Thursday, August 31, 2023

GOVINDA AGASTYOPAKHYANAM ಅಗಸ್ತ್ಯೋಪಾಖ್ಯಾನಂ

 
ಅಗಸ್ತ್ಯೋಪಾಖ್ಯಾನಂ 
1) ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ  ೯೪ 
ಅಗಸ್ತ್ಯಾಶ್ರಮಕ್ಕೆ ಹೋದುದು; ಲೋಮೇಶನು ಅಗಸ್ತ್ಯೋಪಾಖ್ಯಾನವನ್ನು ಪ್ರಾರಂಭಿಸಿದುದು (೧-೩). ದೈತ್ಯ ಸಹೋದರರಾದ ವಾತಾಪಿ-ಇಲ್ವಲರು ಬ್ರಾಹ್ಮಣರನ್ನು ಪೀಡಿಸುತ್ತಿರುವುದು (೪-೧೦). ಅಗಸ್ತ್ಯನು ತನ್ನ ಪಿತೃಗಳಿಗೆ ಸಂತಾನವನ್ನು ಪಡೆಯುತ್ತೇನೆಂದು ಭರವಸೆಯನ್ನು ನೀಡುವುದು (೧೧-೧೫). ತನ್ನ ಸಂತಾನವನ್ನು ಹಡೆಯಬಲ್ಲ ಯಾವ ಸ್ತ್ರೀಯನ್ನೂ ಕಾಣದೇ ಅಗಸ್ತ್ಯನು ಬೇರೆ ಬೇರೆ ಪ್ರಾಣಿಗಳಿಂದ ಅನುತ್ತಮ ಅಂಗಗಳನ್ನು ಒಟ್ಟುಗೂಡಿಸಿ ಓರ್ವ ಸ್ತ್ರೀಯನ್ನು ನಿರ್ಮಿಸಿ, ಮಕ್ಕಳನ್ನು ಬಯಸಿದ್ದ ವಿದರ್ಭರಾಜನಿಗೆ ಕೇಳಿದಾಗ ಕೊಡು ಎಂದು ಒಪ್ಪಿಸುವುದು; ಕನ್ಯೆಗೆ ಲೋಪಾಮುದ್ರ ಎಂಬ ಹೆಸರು (೧೬-೨೭).
ವೈಶಂಪಾಯನ ಉವಾಚ|
ತತಃ ಸಂಪ್ರಸ್ಥಿತೋ ರಾಜಾ ಕೌಂತೇಯೋ ಭೂರಿದಕ್ಷಿಣಃ|
ಅಗಸ್ತ್ಯಾಶ್ರಮಮಾಸಾದ್ಯ ದುರ್ಜಯಾಯಾಮುವಾಸ ಹ||
ವೈಶಂಪಾಯನನು ಹೇಳಿದನು: ನಂತರ ಭೂರಿದಕ್ಷಿಣ ರಾಜ ಕೌಂತೇಯನು ಅಲ್ಲಿಂದ ಹೊರಟು ಅಗಸ್ತ್ಯಾಶ್ರಮವನ್ನು ತಲುಪಿ ದುರ್ಜಯದಲ್ಲಿ ತಂಗಿದನು.
ತತ್ರ ವೈ ಲೋಮೇಶರಾಜಾ ಪಪ್ರಚ್ಚ ವದತಾಂ ವರಃ|
ಅಗಸ್ತ್ಯೇನೇಹ ವಾತಾಪಿಃ ಕಿಮರ್ಥಮುಪಶಾಮಿತಃ||
ಆಸೀದ್ವಾ ಕಿಂಪ್ರಭಾವಶ್ಚ ಸ ದೈತ್ಯೋ ಮಾನವಾಂತಕಃ|
ಕಿಮರ್ಥಂ ಚೋದ್ಗತೋ ಮನ್ಯುರಗಸ್ತ್ಯಸ್ಯ ಮಹಾತ್ಮನಃ||
ಅಲ್ಲಿ ಮಾತನಾಡುವರಲ್ಲಿ ಶ್ರೇಷ್ಠ ರಾಜನು ಲೋಮೇಶನಿಗೆ ಕೇಳಿದನು: ಯಾವ ಕಾರಣಕ್ಕಾಗಿ ಅಗಸ್ತ್ಯನು ವಾತಾಪಿಯನ್ನು ಸಂಹರಿಸಿದನು ಮತ್ತು ಆ ಮಾನವಾಂತಕ ದೈತ್ಯನ ಪ್ರಭಾವವಾದರೂ ಏನಿತ್ತು? ಯಾವ ವಿಷಯವು ಮಹಾತ್ಮ ಅಗಸ್ತ್ಯನಿಗೆ ಸಿಟ್ಟುಬರುವಂತೆ ಮಾಡಿತು?
ಲೋಮೇಶ ಉವಾಚ|
ಇಲ್ವಲೋ ನಾಮ ದೈತೇಯ ಆಸೀತ್ಕೌರವನಂದನ|
ಮಣಿಮತ್ಯಾಂ ಪುರಿ ಪುರಾ ವಾತಾಪಿಸ್ತಸ್ಯ ಚಾನುಜಃ||
ಲೋಮೇಶನು ಹೇಳಿದನು: ಕೌರವನಂದನ ಹಿಂದೆ ಮಣಿಮತಿ ಪುರದಲ್ಲಿ ಇಲ್ವಲ ಎಂಬ ಹೆಸರಿನ ದೈತ್ಯನಿದ್ದನು. ವಾತಾಪಿಯು ಅವನ ಅನುಜ.
ಸ ಬ್ರಾಹ್ಮಣಂ ತಪೋಯುಕ್ತಮುವಾಚ ದಿತಿನಂದನಃ|
ಪುತ್ರಂ ಮೇ ಭಗವಾನೇಕಮಿಂದ್ರತುಲ್ಯಂ ಪ್ರಯಚ್ಚತು||
ಆ ದಿತಿನಂದನನು ಒಮ್ಮೆ ತಪೋಯುಕ್ತನಾದ ಓರ್ವ ಬ್ರಾಹ್ಮಣನಲ್ಲಿ ಕೇಳಿಕೊಂಡನು: ಭಗವನ್ ನನಗೆ ಇಂದ್ರನಿಗೆ ಸಮಾನ ಪುತ್ರನೋರ್ವನನ್ನು ಪರಿಪಾಲಿಸು.
ತಸ್ಮೈ ಸ ಬ್ರಾಹ್ಮಣೋ ನಾದಾತ್ಪುತ್ರಂ ವಾಸವಸಮ್ಮಿತಂ|
ಚುಕ್ರೋಧ ಸೋಽಸುರಸ್ತಸ್ಯ ಬ್ರಾಹ್ಮಣಸ್ಯ ತತೋ ಭೃಶಂ||
ವಾಸವನ ಸಮನಾದ ಪುತ್ರನನ್ನು ಅವನಿಗೆ ಆ ಬ್ರಾಹ್ಮಣನು ಕೊಡದೇ ಇರಲು ಆ ಅಸುರನು ಬ್ರಾಹ್ಮಣನ ಮೇಲೆ ಅತ್ಯಂತ ಕೋಪಗೊಂಡನು.
ಸಮಾಹ್ವಯತಿ ಯಂ ವಾಚಾ ಗತಂ ವೈವಸ್ವತಕ್ಷಯಂ|
ಸ ಪುನರ್ದೇಹಮಾಸ್ಥಾಯ ಜೀವನ್ಸ್ಮ ಪ್ರತಿದೃಶ್ಯತೇ||
ಅವನು ವೈವಸ್ವತಕ್ಷಯಕ್ಕೆ ಹೋಗಿದ್ದ ಯಾರನ್ನು ಕರೆದರೂ ಅವನು ಪುನಃ ದೇಹವನ್ನು ಧರಿಸಿ ಜೀವಂತನಾಗಿ ಬಂದು ಕಾಣಿಸಿಕೊಳ್ಳುತ್ತಿದ್ದನು.
ತತೋ ವಾತಾಪಿಮಸುರಂ ಚಾಗಂ ಕೃತ್ವಾ ಸುಸಂಸ್ಕೃತಂ|
ತಂ ಬ್ರಾಹ್ಮಣಂ ಭೋಜಯಿತ್ವಾ ಪುನರೇವ ಸಮಾಹ್ವಯತ್||
ಅವನು ಅಸುರ ವಾತಾಪಿಯನ್ನು ಆಡನ್ನಾಗಿ ಮಾಡಿ, ಅದನ್ನೇ ರುಚಿಯಾಗಿ ಬೇಯಿಸಿ ಆ ಬ್ರಾಹ್ಮಣನಿಗೆ ತಿನ್ನಿಸಿ ಪುನಃ ಅವನನ್ನು ಕೂಗಿ ಕರೆದನು.
ತಸ್ಯ ಪಾರ್ಶ್ವಂ ವಿನಿರ್ಭಿದ್ಯ ಬ್ರಾಹ್ಮಣಸ್ಯ ಮಹಾಸುರಃ|
ವಾತಾಪಿಃ ಪ್ರಹಸನ್ರಾಜನ್ನಿಶ್ಚಕ್ರಾಮ ವಿಶಾಂ ಪತೇ||
ರಾಜನ್ ವಿಶಾಂಪತೇ ಆಗ ಆ ಮಹಾಸುರ ವಾತಾಪಿಯು ಬ್ರಾಹ್ಮಣನ ಪಾರ್ಶ್ವವನ್ನು ಸೀಳಿ ನಗುತ್ತಾ ಹೊರಬಂದನು.
ಏವಂ ಸ ಬ್ರಾಹ್ಮಣಾನ್ರಾಜನ್ಭೋಜಯಿತ್ವಾ ಪುನಃ ಪುನಃ|
ಹಿಂಸಯಾಮಾಸ ದೈತೇಯ ಇಲ್ವಲೋ ದುಷ್ಟಚೇತನಃ||
ರಾಜನ್ ಈ ರೀತಿಯಲ್ಲಿ ಆ ದುಷ್ಟಚೇತನ ದೈತ್ಯ ಇಲ್ವಲನು ಬ್ರಾಹ್ಮಣರಿಗೆ ಪುನಃ ಪುನಃ ಭೋಜನವನ್ನಿತ್ತು ಹಿಂಸಿಸತೊಡಗಿದನು.
ಅಗಸ್ತ್ಯಶ್ಚಾಪಿ ಭಗವಾನೇತಸ್ಮಿನ್ಕಾಲ ಏವ ತು|
ಪಿತೄನ್ದದರ್ಶ ಗರ್ತೇ ವೈ ಲಂಬಮಾನಾನಧೋಮುಖಾನ್||
ಇದೇ ಸಮಯದಲ್ಲಿ ಭಗವಾನ್ ಅಗಸ್ತ್ಯನು ಒಂದು ಬಾವಿಯಲ್ಲಿ ತಲೆಕೆಳಗಾಗಿ ನೇತಾಡುತ್ತಿರುವ ತನ್ನ ಪಿತೃಗಳನ್ನು ಕಂಡನು.
ಸೋಽಪೃಚ್ಚಲ್ಲಂಬಮಾನಾಂಸ್ತಾನ್ಭವಂತ ಇಹ ಕಿಂಪರಾಃ|
ಸಂತಾನಹೇತೋರಿತಿ ತೇ ತಮೂಚುರ್ಬ್ರಹ್ಮವಾದಿನಃ||
ಆ ರೀತಿಯಾಗಿ ನೇತಾಡುತ್ತಿರುವ ಅವರನ್ನು ಕೇಳಿದನು: ನಿಮ್ಮ ತೊಂದರೆಯೇನು? ಆಗ ಆ ಬ್ರಹ್ಮವಾದಿಗಳು ಸಂತಾನ ಎಂದು ಹೇಳಿದರು.
ತೇ ತಸ್ಮೈ ಕಥಯಾಮಾಸುರ್ವಯಂ ತೇ ಪಿತರಃ ಸ್ವಕಾಃ|
ಗರ್ತಮೇತಮನುಪ್ರಾಪ್ತಾ ಲಂಬಾಮಃ ಪ್ರಸವಾರ್ಥಿನಃ||
ಅವನಿಗೆ ಹೇಳಿದರು: ನಾವು ನಿನ್ನ ಸ್ವಂತ ಪಿತೃಗಳು. ಪ್ರಸವಾರ್ಥಿಗಳಾದ ನಾವು ಈ ಕೂಪದಲ್ಲಿ ನೇತಾಡುವ ಪರಿಸ್ಥಿತಿಗೆ ಬಂದಿಳಿದಿದ್ದೇವೆ.
ಯದಿ ನೋ ಜನಯೇಥಾಸ್ತ್ವಮಗಸ್ತ್ಯಾಪತ್ಯಮುತ್ತಮಂ|
ಸ್ಯಾನ್ನೋಽಸ್ಮಾನ್ನಿರಯಾನ್ಮೋಕ್ಷಸ್ತ್ವಂ ಚ ಪುತ್ರಾಪ್ನುಯಾ ಗತಿಂ||
ಅಗಸ್ತ್ಯ ನೀನು ಉತ್ತಮ ಮಕ್ಕಳನ್ನೇನಾದರೂ ಪಡೆದರೆ ನಾವು ಈ ನರಕದಿಂದ ಮೋಕ್ಷಹೊಂದುತ್ತೇವೆ ಮತ್ತು ಪುತ್ರರಿಂದ ನೀನೂ ಕೂಡ ಗತಿಯನ್ನು ಹೊಂದುತ್ತೀಯೆ.
ಸ ತಾನುವಾಚ ತೇಜಸ್ವೀ ಸತ್ಯಧರ್ಮಪರಾಯಣಃ|
ಕರಿಷ್ಯೇ ಪಿತರಃ ಕಾಮಂ ವ್ಯೇತು ವೋ ಮಾನಸೋ ಜ್ವರಃ||
ಆ ತೇಜಸ್ವೀ ಸತ್ಯಧರ್ಮಪರಾಯಣನು ಅವರಿಗೆ ಹೇಳಿದನು: ಪಿತೃಗಳೇ ನಿಮ್ಮ ಇಚ್ಛೆಯಂತೆಯೇ ಮಾಡುತ್ತೇನೆ. ನಿಮ್ಮ ಮನಸ್ಸಿನ ಜ್ವರವನ್ನು ತೊರೆಯಿರಿ.
ತತಃ ಪ್ರಸವಸಂತಾನಂ ಚಿಂತಯನ್ಭಗವಾನೃಷಿಃ|
ಆತ್ಮನಃ ಪ್ರಸವಸ್ಯಾರ್ಥೇ ನಾಪಶ್ಯತ್ಸದೃಶೀಂ ಸ್ತ್ರಿಯಂ||
ಆಗ ಪ್ರಸವ ಸಂತಾನದ ಕುರಿತು ಚಿಂತಿಸುತ್ತಾ ಆ ಭಗವಾನ್ ಋಷಿಯು ತನ್ನ ಮಗುವನ್ನು ಹಡೆಯಬಲ್ಲಂಥ ಯಾವ ಸ್ತ್ರೀಯನ್ನೂ ಕಾಣಲಿಲ್ಲ.
ಸ ತಸ್ಯ ತಸ್ಯ ಸತ್ತ್ವಸ್ಯ ತತ್ತದಂಗಮನುತ್ತಮಂ|
ಸಂಭೃತ್ಯ ತತ್ಸಮೈರಂಗೈರ್ನಿರ್ಮಮೇ ಸ್ತ್ರಿಯಮುತ್ತಮಾಂ||
ಆಗ ಅವನು ಬೇರೆ ಬೇರೆ ಪ್ರಾಣಿಗಳಿಂದ ಅನುತ್ತಮವಾದ ಬೇರೆ    ಬೇರೆ ಅಂಗಗಳನ್ನು ಒಟ್ಟುಹಾಕಿ, ಆ ಅಂಗಗಳಿಂದ ಒಂದು ಉತ್ತಮ ಸ್ತ್ರೀಯನ್ನು ನಿರ್ಮಿಸಿದನು.
ಸ ತಾಂ ವಿದರ್ಭರಾಜಾಯ ಪುತ್ರಕಾಮಾಯ ತಾಮ್ಯತೇ|
ನಿರ್ಮಿತಾಮಾತ್ಮನೋಽರ್ಥಾಯ ಮುನಿಃ ಪ್ರಾದಾನ್ಮಹಾತಪಾಃ||
ಆಗ ಆ ಮಹಾತಪಸ್ವಿ ಮುನಿಯು ಅವಳನ್ನು ತನಗಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಪುತ್ರರನ್ನು ಬಯಸುತ್ತಿದ್ದ ವಿದರ್ಭರಾಜನಿಗೆ ಕೊಟ್ಟನು.
ಸಾ ತತ್ರ ಜಜ್ಞೇ ಸುಭಗಾ ವಿದ್ಯುತ್ಸೌದಾಮಿನೀ ಯಥಾ|
ವಿಭ್ರಾಜಮಾನಾ ವಪುಸಾ ವ್ಯವರ್ಧತ ಶುಭಾನನಾ||
ಅಲ್ಲಿ ಆ ಸುಭಗೆ ವಿದ್ಯುತ್ತಿನ ಮಾಲೆಯು ಜನಿಸಿದಳು ಮತ್ತು ಆ ಶುಭಾನನೆಯು ವಿಭ್ರಾಜಿಸುವ ಸೌಂದರ್ಯದಿಂದ ವೃದ್ಧಿಸಿದಳು.
ಜಾತಮಾತ್ರಾಂ ಚ ತಾಂ ದೃಷ್ಟ್ವಾ ವೈದರ್ಭಃ ಪೃಥಿವೀಪತಿಃ|
ಪ್ರಹರ್ಷೇಣ ದ್ವಿಜಾತಿಭ್ಯೋ ನ್ಯವೇದಯತ ಭಾರತ||
ಭಾರತ ಅವಳು ಹುಟ್ಟಿದೊಡನೆಯೇ ಆ ಪೃಥ್ವೀಪತಿ ವೈದರ್ಭನು ಸಂತೋಷದಿಂದ ದ್ವಿಜರಿಗೆ ಅವಳನ್ನು ನಿವೇದಿಸಿದನು.
ಅಭ್ಯನಂದಂತ ತಾಂ ಸರ್ವೇ ಬ್ರಾಹ್ಮಣಾ ವಸುಧಾಧಿಪ|
ಲೋಪಾಮುದ್ರೇತಿ ತಸ್ಯಾಶ್ಚ ಚಕ್ರಿರೇ ನಾಮ ತೇ ದ್ವಿಜಾಃ||
ವಸುಧಾಧಿಪ ಸರ್ವ ಬ್ರಾಹ್ಮಣರೂ ಅವಳನ್ನು ಸ್ವಾಗತಿಸಿದರು ಮತ್ತು ಆ ದ್ವಿಜರು ಅವಳಿಗೆ ಲೋಪಾಮುದ್ರ ಎನ್ನುವ ಹೆಸರನ್ನು ಇಟ್ಟರು.
ವವೃಧೇ ಸಾ ಮಹಾರಾಜ ಬಿಭ್ರತೀ ರೂಪಮುತ್ತಮಂ|
ಅಪ್ಸ್ವಿವೋತ್ಪಲಿನೀ ಶೀಘ್ರಮಗ್ನೇರಿವ ಶಿಖಾ ಶುಭಾ||
ಮಹಾರಾಜ ಅವಳು ಅನುತ್ತಮ ರೂಪವಂತಳಾಗಿ ಕಾಂತಿಯುಕ್ತಳಾಗಿ, ನೀರಿನಲ್ಲಿ ತಾವರೆಯಂತೆ ಅಥವಾ ಶುಭ ಅಗ್ನಿಯ ಶಿಖೆಯಂತೆ ಬೇಗನೆ ಬೆಳೆದಳು.
