ ||
ಮಾರ್ಕಂಡೇಯ ಕೃತಂ ಸ್ತೋತ್ರಂ ಯಃ ಪಠೇತ್ ಶಿವ ಸನ್ನಿಧೌ | ತಸ್ಯ ಮೃತ್ಯುಭಯಂ ನಾಸ್ತಿ ಅಗ್ನಿ ಚೋರಭಯಂ ನ ಹಿ || ೧೧ || 
|| ಇತೀ ಶ್ರೀ ಮಾರ್ಕಂಡೇಯ ವಿರಚಿತಂ ಮೃತ್ಯುಂಜಯ ಶಿವ ಸ್ತೋತ್ರಂ ಸಂಪೂರ್ಣಂ ||   
ಹೋಲಿಕಾ ಪೂಜಾ ವಿಧಿ 
ಆಚಮ್ಯ, ಪ್ರಾಣಾನಾಯಮ್ಯ, ದೇಶಕಾಲೌ ಸಂಕಿರ್ತ್ಯ, ಸಕುಟುಂಬಸ್ಯ ಸಪರಿವಾರಸ್ಯ, ಮಮ ಧುಂಧಾರಾಕ್ಷಸೀ ಪ್ರೀತ್ಯರ್ಥಂ ತತ್ ಪೀಡಾ ಪರಿಹಾರಾರ್ಥಂ ಹೋಲಿಕಾ ಪುಜಾಂಕರಿಷ್ಯೇ 
ಹೀಗೆ ಸಂಕಲ್ಪ ಮಾಡಿ ಒಣ ಕಟ್ಟಿಗೆ, ಕುಳ್ಳು ಇವುಗಳನ್ನು ಹೊತ್ತಿಸಿ 
ಅಸ್ಮಾಭಿರ್ಭಯಸಂತ್ರ ಸ್ತೈ: ಕೃತಾತ್ವಂ ಹೋಲಿಕೆ ಯತಃ | ಅತಸ್ತ್ವಾಂಪೂಜಯಿಷ್ಯಾಮೀ ಭೂತೆ ಭೂತೀ ಪ್ರದಾ ಭವಃ || 
ಈ ಮಂತ್ರವನ್ನು ಹೇಳಿ “ ಶ್ರೀ ಹೋಲಿಕಾಯೈ ನಮಃ “ ಎಂಬ ಮಂತ್ರದಿಂದ ಷೋಡಶೋಪಚಾರ ಪೂಜೆ ಮಾಡಿ ಪ್ರಾರ್ಥಿಸ ಬೇಕು.
ವಂದಿತಾಸಿ ಸುರೆಂದ್ರೇಣ ಬ್ರಹ್ಮಣಾ ಶಂಕರೇಣ ಚ | ಅತಸ್ತ್ವಾಂ ಪಾಹಿನೋ ದೇವೀ  ಭೂತೆ ಭೂತೀ ಪ್ರದಾ ಭವಃ  ||    
ಹೀಗೆ ಪ್ರಾರ್ಥಿಸಿ ಮೂರು ಪ್ರದಕ್ಷಿಣೆ ಹಾಕಿ ಮುಗಿಸಬೇಕು  
ರಥ ಸಪ್ತಮಿ ದಿವಸ ಸ್ನಾನ ವಿಧಿ 
ಮಮ ಇಹ ಜನ್ಮನಿ ಜನ್ಮಾಂತರೇಚ ಸಪ್ತವಿಧ ಪಾಪ ಕ್ಷಯಾರ್ಥಂ ತೀರ್ಥೆ ಸ್ನಾನ ಮಹಂ ಕರಿಷ್ಯೇ      
ಯದ್ಯಜ್ಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು | ತನ್ಮೇ ಶೋಕಂ ಚ ರೋಗಂ ಚ ಮಾಕರಿ ಹಂತು ಸಪ್ತಮಿ |
ಏತ ಜ್ಜನ್ಮಕೃತಂ ಪಾಪಂ ಯಚ್ಚ್ಚ್ಯ ಜನ್ಮಾಂತರಾರ್ಜಿತಂ | ಮನೋವಾಕ್ಕಾ ಯಜಂಯಚ್ಚ ಜ್ಞಾತಾಜ್ಞಾತಂ ಚ ಯತ್ ಪುನಃ |
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ  ಸಪ್ತಸಪ್ತಿಕೇ | ಸಪ್ತವ್ಯಾಧಿ ಸಮಾಯುಕ್ತಂ  ಹರ ಮಾಕರಿ ಸಪ್ತಮಿ | 
ಈ ಮಂತ್ರ ಗಳಿಂದ ನೀರು ತಿರುಗಿಸಿ 
ಎಕ್ಕಿ ಎಲೆಗಳನ್ನು ತಲೆಯ ಮೇಲೆ ಇಟ್ಟುಕೊಂಡು  ಸ್ನಾನಮಾಡಬೇಕು. ಆಮೇಲೆ ಅರ್ಘ್ಯ ಕೊಡಬೇಕು. 
ಸಪ್ತ ಸಪ್ತೀವಹ ಪ್ರೀತ ಸಪ್ತ ಲೋಕ ಪ್ರದೀಪಕ | ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ 
ಸಪ್ತಮೀ ಪ್ರಾರ್ಥನಾ ಮಂತ್ರಃ   ಜನನಿ ಸರ್ವಲೋಕಾನಾಂ ಸಪ್ತಮೀ  ಸಪ್ತ ಸಪ್ತಿಕೆ | ಸಪ್ತ ವ್ಯಾಹೃತಿಕೆ ದೇವಿ ನಮಸ್ತೇ ಸೂರ್ಯ ಮಂಡಲೇ ಷೋಡಶೋಪಚಾರ ಪೂಜೆಯ ನಂತರ – ನಮಸ್ಕಾರ – ನಮಃ ಸವಿತ್ರೆ ಜಗದೇಕ ಚಕ್ಷುಷೆ ಜಗತ್ ಪ್ರಸೂತಿ ಸ್ಥಿತಿ ನಾಶ ಹೇತವೆ | ತ್ರಯಿ ಮಯಾಯ ತ್ರಿಗುಣಾತ್ಮಧಾರಿಣೆ  ವಿರೀಂಚಿ ನಾರಾಯಣ ಶಂಕರಾತ್ಮನೇ ||
ಹನ್ನೆರಡು ಅರ್ಘ್ಯ ದಾನ :
೧.ಮಿತ್ರಾಯನಮಃ  ಇದಮರ್ಘ್ಯಂ ದತ್ತಂ ನಮಮ  
೨.ರವಯೇ ನಮಃ    ಇದಮರ್ಘ್ಯಂ ದತ್ತಂ ನಮಮ
೩. ಸೂರ್ಯಾಯ ನಮಃ   ಇದಮರ್ಘ್ಯಂ ದತ್ತಂ ನಮಮ
೪. ಭಾನವೇ ನಮಃ          ಇದಮರ್ಘ್ಯಂ ದತ್ತಂ ನಮಮ
೫. ಭಾಸ್ಕರಾಯ ನಮಃ    ಇದಮರ್ಘ್ಯಂ ದತ್ತಂ ನಮಮ
೬. ಖಗಾಯ ನಮಃ          ಇದಮರ್ಘ್ಯಂ ದತ್ತಂ ನಮಮ 
೭. ಪುಷ್ಣಾಯ  ನಮಃ        ಇದಮರ್ಘ್ಯಂ ದತ್ತಂ ನಮಮ
೮. ಹಿರಣ್ಯಗರ್ಭಾಯ ನಮಃ   ಇದಮರ್ಘ್ಯಂ ದತ್ತಂ ನಮಮ
೯. ಮರೀಚಾಯ ನಮಃ   ಇದಮರ್ಘ್ಯಂ ದತ್ತಂ ನಮಮ
೧೦. ಅರ್ಕಾಯ ನಮಃ       ಇದಮರ್ಘ್ಯಂ ದತ್ತಂ ನಮಮ
೧೧. ಆದಿತ್ಯಾಯ ನಮಃ     ಇದಮರ್ಘ್ಯಂ ದತ್ತಂ ನಮಮ
೧೨. ಸವಿತ್ರಾಯ ನಮಃ     ಇದಮರ್ಘ್ಯಂ ದತ್ತಂ ನಮಮ
ಭೂಮಿ ಪೂಜಾ ವಿಧಾನ 
ಅಶ್ವಿನೀ ಭರಣೀ ರೋಹಿಣೀ ಮೃಗ ಆಶ್ಲೇಷಾ ಮಘಾ ಪೂರ್ವಾ ಉತ್ತರಾತ್ರಯ ಹಸ್ತಾ ಅನುರಾಧಾ ಮೂಲಾ ಪೂರ್ವಾಷಾಢ ಶ್ರವಣಾ ಪೂರ್ವಾಭಾದ್ರಪದ ರೇವತೀ  ಈ ನಕ್ಷತ್ರಗಳಲ್ಲಿ ಶಿಲಾನ್ಯಾಸ ಪಾಯಾ ತುಂಬುವುದನ್ನು ಭೂಮಿ ಪೂಜೆಯನ್ನು ಮಾಡಬೇಕು 
ಸಂಕಲ್ಪಃ  ಅಸ್ಮಿನ್ ಸ್ಥಲೇ ನಿರ್ಮೀಯ ಮಾಣ _ ಗೃಹ ಕರ್ಮಸು ನಿರ್ವಿಘ್ನತಾ ಸಿಧ್ಯಾ ಭವಿಷ್ಯತೋ ಗೃಹಸ್ಯ ದಾರ್ಢ್ಯ ಸಿಧ್ಯರ್ಥಂ ಅತ್ರ ನಿವಸತಾಂ ಸಂಚರತಾಂಚ ಭೂತ ಪ್ರೇತಾದಿ ದುಷ್ಟ ಗ್ರಹಾಣಾO  ದೃಷ್ಟಿ ಸ್ಥಿತಿ ನಿವಾರಣ ದ್ವಾರಾ ಸುಖ ಸೌಭಾಗ್ಯ ಸಿಧ್ಯರ್ಥಂ ಭೂಮಿ ಪೂಜಾಂ ನಂದಾದಿ ಶಿಲಾ ಸ್ಥಾಪನಂ ಚ ಕರಿಷ್ಯೇ 
ಹೀಗೆ ಸಂಕಲ್ಪ ಮಾಡಿ ಆಗ್ನೇಯಕ್ಕೆ ಪಾಯಾ ಹಾಕುವ ಕಡೆಗೆ ಭೂಮಿ ಪೂಜೆಯನ್ನು ಮಾಡಿ “ ಕುದ್ದಾಲಾದಿ ದೇವತಾಭ್ಯೋ ನಮಃ “
ಗುದ್ದಲೀ ಸಲಿಕೆ ಪೂಜೆಯ ಮಾಡಿ ಭೂಮಿಯನ್ನು ಖನನ ಮಾಡುತ್ತ  ನಂದಾ ಭದ್ರಾ ಜಯಾ ರಿಕ್ತಾ ಹೀಗೆ ನಾಲ್ಕು ಗೋಲಾದ ಚಿಕ್ಕ ಕಲ್ಲುಗಳನ್ನು ಇಟ್ಟು ನಾಮ ಮಂತ್ರ ಗಳಿಂದ ಪೂಜಿಸಿ ಸ್ಥಾಪಿಸ ಬೇಕು ನಂತರ ಎಂಟು ದಿಕ್ಕುಗಳಲ್ಲಿ ಅಷ್ಟ ದಿಕ್ಪಾಲಕರಿಗೆ ಹೆಸರಿನ ಪಾಯಸ, ಭತ್ತದ ಅರಳಿನಿಂದ ನೈವೇದ್ಯ ತೋರಿಸಿ ತೆಂಗಿನ ಕಾಯಿ ಒಡೆದು ಸಮರ್ಪಿಸಬೇಕು.              
ಮಾಘ ಸ್ನಾನ ವಿಧಿ 
ಮಮ ಸರ್ವ ಪಾಪ ಕ್ಷಯ – ದುಃಖ ದಾರಿದ್ಯ ವಿನಾಶಪೂರ್ವಕ ಶ್ರೀ ಮಹಾವಿಷ್ಣು ಪ್ರೀತ್ಯರ್ಥಂ ಮಾಘ –ಪೌರ್ಣಿಮಾ ಪರ್ಯಂತಂ ಮಾಘ ಸ್ನಾನಂ ಚ ಕರಿಷ್ಯೇ | ಮಾಘ ಮಾಸಮಿದಂ ಪುಣ್ಯಂ ಸ್ನಾಸ್ಯೇಹಂ ದೇವ ಮಾನವಃ | ತೀರ್ಥಸ್ಯಾಸ್ಯ ಜಲೇನಿತ್ಯ ಮಿತಿ ಸಂಕಲ್ಪ್ಯ ಚೇತಸಿ |
ಈ ಶ್ಲೋಕದಿಂದ ನೀರು ಸ್ಪರ್ಶ ಮಾಡಿ 
ದುಃಖ ದಾರಿದ್ರ್ಯ ನಾಶಾಯ ಶ್ರೀ ವಿಷ್ಣೋ ತೋಷನಾಯಚ | ಪ್ರಾತಃ ಸ್ನಾನಂ ಕರೋಮ್ಯದ್ಯ ಮಾಘೇ ಪಾಪವಿನಾಶನಂ ||  ಮಕರಸ್ಥೆ ರವೌ ಮಾಘೇ ಗೋವಿಂದಾಚ್ಯುತ ಮಾಧವ  | ಸ್ನಾನೇನಾ ನೇನ ಮೆಮೇವ ಯಯಥೋಕ್ತ ಫಲದೋ ಭವ ||
ಈ ಎರಡು ಶ್ಲೋಕಗಳನ್ನು ಹೇಳುತ್ತಾ ಸ್ನಾನ ಮಾಡಬೇಕು ಸ್ನಾನಾನಂತರ ಅರ್ಘ್ಯ ಕೊಡುವ ಮಂತ್ರ 
ಸವಿತ್ರೇ ಪ್ರಸವಿತ್ರೇಚ ಪರಂಧಾಮ ಜಲೇ ಮಮ  | ತ್ವತ್ತೇಜಸಾ ಪರಿಭ್ರಷ್ಠo ಪಾಪಂ ಯಾತು ಸಹಸ್ರಧಾ ||
ಸ್ನಾನಗಳಲ್ಲಿ ವಿವಿಧತೆಗಳು :
ಮುಖ್ಯ ಸ್ನಾನವನ್ನು ಮಾಡಲು ಶಕ್ಯ ವಿಲ್ಲದಿದ್ದಾಗ ಮಾತ್ರ ಗೌಣ  ಸ್ನಾನ ಮಾಡುವುದು ಒಳ್ಳೆಯದು
ಮಂತ್ರ ಸ್ನಾನ : ಆಪೋಹಿಷ್ಠಾ....  ಮಂತ್ರಗಳಿಂದ ಮಾರ್ಜನ ಮಾಡಿಕೊಳ್ಳುವುದು 
ಗಾಯತ್ರಿ ಸ್ನಾನ : ಗಾಯತ್ರಿ ಮಂತ್ರ ದಿಂದ ೧೦ ಸಲ ಅಭಿಮಂತ್ರಿಸಿದ ನೀರಿನಿಂದ ಪ್ರೋಕ್ಷಣೆ ಮಾಡಿಕೊಳ್ಳುವುದು 
ಆಗ್ನೇಯ ಸ್ನಾನ : ನೀರು ಹಾಕಿಕೊಳ್ಳದೇ ಭಸ್ಮ ಲೇಪಿಸಿಕೊಳ್ಳುವುದು    
ಕಪಿಲ ಸ್ನಾನ :  ಬಟ್ಟೆಯನ್ನು ಒದ್ದೆ ಮಾಡಿ ಒರೆಸಿಕೊಳ್ಳುವುದು 
ಸಾರಸ್ವತ ಸ್ನಾನ :  “ ತ್ವಂ ಶುದ್ಧೋಶಿ ..” ಎಂಬ ಮಂತ್ರಗಳಿಂದ ಸದಾಚಾರಿಗಳಾದ ವಿದ್ವಾಂಸರಿಂದ ಹೇಳಿಸಿಕೊಂಡು ಮಾಡುವ ಸ್ನಾನ 
ಗೌಣ ಸ್ನಾನ : ವಿಷ್ಣು ಪಾದೋದಕ ಅಥವಾ ವಿಪ್ರ ಪಾದೋದಕದಿಂದ ಪ್ರೋಕ್ಷಣೆ ಮಾಡಿಕೊಳ್ಳುವುದು   
ಗೌಣ ಸ್ನಾನದಿಂದ  ಸಂಧ್ಯಾ  ಜಪ  ಬ್ರಹ್ಮಯಜ್ಞ ಮಾಡಬಹುದು. ಆದರೇ ದೇವರ ಪೂಜೆ ಶ್ರಾದ್ಧಾದಿಗಳನ್ನು ಮಾಡಲು ಶುದ್ಧಿ ಇರುವುದಿಲ್ಲ  
ಅಶೌಚ ವಿಚಾರಃ  
ಯತಿಗಳಿಗೆ ಬ್ರಹ್ಮಚಾರಿಗಳಿಗೆ  ಜನನ ಮರಣಾಶೌಚವಿಲ್ಲ,  ಮಾತಾ ಪಿತೃ ಮರಣದಲ್ಲಿ  ಸಚೈಲ ಸ್ನಾನವಿದೆ 
ನಾಡಿ ಸ್ಪರ್ಶದಲ್ಲಿ ವೈದ್ಯರಿಗೆ ಅಶೌಚವಿಲ್ಲ,  ಅಶೌಚಕ್ಕಿಂತ ಮೊದಲು ಪ್ರಾಯಶ್ಚಿತ್ತ ಕರ್ಮವನ್ನು ಪ್ರಾರಂಭಿಸಿ ಆಗಿದ್ದರೇ ಅಶೌಚವಿಲ್ಲ
ಯಜ್ಞ ದಲ್ಲಿ ದೀಕ್ಷೆ ಹೊಂದಿದವರಿಗೆ ಪುರ್ಣಾಹುತಿಯ ವರೆಗೆ ಯಜ್ಞ ಸಮಾಪ್ತಿಯವರೆಗೆ  ಅಶೌಚವಿಲ್ಲ
ಸಂಕ್ರಾಂತಿ ಗ್ರಹಣ ಸ್ನಾನಾದಿಗಳಲ್ಲಿ ಅಶೌಚವಿಲ್ಲ.  ಅಶೌಚ ವಿದ್ದವರ ಮನೆಯಲ್ಲಿಯ ಹೂ, ಹಣ್ಣು, ಉಪ್ಪು, ಮೂಲಿಕೆ, ಶಾಕ, ಹಾಲು, ಮೊಸರು, ಔಷದಿ, ಉಂಡೆ, ಭತ್ತದಅರಳು ಇವೆಲ್ಲ ತೆಗೆದು ಕೊಳ್ಳಬಹುದು, ಆದರೇ ಅಶೌಚವಿದ್ದವರ ಕೈಯಿಂದ ತೆಗೆದುಕೊಳ್ಳ ಬಾರದು. 
ಅಶೌಚವಿದ್ದವರ ಮನೆಯಲ್ಲಿಯ, ಅಥವಾ ಅವರು ಮುಟ್ಟಿದ ಪದಾರ್ಥವನ್ನು ಸೇವಿಸಿದರೆ ಪ್ರಾಯಶ್ಚಿತ್ತವಿದೆ.  
                            ವಿಸ್ಮರಣಶೀಲರಿಗೆ, ವೇದ ಶಾಸ್ತ್ರಾಧ್ಯಯನ ಮಾಡುವವರಿಗೆ ಅಶೌಚವಿಲ್ಲ.  ಸಮಾವರ್ತನೆಯ ನಂತರ ಬ್ರಹ್ಮಚಾರಿಯು ಅಶೌಚಕ್ಕೆ ಅಧಿಕಾರಿಯಾಗುತ್ತಾನೆ. ಪ್ರಾಯಶ್ಚಿತ್ತ ಕರ್ಮ ಆರಂಭಿಸಿದಮೇಲೆ  ಅನುಷ್ಟ್ಥಾನ ಸಮಯಲ್ಲಿ ಅಶೌಚವಿರಿವುದಿಲ್ಲ . ಕರ್ಮ ಮುಗಿದ ನಂತರ ಮೂರುದಿನಗಳಲ್ಲಿ  ಅತಿಕ್ರಾಂತಾ ಶೌಚವನ್ನು ಆಚರಿಸ ಬೇಕು . ಕರ್ಮಾಂಗ ನಾಂದಿ ಶ್ರಾದ್ಧ ಮಾಡಿದಮೇಲೆ ಆ ಕರ್ಮ ಸಂಪನ್ನತೆಯ ವರೆಗೆ ಮತ್ತು ಹೆಚ್ಚಿನ ಅಶ್ವಸ್ಥತೆಯಲ್ಲಿ  ಅಶೌಚವಿಲ್ಲ.  ಜನನಾಶೌಚ –ಮರಣಾಶೌಚವಿದ್ದವರಿಗೆ ಮರಣ ಸಮಯ ಬಂದರೆ ಅಶೌಚವಿಲ್ಲ. ಅಂಥವರು ವೈರಾಗ್ಯವಿದ್ದಲ್ಲಿ ಸನ್ಯಾಸವನ್ನು ತೆಗೆದುಕೊಳ್ಳಬಹುದು. ದುರ್ಭಿಕ್ಷಾದಿಗಳು ಇದ್ದರೆ  ತತ್ಕಾಲ ಸ್ನಾನ ಶುದ್ಧಿ,  ವಿಪತ್ತು ದೂರವಾದಮೇಲೂ ಅಶೌಚವು ಉಳಿದಿದ್ದರೆ ಆಚರಿಸಲೇ ಬೇಕು. ಮರಣ ಸಮಯದಲ್ಲಿ ಅಶೌಚವಿದ್ದರೂ ದಾನ ಧರ್ಮಾದಿಗಳನ್ನು ಮಾಡಲು ಅಡ್ಡಿ ಇಲ್ಲ. 
ಅಶೌಚದಲ್ಲಿ ಮಾಡುವ ವಿಧಿಗಳು : ಅಶೌಚವಿದ್ದಾಗ ಅರ್ಘ್ಯಾಂತವಾಗಿ ಮಾನಸ ಸಂಧ್ಯಾವಂದನೆ ಮಾಡಬೇಕು ಮತ್ತು ಅರ್ಘ್ಯ ಕೊಡುವಾಗ ಗಾಯತ್ರಿ ಮಂತ್ರವನ್ನು ಸರಿಯಾಗಿ ಉಚ್ಚರಿಸಿ ಕೊಡಬೇಕು 10 ಗಾಯತ್ರಿ ಮಂತ್ರ ಜಪಮಾಡಿ” ಯಸ್ಯಸ್ಮ್ರುತ್ಯಾ” ಹೇಳಬೇಕು ಅಶೌಚದಲ್ಲಿ ದರ್ಶ ಶ್ರಾದ್ಧವು ಲುಪ್ತವೇ ಆಗುವುದು  ಸಾಂವತ್ಸರಿಕ ಶ್ರಾದ್ಧವನ್ನು ಅಶೌಚ ಮುಗಿದಮೇಲೆ  11 ನೇ ದಿವಸ ಮಾಡಬೇಕು   ಭೋಜನ ಸಮಯದಲ್ಲಿ ಅಶೌಚ ತಿಳಿದರೆ ಬಾಯಲ್ಲಿಯ ತುತ್ತನ್ನು ಬಿಟ್ಟು ಸ್ನಾನ ಮಾಡಬೇಕು  ಕೆಲವರು ಶ್ರೌತ ಕರ್ಮಗಳನ್ನು ಅಶೌಚದಲ್ಲಿಯು ಮಾಡಬಹುದೆಂದು ಹೇಳುತ್ತಾರೆ  ಸ್ಥಾಲಿಪಾಕವನ್ನು  ಅಶೌಚ ಮುಗಿದಮೇಲೆ ಮಾಡಬೇಕು 
                 ಜನನಾಶೌಚ ಮರಣಾಶೌಚ ಈ ಎರಡು ತರದ ಅಶೌಚ ಬಂದಾಗ, ನವರಾತ್ರಿಯಲ್ಲಿ ಘಟಸ್ಥಾಪನಾದಿಗಳನ್ನು ಬ್ರಾಹ್ಮಣರ ಕಡೆಯಿಂದ ಮಾಡಿಸಬೇಕು ನವರಾತ್ರಿ ಪ್ರಾರಂಭವಾದಮೇಲೆ ಮಧ್ಯದಲ್ಲಿ ಅಶೌಚ ಬಂದರೂ ಪೂಜಾದಿಗಳನ್ನು ಸ್ವತಃ ಅಮನಂತ್ರಕವಾಗಿ ಗಂಟೆ ಜಾಗಟೆಗಳನ್ನು ಬಾರಿಸದೇ  ಮಾಡಬೇಕೆಂದು ಕೆಲವರು ಹೇಳುತ್ತಾರೆ  ಆದರೇ ಶಿಷ್ಯರು ಪೂಜಾ ದೇವತಾ ಸ್ಪರ್ಶ ಮಾಡುವುದು ಇತ್ಯಾದಿ ಇರದೇಯಿರುವುದರಿಂದ ಬೇರೆಯವರಿಂದಲೇ ಮಾಡಿಸುವುದು  ಮಧ್ಯದಲ್ಲಿ ಅಶೌಚ  ಸಮಾಪ್ತಿಯಾಗುವುದಿದ್ದರೆ 5 3 1 ದಿನವಾದರೂ ನವರಾತ್ರಿಯನ್ನು ಆಚರಿಸುವ ರೂಧಿ ಇದೆ ಕೊನೆಯ ವರೆಗೂ ಅಶೌಚವಿದ್ದರೆ  ಹೋಮ ಘಟ ವಿಸರ್ಜನೆಗಳನ್ನು ಬ್ರಾಹ್ಮಣರಿಂದ ಮಾಡಿಸಿ ಸ್ವತಃ ಪಾರಣೆಯನ್ನು ಮಾಡಿ ಅಶೌಚ ಮುಗಿದಮೇಲೆ ವಿಪ್ರ ಭೋಜನ  ದಕ್ಷಿಣಾ ದಿಗಳನ್ನು ಕೊಡಬೇಕು  ಸ್ತ್ರೀಯರು ರಜಸ್ವಲೆಯಾಗಿದ್ದಲ್ಲಿ ಪಾರಣೆಯ ದಿವಸ ಪಾರಣೆಯನ್ನು ಮಾಡಿ  ಶುದ್ಧಿಯಾದ ಮೇಲೆ ದಾನವನ್ನು ಮಾಡಬೇಕು ಅಭರ್ತೃಹ ಸ್ತ್ರೀಯರು ಶುದ್ಧಿ ನಂತರವೇ ಪಾರಣೆಯನ್ನು ಮಾಡುವುದು 