ಯೌವನಸ್ಥಾಂ ರಾಜೇಂದ್ರ ಶತಂ ಕನ್ಯಾಃ ಸ್ವಲಂಕೃತಾಃ|
ದಾಶೀಶತಂ ಚ ಕಲ್ಯಾಣೀಮುಪತಸ್ಥುರ್ವಶಾನುಗಾಃ||
ರಾಜೇಂದ್ರ ಅವಳಿಗೆ ಯೌವನಪ್ರಾಪ್ತಿಯಾದಾಗ ಸ್ವಲಂಕೃತರಾದ ನೂರು ಕನ್ಯೆಯರು ಮತ್ತು ನೂರು ದಾಸಿಯರು ಆ ಕಲ್ಯಾಣಿಯ ಬೇಕುಬೇಡಗಳನ್ನು ನೋಡಿಕೊಳ್ಳುತ್ತಾ ಸೇವಿಸುತ್ತಿದ್ದರು.
ಸಾ ಸ್ಮ ದಾಸೀಶತವೃತಾ ಮಧ್ಯೇ ಕನ್ಯಾಶತಸ್ಯ ಚ|
ಆಸ್ತೇ ತೇಜಸ್ವಿನೀ ಕನ್ಯಾ ರೋಹಿಣೀವ ದಿವಿ ಪ್ರಭೋ||
ಪ್ರಭೋ ಸುತ್ತುವರೆದ ನೂರು ದಾಸಿಯರ ಮತ್ತು ನೂರು ಕನ್ಯೆಯರ ಮಧ್ಯೆ ಆ ಕನ್ಯೆಯು ಆಕಾಶದಲ್ಲಿ ರೋಹಿಣಿಯಂತೆ ಬೆಳಗುತ್ತಿದ್ದಳು.
ಯೌವನಸ್ಥಾಮಪಿ ಚ ತಾಂ ಶೀಲಾಚಾರಸಮನ್ವಿತಾಂ|
ನ ವವ್ರೇ ಪುರುಷಃ ಕಶ್ಚಿದ್ಭಯಾತ್ತಸ್ಯ ಮಹಾತ್ಮನಃ||
ಯೌವನಸ್ಥೆಯಾಗಿದ್ದರೂ, ಶೀಲಾಚಾರ ಸಮನ್ವಿತಳಾಗಿದ್ದರೂ ಕೂಡ ಆ ಮಹಾತ್ಮನ ಭಯದಿಂದ ಯಾವ ಪುರುಷನೂ ಅವಳನ್ನು ವರಿಸಲಿಲ್ಲ.
ಸಾ ತು ಸತ್ಯವತೀ ಕನ್ಯಾ ರೂಪೇಣಾಪ್ಸರಸೋಽಪ್ಯತಿ|
ತೋಷಯಾಮಾಸ ಪಿತರಂ ಶೀಲೇನ ಸ್ವಜನಂ ತಥಾ||
ಆದರೂ ರೂಪದಲ್ಲಿ ಅಪ್ಸರೆಯರನ್ನೂ ಮೀರಿಸಿದ್ದ ಆ ಸತ್ಯವತಿ ಕನ್ಯೆಯು ತನ್ನ ಶೀಲದಿಂದ ತಂದೆ ಮತ್ತು ಸ್ವಜನರಿಗೆ ಸಂತೋಷವನ್ನು ತಂದಳು.
ದರ್ಭೀಂ ತು ತಥಾಯುಕ್ತಾಂ ಯುವತೀಂ ಪ್ರೇಕ್ಷ್ಯ ವೈ ಪಿತಾ|
ಮನಸಾ ಚಿಂತಯಾಮಾಸ ಕಸ್ಮೈ ದದ್ಯಾಂ ಸುತಾಮಿತಿ||
ಆ ವೈದರ್ಭಿಯು ಹೀಗೆ ಯುವತಿಯಾಗಿದ್ದುದನ್ನು ನೊಡಿದ ಅವಳ ತಂದೆಯು ಈ ನನ್ನ ಮಗಳನ್ನು ಯಾರಿಗೆ ಕೊಡಲಿ? ಎಂದು ಮನಸ್ಸಿನಲ್ಲಿಯೇ ಚಿಂತಿಸಿದನು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮೇಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಚತುರ್ನವತಿತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮೇಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ತೊಂಭತ್ನಾಲ್ಕನೆಯ ಅಧ್ಯಾಯವು.
2) ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ ೯೫ 
 ಅಗಸ್ತ್ಯ-ಲೋಪಾಮುದ್ರೆಯರ ವಿವಾಹ; ಅಗಸ್ತ್ಯನು ಬೆಲೆಬಾಳುವ ಉಡುಗೆ-ಆಭರಣಗಳನ್ನು ಬಿಸಾಡಲು ಪತ್ನಿಗೆ ಹೇಳಿದುದು (೧-೧೨). ಲೋಪಾಮುದ್ರೆಯನ್ನು ಅಗಸ್ತ್ಯನು ಸಂಭೋಗಕ್ಕೆ ಕರೆದಾಗ ಅವಳು ಇಬ್ಬರೂ ದಿವ್ಯಾಭರಣಗಳಿಂದ ಅಲಂಕೃತರಾಗಿ ಕೂಡಬೇಕೆಂದು ಕೇಳುವುದು; ಅಗಸ್ತ್ಯನು ಸಂಪತ್ತನ್ನು ಅರಸಿ ಹೊರಡುವುದು (೧೩-೨೪).
ಲೋಮೇಶ ಉವಾಚ|
ಯದಾ ತ್ವಮನ್ಯತಾಗಸ್ತ್ಯೋ ಗಾರ್ಹಸ್ಥ್ಯೇ ತಾಂ ಕ್ಷಮಾಮಿತಿ|
ತದಾಭಿಗಮ್ಯ ಪ್ರೋವಾಚ ವೈದರ್ಭಂ ಪೃಥಿವೀಪತಿಂ||
ಲೋಮೇಶನು ಹೇಳಿದನು: ಅವಳು ಗೃಹಿಣಿಯಾಗಲು ಸಿದ್ಧಳಾಗಿದ್ದಾಳೆ ಎಂದು ಯೋಚಿಸಿದ ಅಗಸ್ತ್ಯನು ಪೃಥ್ವೀಪತಿ ವಿದರ್ಭರಾಜನಲ್ಲಿಗೆ ಹೋಗಿ ಹೇಳಿದನು:
ರಾಜನ್ನಿವೇಶೇ ಬುದ್ಧಿರ್ಮೇ ವರ್ತತೇ ಪುತ್ರಕಾರಣಾತ್|
ವರಯೇ ತ್ವಾಂ ಮಹೀಪಾಲ ಲೋಪಾಮುದ್ರಾಂ ಪ್ರಯಚ್ಚ ಮೇ||
ರಾಜನ್ ಪುತ್ರನು ಬೇಕೆಂಬ ಕಾರಣದಿಂದ ನಾನು ಮದುವೆಯಾಗಲು ಮನಸ್ಸುಮಾಡಿದ್ದೇನೆ. ಮಹೀಪಾಲ ನಿನ್ನಲ್ಲಿ ನಾನು ಕೇಳಿಕೊಳ್ಳುತ್ತಿದ್ದೇನೆ - ಲೋಪಾಮುದ್ರೆಯನ್ನು ನನಗೆ ಕೊಡು.
ಏವಮುಕ್ತಃ ಸ ಮುನಿನಾ ಮಹೀಪಾಲೋ ವಿಚೇತನಃ|
ಪ್ರತ್ಯಾಖ್ಯಾನಾಯ ಚಾಶಕ್ತಃ ಪ್ರದಾತುಮಪಿ ನೈಚ್ಚತ||
ಮುನಿಯು ಹೀಗೆ ಹೇಳಲು ಮಹೀಪಾಲನು ನಿರಾಕರಿಸಲು ಅಶಕ್ತನಾಗಿ, ಕೊಡಲು ಮನಸ್ಸಿಲ್ಲದವನಾಗಿ ದ್ವಂದ್ವದಲ್ಲಿ ಸಿಲುಕಿದನು.
ತತಃ ಸ ಭಾರ್ಯಾಮಭ್ಯೇತ್ಯ ಪ್ರೋವಾಚ ಪೃಥಿವೀಪತಿಃ|
ಮಹರ್ಷಿರ್ವೀರ್ಯವಾನೇಷ ಕ್ರುದ್ಧಃ ಶಾಪಾಗ್ನಿನಾ ದಹೇತ್||
ಆಗ ಆ ರಾಜನು ತನ್ನ ಹೆಂಡತಿಯಲ್ಲಿಗೆ ಹೋಗಿ ಹೇಳಿದನು: ಈ ಮಹರ್ಷಿಯು ಮಹಾವೀರ್ಯವಂತ ಸಿಟ್ಟಾದರೆ ತನ್ನ ಶಾಪಾಗ್ನಿಯಿಂದ ಸುಟ್ಟುಬಿಡುತ್ತಾನೆ.
ತಂ ತಥಾ ದುಃಖಿತಂ ದೃಷ್ಟ್ವಾ ಸಭಾರ್ಯಂ ಪೃಥಿವೀಪತಿಂ|
ಲೋಪಾಮುದ್ರಾಭಿಗಮ್ಯೇದಂ ಕಾಲೇ ವಚನಮಬ್ರವೀತ್||
ಈ ರೀತಿ ತನ್ನ ಪತ್ನಿಯೊಂದಿಗೆ ದುಃಖಿತನಾಗಿದ್ದ ರಾಜನನ್ನು ನೋಡಿದ ಲೋಪಾಮುದ್ರೆಯು ಅವರಲ್ಲಿಗೆ ಹೋಗಿ ಸಮಯಕ್ಕೆ ಸರಿಯಾಗಿ ಈ ಮಾತುಗಳನ್ನಾಡಿದಳು:
ನ ಮತ್ಕೃತೇ ಮಹೀಪಾಲ ಪೀಡಾಮಭ್ಯೇತುಮರ್ಹಸಿ|
ಪ್ರಯಚ್ಚ ಮಾಮಗಸ್ತ್ಯಾಯ ತ್ರಾಹ್ಯಾತ್ಮಾನಂ ಮಯಾ ಪಿತಃ||
ಅಪ್ಪಾ ಮಹೀಪಾಲ ನನ್ನಿಂದಾಗಿ ಈ ರೀತಿಯ ಪೀಡೆಯನ್ನು ಅನುಭವಿಸುವುದು ಸರಿಯಲ್ಲ. ನನ್ನನ್ನು ಅಗಸ್ತ್ಯನಿಗೆ ಕೊಡು. ಈ ರೀತಿ ನನ್ನಿಂದ ನಿನ್ನನ್ನು ಉಳಿಸಿಕೊಳ್ಳಬಹುದು.
ದುಹಿತುರ್ವಚನಾದ್ರಾಜಾ ಸೋಽಗಸ್ತ್ಯಾಯ ಮಹಾತ್ಮನೇ|
ಲೋಪಾಮುದ್ರಾಂ ತತಃ ಪ್ರಾದಾದ್ವಿಧಿಪೂರ್ವಂ ವಿಶಾಂ ಪತೇ||
ವಿಶಾಂಪತೇ ತನ್ನ ಮಗಳ ಮಾತಿನಂತೆ ಆ ರಾಜನು ಮಹಾತ್ಮ ಅಗಸ್ತ್ಯನಿಗೆ ಲೋಪಾಮುದ್ರೆಯನ್ನು ವಿಧಿವತ್ತಾಗಿ ಕೊಟ್ಟನು.
ಪ್ರಾಪ್ಯ ಭಾರ್ಯಾಮಗಸ್ತ್ಯಸ್ತು ಲೋಪಾಮುದ್ರಾಮಭಾಷತ|
ಮಹಾರ್ಹಾಣ್ಯುತ್ಸೃಜೈತಾನಿ ವಾಸಾಂಸ್ಯಾಭರಣಾನಿ ಚ||
ಹೆಂಡತಿಯನ್ನು ಪಡೆದ ಅಗಸ್ತ್ಯನು ಲೋಪಾಮುದ್ರೆಗೆ ಹೇಳಿದನು: ಈ ಬೆಲೆಬಾಳುವ ಉಡುಗೆಯನ್ನೂ ಆಭರಣಗಳನ್ನು ತೆಗೆದು ಬಿಸಾಡು
ತತಃ ಸಾ ದರ್ಶನೀಯಾನಿ ಮಹಾರ್ಹಾಣಿ ತನೂನಿ ಚ|
ಸಮುತ್ಸಸರ್ಜ ರಂಭೋರೂರ್ವಸನಾನ್ಯಾಯತೇಕ್ಷಣಾ||
ಅವುಗಳು ಅತೀವ ಸುಂದರವಾಗಿದ್ದರೂ ಬೆಲೆಬಾಳುವವುಗಳಾಗಿದ್ದರೂ ಆ ರಂಭೋರು, ಉದ್ದ ಕಣ್ಣಿನವಳು ತನ್ನ ಉಡುಗೆತೊಡುಗೆಗಳನ್ನು ಬಿಸುಟಳು.
ತತಶ್ಚೀರಾಣಿ ಜಗ್ರಾಹ ವಲ್ಕಲಾನ್ಯಜಿನಾನಿ ಚ|
ಸಮಾನವ್ರತಚರ್ಯಾ ಚ ಬಭೂವಾಯತಲೋಚನಾ||
ಅನಂತರ ಆ ಆಯತಲೋಚನೆಯು ಚೀರಾಣಿಯನ್ನು ತೆಗೆದುಕೊಂಡು ವಲ್ಕಲ ಮತ್ತು ಇತರ ಅಜಿನ ವಸ್ತ್ರಗಳನ್ನು ಉಟ್ಟು ತನ್ನ ಪತಿಯೊಂದಿಗೆ ಸಮಾನ ವ್ರತವನ್ನು ಕೈಗೊಂಡಳು.
ಗಂಗಾದ್ವಾರಮಥಾಗಮ್ಯ ಭಗವಾನೃಷಿಸತ್ತಮಃ|
ಉಗ್ರಮಾತಿಷ್ಠತ ತಪಃ ಸಹ ಪತ್ನ್ಯಾನುಕೂಲಯಾ||
ಭಗವಾನ್ ಋಷಿಸತ್ತಮನು ಗಂಗಾದ್ವಾರಕ್ಕೆ ಬಂದು ತನ್ನ ಅನುಕೂಲಗಳನ್ನು ನಡೆಸಿಕೊಡುತ್ತಿದ್ದ ಪತ್ನಿಯೊಂದಿಗೆ ಉಗ್ರತಮ ತಪಸ್ಸನ್ನು ಕೈಗೊಂಡನು.
ಸಾ ಪ್ರೀತ್ಯಾ ಬಹುಮಾನಾಚ್ಚ ಪತಿಂ ಪರ್ಯಚರತ್ತದಾ|
ಅಗಸ್ತ್ಯಶ್ಚ ಪರಾಂ ಪ್ರೀತಿಂ ಭಾರ್ಯಾಯಾಮಕರೋತ್ಪ್ರಭುಃ||
ಅವಳು ಪ್ರೀತಿ ಮತ್ತು ಗೌರವಗಳಿಂದ ತನ್ನ ಪತಿಯ ಪರಿಚರಿಯನ್ನು ಮಾಡಿದಳು, ಮತ್ತು ಪ್ರಭು ಅಗಸ್ತ್ಯನು ತನ್ನ ಪತ್ನಿಯಿಂದ ಪರಮ ಪ್ರೀತಿಯನ್ನು ಪಡೆದನು.
ತತೋ ಬಹುತಿಥೇ ಕಾಲೇ ಲೋಪಾಮುದ್ರಾಂ ವಿಶಾಂ ಪತೇ|
ತಪಸಾ ದ್ಯೋತಿತಾಂ ಸ್ನಾತಾಂ ದದರ್ಶ ಭಗವಾನೃಷಿಃ||
ವಿಶಾಂಪತೇ ಬಹಳ ದಿನಗಳ ನಂತರ ಭಗವಾನ್ ಋಷಿಯು ಸ್ನಾನಮಾಡಿದ, ತಪಸ್ಸಿನಿಂದ ಕಾಂತಿಯುಕ್ತಳಾಗಿದ್ದ ಲೋಪಾಮುದ್ರೆಯನ್ನು ನೋಡಿದನು.
ಸ ತಸ್ಯಾಃ ಪರಿಚಾರೇಣ ಶೌಚೇನ ಚ ದಮೇನ ಚ|
ಶ್ರಿಯಾ ರೂಪೇಣ ಚ ಪ್ರೀತೋ ಮೈಥುನಾಯಾಜುಹಾವ ತಾಂ||
ಅವಳ ಶೌಚ, ದಮ, ಪರಿಚಾರಿಕೆ, ರೂಪ ಮತ್ತು ಗುಣಗಳಿಂದ ಪ್ರೀತನಾಗಿ ಅವಳನ್ನು ಸಂಭೋಗಕ್ಕೆ ಕರೆದನು.
ತತಃ ಸಾ ಪ್ರಾಂಜಲಿರ್ಭೂತ್ವಾ ಲಜ್ಜಮಾನೇವ ಭಾಮಿನೀ|
ತದಾ ಸಪ್ರಣಯಂ ವಾಕ್ಯಂ ಭಗವಂತಮಥಾಬ್ರವೀತ್||
ಆಗ ಆ ಭಾಮಿನಿಯು ಅಂಜಲೀ ಬದ್ಧಳಾಗಿ, ನಾಚಿಕೊಂಡು, ಆ ಭಗವಂತನಲ್ಲಿ ಈ ಸಪ್ರಣಯ ಮಾತುಗಳನ್ನಾಡಿದಳು:
ಅಸಂಶಯಂ ಪ್ರಜಾಹೇತೋರ್ಭಾರ್ಯಾಂ ಪತಿರವಿಂದತ|
ಯಾ ತು ತ್ವಯಿ ಮಮ ಪ್ರೀತಿಸ್ತಾಮೃಷೇ ಕರ್ತುಮರ್ಹಸಿ||
ಯಥಾ ಪಿತುರ್ಗೃಹೇ ವಿಪ್ರ ಪ್ರಾಸಾದೇ ಶಯನಂ ಮಮ|
ತಥಾವಿಧೇ ತ್ವಂ ಶಯನೇ ಮಾಮುಪೈತುಮಿಹಾರ್ಹಸಿ||
ಮಕ್ಕಳಿಗೋಸ್ಕರ ಪತಿಯು ಪತ್ನಿಯನ್ನು ಮಾಡಿಕೊಳ್ಳುತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಋಷೇ ನನ್ನಿಂದ ನಿನಗೆ ದೊರೆಯುವ ಸುಖವನ್ನು ನನಗೂ ನೀನು ನೀಡಬೇಕು. ವಿಪ್ರ ನನ್ನ ತಂದೆಯ ಮನೆಯಲ್ಲಿ ಅಂತಃಪುರದಲ್ಲಿ ಯಾವರೀತಿಯ ಹಾಸಿಗೆಯಿತ್ತೋ ಅದೇ ರೀತಿಯ ಹಾಸಿಗೆಯ ಮೇಲೆ ನನ್ನೊಡನೆ ಮಲಗಬೇಕು.