ಮೂಲಪುರುಷರಿಂದ 8 ನೆಯ ತಲೆಯವರು ಅಶೌಚವನ್ನು ಕಡಿಮೆ ಮಾಡಿಕೊಳ್ಳುವ ವಿಧಾನ 
ಮೂಲಪುರುಷರಿಂದ  7  ನೇ ಪುರುಷ ಪರ್ಯಂತ = ಸಪಿಂಡರು ಎಂದು ಕರೆಯಿಸಿ ಕೊಳ್ಳುತ್ತಾರೆ 
8 ನೇ ಪುರುಷರಿಂದ  14  ನೇ ಪುರುಷ ಪರ್ಯಂತ = ಸಮಾನೋದಕರು ಎಂದು ಕರೆಯಿಸಿ ಕೊಳ್ಳುತ್ತಾರೆ 
15 ನೇ ಪುರುಷರಿಂದ 21  ನೇ ಪುರುಷ ಪರ್ಯಂತ = ಸಗೋತ್ರಜರು ಎಂದು ಕರೆಯಿಸಿ ಕೊಳ್ಳುತ್ತಾರೆ 
                      ಮೂಲಪುರುಷರಿಂದ  7  ನೇ ಪುರುಷ ಪರ್ಯಂತ = ಸಪಿಂಡರು ಎಂದು ಕರೆಯಿಸಿ ಕೊಳ್ಳುತ್ತಾರೆ  ಇಲ್ಲಿಯವರೆಗೆ  10 ದಿನ ಅಶೌಚ ಮಾಡಬೇಕಾಗುತ್ತದೆ  8 ನೆಯ ತಲೆಯವರು ಇನ್ನೊಬ್ಬ 8 ನೆಯವರ ಅಶೌಚ ಮಾಡಬೇಕಾದರೆ  3  ದಿವಸ ಮಾಡಬೇಕು   ಇದನ್ನು ಕಡಿಮೆ ಮಾಡಿಕೊಳ್ಳುವುದಾದರೆ  ಮೊದಲು ನದಿ ಸ್ನಾನ ಮಾಡಿ, ಸಂಧ್ಯಾವಂದನೆ, ದೇವ ಪೂಜಾ  ಮತ್ತೆ ನದಿ ಸ್ನಾನ ಮಾಡಿ ೮ ನೆಯ ತಲೆಯವರು  3 ದಿನ ಅಶೌಚ ಪರಿಪಾಲನೆ ಮಾಡಬೇಕು  
मूलपुरुषतः प्रवृत्त – साप्तपौरुष सपिण्ड्य कारणकदशाहाशौच निवृत्ति – द्वारा सोदकत्व प्रयुक्तः – त्रिरात्राशौ च परिपालनार्थ नदिस्नानं संध्या वन्दनं देवता प्रार्थनं पुनर्नदिस्नान महं करिष्ये  
ಶ್ರಾದ್ಧ ವಿಚಾರ :
ದೇಶಾಂತರದಲ್ಲಿ ಮರಣ ಹೊಂದಿದ ಮನುಷ್ಯನ ಮೃತ ಮಾಸವು ಗೊತ್ತಿದ್ದೂ ಮೃತ ತಿಥಿಯು ಗೊತ್ತಿರದೇ ಇದ್ದರೇ ಆ ಮಾಸದ ಅಮಾವಾಸ್ಯೆ (ದರ್ಶ) ಶುಕ್ಲ ಏಕಾದಶಿ ಅಥವಾ ಕೃಷ್ಣ ಏಕಾದಶಿ ದಿವಸ ಪ್ರತಿ ವಾರ್ಷೀಕ ಶ್ರಾದ್ಧವನ್ನು ಮಾಡಬೇಕು. ಮೃತ ತಿಥಿಯು ಗೊತ್ತಿದ್ದೂ ಮಾಸ ಗೊತ್ತಿರದೇ ಇದ್ದರೆ ಮಾರ್ಗಶೀರ್ಷ, ಮಾಘ,ಭಾದ್ರಪದ, ಆಷಾಢ  ಮಾಸಗಳಲ್ಲಿ ಆ ತಿಥಿಯಲ್ಲಿ ಮಾಡಬೇಕು.   ಅಶೌಚವಿದ್ದಾಗ ಶ್ರಾದ್ಧ ಕಾಲ ಬಂದರೆ 11 ನೇ ದಿನ ಶುದ್ಧಿಯಾದ ಮೇಲೆ ಶ್ರಾದ್ಧ ಮಾಡಬೇಕು. ಅಶೌಚದಲ್ಲಿ ಬಿಟ್ಟ ಪಂಚ ಮಹಾಯಜ್ಞ ಗಳನ್ನೂ ಅಶೌಚ್ಯಾಂತ್ಯದಲ್ಲಿ ಮಾಡಬಾರದು. ಅಶೌಚವಿಲ್ಲದೆ ದರ್ಶನ ಲೋಪವಾದಲ್ಲಿ ಕೇವಲ ಪ್ರಾಯಶ್ಚಿತ್ತ. ಸಮಯಾಂತರದಲ್ಲಿ ಅದನ್ನು ಮಾಡಲೇಬಾರದು. ಅಶೌಚ ಮುಗಿದಮೇಲೆ 11 ದಿವಸವೂ ಸಹಿತ ಶ್ರಾದ್ಧ ಮಾಡಲು ಶಕ್ಯ ವಿಲ್ಲದಿದ್ದರೆ, ಅಮಾವಾಸ್ಯೆ (ದರ್ಶ) ಶುಕ್ಲ  ಕೃಷ್ಣ ಏಕಾದಶಿ ತಿಥಿಗಳಲ್ಲಿ ಶ್ರಾದ್ಧವನ್ನು ಮಾಡಬೇಕು. ವಿಸ್ಮರಣದಿಂದ ಶ್ರಾದ್ಧಕಾಲವು ಅತಿಕ್ರಾಂತವಾದಲ್ಲಿ ಅಮಾವಾಸ್ಯೆ (ದರ್ಶ) ಶುಕ್ಲ  ಕೃಷ್ಣ ಏಕಾದಶಿ ತಿಥಿಗಳಲ್ಲಿ ಶ್ರಾದ್ಧವನ್ನು ಮಾಡಬೇಕು. “ ಅಶೌಚೇತರ ವ್ಯಾಧ್ಯಾದಿವಿಘ್ನೇ  ವಿಸ್ಮೃತೌ ಚ ಏವಮೇವ “ ಎಂದು ಧರ್ಮಸಿಂಧು ವಿನಲ್ಲಿ ಹೇಳಿದ್ದಾರೆ.
ಶ್ರಾದ್ಧವನ್ನು  ಅಪರಾಹ್ನ ಕಾಲದಲ್ಲಿ  ಮಾಡಬೇಕೆಂದು ಶಾಸ್ತ್ರವಿದೆ. ಒಂದುವೇಳೆ ಮರುದಿನವು ಶ್ರಾದ್ಧತಿಥಿ ಇದ್ದು, ಅಪರಾಹ್ನ ಕಾಲವು ಹಿಂದಿನ ದಿವಸ 10 ಮಿನಿಟು ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ಅಪರಾಹ್ನ ಸಮಯ ಮುಗಿಯುವ ಹೊತ್ತಿಗೆ ಇರುತ್ತಿದ್ದು,( ಮಧ್ಯಾಹ್ನ 3 ಗಂಟೆಯ ನಂತರ ) ಶ್ರಾದ್ಧ ತಿಥಿಯ ದಿನದ ಅಪರಾಹ್ನ ಪ್ರಾರಂಭಕ್ಕೆ ಹಿಂದಿನ ದಿನಕ್ಕಿಂತ ಅಂದಾಜು ಮಧ್ಯಾಹ್ನ 1 ಗಂಟೆಯ ವರೆಗೆ ಇದ್ದರೂ ಮರುದಿನ ಅಂದರೆ ಶ್ರಾದ್ಧ ತಿಥಿಯ ದಿನವೇ ಶ್ರಾದ್ಧಮಾಡುವುದು ಯುಕ್ತ. ಏಕೆಂದರೆ ಹಿಂದಿನ ದಿನ ಶ್ರಾದ್ಧ ಬರುವ ವೇಳೆಗೆ ಶ್ರಾದ್ಧವು ಮುಗಿದು ಹೋಗಿರುತ್ತದೆ.  “ ಚತುರ್ಥೇ ಪ್ರಹರೆ ಪ್ರಾಪ್ತೇ ಯಃ ಶ್ರಾದ್ಧಂ ಕುರುತೇ ನರಃ | ಆಸುರಂ ತದ್ಭವೇತ್ ಶ್ರಾದ್ಧಂ ದಾತಾಚ ನರಕಂ ವ್ರಜೇತ್ “  ಎಂದು ಬೌಧಾಯಣರ ವಚನವಿದೆ. 6 ಗಂಟೆ ಸೂರ್ಯೋದಯಮಾನದಿಂದ 3 ಗಂಟೆಯ ನಂತರ 4 ನೇ ಪ್ರಹರ ಪ್ರಾರಂಭವಾಗುವುದರಿಂದ, ಅದು ನಿಷಿದ್ಧ.  ( ಒಂದು ಪ್ರಹರ ಅಂದರೆ ಮೂರು ತಾಸು ) ದಿನಮಾನದ 8 ನೇ ಭಾಗವಾದ ಕುತುಪ ಕಾಲವು ಮುಖ್ಯವಾಗಿದ್ದು ಆ ಕಾಲದ ವ್ಯಾಪ್ತಿಯಲ್ಲಿಯೂ ಶ್ರಾದ್ಧ ಮಾಡುವುದು ಸೂಕ್ತವಾಗುತ್ತದೆ.        
ಭಂಡಾಸುರ ವಧೆ
ಶ್ರೀ ಚಕ್ರಂ ಶಿವಯೋರ್ವಪುಹ್  ಎಂದು ಹೇಳಿದಂತೆ ಶ್ರೀ ಚಕ್ರವು ಶಿವ ಶಕ್ತಿ ಗಳ ಸಂಗಮವಾಗಿದೆ, ಭಂಡಾಸುರನನ್ನು ನಾಶಮಾಡಲು  ಶ್ರೀ ತ್ರಿಪುರ ಅವತಾರವಾಯಿತು. ಶಿವನ ಕೋಪಾಗ್ನಿಯಿಂದ ಕಾಮದೇವನ ಭಸ್ಮದಿಂದ ಗಣಪತಿಯ ಜೊತೆಗೆ ಆಡಲು ಪಾರ್ವತಿಯು ಒಂದು ಬೊಂಬೆಯನ್ನು ಮಾಡಿದಳು. ಲಕ್ಷ್ಮಿಯಿಂದ ಶಾಪಿತನಾದ ಮಾಣಿಕ್ಯ ಶೇಖರನು ಆ ಬೊಂಬೆಯಲ್ಲಿ ಪ್ರವೇಶಿಸಿ ಭಯಂಕರ ರೂಪತಾಳಿ ಭಂಡಾಸುರನಾದನು. ಶಿವನ ವರ ಪ್ರಭಾವದಿಂದ ಅಮರತ್ವವನ್ನು ಹೊಂದಿ ವಿಶುಕ್ರ, ವಿಷಂನಗಾದಿಗಳಿಂದ ಕೂಡಿಕೊಂಡು ನೂರಾರು ಬ್ರಹ್ಮಾಂಡಗಳನ್ನು ಆಳುತ್ತ ದೇವತೆಗಳನ್ನು ಬಲವಾಗಿ ಹಿಂಶಿಸಿದನು. ಬೃಹಸ್ಪತ್ಯಾಚಾರ್ಯರ ಆಚಾರ್ಯತ್ವದಲ್ಲಿ ನಡೆದ ದೇವತೆಗಳು ಮಾಡಿದ ಹೋಮದಲ್ಲಿ ಭಗವತಿಯು ಅಗ್ನಿ ಕುಂಡದಲ್ಲಿ ಪ್ರಕಟಳಾಗಿ ತ್ರಿಲೋಕ ಸುಂದರವಾದ ರೂಪಧರಿಸಿ ಸಹಸ್ರ ಮನ್ಮಥರಂತೆ ಕಾಂತಿಯುಳ್ಳ ಕಾಮೆಶ್ವರನಿಂದ ಕೂಡಿ ತ್ರಿಪುರ ಸುಂದರಿಯಾದಳು. ಇವಳಿಗೆ ರಾಜಶ್ಯಾಮಲೆಯು ಮಂತ್ರಿಣಿಯಾಗಿ ವಾರಾಹಿಯು ಸೇನಾಧ್ಯಕ್ಷಳಾದಳು. ಸಂತ್ರಸ್ತರಾದ ದೇವತೆಗಳು “ ಕಷ್ಟ ಕೊಡುವುದನ್ನು ಬಿಡು “ ಎಂಡಿ ನಾರದರ ಮುಖಾಂತರ ಹೇಳಿಕಳಿಸಿದರೂ ಶೂನ್ಯಕಪುರ ವಾಸಿನಿಯಾದ ಭಂಡನು ಅಸೂರಿ ಶಕ್ತಿ ವಿಘ್ನ ಯಂತ್ರಾದಿಗಳಿಂದ ಯುದ್ಧ ಮಾಡಿದರು ತ್ರಿಪುರ ಸುಂದರಿ ತನ್ನ ಸಹ ಯೋಧರ ಕೂಡಿಕೊಂಡು ಅವನ ಜೊತೆಗೆ ಸೆಣಸಾಡಿ ಕಾಮೇಶ್ವರಾಸ್ತ್ರದಿಂದ ಭಂಡಾಸುರನನ್ನು ಭಸ್ಮ ಮಾಡಿದಳು. ಕರುಣಾಮಯಿಯಾದ ಇವಳ ಪ್ರಭಾವದಿಂದ ದೇವತೆಗಳು ಸೌಖ್ಯವನ್ನು ಹೊಂದಿದರು. ಅದಕ್ಕಾಗಿಯೇ ಶಂಕರ ಭಗತ್ಪಾದರು “ ದೇಶಿಕರು ರೂಪೇಣ ದರ್ಶಿತಾ
ಅಭ್ಯುದಯಾಮ್ “ ಎಂದು ಹೇಳಿದ್ದಾರೆ.
ಕಾರ್ತೀಕ ಸ್ನಾನ ವಿಧಿ :                           
ಸ್ನಾನಕ್ಕೆ ಈ ಕೆಳಗಿನ ಸ್ಲೋಕದಿಂದ ಅರ್ಘ್ಯ ಕೊಡಬೇಕು.  
ನಮಃ ಕಮಲನಾಭಾಯ ನಮಸ್ತೇ ಜಲಶಾಯಿನೆ | ನಮಸ್ತೇಸ್ತು ಹೃಷಿಕೇಶ ಗೃಹಾನಾರ್ಘ್ಯಂ ನಮೋಸ್ತುತೆ ||
ಕಾರ್ತೀಕ ಸ್ನಾನ ಮಾಡುವಾಗ ಅನ್ನುವ ಸ್ಲೋಕ 
ಕಾರ್ತಿಕೇಹಂ  ಕರಿಷ್ಯಾಮಿ ಪ್ರಾತಃ ಸ್ನಾನಂ ಜನಾರ್ದನಃ | ಪ್ರೀತ್ಯರ್ಥಂ ತವದೇವೇಶ ದಾಮೋದರ ಮಯಾಸಹ |  
ಧ್ಯಾತ್ವಾಹಂ ತ್ವಾಂ ಚ ದೇವೇಶ ಜಲೇಸ್ಮಿನ್ ಸ್ನಾತುಮುದ್ಯತಃ | ತವಪ್ರಸಾದಾತ್ ಪಾಪಂಮೆ ದಾಮೋದರ ವಿನಶ್ಯತು ||
ಸ್ನಾನದ  ನಂತರ ಪುನಃ ಎರಡು ಅರ್ಘ್ಯ ಕೊಡಬೇಕು.
ನಿತ್ಯೇ ನೈಮಿತ್ತಿಕೇ ಕೃಷ್ಣ ಕಾರ್ತಿಕೇ ಪಾಪನಾಶನೆ | ಗೃಹಾಣಾರ್ಘ್ಯಂ ಮಯಾ ದತ್ತಂ ರಾಧಯಾ ಸಹಿತೋ ಹರೇ  ||
ವ್ರತೀನಃ ಕಾರ್ತಿಕೇ ಮಾಸಿ ಸ್ನಾತಸ್ಯ ವಿಧಿವನ್ ಮಮ | ಗೃಹಾಣಾರ್ಘ್ಯಂ ಮಯಾ ದತ್ತಂ ರಾಧಯಾ ಸಹಿತೋ ಹರೇ  ||
ಶ್ರೀ ಮೃಣ್ಮಯ ವೃಷಭ ಪೂಜಾ ವಿಧಿ  ( ಮಣ್ಣೆತ್ತಿನ ಅಮಾವಾಸ್ಯಾ )   
ಆಚಮ್ಯ,... ದೇಶಕಾಲೌ ಸಂಕೀರ್ತ್ಯ ... ಮಮ ಸಹ ಕುಟುಂಬಸ್ಯ ಸಹಪರಿವಾರಸ್ಯ ಕ್ಷೇಮ ಸ್ಥೈರ್ಯ ವಿಜಯ ವೀರ್ಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧಿ ಪೂರ್ವಕ ಸಮಸ್ತ ಮಂಗಲಾವ್ಯಾಪ್ತ್ಯರ್ಥಂ ಜ್ಯೇಷ್ಠ ಅಮಾವಾಸ್ಯಾಯಾಂ ಪ್ರತಿ ವಾರ್ಷಿಕ ಕುಲಾಚಾರಂಗತ್ವೇನ ವಿಹಿತಂ, ಸಸ್ಯಾಭಿವೃದ್ಧ್ಯರ್ಥಂ, ಕ್ರಿಮಿಕೀಟ ಬಾಧಾ ವಿನಾಶಾರ್ಥಂ, ಸುವೃಷ್ಟ್ಯಾದಿಪ್ರಾಪ್ಯಾ, ಧನ ಧಾನ್ಯ ಸಮೃಧ್ಯರ್ಥಂ..ಶ್ರೀ ಪರಮೇಶ್ವರ ಪ್ರಿತ್ಯರ್ಥಂ.. ಮೃಣ್ಮಯ ವೃಷಭ ಪೂಜನಂ ಚ ಕರಿಷ್ಯೇ ...... ಹೀಗೆ ಸಂಕಲ್ಪ ಮಾಡಿ ಸಂಕ್ಷೇಪದಿಂದ ಪ್ರಾಣ ಪ್ರತಿಷ್ಥೆ ಮಾಡಿ ಕಲಶ ಶಂಖ ಘಂಟಾ ಪೂಜಾದಿಗಳನ್ನು ಮೊದಲೇ ಮುಗಿಸಿಕೊಂಡು ಷೋಡಶೋಪಚಾರ ಪೂಜೆಯನ್ನು ಮಾಡುವುದು.
ನಮ್ಮ ಸನಾತನ ಪರಂಪರೆಯಲ್ಲಿ ಮೃಣ್ಮಯ ದೇವರುಗಳ ಪೂಜೆಗೆ ಮಹತ್ವ ನೀಡಲಾಗಿದೆ 
               ಎತ್ತು, ಆಕಳು, ಕರ, ಹಾವು, ಇಲಿ, ಪರ್ವತಗಳು ಇತ್ಯಾದಿ ಮತ್ತು ಗಣಪತಿ, ರುದ್ರ, ಗೌರಿ, ಕೃಷ್ಣ ಬಲರಾಮ, ಪಾಂಡವರು ಇತ್ಯಾದಿ ಕೆಲ ದೇವರುಗಳು ಭೂಮಿಗೆ, ಮಣ್ಣಿಗೆ ಕೃಷಿಗೆ ಸಂಬಂಧಪಟ್ಟ ಸಸ್ಯ, ಗಿಡ, ಮರಗಳಲ್ಲಿರುವ ಆರಾಧ್ಯ ದೈವಗಳನ್ನು ಆರಾಧಿಸುತ್ತಿದ್ದರೆ, ಪ್ರಾಮಾಣಿಕವಾಗಿ ಪೋಷಿಸುತ್ತಿದ್ದರೆ, ಆದರ ತೋರಿಸುತ್ತಲಿದ್ದರೆ  ನಮಗೆಲ್ಲರಿಗೂ ಬೇಕಾದ ಮಳೆ, ಧಾನ್ಯ, ಧನ, ಐಶ್ವರ್ಯ,ನೆಮ್ಮದಿ ಸಿಗುವುದು ಖಂಡಿತ. ನಮ್ಮ ಕಣ್ಣಿಗೆ ಕಾಣುವ ಇದು ಪೃಥ್ವಿ,ಚಂದ್ರ, ಸೂರ್ಯ, ಆಕಾಶ, ಬೆಂಕಿ,ಗಾಳಿ,ನೀರು ಹೇಗೆ ಸತ್ಯವೋ ಅಷ್ಟೇ ಸತ್ಯ. ಇಷ್ಟೇ ಅಲ್ಲ ನಮ್ಮ ಸನಾತನ ಪರಂಪರೆಯಲ್ಲಿ ಆಚರಿಸುವ 12 ಹುಣ್ಣಿಮೆ, 12 ಅಮಾವಾಸ್ಯ ಗಳು ಸಹಿತ ಭೂಮಿಗೆ, ಮಣ್ಣಿಗೆ, ಕೃಷಿಕ್ಷೇತ್ರಕ್ಕೆ  ಸಂಬಂಧಪಟ್ಟ ಆರಾಧ್ಯ ದೈವಗಳನ್ನು ಆರಾಧಿಸುತ್ತಿದ್ದೇವೆ.   
              ನಮ್ಮ ಸಂಸ್ಕೃತಿಯಲ್ಲಿ ಹೀಗೂ ಕೃತಜ್ಞತೆಯನ್ನು ವ್ಯಕ್ತ ಪಡಿಸುವ ಪರಿಪಾಠವಿದೆ .....
ನಾವಿರುವ ಪೃಥ್ವಿ, ನಮ್ಮ ಪೃಥ್ವಿ, ನಮ್ಮ ವಸುಂಧರೆ, ನಮ್ಮ ಕ್ಷೇತ್ರವನ್ನು ತನ್ನ ಕೋರ ದಾಢೆಗಳಲ್ಲಿ ಸುರಕ್ಷಿತವಾಗಿ ಮೇಲೆ ಹೊತ್ತುತಂದ ಯಜ್ಞ ವರಾಹ ದೇವರನ್ನೂ ನಮ್ಮಲ್ಲಿ ಪೂಜಿಸುವ, ಕೃತಜ್ಞತೆಯನ್ನು ವ್ಯಕ್ತ ಪಡಿಸುವ ನಿಯಮಗಳನ್ನು ಅಳವಡಿಸಿಕೊಂಡಿದ್ದೇವೆ. ಮನೆ ಮನೆಗಳಲ್ಲಲ್ಲದಿದ್ದರೂ ಯಜ್ಞ ವರಾಹ ದೇವರ ಮೂರ್ತಿಗಳು, ಮಂದಿರಗಳು ನಮ್ಮ ದೇಶದಲ್ಲಿ ಕಾಣಸಿಗುತ್ತವೆ,
|| ವಸುಧೈವ ಕುಟುಬಕಂ ||      
ಧ್ಯಾನ ಶ್ಲೋಕಃ 
ಧರ್ಮಸ್ತ್ವಮ್ ವೃಷಭ ರೂಪೇಣ ಜಗದಾನಂದಕಾರಕ | ಅಷ್ಟಮೂರ್ತೆರಧಿಷ್ಟಾನ ಮತಃ ಪಾಹಿ ಸನಾತನ  ||
ವೇದೋಕ್ತ ಮಾಡುವದಾದಲ್ಲಿ “ ಋಷಭಂಮಾ “ ಎಂಬ ಮಂತ್ರದಿಂದ ಆವಾಹನೆ ಮಾಡಿ ಪುರುಷಸೂಕ್ತ,ರುದ್ರಸೂಕ್ತದಿಂದ ಅಭಿಷೇಕ ದಿಂದ ಸಂಪನ್ನ ಮಾಡುವುದು. ಮನೆಯಲ್ಲಿಯ ಎತ್ತು, ಆಕಳುಗಳನ್ನು ಕರುಗಳನ್ನು ಚನ್ನಾಗಿ ತಿಕ್ಕಿ ಸ್ನಾನ ಮಾಡಿಸಬೇಕು ಅವುಗಳಿಗೆ ರಂಗುರಂಗಾಗಿ ಶೋಭಿಸುವಂತೆ ಮಾಡಿ, ಕೋಡುಗಳಿಗೆ ಸಿಂಧೂರ ಹಚ್ಚಿ, ಹೊಟ್ಟೆ ತುಂಬ ಮೇವು ತಿನ್ನಿಸಿ ನೀರನ್ನು ಕುಡಿಸಬೇಕು ಆದಿನ 
ಆದಷ್ಟು ಕೆಲಸ ತೆಗೆದುಕೊಳ್ಳಬಾರದು. ಸಾಕು ಪ್ರಾಣಿಳಿಗೆ ನಿಸರ್ಗಕ್ಕೆ ಋಣ ತೀರಿಸುವ ಭಾರತ ಸನಾತನ  ಧರ್ಮದ ವೈಷಿಷ್ಥ್ಯ ಮತ್ತು ಪರಂಪರೆಯಾಗಿದೆ     
ಶ್ರೀ ಪರಮೇಶ್ವರಾರ್ಪಣಮಸ್ತು           
ವೈಶಾಖ ಸ್ನಾನ ಸಂಕಲ್ಪ 
ಮಾಸ ಕೃತ್ಯಗಳು : ಚೈತ್ರ ಮಾಸದಲ್ಲಿ ಶುಕ್ಲ ಏಕಾದಶಿಯಿಂದಾಗಲಿ ಅಥವಾ ಪೌರ್ಣಿಮಾ ಮೇಷ ಸಂಕ್ರಮಣದಿಂದಾಗಲಿ ವೈಶಾಖ ಸ್ನಾನವನ್ನು ಪ್ರಾರಂಭಿಸಬೇಕು    ಸ್ನಾನ ಮಾಡುವಾಗ ಹೇಳಬೇಕಾದ ಮಂತ್ರ 
ವೈಶಾಖಂ ಸಕಲ ಮಾಸಂ ಮೇಷ ಸಂಕ್ರಮಣೇ ರವೇಃ | ಪ್ರಾತಃ ಸನೀಯಮಂ ಸ್ನಾಸ್ಯೆ ಪ್ರೀಯತಾಂ ಮಧುಸೂದನ |  
ಮಧುಹಂತುಹ್  ಪ್ರಸಾದೇನ ಬ್ರಾಹ್ಮಣಾನಾಮನುಗ್ರಹಾತ್ | ನಿರ್ವಿಘ್ನಮಸ್ತು ಮೇ ಪುಣ್ಯಂ ವೈಶಾಖ ಸ್ನಾನಮನ್ವಹಂ |
ಮಾಧವೇ ಮೇಷಗೆ ಭಾನೌ ಮುರಾರೆ ಮಧುಸೂದನ   | ಪ್ರಾತಃ ಸ್ನಾನೇನ ಮೇ ನಾಥ ಫಲದೋ ಭವ ಪಾಪಹಂ    |
ಒಂದು ತಿಂಗಳವರೆಗೆ ಸ್ನಾನ ಮಾಡಲು ಶಕ್ಯವಿಲ್ಲದಿದ್ದಲ್ಲಿ ಕೊನೆಯ ಮೂರು ದಿನಗಳಲ್ಲಿಯಾದರೂ ತಪ್ಪದೆ ಮಾಡಬೇಕು. ಕಲ್ಪಾದಿ , ಮನ್ವಾದಿ   ಸಂಕ್ರಮಣಗಳಿದ್ದ  ದಿವಸ ಶ್ರಾದ್ಧ ಮಾಡಬೇಕು  ಅದೂ ಶಕ್ಯವಿಲ್ಲದ್ದಿದ್ದಲ್ಲಿ ತಂತ್ರೇನ ಸಂಕಲ್ಪ ಮಾಡಿ ಬ್ರಹ್ಮ ಯಜ್ಞ ದಲ್ಲಿಯ ತರ್ಪಣದ ಜೊತೆಗೆ ತರ್ಪಣವನ್ನು ಕೊಡಬೇಕು.    