ಇಚ್ಚಾಮಿ ತ್ವಾಂ ಸ್ರಗ್ವಿಣಂ ಚ ಭೂಷಣೈಶ್ಚ ವಿಭೂಷಿತಂ|
ಉಪಸರ್ತುಂ ಯಥಾಕಾಮಂ ದಿವ್ಯಾಭರಣಭೂಷಿತಾ||
ನನಗಿಷ್ಟವಾದ ದಿವ್ಯಾಭರಣಗಳಿಂದ ನಾನು ಅಲಂಕರಿಸಿಕೊಳ್ಳುವ ಹಾಗೆ ನೀನೂ ಕೂಡ ಮಾಲೆ ಮತ್ತು ಭೂಷಣಗಳಿಂದ ವಿಭೂಷಿತನಾಗಿ ಬರಬೇಕೆಂದು ಬಯಸುತ್ತೇನೆ.
ಅಗಸ್ತ್ಯ ಉವಾಚ|
ನ ವೈ ಧನಾನಿ ವಿದ್ಯಂತೇ ಲೋಪಾಮುದ್ರೇ ತಥಾ ಮಮ|
ಯಥಾವಿಧಾನಿ ಕಲ್ಯಾಣಿ ಪಿತುಸ್ತವ ಸುಮಧ್ಯಮೇ||
ಅಗಸ್ತ್ಯನು ಹೇಳಿದನು: ಸುಮಧ್ಯಮೇ ಲೋಪಾಮುದ್ರಾ ಕಲ್ಯಾಣಿ ಆದರೆ ನಿನ್ನ ತಂದೆಯಲ್ಲಿ ಇರುವ ಹಾಗಿನ ಧನವು ನನ್ನಲ್ಲಿ ಇಲ್ಲವಲ್ಲ
ಲೋಪಾಮುದ್ರೋವಾಚ
ಈಶೋಽಸಿ ತಪಸಾ ಸರ್ವಂ ಸಮಾಹರ್ತುಮಿಹೇಶ್ವರ|
ಕ್ಷಣೇನ ಜೀವಲೋಕೇ ಯದ್ವಸು ಕಿಂ ಚನ ವಿದ್ಯತೇ||
ಲೋಪಾಮುದ್ರೆಯು ಹೇಳಿದಳು: ಮಹೇಶ್ರರ ನಿನ್ನ ತಪಸ್ಸಿನ ಶಕ್ತಿಯಿಂದ ಈ ಜೀವಲೋಕದಲ್ಲಿರುವ ಯಾವುದನ್ನಾಗಲೀ ನೀನು ಒಂದೇ ಕ್ಷಣದಲ್ಲಿ ಪಡೆದುಕೊಳ್ಳಬಹುದು.
ಅಗಸ್ತ್ಯ ಉವಾಚ|
ಏವಮೇತದ್ಯಥಾತ್ಥ ತ್ವಂ ತಪೋವ್ಯಯಕರಂ ತು ಮೇ|
ಯಥಾ ತು ಮೇ ನ ನಶ್ಯೇತ ತಪಸ್ತನ್ಮಾಂ ಪ್ರಚೋದಯ||
ಅಗಸ್ತ್ಯನು ಹೇಳಿದನು: ನೀನು ಹೇಳಿದಂತೆ ಮಾಡಿದರೆ ನನ್ನ ತಪೋಶಕ್ತಿಯ ವ್ಯಯವಾಗುತ್ತದೆ. ನನ್ನ ತಪೋಶಕ್ತಿಯು ನಾಶವಾಗದಂತೆ ನನ್ನಲ್ಲಿ ಕೇಳಿಕೋ.
ಲೋಪಾಮುದ್ರೋವಾಚ|
ಅಲ್ಪಾವಶಿಷ್ಟಃ ಕಾಲೋಽಯಮೃತೌ ಮಮ ತಪೋಧನ|
ನ ಚಾನ್ಯಥಾಹಮಿಚ್ಚಾಮಿ ತ್ವಾಮುಪೈತುಂ ಕಥಂ ಚನ||
ಲೋಪಾಮುದ್ರೆಯು ಹೇಳಿದಳು: ತಪೋಧನ ನನ್ನ ಋತುವಿನ ಸ್ವಲ್ಪವೇ ಸಮಯ ಉಳಿದಿದೆ. ಅನ್ಯಥಾ ನಾನು ನಿನ್ನೊಡನೆ ಸಂಭೋಗ ಮಾಡಲು ಬಯಸುವುದಿಲ್ಲ.
ನ ಚಾಪಿ ಧರ್ಮಮಿಚ್ಚಾಮಿ ವಿಲೋಪ್ತುಂ ತೇ ತಪೋಧನ|
ಏತತ್ತು ಮೇ ಯಥಾಕಾಮಂ ಸಂಪಾದಯಿತುಮರ್ಹಸಿ||
ತಪೋಧನ ನಾನು ನಿನ್ನನ್ನು ಧರ್ಮಭ್ರಷ್ಟನನ್ನಾಗಿ ಮಾಡಲೂ ಬಯಸುವುದಿಲ್ಲ. ನಾನು ಬಯಸಿದಂತೆ ಇವುಗಳನ್ನು ನೀನು ಸಂಪಾದಿಸಬೇಕು.
ಅಗಸ್ತ್ಯ ಉವಾಚ|
ಯದ್ಯೇಷ ಕಾಮಃ ಸುಭಗೇ ತವ ಬುದ್ಧ್ಯಾ ವಿನಿಶ್ಚಿತಃ|
ಹಂತ ಗಚ್ಚಾಮ್ಯಹಂ ಭದ್ರೇ ಚರ ಕಾಮಮಿಹ ಸ್ಥಿತಾ||
ಅಗಸ್ತ್ಯನು ಹೇಳಿದನು: ಸುಭಗೇ ನಿನ್ನ ಬುದ್ಧಿಯು ನಿಶ್ಚಯಿಸಿದಂತೆಯೇ ನೀನು ಬಯಸಿದ್ದೀಯೆ. ಆಗಲಿ. ಭದ್ರೇ ನಾನು ಹೋಗುತ್ತೇನೆ. ನೀನು ಇಲ್ಲಿ ನಿನಗಿಷ್ಟವಾದ ಹಾಗೆ ಇರು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮೇಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಪಂಚನವತಿತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮೇಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ತೊಂಭತ್ತೈದನೆಯ ಅಧ್ಯಾಯವು.

3) ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ  ೯೬ 
ಧನವನ್ನು ಕೇಳಿಕೊಂಡು ಅಗಸ್ತ್ಯನು ರಾಜ ಶ್ರುತರ್ವಾಣನಲ್ಲಿಗೆ ಹೋದುದು (೧-೬). ಅವನಲ್ಲಿ ಸಾಕಷ್ಟು ಧನವಿಲ್ಲವೆಂದು ಅವನನ್ನೂ ಕರೆದುಕೊಂಡು ಧನವನ್ನರಸಿ ರಾಜ ವರ್ಧ್ರಶ್ವನಲ್ಲಿಗೆ ಹೋದುದು (೭-೧೧). ಅವನಲ್ಲಿಯೂ ಸಾಕಷ್ಟು ಧನವಿಲ್ಲವೆಂದು, ಶ್ರುತರ್ವಾಣ ಮತ್ತು ವರ್ಧ್ರಶ್ವನನ್ನು ಕರೆದುಕೊಂಡು ಅಗಸ್ತ್ಯನು ರಾಜ ತ್ರಸದಸ್ಯನಲ್ಲಿಗೆ ಹೋದುದು (೧೨-೧೭). ಅವನಲ್ಲಿಯೂ ಸಾಕಷ್ಟು ಧನವಿಲ್ಲವೆಂದು ತಿಳಿದು, ನಾಲ್ವರೂ ಇಲ್ವಲನಲ್ಲಿಗೆ ಹೋದುದು (೧೮-೨೦).
ಲೋಮೇಶ ಉವಾಚ|
ತತೋ ಜಗಾಮ ಕೌರವ್ಯ ಸೋಽಗಸ್ತ್ಯೋ ಭಿಕ್ಷಿತುಂ ವಸು|
ಶ್ರುತರ್ವಾಣಂ ಮಹೀಪಾಲಂ ಯಂ ವೇದಾಭ್ಯಧಿಕಂ ನೃಪೈಃ||
ಲೋಮಶನು ಹೇಳಿದನು: ಕೌರವ್ಯ ಅನಂತರ ಅಗಸ್ತ್ಯನು ಸಂಪತ್ತನ್ನು ಕೇಳಿಕೊಂಡು ಇವನಲ್ಲಿ ಇತರ ರಾಜರುಗಳಿಗಿಂತ ಹೆಚ್ಚು ಧನವಿದೆ ಎಂದು ತಿಳಿದು, ಮಹೀಪಾಲ ಶ್ರುತರ್ವಾಣನಲ್ಲಿಗೆ ಹೋದನು.
ಸ ವಿದಿತ್ವಾ ತು ನೃಪತಿಃ ಕುಂಭಯೋನಿಮುಪಾಗಮತ್|
ವಿಷಯಾಂತೇ ಸಹಾಮಾತ್ಯಃ ಪ್ರತ್ಯಗೃಹ್ಣಾತ್ಸುಸತ್ಕೃತಂ||
ಕುಂಭಯೋನಿಯಲ್ಲಿ ಹುಟ್ಟಿದ್ದ ಅವನು ಬಂದಿದ್ದಾನೆಂದು ತಿಳಿದ ನೃಪತಿಯು ತನ್ನ ದೇಶದ ಗಡಿಗೆ ಅಮಾತ್ಯರೊಂದಿಗೆ ಬಂದು ಅವನನ್ನು ಚೆನ್ನಾಗಿ ಸತ್ಕರಿಸಿ ಬರಮಾಡಿಕೊಂಡನು.
ತಸ್ಮೈ ಚಾರ್ಘ್ಯಂ ಯಥಾನ್ಯಾಯಮಾನೀಯ ಪೃಥಿವೀಪತಿಃ|
ಪ್ರಾಂಜಲಿಃ ಪ್ರಯತೋ ಭೂತ್ವಾ ಪಪ್ರಚ್ಚಾಗಮನೇಽರ್ಥಿತಾಂ||
ಅವನಿಗೆ ಯಥಾವಿಧಿಯಾಗಿ ಅರ್ಘ್ಯವನ್ನಿತ್ತ ನಂತರ ಪೃಥಿವೀಪತಿಯು ಅಂಜಲೀ ಬದ್ಧನಾಗಿ, ತಲೆಬಾಗಿ, ಅವನ ಆಗಮನದ ಕಾರಣವನ್ನು ಕೇಳಿದನು.
ಅಗಸ್ತ್ಯ ಉವಾಚ|
ವಿತ್ತಾರ್ಥಿನಮನುಪ್ರಾಪ್ತಂ ವಿದ್ಧಿ ಮಾಂ ಪೃಥಿವೀಪತೇ|
ಯಥಾಶಕ್ತ್ಯವಿಹಿಂಸ್ಯಾನ್ಯಾನ್ಸಂವಿಭಾಗಂ ಪ್ರಯಚ್ಚ ಮೇ||
ಅಗಸ್ತ್ಯನು ಹೇಳಿದನು: ಪೃಥಿವೀಪತೇ ವಿತ್ತವನ್ನು ಪಡೆಯಲೋಸುಗ ನಾನು ಬಂದಿದ್ದೇನೆ ಎಂದು ತಿಳಿ. ಇನ್ನೊಬ್ಬರಿಗೆ ಕಡಿಮೆಯಾಗದಂತೆ, ಅದರಲ್ಲಿಯ ಭಾಗವನ್ನು ನನಗೆ ಕೊಡು.
ಲೋಮೇಶ ಉವಾಚ|
ತತ ಆಯವ್ಯಯೌ ಪೂರ್ಣೌ ತಸ್ಮೈ ರಾಜಾ ನ್ಯವೇದಯತ್|
ಅತೋ ವಿದ್ವನ್ನುಪಾದತ್ಸ್ವ ಯದತ್ರ ವಸು ಮನ್ಯಸೇ||
ಲೋಮಶನು ಹೇಳಿದನು: ಆಗ ರಾಜನು ಅವನಿಗೆ ತನ್ನ ಆದಾಯ ವೆಚ್ಚಗಳ ಕುರಿತು ಸಂಪೂರ್ಣವಾಗಿ ವಿವರಿಸಿ, ನಿವೇದಿಸಿದನು: ಈಗ ನಿನಗೆ ತಿಳಿದಿದೆ. ಇದರಲ್ಲಿ ನಿನಗೆ ಎಷ್ಟು ಬೇಕೋ ಅಷ್ಟನ್ನು ತೆಗೆದುಕೋ
ತತ ಆಯವ್ಯಯೌ ದೃಷ್ಟ್ವಾ ಸಮೌ ಸಮಮತಿರ್ದ್ವಿಜಃ|
ಸರ್ವಥಾ ಪ್ರಾಣಿನಾಂ ಪೀಡಾಮುಪಾದಾನಾದಮನ್ಯತ||
ಅವನ ಆದಾಯ ವೆಚ್ಛಗಳು ಸರಿಸಮನಾಗಿವೆ ಎಂದು ನೋಡಿದ ಸಮಮತಿ ದ್ವಿಜನು ಏನನ್ನೂ ತೆಗೆದೊಕೊಂಡರೂ ಅದು ಪ್ರಜೆಗಳಿಗೆ ಕಷ್ಟವನ್ನೊಡ್ಡಿದ ಹಾಗೆ ಎಂದು ಯೋಚಿಸಿದನು.
ಸ ಶ್ರುತರ್ವಾಣಮಾದಾಯ ವಧ್ರ್ಯಶ್ವಮಗಮತ್ತತಃ|
ಸ ಚ ತೌ ವಿಷಯಸ್ಯಾಂತೇ ಪ್ರತ್ಯಗೃಹ್ಣಾದ್ಯಥಾವಿಧಿ||
ಅವನು ಶ್ರುತರ್ವಾಣನನ್ನೂ ಕರೆದುಕೊಂಡು ವಧ್ರ್ಯಶ್ವನಲ್ಲಿಗೆ ಹೋದನು. ಅವರೀರ್ವರನ್ನೂ ಅವನು ತನ್ನ ದೇಶದ ಗಡಿಯಲ್ಲಿ ಯಥಾವಿಧಿಯಾಗಿ ಸ್ವಾಗತಿಸಿದನು.
ತಯೋರರ್ಘ್ಯಂ ಚ ಪಾದ್ಯಂ ಚ ವಧ್ರ್ಯಶ್ವಃ ಪ್ರತ್ಯವೇದಯತ್|
ಅನುಜ್ಞಾಪ್ಯ ಚ ಪಪ್ರಚ್ಚ ಪ್ರಯೋಜನಮುಪಕ್ರಮೇ||
ವದ್ರ್ಯಶ್ವನು ಅವನಿಗೆ ಅರ್ಘ್ಯ ಪಾದ್ಯಗಳನ್ನು ನೀಡಿದ ನಂತರ ಅವನು ಬಂದ ಕಾರಣದ ಕುರಿತು ಅಪ್ಪಣೆಯಾಗಬೇಕು ಎಂದು ಕೇಳಿಕೊಂಡನು.
ಅಗಸ್ತ್ಯ ಉವಾಚ|
ವಿತ್ತಕಾಮಾವಿಹ ಪ್ರಾಪ್ತೌ ವಿದ್ಧ್ಯಾವಾಂ ಪೃಥಿವೀಪತೇ|
ಯಥಾಶಕ್ತ್ಯವಿಹಿಂಸ್ಯಾನ್ಯಾನ್ಸಂವಿಭಾಗಂ ಪ್ರಯಚ್ಚ ನೌ||
ಅಗಸ್ತ್ಯನು ಹೇಳಿದನು: ಪೃಥಿವೀಪತೇ ವಿತ್ತವನ್ನು ಬಯಸಿ ನಾವಿಬ್ಬರೂ ಇಲ್ಲಿಗೆ ಬಂದಿದ್ದೇವೆ ಎಂದು ತಿಳಿ. ಇನ್ನೊಬ್ಬರಿಗೆ ಕಷ್ಟವಾಗದ ರೀತಿಯಲ್ಲಿ ನಿನ್ನ ಸಂಪತ್ತಿನ ಭಾಗವನ್ನು ನಮಗೆ ನೀಡು.
ಲೋಮೇಶ ಉವಾಚ|
ತತ ಆಯವ್ಯಯೌ ಪೂರ್ಣೌ ತಾಭ್ಯಾಂ ರಾಜಾ ನ್ಯವೇದಯತ್|
ತತೋ ಜ್ಞಾತ್ವಾ ಸಮಾದತ್ತಾಂ ಯದತ್ರ ವ್ಯತಿರಿಚ್ಯತೇ||
ಲೋಮಶನು ಹೇಳಿದನು: ಆಗ ರಾಜನು ಇಬ್ಬರಿಗೂ ತನ್ನ ಆದಾಯ ವೆಚ್ಚಗಳ ಕುರಿತು ಹೇಳಿ, ಇದನ್ನು ತಿಳಿದ ನೀವು ಉಳಿದಿದ್ದನ್ನು ತೆಗೆದುಕೊಂಡು ಹೋಗಿ ಎಂದನು.
ತತ ಆಯವ್ಯಯೌ ದೃಷ್ಟ್ವಾ ಸಮೌ ಸಮಮತಿರ್ದ್ವಿಜಃ|
ಸರ್ವಥಾ ಪ್ರಾಣಿನಾಂ ಪೀಡಾಮುಪಾದಾನಾದಮನ್ಯತ||
ಆಯವ್ಯಯಗಳು ಸಮನಾಗಿವೆ ಎಂದು ನೋಡಿದ ಆ ಸಮಮತಿ ದ್ವಿಜನು ಏನನ್ನು ತೆಗೆದುಕೊಂಡರೂ ಅದು ಪ್ರಜೆಗಳಿಗೆ ಕಷ್ಟವನ್ನು ಕೊಟ್ಟಹಾಗೆ ಎಂದು ಯೋಚಿಸಿದನು.
ಪೌರುಕುತ್ಸಂ ತತೋ ಜಗ್ಮುಸ್ತ್ರಸದಸ್ಯುಂ ಮಹಾಧನಂ|
ಅಗಸ್ತ್ಯಶ್ಚ ಶ್ರುತರ್ವಾ ಚ ವಧ್ರ್ಯಶ್ವಶ್ಚ ಮಹೀಪತಿಃ||
ಅನಂತರ ಅಗಸ್ತ್ಯ, ಶ್ರುತರ್ವ ಮತ್ತು ವಧ್ರ್ಯಶ್ವ ಮೂವರೂ ಮಹಾಧನಿ ಮಹೀಪತಿ ಪೌರುಕುತ್ಸ ತ್ರಸದಸ್ಯನಲ್ಲಿಗೆ ಹೋದರು.