ಶ್ರೀ ದತ್ತ ಸ್ತೋತ್ರಂ 
ಪ್ರತಿದಿನ ಈ ಸ್ತೋತ್ರದ ಪಠಣದಿಂದ ಮನಸ್ಸಿನಲ್ಲಿಯ ಚಾಂಚಲ್ಯವು ದೂರವಾಗಿ ಸ್ಥಿರತೆ ಹಾಗು ಧೈರ್ಯವು ಬರುತ್ತದೆ.
ಅನಸೂಯಾತ್ರಿ ಸಂಭೂತ ದತ್ತಾತ್ರೇಯ ಮಹಾಮತೇ | ಸರ್ವದೇವಾಧಿ ದೇವತ್ವಂ ಮಮ ಚಿತ್ತಂಸ್ಥಿರೀ  ಕುರು  || 1 ||
ಶರಣಾಗತ ದೀನಾರ್ತ  -  ತಾರಕಾ ಖಿಲಕಾರಕಾ  |  ಸರ್ವ ಚಾಲಕ ದೇವತ್ವಂ  ಮಮ ಚಿತ್ತಂ ಸ್ಥಿರೀ  ಕುರು  || 2 ||
ಸರ್ವ ಮಂಗಳ ಮಾಂಗಲ್ಯ ಸರ್ವಾದಿ ವ್ಯಾಧಿ ಭೇಷಜ | ಸರ್ವ ಸಂಕಟ ಹಾರಿ ತ್ವಂ  ಮಮ ಚಿತ್ತಂಸ್ಥಿರೀ  ಕುರು  || 3 ||
ಸ್ಮರ್ತೃಗಾಮಿ  ಸ್ವಭಕ್ತಾನಾಂ ಕಾಮದೋ ರಿಪು ನಾಶನಃ | ಭುಕ್ತಿ ಮುಕ್ತಿಪ್ರದಃ ಸ ತ್ವಂ ಮಮ ಚಿತ್ತಂಸ್ಥಿರೀ  ಕುರು  || 4 || 
ಸರ್ವ ಪಾಪಃ ಕ್ಷಯಕರ ಸ್ತಾಪ ದೈನ್ಯ ನಿವಾರಣಃ  |  ಯೋSಭಿಷ್ಟದಃ ಪ್ರಭು ಸ ತ್ವಂ ಮಮ ಚಿತ್ತಂಸ್ಥಿರೀ  ಕುರು  || 5 ||
ಯ ಏತತ್ ಪ್ರಯತಃ ಶ್ಲೋಕ ಪಂಚಕಂ ಪ್ರಪಠೇತ್ ಸುಧೀ  |  ಸ್ಥಿರ ಚಿತ್ತಃ ಸ ಭಗವತ್ ಕೃಪಾ ಪಾತ್ರಂ ಭವಿಷ್ಯತಿ    || 6 || 
ಇತೀ ಶ್ರೀ ಶ್ರೀ ವಾಸುದೇವಾನಂದ ಸರಸ್ವತಿ ವಿರಚಿತ ಸ್ಥಿರ ಚಿತ್ತಕಾರಕ ದತ್ತ ಸ್ತೋತ್ರಂ ಸಂಪೂರ್ಣಂ ||
ನವಗ್ರಹ ಕವಚ ( ಹುಟ್ಟಿದ ಮಕ್ಕಳು ತೀರಿ ಹೋಗುತ್ತಿರುವ ಸ್ಥಿತಿಯಲ್ಲಿರುವ ಮಹಿಳೆಯರು, ಕಾಕ ಬಂಜೆಯರಾದ ಮಹಿಳೆಯರಿಗೆ ಮಕ್ಕಳಾಗ ಬಹುದು )
ಮನುಷ್ಯನಿಗೆ ಸುಖದುಃಖಗಳು ಗ್ರಹಗಲಿಂದಲೇ ಬರುವವು. ಜೀವನದಲ್ಲಿ ಮನುಷ್ಯನಿಗೆ ಆರೋಗ್ಯ ಅವಶ್ಯಕ ಸಂಪತ್ತು ಕಾರ್ಯ ಸಿದ್ಧಿ ಇವು ಮುಖ್ಯ ಈ ಕವಚವನ್ನು ನಿತ್ಯ ಪಠಿಸುವುದರಿಂದ ಈ ಫಲಗಳು ಪ್ರಾಪ್ತವಾಗುವವು. ಹುಟ್ಟಿದ ಮಕ್ಕಳು ತೀರಿ ಹೋಗುತ್ತಿರುವ ಸ್ಥಿತಿಯಲ್ಲಿರುವ ಮಹಿಳೆಯರು, ಕಾಕ ಬಂಜೆಯರಾದ ಮಹಿಳೆಯರಿಗೆ ಮಕ್ಕಳಾಗ ಬಹುದು ಎಂದು ಶಾಸ್ತ್ರವು ಹೇಳುತ್ತದೆ. ಇದು ಯಾಮಲ ತಂತ್ರಕ್ಕನುಸಾರ  ಕೊಡಲಾಗಿದೆ. 
ಶಿರೋಮೇ ಪಾತು ಮಾರ್ತಂಡ ಕಪಾಲಂ ರೋಹಿಣಿಂ ಪತಿ | ಮುಖ ಅಂಗಾಕಪಾತು ಕಂಠಂ ಚ ಶಶಿನಂದನಃ ||
ಬುದ್ಧಿಂ ಜೀವ: ಸದಾಪಾತು ಹೃದಯಂ ಭೃಗು ನಂದನಃ | ಜಠರಂ ಚ ಶನೀ ಪಾತು ಜಿವ್ಹಾಂ ಮೇ ದಿತಿ ನಂದನಃ ||
ಪಾದೌ ಕೇತು: ಸದಾ ಪಾತು ವಾರಾ ಸರ್ವಾಂಗ ಮೇವಚ | ತಿಥಯೋಷ್ಟೌದಿಶಃ ಪಾತು ನಕ್ಷತ್ರಾಣಿ ವಪು: ಸದಾ ||
ಅಂಸೌ ರಾಶಿ: ಸದಾ ಪಾತು ಯೋಗಶ್ಚ ಸ್ಥೈರ್ಯ ಮೇವಚ | ಸಚಿರಾಯು: ಸುಖಿಪುತ್ರಿ ಯುದ್ದೇಚ ವಿಜಯೀ ಭವೇತ್ ||        
ರೋಗಾತ್ ಪ್ರಮುಚ್ಯತೆ ರೋಗಿ ಬಂಧೋಮುಚ್ಚೇತ ಬಂಧನಾತ್ | ಶ್ರೀಯಂ ತ ಲಭತೇನಿತ್ಯಂ ರಿಷ್ಟಿಸ್ತಸ್ಯ ನಜಾಯತೇ ||
ಯಃ ಕರೆ ಧಾರಯೇ ನಿತ್ಯಂ ತಸ್ಯ ರಿಷ್ಟರ್ನ ಜಾಯತೇ | ಪಥನಾತ್ ಕವಚಸ್ಯಾಸ್ಯ ಸರ್ವ ಪಾಪಾತ್ ಪ್ರಮುಚ್ಯತೆ   || 
ಮೃತ ವತ್ಸಾ ಚ ಯಾ ನಾರೀ ಕಾಕ ವಂಧ್ಯಾ ಚ ಯಾ ಭವೇತ್ | ಜೀವ ವತ್ಸಾ ಪುತ್ರವತಿ ಭವತ್ಯೇಹ ನ ಸಂಶಯಃ ||
ಏತಾಂ ರಕ್ಷಾಂ ಪಠೇದ್ಯಸ್ತು ಅಂಗಂ ಸ್ಪೃಷ್ಟ್ವಾ ಪೀ ವಾ  ಪಠೇತ್ ||    
ಕಾಳಿಕಾ ಸ್ತೋತ್ರಂ 
ಈ ಸ್ತೋತ್ರವು ದೇವಿ ಭಾಗವತದಲ್ಲಿದೆ. ಅಷ್ಟಮಿ ನವಮಿ ಚತುರ್ದಶಿ ಹುಣ್ಣಿವೆ  ಅಮಾವಾಸ್ಯಾ ತಿಥಿಗಳಲ್ಲಿ ಮೂರು ಸಲ ಪಠಿಸುತ್ತಿದ್ದರೆ ಅವರಿಗೆ ಆರೋಗ್ಯ ವಿಜಯ ಉಂಟಾಗಿ ಚೋರ ಅಗ್ನಿ ಮುಂತಾದ ಯಾವುದೇ ಭಯ ಬರುವುದಿಲ್ಲ. ವಿಶ್ವ ಸ್ವರೂಪಳಾದ ದೇವಿಯನ್ನೇ ಇಲ್ಲಿ ಸ್ತುತಿಸಲಾಗಿದೆ.          
ಬ್ರಹ್ಮವಿಷ್ಣು ಉಚತು: ನಮಾಮಿ ತ್ವಾ ವಿಶ್ವಕತಿಷ್ಕಂ | ಪರೇಶಿಂ ನಿತ್ಯಾಮಾಂದ್ಯಾ ಸತ್ಯವಿಜ್ಞಾನ ರೂಪಾಂ ||
ವಾಚಾತೀತಾಂ ನಿರ್ಗುಣಾಂ ಚ ಅತಿ ಸೂಕ್ಷ್ಮಾಂ | ಜ್ಞಾನಾತೀತಾಂ ಶುದ್ಧ ವಿಜ್ಞಾನ ಗಮ್ಯಾಂ   || 1 ||
ಪೂರ್ಣಾಂ ಶುದ್ಧಾಂ ವಿಶ್ವ ರೂಪಾಂ ಸುರೂಪಾಂ  | ದೇವಿಂ ವಂದ್ಯಾ ವಿಶ್ವ ವಂದ್ಯಾ ಮಪಿತ್ವಾಂ  |
ಸರ್ವಾಂಥಃ ಸ್ಥಾ ಮುತ್ತ ಮಸ್ಥಾ ನ ಸಂಸ್ಥಾ | ಮಿಡೇ ಕಾಲಿಂ ವಿಶ್ವಸಂಪಾಲಯಿತ್ರೀಮ್ || 2 ||
ಮಾಯಾತೀತಾಂ ಮಾಯಿನೀಂ ವಾಪಿ ಮಾಯಾಂ | ಭೀಮಾಂ ಶ್ಯಾಮಾಂ ಭೀಮನೇತ್ರಾಂ ಸುರೇಶಿಂ |
ವಿದ್ಯಾಂ ಸಿದ್ಧಾಂ ಸರ್ವ ಭೂತಾಶಯಸ್ಥಾ |  ಮಿಡೇ ಕಾಲಿಂ ವಿಶ್ವಸಂಹಾರಕತ್ರೀಮ್ || 3 ||
ನೋತೆ ರೂಪಂ ವೆತ್ತೀ ಶೀಲಂ ನ ಧಾಮ | ನೋ ವಾ ಧ್ಯಾನಂ ನಾಪಿ ಮಂತ್ರಂ ಮಹೇಶಿ |
ಸತ್ತಾ ರೂಪೇ ತ್ವಾಂ ಶರಣಂ ಪ್ರಪದ್ಯೇ  | ವಿಶ್ವಾರಾಧ್ಯೇ ಸರ್ವ ಲೋಕೈಕ ಹೇತುಂ   || 4 ||
ದೌಸ್ಟೇ ಶೀರ್ಷಂ ನಾಭಿ ದೇಶೋ ನಭಶ್ಚ್ಯ | ಚಕ್ಷುಂ ಷಿ ತೇ ಚಂದ್ರ ಸೂರ್ಯಾ ನ ಲಾಸ್ಟೇ |
ಉನ್ಮೇಷಾಸ್ತೆ ಸುಪ್ರಬೋಧೋ ದಿ ವಾಚ | ರಾತ್ರಿರ್ಮಾತಶ್ಚಕ್ಷುಷೋಸ್ತೆ  ನಿಮೇಷಂ    || 5 ||
ವಾಕ್ಯಂ ದೇವಾ ಭೂಮಿ ರೇಷಾಂ ನಿತಂಬಂ | ಪಾದೌ ಗುಲ್ಫಂ ಜಾನು ಜಂಘಸ್ಥ್ವ ಧಸ್ಟೇ |
ಪ್ರಿತಿರ್ಧರ್ಮೋ ಧರ್ಮ ಕಾರ್ಯಂ ಹಿ ಕೋಪಃ | ಸೃಷ್ಟಿರ್ಬೋಧಃ ಸಂಹೃತಿಸ್ಥೆ ತು ನಿದ್ರಾ || 6 ||
ಅಗ್ನಿರ್ಜಿವ್ಹಾ ಬ್ರಾಹ್ಮಣಾಸ್ಥೆ ಮುಖಾಬ್ಜಂ | ಸಂಧ್ಯೆ ದ್ವೇತೆ ಭೃಯುಗಂ ವಿಶ್ವ ಮುರ್ತಿಹ್ |
ಶ್ವಾಸೋ ವಾಯುರ್ಬಾಹವೋ ಲೋಕಪಾಲಾಃ | ಕೀಡಾ ಸೃಷ್ಟಿಹ್ ಸಂಸ್ಥಿತಿಹ್ ಸಂಹೃತಿಸ್ತೆ || 7 ||
ಏವಂ ಭೂತಾಂ ದೇವಿ ವಿಶ್ವಾತ್ಮಿಕಾಂ ತಾಂ | ಕಾಲಿಂ ವಂದೇ ಬ್ರಹ್ಮ ವಿದ್ಯಾ ಸ್ವರೂಪಾಂ   |
ಮಾತಃ ಪೂರ್ಣೇ ಬ್ರಹ್ಮ ವಿಜ್ಞಾನ ಗಮ್ಯೇ | ದುರ್ಗೇS ಪಾರೇ ಸಾರ ರೂಪೇ ಪ್ರಸೀದ   || 8 ||
ರೇಣುಕಾ ಸ್ತೋತ್ರಂ   
 ಶ್ರೀ ರೇಣುಕಾ ದೇವಿಯನ್ನು ಪೂಜಿಸುವವರು ಈ ಸ್ತೋತ್ರವನ್ನು ಪಠಿಸಿದರೆ ಅವಳ ಅನುಗ್ರಹದಿಂದ ಮನೆತನದ ಕಾಡಾಟಗಳು ದೂರಾಗುವವು.
ನಮೋಸ್ತುತೇ ಮಹಾದೇವಿ ಶಿವೇ ಕಲ್ಯಾಣ ಶಾಂಭವಿ | ಪ್ರಸೀದ ವೇದ ವಿನುತೇ ಜಗದಂಬ  ನಮೋಸ್ತುತೇ || 1 ||
ಜಗತಾಂ ಆದಿಭೂತಾ ತ್ವಂ ಜಗತ್ವಂ ಜಗದಾಶ್ರಯಾ | ಏಕಾಪ್ಯನೇಕ ರೂಪಾಸಿ  ಜಗದಂಬ  ನಮೋಸ್ತುತೇ || 2 ||      
 ಸೃಷ್ಟಿ ಸ್ಥಿತಿ ವಿನಾಶಾನಾಂ ಹೇತು ಭೂತೇ ಮುನಿಸ್ತುತೇ | ಪ್ರಸೀದ ವೇದ ವಿನುತೇ  ಜಗದಂಬ  ನಮೋಸ್ತುತೇ || 3 ||
ಸರ್ವೇ ಶ್ವರಿ ನಮಸ್ತುಭ್ಯಂ  ಸರ್ವ ಸೌಭಾಗ್ಯದಾಯಿನಿ | ಸರ್ವ ಶಕ್ತಿ ಯುತೇನಂತೆ ಜಗದಂಬ  ನಮೋಸ್ತುತೇ || 4 ||
ವಿವಿಧಾರಿಷ್ಟಶಮನಿ ತ್ರಿವಿಧೋತ್ಪಾತ ನಾಶಿನಿ | ಪ್ರಸೀದ ದೇವಿ ಲಲಿತೇ ಜಗದಂಬ  ನಮೋಸ್ತುತೇ || 5 ||
ಪ್ರಸೀದ ಕರುಣಾ ಸಿಂಧೋ ತ್ವತ್ತಃ ಕಾರುಣಿಕಾಪರಾ | ಯತೋ ನಾಸ್ತಿ ಮಹಾದೇವಿ ಜಗದಂಬ  ನಮೋಸ್ತುತೇ || 6 ||
ಶತ್ರುನ್ ಜಹಿ ಜಯಂ ದೇವಿ ಸರ್ವಾನ್ ಕಾಮಾರ್ಥ ದೇಹಿಮೆ | ಭಯಂ ನಾಶಯ ರೋಗಾಂಶ್ಚ್ಯ ಜಗದಂಬ  ನಮೋಸ್ತುತೇ || 7 ||
ಜಗದಂಬ  ನಮೋಸ್ತುತೇ ಹಿತೇ ಜಯ ಶಂಬ್ಹೊರ್ದ ಯಿತೇ ಮಹಾಮತೆ ಕುಲದೇವಿ ನಮೋಸ್ತುತೇ ಸದಾ ಹೃದಿ ಮೇ ತಿಷ್ಟಯತೋಸಿ    ಸರ್ವದಾ || 8 ||  ಮಾತಾಪುರ ನಿವಾಶಿನ್ಯಾ ದೇವ್ಯಃ ಸ್ತ್ರೋತ್ರಂ ಮಿದಂ ಪರಂ | ಯಃ ಪಠೇತ್ ಪ್ರಯತೋ ಭಕ್ತ್ಯಾ ಸರ್ವಾನ್ ಕಾಮಾನ್ ಸ ಆಪ್ನುಯಾತ್ || 9 || 
|| ಇತೀ ಶ್ರೀ ವಾಸುದೇವಾನಂದ ಸರಸ್ವತಿ ವಿರಚಿತಂ ರೇಣುಕಾ ಸ್ತ್ರೋತ್ರಂ ಸಂಪೂರ್ಣಂ ||           
ಮಂತ್ರಾತ್ಮಕ ಶ್ಲೋಕಾಃ 
ಸಂಕಟ ನಿವಾರಣೆಗೆ :
ಅನುಸೂಯಾತ್ರಿ ಸಂಭೂತೋ ದತ್ತಾತ್ರೆಯೋ ದಿಗಂಬರಃ | ಸ್ಮತೃಗಾಮಿ ಸ್ವಭಕ್ತಾನಾಂ ಉದ್ಧರ್ತಾ ಭವ ಸಂಕಟಾತ್ ||      
ದ್ರವ್ಯ ಪ್ರಾಪ್ತಿಗೆ :
ದರಿದ್ರ ವಿಪ್ರ ಗೇಹೇ ಯಃ ಶಾಕಂ ಭುಕ್ತೋತ್ವಮಶ್ರಿಯಂ  | ದದೌ ಶ್ರೀ ದತ್ತ ದೇವಃ  ಸ ದಾರಿದ್ರ್ಯಾ ಚ್ಛೀ ಪ್ರದೋವತು  ||
ಪುತ್ರ ಪ್ರಾಪ್ತಿಗೆ :
ದೂರೀಕೃತ್ಯ ಪಿಶಾಚಾರ್ತೀಮ್ ಜೀವಯಿತ್ವಾಮೃತಂ ಸುತಂ | ಯೋ ಭೂದಭಿಷ್ಟದಃ ಪಾತು ಸ ನಃ ಸಂತಾನ ವೃದ್ಧಿ ಕೃತ ||
ಸ್ತ್ರೀ ಸೌಭಾಗ್ಯ :
ಜೀವಯಾ ಮಾಸ ಭರ್ತಾರಂ ಮೃತಂ ಸತ್ಯಾ ಹಿ ಮೃತ್ಯುಹಾ | ಮೃತ್ಯುಂಜಯಃ ಸ ಯೋಗಿಂದ್ರಃ ಸೌಭಾಗ್ಯ ಮೇ ಪ್ರಯಚ್ಚತು ||
ಋಣ ಮೋಚನ :
ಅತ್ರೇರಾತ್ಮ ಪ್ರದಾನೇನ ಯೋ ಮುಕ್ತೋ ಭಗವಾನೃಣಾತ್ | ದತ್ತಾತ್ರೇಯಂ ಪ್ರಮೀಶಾನಂ ನಮಾಮಿ ಋಣ ಮುಕ್ತಯೇ ||
ಪರ ಬ್ರಹ್ಮ ಪ್ರಾಪ್ತಿ :
ಜಪೇ ಶ್ಲೋಕಮಿದಂ ದೇವ ಪಿತ್ರರ್ಷಿ ಪುಂ ನೃಣಾಪಹಂ | ಸೋ ನೃಣೋ ದತ್ತ ಕೃಪಯಾ ಪರಂ ಬ್ರಹ್ಮಾಧಿಗಚ್ಚತಿ   ||
ಪಾಪ ನಾಶನ :
ಅತ್ರಿಪುತ್ರೋ ಮಹಾತೇಜಾ ದತ್ತಾತ್ರೇಯೋ ಮಹಾಮುನಿ: | ತಸ್ಯ ಸ್ಮರಣ ಮಾತ್ರೇಣ ಸರ್ವ ಪಾಪೈ ಪ್ರಮುಚ್ಯತೆ  ||
ಕಷ್ಟ ನಿವಾರಣೆ, ಶಾಂತಿ :
ನಮಸ್ತೇ ಭಗವಂ ದೇವ ದತ್ತಾತ್ರೇಯ ಜಗತ್ಪ್ರಭೋ | ಸರ್ವ ಬಾಧಾ ಪ್ರಶಮನಂ ಕುರು ಶಾಂತಿಂ ಪ್ರಯಚ್ಚಮೇ ||
ಇಷ್ಟ ಲಾಭ :
ಅನುಸುಯಾಸುತ ಶ್ರೀಶ ಜನಪಾತಕ ನಾಶನ | ದಿಗಂಬರ ನಮೋ ನಿತ್ಯಂ ತುಭ್ಯಂ ಮೇ ವರದೋ ಭವ  ||
ವಿದ್ಯಾ ಪ್ರಾಪ್ತಿ :
ನಮಸ್ತೇ ಶಾರದಾದೇವಿ ಸರಸ್ವತಿ ಮತಿಪ್ರದೇ | ವಸ ತ್ವಂ ಮಮ ಜಿಹ್ವಾಗ್ರೇ ಸರ್ವವಿದ್ಯಾ ಪ್ರದಾಭವ  ||
ದತ್ತ ದರ್ಶನ :
ಶ್ರೀ ವಿಷ್ಣೋರವತಾರೋಯಂ ದತ್ತಾತ್ರೆಯೋ ದಿಗಂಬರಃ | ಮಾಲಾ ಕಮಂಡಲೂ ಶೂಲ ಡಮರೂ ಶಂಖ ಚಕ್ರಧೃಕ್ ||
ಶ್ರೀ ವಾಸುದೇವಾನಂದ ಸರಸ್ವತಿ ಮಹಾಸ್ವಾಮಿಗಳು ಅನೇಕ ಕಾಮನಾಪೂರ್ತಿಗೋಸ್ಕರ ಈ ಶ್ಲೋಕಗಳನ್ನು ರಚಿಸಿದ್ದಾರೆ. ಆ ಆ ಅಪೇಕ್ಷೆ ಉಳ್ಳವರು ಅಭಿಷ್ಟವಾದ ಶ್ಲೋಕ ಜಪದಿಂದ ಆ ಆ ಶ್ಲೋಕದಲ್ಲಿಯೇ ಉಕ್ತವಾದ ಫಲವನ್ನು ಹೊಂದುತ್ತಾರೆ.            