ತ್ರಸದಸ್ಯುಶ್ಚ ತಾನ್ಸರ್ವಾನ್ಪ್ರತ್ಯಗೃಹ್ಣಾದ್ಯಥಾವಿಧಿ|
ಅಭಿಗಮ್ಯ ಮಹಾರಾಜ ವಿಷಯಾಂತೇ ಸವಾಹನಃ||
ಮಹಾರಾಜ ತ್ರಸದಸ್ಯುವು ವಾಹನವನ್ನೇರಿ ತನ್ನ ರಾಜ್ಯದ ಗಡಿಯವರೆಗೂ ಬಂದು ಅವರೆಲ್ಲರನ್ನೂ ಯಥಾವಿಧಿಯಾಗಿ ಬರಮಾಡಿಕೊಂಡನು.
ಅರ್ಚಯಿತ್ವಾ ಯಥಾನ್ಯಾಯಮಿಕ್ಷ್ವಾಕೂ ರಾಜಸತ್ತಮಃ|
ಸಮಾಶ್ವಸ್ತಾಂಸ್ತತೋಽಪೃಚ್ಚತ್ಪ್ರಯೋಜನಮುಪಕ್ರಮೇ||
ಆ ಇಕ್ಷ್ವಾಕು ರಾಜಸತ್ತಮನು ಯಥಾನ್ಯಾಯವಾಗಿ ಪೂಜಿಸಿದನು. ಅವರೆಲ್ಲರೂ ವಿಶ್ರಾಂತಿಯನ್ನು ತೆಗೆದುಕೊಂಡ ಬಳಿಕ ಅವರ ಬರವಿನ ಕಾರಣವನ್ನು ಕೇಳಿದನು.
ಅಗಸ್ತ್ಯ ಉವಾಚ|
ವಿತ್ತಕಾಮಾನಿಹ ಪ್ರಾಪ್ತಾನ್ವಿದ್ಧಿ ನಃ ಪೃಥಿವೀಪತೇ|
ಯಥಾಶಕ್ತ್ಯವಿಹಿಂಸ್ಯಾನ್ಯಾನ್ಸಂವಿಭಾಗಂ ಪ್ರಯಚ್ಚ ನಃ||
ಅಗಸ್ತ್ಯನು ಹೇಳಿದನು: ಪೃಥಿವೀಪತೇ ನಾವು ಇಲ್ಲಿಗೆ ಸಂಪತ್ತನ್ನು ಅರಸಿ ಬಂದಿದ್ದೇವೆ ಎಂದು ತಿಳಿ. ಇತರರಿಗೆ ಹಿಂಸೆಯಾಗದ ರೀತಿಯಲ್ಲಿ ನಮಗೆ ನಿನ್ನ ಸಂಪತ್ತಿನ ಭಾಗವನ್ನು ನೀಡು.
ಲೋಮೇಶ ಉವಾಚ|
ತತ ಆಯವ್ಯಯೌ ಪೂರ್ಣೌ ತೇಷಾಂ ರಾಜಾ ನ್ಯವೇದಯತ್|
ಅತೋ ಜ್ಞಾತ್ವಾ ಸಮಾದದ್ಧ್ವಂ ಯದತ್ರ ವ್ಯತಿರಿಚ್ಯತೇ||
ಲೋಮಶನು ಹೇಳಿದನು: ಅನಂತರ ರಾಜನು ಅವರಿಗೆ ತನ್ನ ಆದಾಯ ವೆಚ್ಚಗಳ ಕುರಿತು ಸಂಪೂರ್ಣವಾಗಿ ವಿವರಿಸಿ, ಇದನ್ನು ತಿಳಿದ ನೀವು ಉಳಿದಿದ್ದುದನ್ನು ತೆಗೆದುಕೊಂಡು ಹೋಗಿ ಎಂದು ನಿವೇದಿಸಿದನು.
ತತ ಆಯವ್ಯಯೌ ದೃಷ್ಟ್ವಾ ಸಮೌ ಸಮಮತಿರ್ದ್ವಿಜಃ|
ಸರ್ವಥಾ ಪ್ರಾಣಿನಾಂ ಪೀಡಾಮುಪಾದಾನಾದಮನ್ಯತ||
ಆದಾಯ-ವೆಚ್ಚಗಳು ಸರಿಸಮವಾಗಿರುವುದನ್ನು ನೋಡಿದ ಆ ಸಮಮತಿ ದ್ವಿಜನು ಏನನ್ನೂ ತೆಗೆದುಕೊಂಡರೂ ಅದು ಇತರರಿಗೆ ಕಷ್ವವನ್ನು ತರುತ್ತದೆ ಎಂದು ತಿಳಿದನು.
ತತಃ ಸರ್ವೇ ಸಮೇತ್ಯಾಥ ತೇ ನೃಪಾಸ್ತಂ ಮಹಾಮುನಿಂ|
ಇದಮೂಚುರ್ಮಹಾರಾಜ ಸಮವೇಕ್ಷ್ಯ ಪರಸ್ಪರಂ||
ಮಹಾರಾಜ ಆಗ ಎಲ್ಲ ರಾಜರೂ ಪರಸ್ಪರರನ್ನು ನೋಡಿ, ಆ ಮಹಾಮುನಿಗೆ ಹೇಳಿದರು:
ಅಯಂ ವೈ ದಾನವೋ ಬ್ರಹ್ಮನ್ನಿಲ್ವಲೋ ವಸುಮಾನ್ಭುವಿ|
ತಮಭಿಕ್ರಮ್ಯ ಸರ್ವೇಽದ್ಯ ವಯಂ ಯಾಚಾಮಹೇ ವಸು||
ಬ್ರಹ್ಮನ್ ಈ ಭುವಿಯಲ್ಲಿ ಮಹಾ ಧನವನ್ನು ಹೊಂದಿದ ಇಲ್ವಲ ಎನ್ನುವ ದಾನವನಿದ್ದಾನೆ. ನಾವೆಲ್ಲರೂ ಅವನಲ್ಲಿಗೆ ಹೋಗಿ ಹಣವನ್ನು ಕೇಳೋಣ
ತೇಷಾಂ ತದಾಸೀದ್ರುಚಿತಮಿಲ್ವಲಸ್ಯೋಪಭಿಕ್ಷಣಂ|
ತತಸ್ತೇ ಸಹಿತಾ ರಾಜನ್ನಿಲ್ವಲಂ ಸಮುಪಾದ್ರವನ್||
ರಾಜನ್ ಅವರೆಲ್ಲರೂ ಇಲ್ವಲನಲ್ಲಿಗೆ ಹೋಗಿ ಧನವನ್ನು ಕೇಳುವುದು ಸರಿಯೆಂದು ಯೋಚಿಸಿ, ಒಟ್ಟಿಗೇ ಇಲ್ವಲನಲ್ಲಿಗೆ ಪ್ರಯಾಣ ಬೆಳೆಸಿದರು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಷಣ್ಣಾತಿತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ತೊಂಭತ್ತಾರನೆಯ ಅಧ್ಯಾಯವು.
4) ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ ೯೭ 
ತಮ್ಮ ವಾತಾಪಿಯನ್ನು ಜೀರ್ಣಿಸಿಕೊಂಡ ಅಗಸ್ತ್ಯನಲ್ಲಿ ಇಲ್ವಲನು ಬಂದ ಕಾರಣವನ್ನು ಕೇಳಿಕೊಳ್ಳುವುದು (೧-೮). ಅಗಸ್ತ್ಯನು ಇಲ್ವಲನಿಂದ ತನಗೂ ಮತ್ತು ಜೊತೆಯಲ್ಲಿ ಬಂದಿರುವ ರಾಜರಿಗೂ ಧನವನ್ನು ಪಡೆದು ಲೋಪಾಮುದ್ರೆಯಲ್ಲಿಗೆ ಮರಳಿದುದು (೯-೧೬). ಅಗಸ್ತ್ಯನಿಗೆ ಲೋಪಾಮುದ್ರೆಯಲ್ಲಿ ದೃಢಸ್ಯು ಎಂಬ ಮಗನ ಜನನ (೧೭-೨೭).
ಲೋಮೇಶ ಉವಾಚ|
ಇಲ್ವಲಸ್ತಾನ್ವಿದಿತ್ವಾ ತು ಮಹರ್ಷಿಸಹಿತಾನ್ನೃಪಾನ್|
ಉಪಸ್ಥಿತಾನ್ಸಹಾಮಾತ್ಯೋ ವಿಷಯಾಂತೇಽಭ್ಯಪೂಜಯತ್||
ಲೋಮೇಶನು ಹೇಳಿದನು: ನೃಪರೊಂದಿಗೆ ಮಹರ್ಷಿಯು ಬಂದಿದ್ದಾನೆ ಎಂದು ತಿಳಿದ ಇಲ್ವಲನು ಅಮಾತ್ಯರೊಂದಿಗೆ ತನ್ನ ರಾಜ್ಯದ ಗಡಿಯವರೆಗೂ ಬಂದು ಅವರನ್ನು ಪೂಜಿಸಿ ಬರಮಾಡಿಕೊಂಡನು.
ತೇಷಾಂ ತತೋಽಸುರಶ್ರೇಷ್ಠ ಆತಿಥ್ಯಮಕರೋತ್ತದಾ|
ಸ ಸಂಸ್ಕೃತೇನ ಕೌರವ್ಯ ಭ್ರಾತ್ರಾ ವಾತಾಪಿನಾ ಕಿಲ||
ಕೌರವ್ಯ ಆ ಅಸುರಶ್ರೇಷ್ಠನು ಅವರಿಗೆ ಆತಿಥ್ಯವನ್ನು ನೀಡಿದನು ಮತ್ತು ತನ್ನ ತಮ್ಮ ವಾತಾಪಿಯನ್ನೇ ಅಡುಗೆ ಮಾಡಿ ಅವರಿಗೆ ಬಡಿಸಿದನು.
ತತೋ ರಾಜರ್ಷಯಃ ಸರ್ವೇ ವಿಷಣ್ಣಾ ಗತಚೇತಸಃ|
ವಾತಾಪಿಂ ಸಂಸ್ಕೃತಂ ದೃಷ್ಟ್ವಾ ಮೇಷಭೂತಂ ಮಹಾಸುರಂ||
ಆಗ ಎಲ್ಲ ರಾಜರ್ಷಿಗಳೂ ಮಹಾಸುರ ವಾತಾಪಿಯನ್ನು ಕುರಿಯ ಮಾಂಸದಂತೆ ಅಡುಗೆಮಾಡಿದ್ದುದನ್ನು ನೋಡಿ ವಿಷಣ್ಣರಾಗಿ ಮೂರ್ಛಿತರಾದರು.
ಅಥಾಬ್ರವೀದಗಸ್ತ್ಯಸ್ತಾನ್ರಾಜರ್ಷೀನೃಷಿಸತ್ತಮಃ|
ವಿಷಾದೋ ವೋ ನ ಕರ್ತವ್ಯೋ ಅಹಂ ಭೋಕ್ಷ್ಯೇ ಮಹಾಸುರಂ||
ಋಷಿಸತ್ತಮ ಅಗಸ್ತ್ಯನು ಆ ರಾಜರ್ಷಿಗಳಿಗೆ ಹೇಳಿದನು: ವಿಷಾದಿಸ ಬೇಡಿ. ಈ ಮಹಾಸುರನನ್ನು ನಾನು ತಿನ್ನುತ್ತೇನೆ
ಧುರ್ಯಾಸನಮಥಾಸಾದ್ಯ ನಿಷಸಾದ ಮಹಾಮುನಿಃ|
ತಂ ಪರ್ಯವೇಷದ್ದೈತ್ಯೇಂದ್ರ ಇಲ್ವಲಃ ಪ್ರಹಸನ್ನಿವ||
ಮಹಾಮುನಿಯು ಉತ್ತಮ ಆಸನವನ್ನು ಹಿಡಿದು ಕುಳಿತುಕೊಂಡನಂತರ ದೈತ್ಯೇಂದ್ರ ಇಲ್ವಲನು ನಸುನಗುತ್ತಾ ಬಡಿಸಿದನು.
ಅಗಸ್ತ್ಯ ಏವ ಕೃತ್ಸ್ನಂ ತು ವಾತಾಪಿಂ ಬುಭುಜೇ ತತಃ|
ಭುಕ್ತವತ್ಯಸುರೋಽಹ್ವಾನಮಕರೋತ್ತಸ್ಯ ಇಲ್ವಲಃ||
ಅಗಸ್ತ್ಯನು ವಾತಾಪಿಯನ್ನು ಸಂಪೂರ್ಣವಾಗಿ ಭುಂಜಿಸಿದನು. ಅವನು ಊಟವನ್ನು ಮುಗಿಸಿದ ನಂತರ ಅಸುರ ಇಲ್ವಲನು ತನ್ನ ತಮ್ಮನನ್ನು ಕೂಗಿ ಕರೆದನು.
ತತೋ ವಾಯುಃ ಪ್ರಾದುರಭೂದಗಸ್ತ್ಯಸ್ಯ ಮಹಾತ್ಮನಃ|
ಇಲ್ವಲಶ್ಚ ವಿಷಣ್ಣೋಽಭೂದ್ದೃಷ್ಟ್ವಾ ಜೀರ್ಣಂ ಮಹಾಸುರಂ||
ಆಗ ಮಹಾತ್ಮ ಅಗಸ್ತ್ಯನು ತೇಗು ಬಿಟ್ಟನು. ಆ ಮಹಾಸುರನನ್ನು ಜೀರ್ಣಗೊಳಿಸಿಕೊಂಡಿದುದನ್ನು ಕಂಡು ಇಲ್ವಲನು ವಿಷಣ್ಣನಾದನು.
ಪ್ರಾಂಜಲಿಶ್ಚ ಸಹಾಮಾತ್ಯೈರಿದಂ ವಚನಮಬ್ರವೀತ್|
ಕಿಮರ್ಥಮುಪಯಾತಾಃ ಸ್ಥ ಬ್ರೂತ ಕಿಂ ಕರವಾಣಿ ವಃ||
ಅವನು ಅಮಾತ್ಯರೊಂದಿಗೆ ಕೈಜೋಡಿಸಿ ಹೀಗೆ ಹೇಳಿದನು: ನೀವು ಇಲ್ಲಿಗೆ ಯಾವ ಕಾರಣದಿಂದ ಬಂದಿದ್ದೀರಿ? ನಾನು ನಿಮಗೆ ಏನು ಮಾಡಬೇಕು?
ಪ್ರತ್ಯುವಾಚ ತತೋಽಗಸ್ತ್ಯಃ ಪ್ರಹಸನ್ನಿಲ್ವಲಂ ತದಾ|
ಈಶಂ ಹ್ಯಸುರ ವಿದ್ಮಸ್ತ್ವಾಂ ವಯಂ ಸರ್ವೇ ಧನೇಶ್ವರಂ||
ಆಗ ಅಗಸ್ತ್ಯನು ನಸುನಗುತ್ತಾ ಉತ್ತರಿಸಿದನು:  ಅಸುರ  ನೀನು ತುಂಬಾ ಧನೇಶ್ವರನೆಂದು ನಾವೆಲ್ಲರೂ ತಿಳಿದಿದ್ದೇವೆ 
ಇಮೇ ಚ ನಾತಿಧನಿನೋ ಧನಾರ್ಥಶ್ಚ ಮಹಾನ್ಮಮ|
ಯಥಾಶಕ್ತ್ಯವಿಹಿಂಸ್ಯಾನ್ಯಾನ್ಸಂವಿಭಾಗಂ ಪ್ರಯಚ್ಚ ನಃ||
ನನಗೆ ಧನದ ತುಂಬಾ ಅವಶ್ಯಕತೆಯಿದೆ. ಇನ್ನೊಬ್ಬರಿಗೆ ಹಿಂಸೆಯಾಗದ ರೀತಿಯಲ್ಲಿ ನಿನ್ನ ಧನದ ಭಾಗವೊಂದನ್ನು ಯಥಾಶಕ್ತಿಯಾಗಿ ನೀಡು.
ತತೋಽಭಿವಾದ್ಯ ತಮೃಷಿಮಿಲ್ವಲೋ ವಾಕ್ಯಮಬ್ರವೀತ್|
ದಿತ್ಸಿತಂ ಯದಿ ವೇತ್ಸಿ ತ್ವಂ ತತೋ ದಾಸ್ಯಾಮಿ ತೇ ವಸು||
ಆಗ ಆ ಋಷಿಗೆ ನಮಸ್ಕರಿಸಿ ಇಲ್ವಲನು ಹೇಳಿದನು: ನಾನು ಏನನ್ನು ಕೊಡಬೇಕೆಂದಿರುವೆನೋ ಅದು ನಿನಗೆ ತಿಳಿದಿದ್ದರೆ ಆ ಸಂಪತ್ತನ್ನು ನಿನಗೆ ನೀಡುತ್ತೇನೆ.
ಅಗಸ್ತ್ಯ ಉವಾಚ|
ಗವಾಂ ದಶ ಸಹಸ್ರಾಣಿ ರಾಜ್ಞಾಮೇಕೈಕಶೋಽಸುರ|
ತಾವದೇವ ಸುವರ್ಣಸ್ಯ ದಿತ್ಸಿತಂ ತೇ ಮಹಾಸುರ||
ಅಗಸ್ತ್ಯನು ಹೇಳಿದನು: ಅಸುರ ಮಹಾಸುರ ಪ್ರತಿಯೊಬ್ಬ ರಾಜನಿಗೂ ನೀನು ಹತ್ತು ಸಹಸ್ರ ಗೋವುಗಳನ್ನು ಮತ್ತು ಅಷ್ಟೇ ಸುವರ್ಣಗಳನ್ನು ನೀಡಬೇಕೆಂದು ನೀನು ಬಯಸಿರುವೆ.
ಮಹ್ಯಂ ತತೋ ವೈ ದ್ವಿಗುಣಂ ರಥಶ್ಚೈವ ಹಿರಣ್ಮಯಃ|
ಮನೋಜವೌ ವಾಜಿನೌ ಚ ದಿತ್ಸಿತಂ ತೇ ಮಹಾಸುರ||
ಜಿಜ್ಞಾಸ್ಯತಾಂ ರಥಃ ಸದ್ಯೋ ವ್ಯಕ್ತಮೇಷ ಹಿರಣ್ಮಯಃ|
ಮಹಾಸುರ ನನಗೆ ಇದರ ಎರಡು ಪಟ್ಟು ಮತ್ತು ಬಂಗಾರದ ರಥವನ್ನೂ, ಮನೋವೇಗದಲ್ಲಿ ಹೋಗುವ ಎರಡು ಕುದುರೆಗಳನ್ನೂ  ನೀಡಲು ಬಯಸುತ್ತೀಯೆ. ತಕ್ಷಣವೇ ರಥವನ್ನು ಪರೀಕ್ಷಿಸು - ಅದು ಸಂಪೂರ್ಣವಾಗಿ ಬಂಗಾರದಿಂದ ಮಾಡಿರಬೇಕು.