ಇಂದ್ರಾಕ್ಷೀ ಸ್ತೋತ್ರಂ :
ಈ ಸ್ತೋತ್ರ ಪಠಣ ಮಾಡಿ ಅಂಗಾರ ಅಥವಾ ನೀರು ಅಭಿಮಂತ್ರಿಸಿ ಮಕ್ಕಳಿಗೆ ಹಚ್ಚಿದರೆ ಅವರ ಭಯ ದೂರಾಗಿ ಸುಖ ನಿದ್ರೆ ಮಾಡುವರು.ನಿತ್ಯ ಪಠಣ ಮಾಡುವವರಿಗೆ ಧೈರ್ಯ,ಸ್ಪೂರ್ತಿ, ಕಾರ್ಯ ಸಿದ್ಧಿಗಳು ಬರುತ್ತವೆ.
ಇಂದ್ರಾಕ್ಷೀ  ದ್ವಿಭುಜಾಂ ದೇವಿಂ ಪೀತ ವಸ್ತ್ರದ್ವಯಾನ್ವಿತಾಂ | ವಾಮ ಹಸ್ತೇ ವಜ್ರ ಧರಾಂ ದಕ್ಷಿಣೇನ ವರ ಪ್ರದಾಂ || 1 ||
ಇಂದ್ರಾಕ್ಷೀ ಯುವತೀಂ ದೇವಿಂ ನಾನಾಲಂಕಾರ ಭೂಷಿತಾಂ | ಪ್ರಸನ್ನ ವದನಾಂ ಭೋಜಾಮಪ್ಸರೋಗಣ ಸೇವಿತಾಂ || 2 ||      ದ್ವಿಭುಜಾಂ ಸೌಮ್ಯವದನಾಂ ಪಾಶಾಂಕುಶಧರಾಂ ಪರಾಂ | ತ್ರೈಲೋಕ್ಯಮೋಹಿನಿಂ ದೇವೀಮಿಂದ್ರಾಕ್ಷಿ ನಾಮಕೀರ್ತಿತಾಂ || 3 ||
ಇಂದ್ರೌ ಉವಾಚ  :
ಇಂದ್ರಾಕ್ಷೀ ನಾಮ ಸಾ ದೇವಿ ದೈವತೈ ಸಮುದಾ ಹೃತಾ | ಗೌರೀ ಶಾಕಂಬರೀ ದೇವಿ ದುರ್ಗಾನಾಮ್ನಿತಿ ವಿಶ್ರುತಾ || 1 ||
ಕಾತ್ಯಾಯನೀ ಮಹಾದೇವೀ ಚಂದ್ರಘಂಟಾ ಮಹಾತಪಾ: | ಸಾವಿತ್ರೀ ಸಾ ಚ ಗಾಯತ್ರೀ ಬ್ರಹ್ಮಾಣೀ ಬ್ರಹ್ಮವಾದಿನಿ || 2 ||
ನಾರಾಯಣೀ  ಭದ್ರಕಾಲೀ  ರುದ್ರಾಣೀ ಕೃಷ್ಣ  ಪಿಂಗಲಾ  | ಅಗ್ನಿ ಜ್ವಾಲಾ  ರೌದ್ರ  ಮುಖೀ  ಕಾಲ  ರಾತ್ರೀ ಸ್ತಪಸ್ವಿನೀ  || 3 ||
ಮೇಘಶ್ಯಾಮಾ  ಸಹಸ್ರಾಕ್ಷೀ  ವಿಕಾರಾಂಗಿ ಜಲೋದರೀ  | ಮಹಾದೇವೀ ಮುಕ್ತಕೇಶೀ  ಘೋರರುಪಾ ಮಹಾಬಲಾ  || 4 ||
ಅಜಿತಾ ಭದ್ರ ದಾ ನಂದಾ ರೋಗಹಂತ್ರಿ ಶಿವ ಪ್ರೀಯಾ   | ಶಿವ ದೂತೀ ಕರಾಲೀ ಚ ಪ್ರತ್ಯಕ್ಷಾ ಪರಮೇಶ್ವರೀ || 5 ||
ಸದಾ ಸಂಮೊಹಿನೀ ದೇವಿ ಸುಂದರೀ ಭುವನೇಶ್ವರೀ  |   ಇಂದ್ರಾಕ್ಷೀ  ಇಂದ್ರರೂಪಾ ಚ ಇಂದ್ರಶಕ್ತಿಹ್ ಪರಾಯಣಾ   || 6 ||
ಮಹಿಸಾಸುರ ಸಂಹರ್ತ್ರೀ ಚಾಮುಂಡಾ ಗರ್ಭ ದೇವತಾ | ವಾರಾಹೀ ನಾರಸಿಂಹೀ  ಚ ಭೀಮಾ ಭೈರವನಾದಿನೀ   || 7 ||
ಶ್ರುತಿ ಸ್ಮೃತಿ ಧೃತಿರ್ಮೇಧಾ ವಿದ್ಯಾ ಲಕ್ಷ್ಮೀ ಸರಸ್ವತೀ  |  ಅನಂತಾ ವಿಜಯಾ ಪುರ್ಣಾ ಮಾನಸ್ತೋಕಾ ಪರಾಜಿತಾ  || 8 ||
ಭವಾನೀ ಪಾರ್ವತೀ ದುರ್ಗಾ ಹೈಮವತ್ಯಂಬಿಕಾ ಶಿವಾ | ಏತೈರ್ನಾಮ ಶತೈರ್ದಿವೈ: ಸ್ತುತಾ ಶಕ್ರೇಣಧೀಮತಾ || 9 ||
ಶಿವ ಪೂಜಾ ಸಂಕಲ್ಪಃ 
ಮ ಮ ಅಖಿಲ ಪಾಪ ಕ್ಷಯ ಪೂರ್ವಕಂ ಇಹ ಜನ್ಮನೀ ಜನ್ಮಾಂತರೇ ಚ ಸಕಲ ಸೌಭಾಗ್ಯ ಸಿಧ್ಯರ್ಥಂ ಅಭೀಷ್ಟ ಕಾಮನಾ ಸಿಧ್ಡಿ ದ್ವಾರಾ ಶ್ರೀ ಶಿವ ಸಾಯುಜ್ಯ  ಪ್ರಾಪ್ತ್ಯರ್ಥಂ ಶ್ರೀ ಸಾಂಬ ಸದಾಶಿವ ದಿವ್ಯ ದೇವತಾ ಪ್ರಸಾದ ಸಿಧ್ಯರ್ಥಂ ವೈಕುಂಠ ಚತುರ್ದಶಿ ವ್ರತಾಂಗತ್ವೇನ ಬಿಲ್ವ ದಲ ಸಮರ್ಪಣ ಪೂರ್ವಕಂ ಅರುಣೋದಯ ಕಾಲಿಕ ಶ್ರೀ ಶಿವ ಪೂಜಾಂ ಕರಿಷ್ಯೇ.
ವೈಕುಂಠ ಚತುರ್ದಶಿ ವಿಧಿ:
ಸನತ್ಕುಮಾರ ಸಂಹಿತೆಯಲ್ಲಿ  ಈ ವ್ರತವು ಉಕ್ತವಾಗಿದೆ. ವಿಷ್ಣುವು ಸುದರ್ಶನ ಚಕ್ರ ಪ್ರಾಪ್ತಿಗೊಸ್ಕರ ಶಿವನನ್ನು ಪೂಜಿಸಿದ್ದರಿಂದ ಇದಕ್ಕೆ ವೈಕುಂಠ ಚತುರ್ದಶಿ ಎಂದು ಹೆಸರು. ರಾತ್ರಿ ವಿಷ್ಣು ಪೂಜೆ, ಮರುದಿನ ಅರುಣೋದಯಕ್ಕೆ ಶಿವ ಪೂಜೆ ಮಾಡಬೇಕು.
ಸಂಕಲ್ಪಃ 
ಮಮ ಸಕಲ ಪಾಪ ಕ್ಷಯ ಪೂರ್ವಕಂ ಸೌಮಂಗಲ್ಯ ಅಭೀಪ್ಸಿತ ಕಾಮನಾ ಸಿಧ್ಯಾ ಶ್ರೀ ಮಹಾ ವಿಷ್ಣು ಪ್ರೀತ್ಯರ್ಥಂ, ಅರುಣೋದಯ ಕಾಲಿಕ ಶ್ರೀ ಶಿವಪೂಜಾಧಿಕಾರ ಸಿಧ್ಯರ್ಥಂ,  ಶ್ರೀ ವೈಕುಂಠ ಚತುರ್ದಶಿ ವ್ರತಾಂಗತ್ವೇನ ವಿಹಿತಂ ಯಥಾ ಶಕ್ತಿ ತುಲಸೀ ಸಮರ್ಪಣ ಪೂರ್ವಕಂ ಷೋಡಶೋಪಚಾರೈ: ಶ್ರೀ ಮಹಾ ವಿಷ್ಣು ಪೂಜನಂ ಚ ಕರಿಷ್ಯೇ.     
ಕಾಲ ಭೈರವ ಜಯಂತೀ :  
ಈ ವ್ರತವು ಆದಿತ್ಯ ಪುರಾಣದಲ್ಲಿ ನಂದಿಕೇಶ್ವರ ನಾರದ ಸಂವಾದ ರೂಪದಲ್ಲಿ ಉಕ್ತವಾಗಿದೆ. ಬ್ರಹ್ಮನು ಶಿವನನ್ನು ತಿರಸ್ಕಾರ ಮಾಡಿದ್ದರಿಂದ ಕಾಲ ಭೈರವ ರೂಪವನ್ನು ಧಾರಣ ಮಾಡಿ ಎಲ್ಲರನ್ನೂ ಹೆದರಿಸಿದನೆಂದು ಶಿವ ರಹಸ್ಯದಲ್ಲಿ ಹೇಳಲಾಗಿದೆ.ಕಾರ್ತೀಕ ಕೃಷ್ಣ ಅಷ್ಟಮಿಯ ದಿವಸ ಈ ವ್ರತ ಗ್ರಹಣ ಮಾಡಿ ಒಂದು ವರ್ಷದ ವರೆಗೆ ಪ್ರತಿ ಕೃಷ್ಣಾಷ್ಟಮಿಯ ವರೆಗೆ ಮಾಡಿದರೆ ಒಂದೊಂದು ಮಾಸದಲ್ಲಿ ಒಂದೊಂದು ವಿಶಿಷ್ಟ ಫಲವನ್ನು ಹೇಳಲಾಗಿದೆ. ವಿಷ್ಣು, ಇಂದ್ರ, ಕುಬೇರ, ಯಮ, ಚಂದ್ರ, ಸ್ಕಂದ, ಗಣಪತಿ, ನಂದಿಕೇಶ್ವರ, ಯಯಾತಿ ಮುಂತಾದವರು ಈ ವ್ರತ ಪ್ರಭಾವದಿಂದಲೇ ತಮ್ಮ ತಮ್ಮ ಸ್ಥಾನದಲ್ಲಿ ಅಧಿಪತ್ಯವನ್ನು ಹೊಂದಿದ್ದಾರೆ.
ಸಂಕಲ್ಪಃ  
ಮಮ ಜ್ಞಾತಾಜ್ಞಾತ ದೋಷ ಸಂಪತ್ಸಮಾನ ನರಕ ಭೀತಿ ಪರಿಹಾರ ದ್ವಾರಾ ಐಶ್ವರ್ಯ ಕೀರ್ತಿ ಸಂತತಿ ಪ್ರಾಪ್ಯಾ ಕರ್ಮ ಪಾಶ ವಿನಾಶ ಪೂರ್ವಕ ಶಿವ ಸಾಯುಜ್ಯ ಸಿದ್ಧ್ಯರ್ಥಂ ಕಾರ್ತೀಕ ಕೃಷ್ಣ ಅಷ್ಟಮಿ ವಿಹಿತ ಶ್ರೀ ಕಾಲಭೈರವ ವ್ರತಾಂಗತ್ವೇನ ಯಥಾ ಶಕ್ತಿ ವಾರಣಾಶಿಪುರ ನಿವಾಸಿ  ಶ್ರೀ ಕಾಲಭೈರವ ಪುಜಾಂ ಕರಿಷ್ಸ್ಯೆ . ಹೀಗೆ ಮಾಡಿ ಆ ದಿವಸ ವೇ ಉಪವಾಸ ಮಾಡಿ ಕಾಲಭೈರವಾಷ್ಟಕ ಪಠಿಸ ಬೇಕು.  