ಲೋಮೇಶ ಉವಾಚ|
ಜಿಜ್ಞಾಸ್ಯಮಾನಃ ಸ ರಥಃ ಕೌಂತೇಯಾಸೀದ್ಧಿರಣ್ಮಯಃ|
ತತಃ ಪ್ರವ್ಯಥಿತೋ ದೈತ್ಯೋ ದದಾವಭ್ಯಧಿಕಂ ವಸು||
ವಿವಾಜಶ್ಚ ಸುವಾಜಶ್ಚ ತಸ್ಮಿನ್ಯುಕ್ತೌ ರಥೇ ಹಯೌ|
ಲೋಮಶನು ಹೇಳಿದನು: ಕೌಂತೇಯ ಆ ರಥವು ಸಂಪೂರ್ಣವಾಗಿ ಬಂಗಾರದಿಂದ ಮಾಡಿದುದೆಂದು ಪರೀಕ್ಷಿಸಲಾಯಿತು. ಅನಂತರ ಆ ದೈತ್ಯನು ಬಹಳ ವ್ಯಥೆಯಿಂದ ಆ ಅಧಿಕ ಸಂಪತ್ತನ್ನು ನೀಡಿದನು. ವಿವಾಜ ಮತ್ತು ಸುವಾಜ ಎಂಬ ಕುದುರೆಗಳನ್ನು ರಥಕ್ಕೆ ಕಟ್ಟಲಾಯಿತು.
ಊಹತುಸ್ತೌ ವಸೂನ್ಯಾಶು ತಾನ್ಯಗಸ್ತ್ಯಾಶ್ರಮಂ ಪ್ರತಿ||
ಸರ್ವಾನ್ರಾಜ್ಞಃ ಸಹಾಗಸ್ತ್ಯಾನ್ನಿಮೇಷಾದಿವ ಭಾರತ||
ಭಾರತ ಕಣ್ಣು ಮುಚ್ಚಿ ಬಿಡುವುದರೊಳಗೆ ಆ ಸಂಪತ್ತನ್ನು ಅಗಸ್ತ್ಯನ ಆಶ್ರಮಕ್ಕೆ ತರಲಾಯಿತು. ಆಗ ಅಗಸ್ತ್ಯನು ಎಲ್ಲ ರಾಜರನ್ನೂ ಬೀಳ್ಕೊಂಡನು.
ಅಗಸ್ತ್ಯೇನಾಭ್ಯನುಜ್ಞಾತಾ ಜಗ್ಮೂ ರಾಜರ್ಷಯಸ್ತದಾ|
ಕೃತವಾಂಶ್ಚ ಮುನಿಃ ಸರ್ವಂ ಲೋಪಾಮುದ್ರಾಚಿಕೀರ್ಷಿತಂ||
ಅಗಸ್ತ್ಯನಿಂದ ಬೀಳ್ಕೊಂಡ ರಾಜರ್ಷಿಗಳು ತೆರಳಿದರು. ಮತ್ತು ಆ ಮುನಿಯು ಲೋಪಾಮುದ್ರೆಯು ಬಯಸಿದಂತೆ ಎಲ್ಲವನ್ನೂ ಮಾಡಿದನು.
ಲೋಪಾಮುದ್ರೋವಾಚ|
ಕೃತವಾನಸಿ ತತ್ಸರ್ವಂ ಭಗವನ್ಮಮ ಕಾಮ್ಕ್ಷಿತಂ|
ಉತ್ಪಾದಯ ಸಕೃನ್ಮಹ್ಯಮಪತ್ಯಂ ವೀರ್ಯವತ್ತರಂ||
ಲೋಪಾಮುದ್ರೆಯು ಹೇಳಿದಳು: ಭಗವನ್ ನನ್ನ ಎಲ್ಲ ಬಯಕೆಗಳನ್ನೂ ಪೂರೈಸಿದ್ದೀಯೆ. ಈಗ ಮಹಾ ವೀರ್ಯಶಾಲಿಯಾದ ಮಗನನ್ನು ನನ್ನಲ್ಲಿ ಹುಟ್ಟಿಸು.
ಅಗಸ್ತ್ಯ ಉವಾಚ|
ತುಷ್ಟೋಽಹಮಸ್ಮಿ ಕಲ್ಯಾಣಿ ತವ ವೃತ್ತೇನ ಶೋಭನೇ|
ವಿಚಾರಣಾಮಪತ್ಯೇ ತು ತವ ವಕ್ಷ್ಯಾಮಿ ತಾಂ ಶೃಣು||
ಅಗಸ್ತ್ಯನು ಹೇಳಿದನು: ಕಲ್ಯಾಣಿ ಶೋಭನೇ ನಿನ್ನ ನಡವಳಿಕೆಯಿಂದ ನಾನು ಸಂತುಷ್ಟನಾಗಿದ್ದೇನೆ. ನಿನ್ನ ಸಂತಾನದ ಕುರಿತು ನಾನು ಏನನ್ನು ಯೋಚಿಸುತ್ತಿದ್ದೇನೆ ಎನ್ನುವುದನ್ನು ಹೇಳುತ್ತೇನೆ. ಕೇಳು.
ಸಹಸ್ರಂ ತೇಽಸ್ತು ಪುತ್ರಾಣಾಂ ಶತಂ ವಾ ದಶಸಮ್ಮಿತಂ|
ದಶ ವಾ ಶತತುಲ್ಯಾಃ ಸ್ಯುರೇಕೋ ವಾಪಿ ಸಹಸ್ರವತ್||
ನೀನು ಒಂದು ಸಾವಿರ ಪುತ್ರರನ್ನು ಬಯಸುತ್ತೀಯಾ ಅಥವಾ ಪ್ರತಿಯೊಬ್ಬರೂ ಹತ್ತು ಮಕ್ಕಳಿಗೆ ಸಮರಾದ ನೂರು ಮಕ್ಕಳನ್ನು ಬಯಸುತ್ತೀಯಾ ಅಥವಾ ಪ್ರತಿಯೊಬ್ಬರೂ ನೂರು ಮಕ್ಕಳಿಗೆ ಸಮನಾದ ಹತ್ತು ಮಕ್ಕಳನ್ನು ಬಯಸುತ್ತೀಯಾ ಅಥವಾ ಸಾವಿರ ಮಕ್ಕಳಿಗೆ ಸಮನಾದ ಓರ್ವನೇ ಮಗನನ್ನು ಬಯಸುತ್ತೀಯಾ?
ಲೋಪಾಮುದ್ರೋವಾಚ|
ಸಹಸ್ರಸಮ್ಮಿತಃ ಪುತ್ರ ಏಕೋ ಮೇಽಸ್ತು ತಪೋಧನ|
ಏಕೋ ಹಿ ಬಹುಭಿಃ ಶ್ರೇಯಾನ್ವಿದ್ವಾನ್ಸಾಧುರಸಾಧುಭಿಃ||
ಲೋಪಾಮುದ್ರೆಯು ಹೇಳಿದಳು: ತಪೋಧನ ಸಾವಿರ ಮಕ್ಕಳಿಗೆ ಸಮನಾದ ಓರ್ವನೇ ಪುತ್ರನು ಬೇಕು. ಒಳ್ಳೆಯತನವಿರುವ ಸಹಸ್ರಾರು ಮಕ್ಕಳಿಗಿಂತ ವಿದ್ವಾಂಸನೂ ಸಾಧುವೂ ಆದ ಒಬ್ಬನೇ ಮಗನು ಶ್ರೇಯಸ್ಕರ.
ಲೋಮೇಶ ಉವಾಚ|
ಸ ತಥೇತಿ ಪ್ರತಿಜ್ಞಾಯ ತಯಾ ಸಮಭವನ್ಮುನಿಃ|
ಸಮಯೇ ಸಮಶೀಲಿನ್ಯಾ ಶ್ರದ್ಧಾವಾಂ ಶ್ರದ್ದಧಾನಯಾ||
ಲೋಮಶನು ಹೇಳಿದನು: ಹಾಗೆಯೇ ಆಗಲಿ ಎಂದು ಮಾತುಕೊಟ್ಟ ಮುನಿಯು ಸರಿಯಾದ ಸಮಯದಲ್ಲಿ ಶ್ರದ್ಧಾವಂತನಾಗಿ ಶ್ರದ್ಧಾವಂತ ಸಮಶೀಲೆಯೊಡನೆ ಕೂಡಿದನು.
ತತ ಆಧಾಯ ಗರ್ಭಂ ತಮಗಮದ್ವನಮೇವ ಸಃ|
ತಸ್ಮಿನ್ವನಗತೇ ಗರ್ಭೋ ವವೃಧೇ ಸಪ್ತ ಶಾರದಾನ್||
ಸಪ್ತಮೇಽಬ್ಧೇ ಗತೇ ಚಾಪಿ ಪ್ರಾಚ್ಯವತ್ಸ ಮಹಾಕವಿಃ|
ಜ್ವಲನ್ನಿವ ಪ್ರಭಾವೇನ ದೃಢಸ್ಯುರ್ನಾಮ ಭಾರತ||
ಸಾಂಗೋಪನಿಷದಾನ್ವೇದಾಂ ಜಪನ್ನೇವ ಮಹಾಯಶಾಃ|
ತಸ್ಯ ಪುತ್ರೋಽಭವದೃಷೇಃ ಸ ತೇಜಸ್ವೀ ಮಹಾನೃಷಿಃ||
ಗರ್ಭವನ್ನು ನೀಡಿ ಅವನು ವನವನ್ನು ಸೇರಿದನು. ಅವನು ವನಕ್ಕೆ ಹೋಗಲು, ಗರ್ಭವು ಏಳು ವರ್ಷಗಳ ಪರ್ಯಂತ ಬೆಳೆಯಿತು. ಭಾರತ, ಏಳು ವರ್ಷಗಳು ಕಳೆದ ನಂತರ ದಾರ್ಢ್ಯ (ದೃಡಸ್ಯು) ಎಂಬ ಹೆಸರಿನ ಶಕ್ತಿಯಿಂದ ಉರಿಯುತ್ತಿರುವ ಮಹಾಕವಿಯು, ಉಪನಿಷತ್ತುಗಳ ಜೊತೆ ಮಹಾಯಶ ವೇದಗಳನ್ನು ಜಪಿಸುತ್ತಾ ಜನಿಸಿದನು. ಆ ತೇಜಸ್ವಿ ಮಹಾನೃಷಿಯು ಅಗಸ್ತ್ಯನ ಮಗನಾದನು.
ಸ ಬಾಲ ಏವ ತೇಜಸ್ವೀ ಪಿತುಸ್ತಸ್ಯ ನಿವೇಶನೇ|
ಇಧ್ಮಾನಾಂ ಭಾರಮಾಜಹ್ರೇ ಇಧ್ಮವಾಹಸ್ತತೋಽಭವತ್||
ಬಾಲಕನಾಗಿದ್ದಾಗಲೇ ಆ ತೇಜಸ್ವಿಯು ತನ್ನ ತಂದೆಯ ಮನೆಯಲ್ಲಿ ಭಾರವಾದ ಇಂಧನಗಳನ್ನು ಹೊತ್ತು ತರುತ್ತಿರುವುದರಿಂದ ಅವನು ಇಧ್ಮವಾಹನೆಂದು ಕರೆಯಲ್ಪಟ್ಟನು.
ತಥಾಯುಕ್ತಂ ಚ ತಂ ದೃಷ್ಟ್ವಾ ಮುಮುದೇ ಸ ಮುನಿಸ್ತದಾ|
ಲೇಭಿರೇ ಪಿತರಶ್ಚಾಸ್ಯ ಲೋಕಾನ್ರಾಜನ್ಯಥೇಪ್ಸಿತಾನ್||
ಈ ರೀತಿ ಸಮರ್ಥನಾಗಿರುವ ಮಗನನ್ನು ನೋಡಿ ಮುನಿಯು ಸಂತೋಷಗೊಂಡನು. ರಾಜನ್ ಹೀಗೆ ಅವನ ಪಿತೃಗಳು ಅವರು ಬಯಸಿದ ಲೋಕಗಳನ್ನು ಪಡೆದರು.
ಅಗಸ್ತ್ಯಸ್ಯಾಶ್ರಮಃ ಖ್ಯಾತಃ ಸರ್ವರ್ತುಕುಸುಮಾನ್ವಿತಃ|
ಪ್ರಾಹ್ರಾದಿರೇವಂ ವಾತಾಪಿರಗಸ್ತ್ಯೇನ ವಿನಾಶಿತಃ||
ಇದು ಖ್ಯಾತ ಅಗಸ್ತನ ಆಶ್ರಮ. ಇಲ್ಲಿ ಸರ್ವ ಋತುಗಳಲ್ಲಿ ಹೂವುಗಳು ಅರಳುತ್ತವೆ. ಈ ರೀತಿಯಲ್ಲಿ ಅಗಸ್ತನಿಂದ ವಾತಾಪಿಯು ನಾಶಗೊಂಡನು ಎಂದು ಹೇಳುತ್ತಾರೆ.
ತಸ್ಯಾಯಮಾಶ್ರಮೋ ರಾಜನ್ರಮಣೀಯೋ ಗುಣೈರ್ಯುತಃ|
ಏಷಾ ಭಾಗೀರಥೀ ಪುಣ್ಯಾ ಯಥೇಷ್ಟಮವಗಾಹ್ಯತಾಂ||
ರಾಜನ್ ಅವನ ಆಶ್ರಮವು ರಮಣೀಯವೂ, ವಿಶಿಷ್ಠವೂ ಆಗಿದೆ. ಇದೇ ಪುಣ್ಯ ಭಾಗೀರಥೀ ನದಿ. ಇಲ್ಲಿ ನಿನಗಿಷ್ಟವಾದಷ್ಟು ಸ್ನಾನಮಾಡಬಹುದು[1].
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಸಪ್ತನವತಿತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ತೊಂಭತ್ತೇಳನೆಯ ಅಧ್ಯಾಯವು.

5) ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ ೯೮ 
ವೃತ್ರನ ಆಶ್ರಯದಲ್ಲಿ ಕಾಲೇಯರೆಂಬ ಅಸುರರ ಬಾಧೆಗೊಳಗಾಗಿ ಸುರರು ಮೊರೆಬರಲು ಬ್ರಹ್ಮನು ಋಷಿ ದಧೀಚಿಯ ಅಸ್ತಿಗಳಿಂದ ತಯಾರಿಸಿದ ವಜ್ರಾಯುಧದಿಂದ ವೃತ್ರನ ವಧೆಯಾಗುವುದೆಂದು ಹೇಳುವುದು (೧-೧೧). ವಜ್ರಾಯುಧವನ್ನು ತಯಾರಿಸಿದುದು (೧೨-೨೪).
ಯುಧಿಷ್ಠಿರ ಉವಾಚ|
ಭೂಯ ಏವಾಹಮಿಚ್ಚಾಮಿ ಮಹರ್ಷೇಸ್ತಸ್ಯ ಧೀಮತಃ|
ಕರ್ಮಣಾಂ ವಿಸ್ತರಂ ಶ್ರೋತುಮಗಸ್ತ್ಯಸ್ಯ ದ್ವಿಜೋತ್ತಮ||
ಯುಧಿಷ್ಠಿರನು ಹೇಳಿದನು: ದ್ವಿಜೋತ್ತಮ ಆ ಧೀಮಂತ ಮಹರ್ಷಿ ಅಗಸ್ತ್ಯನ ಇನ್ನೂ ಇತರ ಕರ್ಮಗಳನ್ನು ವಿಸ್ತಾರವಾಗಿ ಕೇಳಬಯಸುತ್ತೇನೆ.
ಲೋಮೇಶ ಉವಾಚ|
ಶೃಣು ರಾಜನ್ಕಥಾಂ ದಿವ್ಯಾಮದ್ಭುತಾಮತಿಮಾನುಷೀಂ|
ಅಗಸ್ತ್ಯಸ್ಯ ಮಹಾರಾಜ ಪ್ರಭಾವಮಮಿತಾತ್ಮನಃ||
ಲೋಮಶನು ಹೇಳಿದನು: ರಾಜನ್ ಮಹಾರಾಜ ದಿವ್ಯ, ಅದ್ಭುತ, ಅಮಾನುಷ ಬುದ್ಧಿಯುಳ್ಳ ಅಮಿತಾತ್ಮ ಅಗಸ್ತ್ಯನ ಪ್ರಭಾವದ ಕುರಿತು ಕೇಳು.
ಆಸನ್ಕೃತಯುಗೇ ಘೋರಾ ದಾನವಾ ಯುದ್ಧದುರ್ಮದಾಃ|
ಕಾಲೇಯಾ ಇತಿ ವಿಖ್ಯಾತಾ ಗಣಾಃ ಪರಮದಾರುಣಾಃ||
ಕೃತಯುಗದಲ್ಲಿ ಕಾಲೇಯರೆಂದು ವಿಖ್ಯಾತ ಯುದ್ಧ ದುರ್ಮದ ಘೋರ, ಪರಮ ದಾರುಣ ದಾನವರ ಗಣವಿತ್ತು.
ತೇ ತು ವೃತ್ರಂ ಸಮಾಶ್ರಿತ್ಯ ನಾನಾಪ್ರಹರಣೋದ್ಯತಾಃ|
ಸಮಂತಾತ್ಪರ್ಯಧಾವಂತ ಮಹೇಂದ್ರಪ್ರಮುಖಾನ್ಸುರಾನ್||
ಅವರೆಲ್ಲರೂ ಒಂದಾಗಿ ವೃತ್ರನ ಆಶ್ರಯದಲ್ಲಿ ನಾನಾ ಆಯುಧಗಳೊಂದಿಗೆ ದಂಗೆಯೆದ್ದು ಮಹೇಂದ್ರನ ನೇತೃತ್ವದಲ್ಲಿದ್ದ ಸುರರ ಮೇಲೆ ಧಾಳಿಮಾಡಿದರು.
ತತೋ ವೃತ್ರವಧೇ ಯತ್ನಮಕುರ್ವಂಸ್ತ್ರಿದಶಾಃ ಪುರಾ|
ಪುರಂದರಂ ಪುರಸ್ಕೃತ್ಯ ಬ್ರಹ್ಮಾಣಮುಪತಸ್ಥಿರೇ||
ಆಗ ವೃತ್ರನನ್ನು ಕೊಲ್ಲಲು ಮೊದಲೇ ಪ್ರಯತ್ನಮಾಡಿದ್ದ ಮೂವತ್ತು ದೇವತೆಗಳು ಪುರಂದರನನ್ನು ಮುಂದಿಟ್ಟುಕೊಂಡು ಬ್ರಹ್ಮನ ಉಪಸ್ಥಿತಿಗೆ ಬಂದರು.
ಕೃತಾಂಜಲೀಂಸ್ತು ತಾನ್ಸರ್ವಾನ್ಪರಮೇಷ್ಠೀ ಉವಾಚ ಹ|
ವಿದಿತಂ ಮೇ ಸುರಾಃ ಸರ್ವಂ ಯದ್ವಃ ಕಾರ್ಯಂ ಚಿಕೀರ್ಷಿತಂ||
ಕೈಜೋಡಿಸಿದ ಅವರೆಲ್ಲರಿಗೆ ಪರಮೇಷ್ಠಿಯು ಹೇಳಿದನು: ಸುರರೇ ನೀವು ಏನು ಮಾಡಬೇಕೆಂದಿರುವಿರೆಂದು ನನಗೆ ತಿಳಿದಿದೆ.
ತಮುಪಾಯಂ ಪ್ರವಕ್ಷ್ಯಾಮಿ ಯಥಾ ವೃತ್ರಂ ವಧಿಷ್ಯಥ|
ದಧೀಚ ಇತಿ ವಿಖ್ಯಾತೋ ಮಹಾನೃಷಿರುದಾರಧೀಃ||
ವೃತ್ರನನ್ನು ಕೊಲ್ಲುವ ಉಪಾಯವನ್ನು ಹೇಳುತ್ತೇನೆ. ದಧೀಚ ಎಂದು ವಿಖ್ಯಾತನಾದ ಉದಾರಬುದ್ಧಿಯ ಮಹಾ ಋಷಿಯಿದ್ದಾನೆ.
ತಂ ಗತ್ವಾ ಸಹಿತಾಃ ಸರ್ವೇ ವರಂ ವೈ ಸಂಪ್ರಯಾಚತ|
ಸ ವೋ ದಾಸ್ಯತಿ ಧರ್ಮಾತ್ಮಾ ಸುಪ್ರೀತೇನಾಂತರಾತ್ಮನಾ||
ನೀವೆಲ್ಲರೂ ಅವನಲ್ಲಿಗೆ ಹೋಗಿ ವರವೊಂದನ್ನು ಕೇಳಿಕೊಳ್ಳಿ. ಆ ಧರ್ಮಾತ್ಮನು ಅಂತರಾತ್ಮದಲ್ಲಿಯ ಸಂತೋಷದಿಂದ ನಿಮಗೆ ಅದನ್ನು ನೀಡುತ್ತಾನೆ.
ಸ ವಾಚ್ಯಃ ಸಹಿತೈಃ ಸರ್ವೈರ್ಭವದ್ಭಿರ್ಜಯಕಾಂಕ್ಷಿಭಿಃ|
ಸ್ವಾನ್ಯಸ್ಥೀನಿ ಪ್ರಯಚ್ಚೇತಿ ತ್ರೈಲೋಕ್ಯಸ್ಯ ಹಿತಾಯ ವೈ|
ಸ ಶರೀರಂ ಸಮುತ್ಸೃಜ್ಯ ಸ್ವಾನ್ಯಸ್ಥೀನಿ ಪ್ರದಾಸ್ಯತಿ||
ನೀವು ಎಲ್ಲರೂ ಒಟ್ಟಿಗೇ ವಿಜಯಾಕಾಂಕ್ಷಿಗಳಾಗಿ ತ್ರಿಲೋಕಗಳ ಹಿತಕ್ಕಾಗಿ ನಿನ್ನ ಅಸ್ಥಿಯನ್ನು ಕೊಡು ಎಂದು ಕೇಳಿಕೊಂಡರೆ ಅವನು ತನ್ನ ಶರೀರವನ್ನು ತೊರೆದು ನಿಮಗೆ ಅವನ ಅಸ್ತಿಯನ್ನು ನೀಡುತ್ತಾನೆ.
ತಸ್ಯಾಸ್ಥಿಭಿರ್ಮಹಾಘೋರಂ ವಜ್ರಂ ಸಂಭ್ರಿಯತಾಂ ದೃಢಂ|
ಮಹಚ್ಛತ್ರುಹಣಂ ತೀಕ್ಷ್ಣಂ ಷಡಶ್ರಂ ಭೀಮನಿಸ್ವನಂ||
ಅವನ ಅಸ್ತಿಯಿಂದ ಮಹಾಘೋರ, ಧೃಢವಾದ, ತೀಕ್ಷ್ಣವಾದ, ಆರು ಅರಗಳುಳ್ಳ, ಭಯಂಕರ ಶಬ್ಧವನ್ನುಳ್ಳ ಮಹಾಶತ್ರುವನ್ನು ಸಂಹರಿಸಬಲ್ಲ ವಜ್ರಾಯುಧವನ್ನು ತಯಾರಿಸಿರಿ.
ತೇನ ವಜ್ರೇಣ ವೈ ವೃತ್ರಂ ವಧಿಷ್ಯತಿ ಶತಕ್ರತುಃ|
ಏತದ್ವಃ ಸರ್ವಮಾಖ್ಯಾತಂ ತಸ್ಮಾಚ್ಶೀಘ್ರಂ ವಿಧೀಯತಾಂ||
ವಜ್ರದಿಂದ ಶತಕ್ರತುವು ಆ ವೃತ್ರನನ್ನು ವಧಿಸುತ್ತಾನೆ. ನಿಮಗೆ ಎಲ್ಲವನ್ನೂ ಹೇಳಿ ತಿಳಿಸಿದ್ದೇನೆ. ಶೀಘ್ರದಲ್ಲಿಯೇ ಇದನ್ನು ಕಾರ್ಯಗತಗೊಳಿಸಿ.
ಏವಮುಕ್ತಾಸ್ತತೋ ದೇವಾ ಅನುಜ್ಞಾಪ್ಯ ಪಿತಾಮಹಂ|
ನಾರಾಯಣಂ ಪುರಸ್ಕೃತ್ಯ ದಧೀಚಸ್ಯಾಶ್ರಮಂ ಯಯುಃ||
ಸರಸ್ವತ್ಯಾಃ ಪರೇ ಪಾರೇ ನಾನಾದ್ರುಮಲತಾವೃತಂ|
ಈ ರೀತಿ ಹೇಳಲು ದೇವತೆಗಳು ಪಿತಾಮಹನಿಂದ ಬೀಳ್ಕೊಂಡು ನಾರಾಯಣನನ್ನು ಮುಂದಿಟ್ಟುಕೊಂಡು ಸರಸ್ವತೀ ನದಿಯ ಆಚೆಯ ದಡದಲ್ಲಿರುವ ನಾನಾ ಮರ ಬಳ್ಳಿಗಳಿಂದ ಆವೃತವಾದ ದಧೀಚಿಯ ಆಶ್ರಮಕ್ಕೆ ಬಂದರು.
ಷಟ್ಪದೋದ್ಗೀತನಿನದೈರ್ವಿಘುಷ್ಟಂ ಸಾಮಗೈರಿವ||
ಪುಂಸ್ಕೋಕಿಲರವೋನ್ಮಿಶ್ರಂ ಜೀವಂಜೀವಕನಾದಿತಂ||
ಆ ಆಶ್ರಮವು ಸಾಮಗಾನದಂತಿರುವ ದುಂಬಿಗಳ ಗೀತನಾದದಿಂದ ತುಂಬಿತ್ತು. ಗಂಡು ಕೋಕಿಲಗಳ ಕಲರವದಿಂದ ಮಿಶ್ರಿತವಾಗಿತ್ತು ಮತ್ತು ಕೀಟಗಳ ಝೀಂಕಾರದಿಂದ ತುಂಬಿತ್ತು.
ಮಹಿಷೈಶ್ಚ ವರಾಹೈಶ್ಚ ಸೃಮರೈಶ್ಚಮರೈರಪಿ|
ತತ್ರ ತತ್ರಾನುಚರಿತಂ ಶಾರ್ದೂಲಭಯವರ್ಜಿತೈಃ||
ಅಲ್ಲಿ ಎಮ್ಮೆ, ಹಂದಿ, ಜಿಂಕೆಗಳು ಶಾರ್ದೂಲಗಳ ಭಯವನ್ನು ತೊರೆದು ಅಲ್ಲಲ್ಲಿ ಸಂಚರಿಸುತ್ತಿದ್ದವು.
ಕರೇಣುಭಿರ್ವಾರಣೈಶ್ಚ ಪ್ರಭಿನ್ನಕರಟಾಮುಖೈಃ|
ಸರೋಽವಗಾಢೈಃ ಕ್ರೀಡದ್ಭಿಃ ಸಮಂತಾದನುನಾದಿತಂ||
ಕೆನ್ನೆಗಳು ಒಡೆದು ಮದವನ್ನು ಸುರಿಸುತ್ತಿರುವ ಗಂಡು ಆನೆಗಳು ಹೆಣ್ಣು ಆನೆಗಳೊಂದಿಗೆ ಕೆರೆಗಳಲ್ಲಿ ಧುಮುಕಿ ಆಡುತ್ತಾ ಒಟ್ಟಿಗೇ ನಿನಾದಿಸುತ್ತಿದ್ದವು.
ಸಿಂಹವ್ಯಾಘ್ರೈರ್ಮಹಾನಾದಾನ್ನದದ್ಭಿರನುನಾದಿತಂ|
ಅಪರೈಶ್ಚಾಪಿ ಸಂಲೀನೈರ್ಗುಹಾಕಂದರವಾಸಿಭಿಃ||
ಸಿಂಹ, ಹುಲಿ ಮತ್ತು ಗುಹೆಗಳಲ್ಲಿ ವಾಸಿಸುವ ಇತರ ಪ್ರಾಣಿಗಳ ಮಹಾನಾದದಿಂದ ಆ ಆಶ್ರಮವು ಭೋರ್ಗರೆಯುತ್ತಿತ್ತು.
ತೇಷು ತೇಷ್ವವಕಾಶೇಷು ಶೋಭಿತಂ ಸುಮನೋರಮಂ|
ತ್ರಿವಿಷ್ಟಪಸಮಪ್ರಖ್ಯಂ ದಧೀಚಾಶ್ರಮಮಾಗಮನ್||
ಈ ರೀತಿ ಸುಮನೋಹರವಾಗಿ ಶೋಭಿಸುತ್ತಿದ್ದ ದಧೀಚಿಯ ಆಶ್ರಮಕ್ಕೆ ತ್ರಿವಿಷ್ಟಪರು ಆಗಮಿಸಿದರು.
ತತ್ರಾಪಶ್ಯನ್ದಧೀಚಂ ತೇ ದಿವಾಕರಸಮದ್ಯುತಿಂ|
ಜಾಜ್ವಲ್ಯಮಾನಂ ವಪುಷಾ ಯಥಾ ಲಕ್ಷ್ಮ್ಯಾ ಪಿತಾಮಹಂ||
ಅಲ್ಲಿ ದಿವಾಕರನಂತೆ ಬೆಳಗುತ್ತಿದ್ದ, ಲಕ್ಷ್ಮಿಯೊಂದಿಗೆ ಪಿತಾಮಹನಂತೆ ಜಾಜ್ವಲ್ಯಮಾನನಾದ ದಧೀಚಿಯನ್ನು ನೋಡಿದರು.
ತಸ್ಯ ಪಾದೌ ಸುರಾ ರಾಜನ್ನಭಿವಾದ್ಯ ಪ್ರಣಮ್ಯ ಚ|
ಅಯಾಚಂತ ವರಂ ಸರ್ವೇ ಯಥೋಕ್ತಂ ಪರಮೇಷ್ಠಿನಾ||
ರಾಜನ್ ಸುರರು ಅವನ ಪಾದಗಳಿಂದ ತಲೆಬಾಗಿ ವಂದಿಸಿದರು ಮತ್ತು ಅವರೆಲ್ಲರೂ ಪರಮೇಷ್ಠಿಯು ಹೇಳಿದಂತೆ ಅವನಲ್ಲಿ ವರವನ್ನು ಬೇಡಿದರು.
ತತೋ ದಧೀಚಃ ಪರಮಪ್ರತೀತಃ|
ಸುರೋತ್ತಮಾಂಸ್ತಾನಿದಮಭ್ಯುವಾಚ|
ಕರೋಮಿ ಯದ್ವೋ ಹಿತಮದ್ಯ ದೇವಾಃ|
ಸ್ವಂ ಚಾಪಿ ದೇಹಂ ತ್ವಹಮುತ್ಸೃಜಾಮಿ||
ಆಗ ಪರಮಪ್ರೀತನಾದ ದಧೀಚಿಯು ಆ ಸುರೋತ್ತಮರಿಗೆ ಹೇಳಿದನು: ನಿಮಗೆ ಹಿತವಾದುದನ್ನು ನಾನು ಇಂದು ಮಾಡುತ್ತೇನೆ. ನಿಮಗೋಸ್ಕರ ನನ್ನ ದೇಹವನ್ನೂ ತ್ಯಜಿಸುತ್ತೇನೆ.
ಸ ಏವಮುಕ್ತ್ವಾ ದ್ವಿಪದಾಂ ವರಿಷ್ಠಃ|
ಪ್ರಾಣಾನ್ವಶೀ ಸ್ವಾನ್ಸಹಸೋತ್ಸಸರ್ಜ|
ತತಃ ಸುರಾಸ್ತೇ ಜಗೃಹುಃ ಪರಾಸೋರ್|
ಅಸ್ಥೀನಿ ತಸ್ಯಾಥ ಯಥೋಪದೇಶಂ||
ಹೀಗೆ ಹೇಳಿದ ಆ ಮನುಷ್ಯರಲ್ಲಿಯೇ ಶ್ರೇಷ್ಠ ನಿಯಂತ್ರಕನು ತನ್ನ ಪ್ರಾಣವನ್ನು ತಕ್ಷಣವೇ ತ್ಯಜಿಸಿದನು. ಅನಂತರ ಸುರರು ಸಂತೋಷ ಮತ್ತು ಭರವಸೆಗಳೊಂದಿಗೆ ಅವನ ಅಸ್ತಿಯನ್ನು ಬ್ರಹ್ಮನ ಉಪದೇಶದಂತೆ ತೆಗೆದರು.
ಪ್ರಹೃಷ್ಟರೂಪಾಶ್ಚ ಜಯಾಯ ದೇವಾಸ್|
ತ್ವಷ್ಟಾರಮಾಗಮ್ಯ ತಮರ್ಥಮೂಚುಃ|
ತ್ವಷ್ಟಾ ತು ತೇಷಾಂ ವಚನಂ ನಿಶಮ್ಯ|
ಪ್ರಹೃಷ್ಟರೂಪಃ ಪ್ರಯತಃ ಪ್ರಯತ್ನಾತ್||
ಜಯವು ದೊರೆಯುವುದೆಂಬ ಸಂತೋಷದಿಂದ ದೇವತೆಗಳು ತ್ವಷ್ಟಾರನಲ್ಲಿಗೆ ಹೋಗಿ ಅವನಿಗೆ ವಿವರಿಸಿ ಹೇಳಿದರು. ಅವರ ವಚನವನ್ನು ಕೇಳಿದ ತ್ವಷ್ಟನು ಸಂತೋಷದಿಂದ, ಪ್ರಯತ್ನದಿಂದ ಕೆಲಸದಲ್ಲಿ ತೊಡಗಿದನು.
ಚಕಾರ ವಜ್ರಂ ಭೃಶಮುಗ್ರರೂಪಂ|
ಕೃತ್ವಾ ಚ ಶಕ್ರಂ ಸ ಉವಾಚ ಹೃಷ್ಟಃ|
ಅನೇನ ವಜ್ರಪ್ರವರೇಣ ದೇವ|
ಭಸ್ಮೀಕುರುಷ್ವಾದ್ಯ S ಸುರಾರಿಮುಗ್ರಂ||
ಹರಿತವಾದ ಉಗ್ರರೂಪದ ಹರಿತ ವಜ್ರವನ್ನು ತಯಾರಿಸಿ ಸಂತೋಷದಿಂದ ಇಂದ್ರನಿಗೆ ಹೇಳಿದನು: ದೇವ ಈ ಶ್ರೇಷ್ಠ ವಜ್ರದಿಂದ ಉಗ್ರಾಸುರಾರಿಗಳನ್ನು ಇಂದು ಭಸ್ಮಮಾಡು
ತತೋ ಹತಾರಿಃ ಸಗಣಃ ಸುಖಂ ವೈ|
ಪ್ರಶಾಧಿ ಕೃತ್ಸ್ನಂ ತ್ರಿದಿವಂ ದಿವಿಷ್ಠಃ|
ತ್ವಷ್ಟ್ರಾ ತಥೋಕ್ತಃ ಸ ಪುರಂದರಸ್ತು|
ವಜ್ರಂ ಪ್ರಹೃಷ್ಟಃ ಪ್ರಯತೋಽಭ್ಯಗೃಹ್ಣಾತ್||
ಅವರನ್ನು ಸಂಹರಿಸಿ ನೀನು ನಿನ್ನ ಗಣಗಳೊಂದಿಗೆ ತ್ರಿದಿವದಲ್ಲಿ ಸುಖವಾಗಿ ವಿರಾಜಿಸು. ತ್ವಷ್ಟನು ಹೀಗೆ ಹೇಳಲು ಪುರಂದರನು ಸಂತೋಷದಿಂದ ವಿನೀತನಾಗಿ ವಜ್ರವನ್ನು ಹಿಡಿದನು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಅಷ್ಟನವತಿತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ತೊಂಭತ್ತೆಂಟನೆಯ ಅಧ್ಯಾಯವು.
6) ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ ೯೯ 
ವೃತ್ರಾಸುರವಧೆ (೧-೧೫). ಸೋತ ಕಾಲೇಯರು ಸಮುದ್ರದಲ್ಲಿ ಅಡಗಿಕೊಂಡಿದುದು (೧೬-೨೧).
ಲೋಮೇಶ ಉವಾಚ|
ತತಃ ಸ ವಜ್ರೀ ಬಲಿಭಿರ್ದೈವತೈರಭಿರಕ್ಷಿತಃ|
ಆಸಸಾದ ತತೋ ವೃತ್ರಂ ಸ್ಥಿತಮಾವೃತ್ಯ ರೋದಸೀ||
ಕಾಲಕೇಯೈರ್ಮಹಾಕಾಯೈಃ ಸಮಂತಾದಭಿರಕ್ಷಿತಂ|
ಸಮುದ್ಯತಪ್ರಹರಣೈಃ ಸಶೃಂಗೈರಿವ ಪರ್ವತೈಃ||
ಲೋಮೇಶನು ಹೇಳಿದನು: ಅನಂತರ ಆ ವಜ್ರಿಯು ಬಲಶಾಲಿ ದೇವತೆಗಳ ರಕ್ಷಣೆಯಲ್ಲಿ ಪರ್ವತ ಶೃಂಗಗಳಂತೆ ಮಹಾಕಾಯರಾದ, ಆಯುಧಗಳನ್ನು ಎತ್ತಿಹಿಡಿದ ಕಾಲಕೇಯರ ಒಗ್ಗಟ್ಟಿನ ರಕ್ಷಣೆಯಲ್ಲಿ ಭೂಮಿ ಮತ್ತು ಸ್ವರ್ಗಗಳನ್ನು ಆವರಿಸಿ ಬರುತ್ತಿರುವ ವೃತ್ರನನ್ನು ಎದುರಿಸಿದನು.
ತತೋ ಯುದ್ಧಂ ಸಮಭವದ್ದೇವಾನಾಂ ಸಹ ದಾನವೈಃ|
ಮುಹೂರ್ತಂ ಭರತಶ್ರೇಷ್ಠ ಲೋಕತ್ರಾಸಕರಂ ಮಹತ್||
ಭರತಶ್ರೇಷ್ಠ ತಕ್ಷಣವೇ ದೇವತೆಗಳೊಂದಿಗೆ ದಾನವರ ಲೋಕಕ್ಕೇ ಮಹಾ ಸಂಕಟವನ್ನು ತಂದ ಯುದ್ಧವು ಪ್ರಾರಂಭವಾಯಿತು.
ಉದ್ಯತಪ್ರತಿಪಿಷ್ಟಾನಾಂ ಖಡ್ಗಾನಾಂ ವೀರಬಾಹುಭಿಃ|
ಆಸೀತ್ಸುತುಮುಲಃ ಶಬ್ಧಃ ಶರೀರೇಷ್ವಭಿಪಾತ್ಯತಾಂ||
ತಮ್ಮ ವೀರಬಾಹುಗಳಿಂದ ಖಡ್ಗಗಳನ್ನು ಮೇಲೆತ್ತಿ, ಗುಂಪಾಗಿ ಯುದ್ಧಕ್ಕೆ ಬಂದು ಎರಗುವಾಗ ಪರಸ್ಪರರ ಶರೀರಗಳು ಒಂದಕ್ಕೊಂದು ತಾಗಿ ಶಬ್ಧದ ತುಮುಲವುಂಟಾಯಿತು.