ಕಾಲಭೈರವ ಅಷ್ಟಕಮ್
ದೇವರಾಜಸೇವ್ಯಮಾನಪಾವನಾಂಘ್ರಿ ಪಂಕಜಂ |  ವ್ಯಾಲಯಜ್ಞಸೂತ್ರಮಿಂದು ಶೇಖರಂ ಕೃಪಾಕರಮ್  
ನಾರದಾದಿಯೋಗಿವೃಂದ ವಂದಿತಂ ದಿಗಂಬರಂ | ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ|| ೧|| 
ಭಾನುಕೋಟಿಭಾಸ್ವರಂ ಭವಾಬ್ಧಿತಾರಕಂ ಪರಂ | ನೀಲಕಂಠ ಇಪ್ಸಿತಾರ್ಥದಾಯಕಂ ತ್ರಿಲೋಚನಮ್ | 
ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ | ಕಾಶಿಕಾ ಪುರಾಧಿನಾಥ ಕಾಲಭೈರವಂ ಭಜೇ||೨|| 
ಶೂಲಕಂಠ ಪಾಶದಂಡಪಾಣಿಮಾದಿಕಾರಣಂ | ಶ್ಯಾಮಕಾಯಮಾದಿದೇವಮಕ್ಷರಂ ನಿರಾಮಯಮ್ | 
ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವ ಪ್ರಿಯಂ |ಕಾಶಿಕಾ ಪುರಾಧಿನಾಥ ಕಾಲಭೈರವಂ ಭಜೇ ||೩|| 
ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ |ಭಕ್ತವತ್ಸಲಂ ಸ್ಥಿತಂ ಸಮಸ್ತಲೋಕವಿಗ್ರಹಮ್ | 
ವಿನಿಕ್ವಣನ್ಮನೋಜ್ಞಹೇಮ ಕಿಂಕೀಣೀಲ ಸತ್ಕಟಿಂ | ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||೪|| 
ಧರ್ಮಸೇತುಪಾಲಕಂ ತ್ವಧರ್ಮಮಾರ್ಗನಾಶಕಂ | ಕರ್ಮಪಾಶಮೋಚಕಂ ಸುಶರ್ಮದಾಯಕಂ ವಿಭುಮ್ | 
ಸ್ವರ್ಣವರ್ಣಶೇಷಪಾಶಶೋಭಿತಾಂಗ ಮಂಡಲಂ |  ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || ೫|| 
ರತ್ನಪಾದುಕಾಪ್ರಭಾಭಿರಾಮಪಾದಯುಗ್ಮಕಂ |  ನಿತ್ಯಮದ್ವಿತೀಯಮಿಷ್ಟದೈವತಂ ನಿರಞ್ಜನಮ್ | 
ಮೃತ್ಯುದರ್ಪನಾಶನಂ ಕರಾಳದಂಷ್ಟ್ರಮೋಕ್ಷಣಂ | ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||೬|| 
ಅಟ್ಟಹಾಸಭಿನ್ನಪದ್ಮಜಾಂಡ ಕೋಶ ಸಂನ್ನತಿಂ | ದ್ರಷ್ಟಿ ಪಾಪ ನಷ್ಟ ಪಾಪ ಜಾಲಮುಗ್ರ ಶಾಸನಂ | 
ಅಷ್ಟ ಸಿದ್ಧಿದಾಯಕಂ ಕಪಾಳಮಾಲಿ ಕಂಧರಂ |  ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||೭|| 
ಭೂತ ಸಂಘ ನಾಯಕಂ ವಿಶಾಲ ಕೀರ್ತಿದಾಯಕಂ | ಕಾಶಿವಾಸ ಲೋಕಪುಣ್ಯ ಪಾಪ ಶೋಧಕಂ ವಿಭುಂ |
ನೀತಿ ಮಾರ್ಗಕೋವಿದಂ ಪುರಾತನಂ ಜಗತ್ಪತಿಂ | ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||೮|| 
ಕಾಲಭೈರವಾಷ್ಟಕಂ ಪಠಂತಿ  ಯೇ ಮನೋಹರಂ | ಜ್ಞಾನ ಮುಕ್ತಿ ಸಾಧನಂ ವಿಚಿತ್ರ ಪುಣ್ಯ ವರ್ಧನಂ | 
ಶೋಕಮೋಹ ದೈನ್ಯಲೋಭ ಕೋಪತಾಪನಾಶನಂ| ತೇ ಪ್ರಯಾಂತಿ ಕಾಲಭೈರವಾಂಘ್ರಿ ಸನ್ನಿಧಿಂಧ್ರುವಂ || ೯ ||
|| ಇತಿ ಶ್ರೀಮತ್ ಶಂಕರಾಚಾರ್ಯವಿರಚಿತಂ ಕಾಲಭೈರವಾಷ್ಟಕಂ ಸಂಪೂರ್ಣಮ್ ||
ಶ್ರೀ ಮಲ್ಹಾರಿ ವಜ್ರ ಪಂಜರ ಸ್ತೋತ್ರಂ
ಶ್ರೀ ಸ್ಕಂದೌ ಉವಾಚ : 
ಶರಣಾಗತ ದೀನಾರ್ಥಿ ಹರಣಂ ಶರಣಂ ಮಮ |   ಆಯುರಾರೋಗ್ಯದಂ ವಂದೇ ಶ್ರಿಮನ್ಮಾರ್ತಾಂಡ ಭೈರವಂ ||
ಮಹಾಯುದ್ಧೇ ವಿವಾದೇಚ ಮಹಾಕಲಹ ಪಾತನೇ | ಯಶೋವಿಜಯದಂ ವಂದೇ ಶ್ರಿಮನ್ಮಾರ್ತಾಂಡ ಭೈರವಂ ||  
ಪಥೀ ಚೋರಾಕುಲೇರಣ್ಯೇ ಮಹಾ ಹಿಂಸ್ರಾದಿ ಭಿರ್ಯುತೇ| ತ್ರಾತಾರಂ ಜಗತಾಂ ವಂದೇ ಶ್ರಿಮನ್ಮಾರ್ತಾಂಡ ಭೈರವಂ ||
ಮಹಾದುಷ್ಟ ಜನೇದೇಶೆ ಮಹಾಪರ್ವತ ರೋಹಣೆ | ಮಹಾಭಯಂ ಹರಂ ವಂದೇ ಶ್ರಿಮನ್ಮಾರ್ತಾಂಡ ಭೈರವಂ ||
ನದೀನದ ಸಮುದ್ರೇ ವಾ ದಾವಾಗ್ನೌ ಗಿರಿ ಕಂದರೆ | ರಕ್ಷಿತಾರಮಹಂ ವಂದೇ ಶ್ರಿಮನ್ಮಾರ್ತಾಂಡ ಭೈರವಂ ||
ಏಭೀರ್ಯಃ ಪಂಚಭಿಹ್ ಶೋಕೈಸ್ತ್ವಾಂ ನಮಸ್ಕುರುತೇ ಜನಃ | ತತಃ ಕರೋತಿ ಯತ್ಕಾರ್ಯಂ ತಸ್ಯ ಸಿದ್ಧಿಂಕುರು ಪ್ರಭೋ||
ಶ್ರೀ ಮಲ್ಲಾರೇ ಮಹಾದೇವ ಪಾಹಿಮಾಂ ಕರುಣಾಕರ | ಸರ್ವ ಸಿದ್ಧಿ ಪ್ರದಾತಾತ್ವಂ ಶ್ರಿಮನ್ಮಾರ್ತಾಂಡ ಭೈರವಂ ||
ಮಲ್ಲಾರಿಂ ಭಜ ವಿದ್ಯಾರ್ಥೀನ್ ಶ್ರೀ ಪತಿಂ ಜಗತಾಂ ಪತಿಂ | ಗುರುಮಿಂದುವದಾಕಾರಂ ಭಕ್ತ ಭಾಗ್ಯ ಮನೋರಥಂ ||
ಸರ್ವೋತ್ತಮಾಯ ನಮಃ ಉರಃ ಪ್ರಭೃತ್ಯ ಅಷ್ಟಾಂಗಾನಮಸ್ಕಾರಾನ್ ಸಮರ್ಪಯಾಮಿ (ಪ್ರತಿ ಶ್ಲೋಕದ ನಂತರ ನಮಸ್ಕರಿಸಬೇಕು)
ಮೈಲಾರ ನವರಾತ್ರಿ ಆಚರಿಸುವವರು ಶ್ರೀ ಮಲ್ಲಾರಿ ಸಹಸ್ರನಾಮ, ಮಹಾಲಸಾ ಸಹಸ್ರನಾಮ, ಮಲ್ಲಾರಿ ಭೃಹತ್ ಕವಚ, ಮಲ್ಲಾರಿ ಲಘುಕವಚಗಳನ್ನು ಪಾರಾಯಣ ಮಾಡುವುದು ಉತ್ತಮ.        
ಉಪಾಂಗ ಲಲಿತಾ ವ್ರತ ವಿಧಾನ    
ಈ ವ್ರತವನ್ನು ಅಶ್ವಿನ ಶುಕ್ಲ ಪಂಚಮಿಯಂದು ಆಚರಿಸಬೇಕು. ಬಂಗಾರ, ಬೆಳ್ಳಿ, ತಾಮ್ರ, ಮಣ್ಣಿನ ಮುಚ್ಚಳುಗಳ ಮೇಲೆ ದೇವಿ ಚಿತ್ರ ಬರೆದು ವಿಧಾನದಿಂದ ಪೂಜಿಸಬೇಕು. ಮುಖ್ಯವಾಗಿ ಗರಿಕೇ ( ದೂರ್ವೆ ) ಯನ್ನು ಏರಿಸಬೇಕು.
ಸಂಕಲ್ಪಃ 
ಮಮ ಪುತ್ರ, ಪೌತ್ರ, ಧನ, ಧಾನ್ಯ, ವಿದ್ಯಾ. ಆರೋಗ್ಯ, ಸುಖ, ವಿಜಯ, ಪುಷ್ಟಿ, ದೀರ್ಘಾಯುಷ್ಯ ಪ್ರಾಪ್ಯಾ( ಸ್ತ್ರೀಯರು ಅಖಂಡ ಸೌಭಾಗ್ಯ ಪ್ರಾಪ್ಯಾ ) ಶ್ರೀ ಉಪಾಂಗ ಲಲಿತಾ ದಿವ್ಯ ದೇವತಾ ಪ್ರಸಾದ ಸಿಧ್ಯರ್ಥಂ ಅಶ್ವಿನ ಶುಕ್ಲ ಪಂಚಮಿ ವಿಹಿತ ಶ್ರೀ ಉಪಾಂಗ ಲಲಿತಾ ವ್ರತಾಂಗತ್ವೇನ ಯಥಾ ಶಕ್ತಿ ಯಥಾ ಮಿಲಿತೊಪಚಾರ ದ್ರೌವೈ: ಷೋಡಶೋಪಚಾರ ಪುಜಾಂ ಕರಿಷ್ಯೇ.
ಧ್ಯಾನಂ  : 
ನೀಲ ಕೌಷೇಯ ವಸನಾಂ ಹೇಮಾಭಾಂ ಕಮಲಾಸನಾಂ | ಭಕ್ತಾನಾಂ ವರದಾ ನಿತ್ಯಂ ಲಲಿತಾಂ ಚಿಂತಯಾಮ್ಯಹಂ ||  
ಉಮಾ ಮಹೇಶ್ವರ ಸಂಕಲ್ಪಃ 
ಮಮ ಸಹ ಕುಟುಂಬಸ್ಯ ಸಹ ಪರಿವಾರಸ್ಯ ಸಕಲ ಮನೋಭಿಷ್ಟ ಸಿದ್ಧಿದ್ವಾರಾ ಚರುರ್ವಿಧ ಪುರುಷಾರ್ಥ ಯೋಗ್ಯತಾ ಪ್ರಾಪ್ತ್ಯರ್ಥಂ ಸರ್ವ ಸೌಭಾಗ್ಯ ಸಮೃಧ್ಯರ್ಥಂ ಭಾದ್ರಪದ ಪೌರ್ಣಮಾಸಿ ವಿಹಿತ  ಶ್ರೀ ಉಮಾ ಮಹೇಶ್ವರ ವ್ರತಾಂಗತ್ವೇನ ಯಥಾ ಶಕ್ತಿ ಯಥಾ ಮಿಲಿತೊಪಚಾರ ದ್ರೌವೈ: ಧ್ಯಾನಾವಾಹನಾದಿ ಷೋಡಶೋಪಚಾರ ಪುಜಾಂ ಕರಿಷ್ಯೇ.
ಹೀಗೆ ಸಂಕಲ್ಪ ಮಾಡಿ ಪೂಜಿಸಿ ತೈಲ ಸಂಪರ್ಕವಿಲ್ಲದ ಭೋಜನ ಮಾಡಬೇಕು. ವ್ರತರಾಜದಲ್ಲಿ ಇದರ ವಿಧಿಯು ವಿಶೃತವಾಗಿದೆ. 

                                                                                                   .......ಮುಂದುವರಿಯುವುದು.                                          


No comments:

Post a Comment