ಶಿರೋಭಿಃ ಪ್ರಪತದ್ಭಿಶ್ಚ ಅಂತರಿಕ್ಷಾನ್ಮಹೀತಲಂ|
ತಾಲೈರಿವ ಮಹೀಪಾಲ ವೃಂತಾದ್ಭ್ರಷ್ಟೈರದೃಶ್ಯತ||
ಅಂತರಿಕ್ಷದಿಂದ ಭೂಮಿಯ ಮೇಲೆ ಉರುಳುತ್ತಿದ್ದ ಶಿರಗಳು ತಾಲವೃಕ್ಷದಿಂದ ಉದುರಿ ಕೆಳಗೆ ಬೀಳುತ್ತಿದ್ದ ತಾಳೆಕಾಯಿಗಳಂತೆ ಕಂಡವು.
ತೇ ಹೇಮಕವಚಾ ಭೂತ್ವಾ ಕಾಲೇಯಾಃ ಪರಿಘಾಯುಧಾಃ|
ತ್ರಿದಶಾನಭ್ಯವರ್ತಂತ ದಾವದಗ್ಧಾ ಇವಾದ್ರಯಃ||
ಬಂಗಾರದ ಕವಚಗಳನ್ನು ಧರಿಸಿದ್ದ ಕಾಲಕೇಯರು ಪರಿಘಾಯುಧಗಳನ್ನು ಹಿಡಿದು ಬೆಟ್ಟಕ್ಕೆ ತಗುಲಿದ ಕಾಡ್ಗಿಚ್ಚಿನಂತೆ ದೇವತೆಗಳಮೇಲೆ ಎರಗಿದರು.
ತೇಷಾಂ ವೇಗವತಾಂ ವೇಗಂ ಸಹಿತಾನಾಂ ಪ್ರಧಾವತಾಂ|
ನ ಶೇಕುಸ್ತ್ರಿದಶಾಃ ಸೋಢುಂ ತೇ ಭಗ್ನಾಃ ಪ್ರಾದ್ರವನ್ಭಯಾತ್||
ವೇಗದಿಂದ ಓಡಿ ಬರುತ್ತಿರುವ ಅವರ ವೇಗವನ್ನು ಸಹಿಸಲಾರದೇ, ಅವರ ಸೇನೆಯನ್ನು ಒಡೆದು ಮುನ್ನುಗ್ಗಲಾರದೇ ದೇವತೆಗಳ ಸೇನೆಯು ಒಡೆದು ಭಯದಿಂದ ಪಲಾಯನಗೈಯಿತು.
ತಾನ್ದೃಷ್ಟ್ವಾ ದ್ರವತೋ ಭೀತಾನ್ಸಹಸ್ರಾಕ್ಷಃ ಪುರಂದರಃ|
ವೃತ್ರೇ ವಿವರ್ಧಮಾನೇ ಚ ಕಶ್ಮಲಂ ಮಹದಾವಿಶತ್||
ಭಯಭೀತರಾಗಿ ಈ ರೀತಿ ಅವರು ಪಲಾಯನಮಾಡುತ್ತಿರುವುದನ್ನು ಮತ್ತು ವೃತ್ರನು ಇನ್ನೂ ಅಧಿಕವಾಗಿ ಬೆಳೆಯುತ್ತಿರುವುದನ್ನು ಕಂಡ ಸಹಸ್ರಾಕ್ಷ ಪುರಂದರನು ಅತೀವ ದುಃಖಪರನಾದನು.
ತಂ ಶಕ್ರಂ ಕಶ್ಮಲಾವಿಷ್ಟಂ ದೃಷ್ಟ್ವಾ ವಿಷ್ಣುಃ ಸನಾತನಃ|
ಸ್ವತೇಜೋ ವ್ಯದಧಾಚ್ಛಕ್ರೇ ಬಲಮಸ್ಯ ವಿವರ್ಧಯನ್||
ಕುಗ್ಗುತ್ತಿರುವ ಶಕ್ರನನ್ನು ನೋಡಿದ ಸನಾತನ ವಿಷ್ಣುವು ತನ್ನದೇ ತೇಜಸ್ಸನ್ನಿತ್ತು ಶಕ್ರನ ಬಲವನ್ನು ಹೆಚ್ಚಿಸಿದನು.
ವಿಷ್ಣುನಾಪ್ಯಾಯಿತಂ ಶಕ್ರಂ ದೃಷ್ಟ್ವಾ ದೇವಗಣಾಸ್ತತಃ|
ಸ್ವಂ ಸ್ವಂ ತೇಜಃ ಸಮಾದಧ್ಯುಸ್ತಥಾ ಬ್ರಹ್ಮರ್ಷಯೋಽಮಲಾಃ||
ವಿಷ್ಣುವಿನಿಂದ ವೃದ್ಧಿಹೊಂದಿದ ಶಕ್ರನನ್ನು ನೋಡಿ ದೇವಗಣಗಳು ಮತ್ತು ಅಮಲ ಬ್ರಹ್ಮರ್ಷಿಗಳು ತಮ್ಮ ತಮ್ಮ ತೇಜಸ್ಸನ್ನು ಅವನಿಗೆ ನೀಡಿದರು. 
ಸ ಸಮಾಪ್ಯಾಯಿತಃ ಶಕ್ರೋ ವಿಷ್ಣುನಾ ದೈವತೈಃ ಸಹ|
ಋಷಿಭಿಶ್ಚ ಮಹಾಭಾಗೈರ್ಬಲವಾನ್ಸಮಪದ್ಯತ||
ವಿಷ್ಣು, ದೇವತೆಗಳು ಮತ್ತು ಮಹಾಭಾಗ ಋಷಿಗಳ ಸಹಾಯದಿಂದ ಶಕ್ರನ ಬಲವು ವೃದ್ಧಿಸಿತು.
ಜ್ಞಾತ್ವಾ ಬಲಸ್ಥಂ ತ್ರಿದಶಾಧಿಪಂ ತು|
ನನಾದ ವೃತ್ರೋ ಮಹತೋ ನಿನಾದಾನ್|
ತಸ್ಯ ಪ್ರಣಾದೇನ ಧರಾ ದಿಶಶ್ಚ|
ಖಂ ದ್ಯೌರ್ನಗಾಶ್ಚಾಪಿ ಚಚಾಲ ಸರ್ವಂ||
ತ್ರಿದಶಾಧಿಪನು ಬಲಶಾಲಿಯಾದುದನ್ನು ತಿಳಿದ ವೃತ್ರನು ಮಹಾ ಗರ್ಜನೆಯನ್ನು ಗೈದನು. ಅವನ ನಿನಾದದಿಂದ ಭೂಮಿ, ದಿಕ್ಕುಗಳು, ಆಕಾಶ, ಸ್ವರ್ಗ ಮತ್ತು ಪರ್ವತಗಳು ಎಲ್ಲವೂ ತತ್ತರಿಸಿ ನಡುಗಿದವು.
ತತೋ ಮಹೇಂದ್ರಃ ಪರಮಾಭಿತಪ್ತಃ|
ಶ್ರುತ್ವಾ ರವಂ ಘೋರರೂಪಂ ಮಹಾಂತಂ|
ಭಯೇ ನಿಮಗ್ನಸ್ತ್ವರಿತಂ ಮುಮೋಚ|
ವಜ್ರಂ ಮಹತ್ತಸ್ಯ ವಧಾಯ ರಾಜನ್||
ಆ ಘೋರರೂಪೀ ಮಹಾಕಾಯನ ರವವನ್ನು ಕೇಳಿದ ಪರಮಭೀತಪ್ತ ಮಹೇಂದ್ರನು ಭಯದಿಂದ ಅವಸರದಲ್ಲಿ ಅವನ ವಧೆಗೆಂದು ಮಹಾ ವಜ್ರವನ್ನು ಬಿಟ್ಟನು.
ಸ ಶಕ್ರವಜ್ರಾಭಿಹತಃ ಪಪಾತ|
ಮಹಾಸುರಃ ಕಾಂಚನಮಾಲ್ಯಧಾರೀ|
ಯಥಾ ಮಹಾಂ ಶೈಲವರಃ ಪುರಸ್ತಾತ್|
ಸ ಮಂದರೋ ವಿಷ್ಣುಕರಾತ್ಪ್ರಮುಕ್ತಃ||
ಆ ಕಾಂಚನಮಾಲಧಾರಿ ಮಹಾಸುರನು ಶಕ್ರನ ವಜ್ರದಿಂದ ಹೊಡೆಯಲ್ಪಟ್ಟು, ಹಿಂದೆ ಪರ್ವತಗಳಲ್ಲಿ ಶ್ರೇಷ್ಠ ಮಹಾ ಪರ್ವತ ಮಂದರವು ವಿಷ್ಣುವಿನ ಕೈಯಿಂದ ಕಳಚಿ ಬಿದ್ದಂತೆ ಕೆಳಗುರುಳಿದನು.
ತಸ್ಮಿನ್ ಹತೇ ದೈತ್ಯವರೇ ಭಯಾರ್ತಃ|
ಶಕ್ರಃ ಪ್ರದುದ್ರಾವ ಸರಃ ಪ್ರವೇಷ್ಟುಂ|
ವಜ್ರಂ ನ ಮೇನೇ ಸ್ವಕರಾತ್ಪ್ರಮುಕ್ತಂ|
ವೃತ್ರಂ ಹತಂ ಚಾಪಿ ಭಯಾನ್ನ ಮೇನೇ||
ಆ ದೈತ್ರಶ್ರೇಷ್ಠನು ಹತನಾದರೂ ಭಯಾರ್ತನಾದ ಶಕ್ರನು ಸರೋವರಕ್ಕೆ ಧುಮುಕಿ ಮುಳುಗಿದನು. ತನ್ನ ಕೈಯಿಂದಲೇ ಪ್ರಯೋಗಿಸಿದ್ದ ವಜ್ರವು ವೃತ್ರನನ್ನು ಕೊಲ್ಲುತ್ತದೆ ಎನ್ನುವುದರಲ್ಲಿ ನಂಬಿಕೆ ಇಲ್ಲದೆ ಭಯದಲ್ಲಿ ಹಾಗೆ ಮಾಡಿದನು.
ಸರ್ವೇ ಚ ದೇವಾ ಮುದಿತಾಃ ಪ್ರಹೃಷ್ಟಾ|
ಮಹರ್ಷಯಶ್ಚೇಂದ್ರಮಭಿಷ್ಟುವಂತಃ|
ಸರ್ವಾಂಶ್ಚ ದೈತ್ಯಾಂಸ್ತ್ವರಿತಾಃ ಸಮೇತ್ಯ|
ಜಘ್ನುಃ ಸುರಾ ವೃತ್ರವಧಾಭಿತಪ್ತಾನ್||
ದೇವತೆಗಳೆಲ್ಲರೂ ಸಂತೋಷದಿಂದ ನಲಿದಾಡಿದರು. ಮಹರ್ಷಿಗಳು ಇಂದ್ರನನ್ನು ಕೊಂಡಾಡಿದರು. ಬೇಗನೇ ಎಲ್ಲ ಸುರರೂ ಸೇರಿ ವೃತ್ರನ ವಧೆಯಿಂದ ಪರಿತಪಿಸುತ್ತಿದ್ದ ದೈತ್ಯರನ್ನು ಸಂಹರಿಸಿದರು.
ತೇ ವಧ್ಯಮಾನಾಸ್ತ್ರಿದಶೈಸ್ತದಾನೀಂ|
ಸಮುದ್ರಮೇವಾವಿವಿಶುರ್ಭಯಾರ್ತಾಃ|
ಪ್ರವಿಶ್ಯ ಚೈವೋದಧಿಮಪ್ರಮೇಯಂ|
ಝಷಾಕುಲಂ ರತ್ನಸಮಾಕುಲಂ ಚ||
ದೇವತೆಗಳಿಂದ ಹತರಾಗುತ್ತಿದ್ದ ಅವರು ಭಯಾರ್ತರಾಗಿ ಸಮುದ್ರವನ್ನು ಪ್ರವೇಶಿಸಿದರು. ರತ್ನದಿಂದೊಡಗೂಡಿದ, ತಿಮಿಂಗಿಲ ಸಂಕುಲಗಳಿಂದೊಡಗೂಡಿದ ಅಳತೆಯೇ ಇಲ್ಲದ ಆಳವನ್ನು ಪ್ರವೇಶಿಸಿದರು. 
ತದಾ ಸ್ಮ ಮಂತ್ರಂ ಸಹಿತಾಃ ಪ್ರಚಕ್ರುಸ್|
ತ್ರೈಲೋಕ್ಯನಾಶಾರ್ಥಮಭಿಸ್ಮಯಂತಃ|
ತತ್ರ ಸ್ಮ ಕೇ ಚಿನ್ಮತಿನಿಶ್ಚಯಜ್ಞಾಸ್|
ತಾಂಸ್ತಾನುಪಾಯಾನನುವರ್ಣಯಂತಿ||
ಅಲ್ಲಿ ಎಲ್ಲರೂ ಒಟ್ಟಿಗೆ ನಸುನಗುತ್ತಾ ಮೂರೂ ಲೋಕಗಳ ವಿನಾಶಾರ್ಥವಾಗಿ ಮಂತ್ರಾಲೋಚನೆ ಮಾಡಿದರು. ಅಲ್ಲಿ ಕೆಲವರು ಯೋಚಿಸಿ ನಿರ್ಧರಿಸುವವರಿದ್ದರೆ ಇತರರು ಆ ಉಪಾಯಗಳನ್ನು ಅನುಸರಿಸಿ ಕಾರ್ಯಗತಗೊಳಿಸುವವರಿದ್ದರು.
ತೇಷಾಂ ತು ತತ್ರ ಕ್ರಮಕಾಲಯೋಗಾದ್|
ಮತಿಶ್ಚಿಂತಯತಾಂ ಬಭೂವ|
ಯೇ ಸಂತಿ ವಿದ್ಯಾತಪಸೋಪಪನ್ನಾಸ್|
ತೇಷಾಂ ವಿನಾಶಃ ಪ್ರಥಮಂ ತು ಕಾರ್ಯಃ||
ಅಲ್ಲಿ ಚಿಂತಿಸಿದ ವಿಚಾರಗಳು ಕ್ರಮೇಣ ಕಾಲಯೋಗದಂತೆ ಘೋರವಾಯಿತು. ವಿದ್ಯೆ ತಪಸ್ಸಿನಲ್ಲಿ ನಿರತರಾದರ ವಿನಾಶವು ಮೊಟ್ಟ ಮೊದಲ   ಕಾರ್ಯವಾಗಬೇಕೆಂದು ನಿಶ್ಚಯಿಸಿದರು.
ಲೋಕಾ ಹಿ ಸರ್ವೇ ತಪಸಾ ಧ್ರಿಯಂತೇ|
ತಸ್ಮಾತ್ತ್ವರಧ್ವಂ ತಪಸಃ ಕ್ಷಯಾಯ|
ಯೇ ಸಂತಿ ಕೇ ಚಿದ್ಧಿ ವಸುಂಧರಾಯಾಂ|
ತಪಸ್ವಿನೋ ಧರ್ಮವಿದಶ್ಚ ತಜ್ಜ್ಞಾಃ||
ತೇಷಾಂ ವಧಃ ಕ್ರಿಯತಾಂ ಕ್ಷಿಪ್ರಮೇವ|
ತೇಷು ಪ್ರನಷ್ಟೇಷು ಜಗತ್ಪ್ರನಷ್ಟಂ|
ತಪಸ್ಸೇ ಈ ಸರ್ವ ಲೋಕಗಳನ್ನು ನಡೆಸುತ್ತಿದೆ. ಆದುದರಿಂದ ತಪಸ್ಸನ್ನು ನಾಶಪಡಿಸಲು ಅವಸರ ಮಾಡಬೇಕು. ಈ ಭೂಮಿಯಲ್ಲಿ ಎಷ್ಟು ಮಂದಿ ಯಾರ್ಯಾರು ಧರ್ಮವಿದುಗಳು, ತಪಸ್ವಿಗಳು, ತಿಳಿದಿರುವವರು ಇದ್ದಾರೋ ಅವರೆಲ್ಲರನ್ನೂ ಕ್ಷಿಪ್ರವಾಗಿ ವಧಿಸಬೇಕು. ಅವರು ನಾಶವಾದರೆ ಜಗತ್ತೇ ನಾಶವಾಗುತ್ತದೆ.
ಏವಂ ಹಿ ಸರ್ವೇ ಗತಬುದ್ಧಿಭಾವಾ|
ಜಗದ್ವಿನಾಶೇ ಪರಮಪ್ರಹೃಷ್ಟಾಃ||
ದುರ್ಗಂ ಸಮಾಶ್ರಿತ್ಯ ಮಹೋರ್ಮಿಮಂತಂ|
ರತ್ನಾಕರಂ ವರುಣಸ್ಯಾಲಯಂ ಸ್ಮ|
ಈ ರೀತಿ ಸಂತೋಷದಿಂದ ಜಗತ್ತಿನ ವಿನಾಶವನ್ನು ನಿರ್ಧರಿಸಿದ ಅವರೆಲ್ಲರೂ ರತ್ನಾಕರ ವರುಣಾಲಯವನ್ನು ತಮ್ಮ ಮಹಾ ಕೋಟೆಯನ್ನಾಗಿಸಿ ಆಶ್ರಯ ಹೊಂದಿದರು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಏಕೋನಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ತೊಂಭತ್ತೊಂಭತ್ತನೆಯ ಅಧ್ಯಾಯವು.

7) ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ ೧೦೦ 
ಕಾಲೇಯರು ಭೂಮಿಯಲ್ಲಿ ಬ್ರಾಹ್ಮಣರನ್ನು ನಾಶಗೊಳಿಸಿದುದು (೧-೧೫). ದೇವತೆಗಳು ನಾರಾಯಣನ ಮೊರೆಹೊಕ್ಕಿದುದು (೧೬-೨೪).
 ಲೋಮೇಶ ಉವಾಚ|
ಸಮುದ್ರಂ ತೇ ಸಮಾಶ್ರಿತ್ಯ ವಾರುಣಂ ನಿಧಿಮಂಭಸಾಂ|
ಕಾಲೇಯಾಃ ಸಂಪ್ರವರ್ತಂತ ತ್ರೈಲೋಕ್ಯಸ್ಯ ವಿನಾಶನೇ||
ಲೋಮಶನು ಹೇಳಿದನು: ವಾರುಣ ನಿಧಿಮಾಂಬುಸ ಸಮುದ್ರವನ್ನು ಆಶ್ರಯಿಸಿದ ಕಾಲೇಯರು ತ್ರೈಲೋಕ್ಯದ ವಿನಾಶನಕ್ಕೆ ತಯಾರಿ ನಡೆಸಿದರು.
ತೇ ರಾತ್ರೌ ಸಮಭಿಕ್ರುದ್ಧಾ ಭಕ್ಷಯಂತಿ ಸದಾ ಮುನೀನ್|
ಆಶ್ರಮೇಷು ಚ ಯೇ ಸಂತಿ ಪುನ್ಯೇಷ್ವಾಯತನೇಷು ಚ||
ಪ್ರತಿ ರಾತ್ರಿಯೂ ಆ ಕೃದ್ಧ ಅಸುರರು ಆಶ್ರಮಗಳಲ್ಲಿ ಮತ್ತು ಪುಣ್ಯಕ್ಷೇತ್ರಗಳಲ್ಲಿದ್ದ ಮುನಿಗಳನ್ನು ಭಕ್ಷಿಸಿದರು. 
ವಸಿಷ್ಠಸ್ಯಾಶ್ರಮೇ ವಿಪ್ರಾ ಭಕ್ಷಿತಾಸ್ತೈರ್ದುರಾತ್ಮಭಿಃ|
ಅಶೀತಿಶತಮಷ್ಟೌ ಚ ನವ ಚಾನ್ಯೇ ತಪಸ್ವಿನಃ||
ವಸಿಷ್ಠನ ಆಶ್ರಮದಲ್ಲಿ ಆ ದುರಾತ್ಮರು ನೂರಾ‌ಎಂಟು ವಿಪ್ರರನ್ನೂ ಮತ್ತು ಇನ್ನೂ ಇತರ ಒಂಭತ್ತು ತಪಸ್ವಿಗಳನ್ನು ಭಕ್ಷಿಸಿದರು.
ಚ್ಯವನಸ್ಯಾಶ್ರಮಂ ಗತ್ವಾ ಪುಣ್ಯಂ ದ್ವಿಜನಿಷೇವಿತಂ|
ಫಲಮೂಲಾಶನಾನಾಂ ಹಿ ಮುನೀನಾಂ ಭಕ್ಷಿತಂ ಶತಂ||
ಪುಣ್ಯ ದ್ವಿಜನಿಷೇವಿತ ಚ್ಯವನಾಶ್ರಮಕ್ಕೆ ಹೋಗಿ ಫಲಮೂಲಗಳನ್ನೇ ಆಹಾರವಾಗಿಸಿಕೊಂಡಿದ್ದ ಒಂದು ನೂರು ಮುನಿಗಳನ್ನು ಭಕ್ಷಿಸಿದರು.
ಏವಂ ರಾತ್ರೌ ಸ್ಮ ಕುರ್ವಂತಿ ವಿವಿಶುಶ್ಚಾರ್ಣವಂ ದಿವಾ|
ಭರದ್ವಾಜಾಶ್ರಮೇ ಚೈವ ನಿಯತಾ ಬ್ರಹ್ಮಚಾರಿಣಃ||
ವಾಯ್ವಾಹಾರಾಂಬುಭಕ್ಷಾಶ್ಚ ವಿಂಶತಿಃ ಸಂನಿಪಾತಿತಾಃ||
ರಾತ್ರಿಯಸಮದಲ್ಲಿ ಹೀಗೆ ಮಾಡಿ ಹಗಲಿನಲ್ಲಿ ಸಮುದ್ರದಲ್ಲಿ ಅಡಗಿರುತ್ತಿದ್ದರು. ಭರದ್ವಾಜನ ಆಶ್ರಮದಲ್ಲಿ ನಿಯತರಾಗಿದ್ದ, ಕೇವಲ ಗಾಳಿ ಮತ್ತು ನೀರನ್ನು ಸೇವಿಸುತ್ತಿದ್ದ ಇಪ್ಪತ್ತು ಬ್ರಹ್ಮಚಾರಿಗಳನ್ನು ಕೊಂದು ಉರುಳಿಸಿದರು.
ಏವಂ ಕ್ರಮೇಣ ಸರ್ವಾಂಸ್ತಾನಾಶ್ರಮಾನ್ದಾನವಾಸ್ತದಾ|
ನಿಶಾಯಾಂ ಪರಿಧಾವಂತಿ ಮತ್ತಾ ಭುಜಬಲಾಶ್ರಯಾತ್||
ಕಾಲೋಪಸೃಷ್ಟಾಃ ಕಾಲೇಯಾ ಘ್ನಂತೋ ದ್ವಿಜಗಣಾನ್ಬಹೂನ್||
ಈ ರೀತಿ ಕ್ರಮೇಣವಾಗಿ ಕಾಲವೇ ಅವರನ್ನು ಸುತ್ತುವರೆಯುವವರೆಗೆ ಕಾಲೇಯ ದಾನವರು ತಮ್ಮ ಭುಜಬಲವನ್ನು ಆಶ್ರಯಿಸಿ ಮತ್ತರಾಗಿ ರಾತ್ರಿ ಎಲ್ಲ ಆಶ್ರಮಗಳನ್ನು ಆಕ್ರಮಣಿಸಿ ಬಹಳಷ್ಟು ದ್ವಿಜಗಣಗಳನ್ನು ಸಂಹರಿಸಿದರು.
ನ ಚೈನಾನನ್ವಬುಧ್ಯಂತ ಮನುಜಾ ಮನುಜೋತ್ತಮ|
ಏವಂ ಪ್ರವೃತ್ತಾನ್ದೈತ್ಯಾಂಸ್ತಾಂಸ್ತಾಪಸೇಷು ತಪಸ್ವಿಷು||
ಮನುಜೋತ್ತಮ ಈ ರೀತಿ ತಾಪಸರನ್ನು ಪೀಡಿಸುತ್ತಿರುವವರು ದೈತ್ಯರು ಎಂದು ಮನುಷ್ಯರ್ಯಾರಿಗೂ ತಿಳಿದಿರಲಿಲ್ಲ.
ಪ್ರಭಾತೇ ಸಮದೃಶ್ಯಂತ ನಿಯತಾಹಾರಕರ್ಶಿತಾಃ|
ಮಹೀತಲಸ್ಥಾ ಮುನಯಃ ಶರೀರೈರ್ಗತಜೀವಿತೈಃ||
ಬೆಳಿಗ್ಗೆ ಸಮಯದಲ್ಲಿ ನಿಯತಾಹಾರಗಳಿಂದ ಕೃಶರಾಗಿದ್ದ ಮುನಿಗಳ ನಿರ್ಜೀವ ಶರೀರಗಳು ಭೂಮಿಯ ಮೇಲೆ ಬಿದ್ದಿರುವುದನ್ನು ನೋಡುತ್ತಿದ್ದರು.
ಕ್ಷೀಣಮಾಂಸೈರ್ವಿರುಧಿರೈರ್ವಿಮಜ್ಜಾಂತ್ರೈರ್ವಿಸಂಧಿಭಿಃ|
ಆಕೀರ್ಣೈರಾಚಿತಾ ಭೂಮಿಃ ಶಂಖಾನಾಮಿವ ರಾಶಿಭಿಃ||
ಕೃಶರಾದ, ಮಾಂಸ-ರಕ್ತ-ಮಜ್ಜಗಳಿಲ್ಲದ, ಕೈಕಾಲುಗಳನ್ನು ತುಂಡರಿಸಿದ, ಅಕೀರ್ಣ ಶಂಖಗಳ ರಾಶಿಯಂತಿದ್ದ ಹೆಣಗಳ ರಾಶಿಗಳಿಂದ ಭೂಮಿಯು ತುಂಬಿ ಕೊಂಡಿತು.
ಕಲಶೈರ್ವಿಪ್ರವಿದ್ಧೈಶ್ಚ ಸ್ರುವೈರ್ಭಗ್ನೈಸ್ತಥೈವ ಚ|
ವಿಕೀರ್ಣೈರಗ್ನಿಹೋತ್ರೈಶ್ಚ ಭೂರ್ಬಭೂವ ಸಮಾವೃತಾ||
ವಿಪ್ರವಿದರ ಒಡೆದ ಕಲಶಗಳ ಚೂರುಗಳಿಂದ ಮತ್ತು ಅಗ್ನಿಹೋತ್ರಗಳ ತುಂಡುಗಳಿಂದ ಭೂಮಿಯು ತುಂಬಿಕೊಂಡಿತು. 
ನಿಃಸ್ವಾಧ್ಯಾಯವಷಟ್ಕಾರಂ ನಷ್ಟಯಜ್ಞೋತ್ಸವಕ್ರಿಯಂ|
ಜಗದಾಸೀನ್ನಿರುತ್ಸಾಹಂ ಕಾಲೇಯಭಯಪೀಡಿತಂ||
ಸ್ವಾಧ್ಯಾಯ, ವಷಟ್ಕಾರಗಳು ನಿಂತು, ಯಜ್ಞವೇ ಮೊದಲಾದ ಉತ್ಸವ ಕ್ರಿಯೆಗಳು ನಿಂತು ಕಾಲೇಯರ ಭಯಪೀಡಿತವಾದ ಜಗತ್ತು ಉತ್ಸಾಹವನ್ನೇ ಕಳೆದುಕೊಂಡಿತು.
ಏವಂ ಪ್ರಕ್ಷೀಯಮಾಣಾಶ್ಚ ಮಾನವಾ ಮನುಜೇಶ್ವರ|
ಆತ್ಮತ್ರಾಣಪರಾ ಭೀತಾಃ ಪ್ರಾದ್ರವಂತ ದಿಶೋ ಭಯಾತ್||
ಮನುಜೇಶ್ವರ ಈ ರೀತಿ ಮಾನವರು ಕುಂದುತ್ತಿರಲು ತಮ್ಮನ್ನು ರಕ್ಷಿಸಿಕೊಳ್ಳಲು ಭಯಭೀತರಾಗಿ ದಿಕ್ಕುದಿಕ್ಕುಗಳಿಗೆ ಓಡಿದರು.
ಕೇ ಚಿದ್ಗುಹಾಃ ಪ್ರವಿವಿಶುರ್ನಿರ್ಝರಾಂಶ್ಚಾಪರೇ ಶ್ರಿತಾಃ|
ಅಪರೇ ಮರಣೋದ್ವಿಗ್ನಾ ಭಯಾತ್ಪ್ರಾಣಾನ್ಸಮುತ್ಸೃಜನ್||
ಕೆಲವರು ಗುಹೆಗಳಲ್ಲಿ ಅಡಗಿಕೊಂಡರೆ, ಇತರರು ಜಲಪಾತಗಳ ಹಿಂದೆ ಅಡಗಿಕೊಂಡರು. ಇನ್ನು ಕೆಲವರು ಸಾವಿಗೆ ಎಷ್ಟು ಹೆದರಿದರೆಂದರೆ ಭಯವೇ ಅವರನ್ನು ಸಾಯಿಸಿತು.
ಕೇ ಚಿದತ್ರ ಮಹೇಷ್ವಾಸಾಃ ಶೂರಾಃ ಪರಮದರ್ಪಿತಾಃ|
ಮಾರ್ಗಮಾಣಾಃ ಪರಂ ಯತ್ನಂ ದಾನವಾನಾಂ ಪ್ರಚಕ್ರಿರೇ||
ನ ಚೈತಾನಧಿಜಗ್ಮುಸ್ತೇ ಸಮುದ್ರಂ ಸಮುಪಾಶ್ರಿತಾನ್|
ಶ್ರಮಂ ಜಗ್ಮುಶ್ಚ ಪರಮಮಾಜಗ್ಮುಃ ಕ್ಷಯಮೇವ ಚ||
ಅಲ್ಲಿದ್ದ ಕೆಲವು ಮಹಾದರ್ಪಿತ ಮಹೇಷ್ವಾಸ ಶೂರರು ದಾನವರನ್ನು ಬೇಟೆಯಾಡಲು ಪರಮ ಯತ್ನವನ್ನು ಮಾಡಿದರು. ಆದರೆ ಆ ದಾನವರು ಸಮದ್ರದಲ್ಲಿ ಅಡಗಿ ಕೊಂಡಿದ್ದುದರಿಂದ ಅವರನ್ನು ಕಾಣದೇ ಅವರ ಪ್ರಯತ್ನದಲ್ಲಿಯೇ ಸೋತು ಮರಣ ಹೊಂದಿದರು.
ಜಗತ್ಯುಪಶಮಂ ಯಾತೇ ನಷ್ಟಯಜ್ಞೋತ್ಸವಕ್ರಿಯೇ|
ಆಜಗ್ಮುಃ ಪರಮಾಮಾರ್ತಿಂ ತ್ರಿದಶಾ ಮನುಜೇಶ್ವರ||
ಮನುಜೇಶ್ವರ ಯಜ್ಞೋತ್ಸವಗಳು ನಿಂತು ಜಗತ್ತೇ ನಾಶದ ಅಂಚಿನಲ್ಲಿರಲು ದೇವತೆಗಳು ಅತೀವ ಚಿಂತೆಗೊಳಗಾದರು.
ಸಮೇತ್ಯ ಸಮಹೇಂದ್ರಾಶ್ಚ ಭಯಾನ್ಮಂತ್ರಂ ಪ್ರಚಕ್ರಿರೇ|
ನಾರಾಯಣಂ ಪುರಸ್ಕೃತ್ಯ ವೈಕುಂಠಮಪರಾಜಿತಂ||
ಭಯದಿಂದ ಇಂದ್ರನೊಡನೆ ಸೇರಿ ಮಂತ್ರಾಲೋಚನೆ ಮಾಡಿ, ಅಪರಾಜಿತ ವೈಕುಂಠ ನಾರಾಯಣನಲ್ಲಿಗೆ ಬಂದರು.
ತತೋ ದೇವಾಃ ಸಮೇತಾಸ್ತೇ ತದೋಚುರ್ಮಧುಸೂದನಂ|
ತ್ವಂ ನಃ ಸ್ರಷ್ಟಾ ಚ ಪಾತಾ ಚ ಭರ್ತಾ ಚ ಜಗತಃ ಪ್ರಭೋ||
ತ್ವಯಾ ಸೃಷ್ಟಮಿದಂ ಸರ್ವಂ ಯಚ್ಚೇಂಗಂ ಯಚ್ಚ ನೇಂಗತಿ||
ಅಲ್ಲಿ ಸೇರಿದ್ದ ದೇವತೆಗಳು ಮಧುಸೂದನನಿಗೆ ಹೇಳಿದರು: ನೀನೇ ನಮ್ಮ ಸೃಷ್ಟ, ನಮ್ಮ ಪಾಲಕ, ನಮ್ಮ ಒಡೆಯ, ಮತ್ತು ಜಗತ್ತಿನ ಪ್ರಭು ಪ್ರಕಟಿತ ಮತ್ತು ಅಪ್ರಕಟಿತ ಇರುವ ಎಲ್ಲವನ್ನೂ ನೀನೇ ಸೃಷ್ಟಿಸಿದೆ.
ತ್ವಯಾ ಭೂಮಿಃ ಪುರಾ ನಷ್ಟಾ ಸಮುದ್ರಾತ್ಪುಷ್ಕರೇಕ್ಷಣ|
ವಾರಾಹಂ ರೂಪಮಾಸ್ಥಾಯ ಜಗದರ್ಥೇ ಸಮುದ್ಧೃತಾ||
ಪುಷ್ಕರೇಕ್ಷಣ ಹಿಂದೆ ಭೂಮಿಯು ಸಮುದ್ರದಲ್ಲಿ ನಷ್ಟವಾದಾಗ ಜಗತ್ತಿಗಾಗಿ ನೀನು ವರಾಹದ ರೂಪವನ್ನು ತಾಳಿ ಸಮದ್ರದಿಂದ ಮೇಲ್ತಂದೆ  
ಆದಿದೈತ್ಯೋ ಮಹಾವೀರ್ಯೋ ಹಿರಣ್ಯಕಶಿಪುಸ್ತ್ವಯಾ|
ನಾರಸಿಂಹಂ ವಪುಃ ಕೃತ್ವಾ ಸೂದಿತಃ ಪುರುಷೋತ್ತಮ||
ಪುರುಷೋತ್ತಮ ಮಹಾವೀರ್ಯ ಆದಿದೈತ್ಯ ಹಿರಣ್ಯಕಶಿಪುವನ್ನು ನಾರಸಿಂಹನ ದೇಹತಾಳಿ ಸಂಹರಿಸಿದೆ.
ಅವಧ್ಯಃ ಸರ್ವಭೂತಾನಾಂ ಬಲಿಶ್ಚಾಪಿ ಮಹಾಸುರಃ|
ವಾಮನಂ ವಪುರಾಶ್ರಿತ್ಯ ತ್ರೈಲೋಕ್ಯಾದ್ಭ್ರಂಶಿತಸ್ತ್ವಯಾ||
ಸರ್ವಭೂತಗಳಿಂದಲೂ ಅವಧ್ಯನಾಗಿದ್ದ ಮಹಾಸುರ ಬಲಿಯನ್ನೂ ಕೂಡ ನೀನು ವಾಮನನ ರೂಪಧರಿಸಿ ಮೂರೂ ಲೋಕಗಳಿಂದ ಹೊರಹಾಕಿದೆ.
ಅಸುರಶ್ಚ ಮಹೇಷ್ವಾಸೋ ಜಂಭ ಇತ್ಯಭಿವಿಶ್ರುತಃ|
ಯಜ್ಞಕ್ಷೋಭಕರಃ ಕ್ರೂರಸ್ತ್ವಯೈವ ವಿನಿಪಾತಿತಃ||
ಯಜ್ಞಗಳನ್ನು ಧ್ವಂಸಮಾಡುತ್ತಿದ್ದ ಜಂಭ ಎನ್ನುವ ಮಹೇಷ್ವಾಸ ಕ್ರೂರ ಅಸುರನು ನಿನ್ನಿಂದಲೇ ಕೆಳಗುರಿಳಿದನು.
ಏವಮಾದೀನಿ ಕರ್ಮಾಣಿ ಯೇಷಾಂ ಸಂಖ್ಯಾ ನ ವಿದ್ಯತೇ|
ಅಸ್ಮಾಕಂ ಭಯಭೀತಾನಾಂ ತ್ವಂ ಗತಿರ್ಮಧುಸೂದನ||
ಮಧುಸೂದನ ಭಯಭೀತರಾದ ನಮಗೆ ಗತಿಯಾದ ನೀನು ಇವೇ ಮೊದಲಾಗಿ ಸಂಖ್ಯೆಯೇ ಸಿಗದಷ್ಟು ಕಾರ್ಯಗಳನ್ನು ಮಾಡಿದ್ದೀಯೆ
ತಸ್ಮಾತ್ತ್ವಾಂ ದೇವ ದೇವೇಶ ಲೋಕಾರ್ಥಂ ಜ್ಞಾಪಯಾಮಹೇ|
ರಕ್ಷ ಲೋಕಾಂಶ್ಚ ದೇವಾಂಶ್ಚ ಶಕ್ರಂ ಚ ಮಹತೋ ಭಯಾತ್||
ದೇವದೇವೇಶ ಆದುದರಿಂದಲೇ ಲೋಕಾರ್ಥವಾಗಿ ನಾವು ನಿನ್ನಲ್ಲಿ ಬೇಡಿಕೊಳ್ಳುತ್ತಿದ್ದೇವೆ. ಲೋಕಗಳನ್ನೂ, ದೇವತೆಗಳನ್ನು ಮತ್ತು ಇಂದ್ರನನ್ನು ಈ ಮಹಾಭಯದಿಂದ ರಕ್ಷಿಸು
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ನೂರನೆಯ ಅಧ್ಯಾಯವು.
8) ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ ೧೦೧ 
ಅಗಸ್ತ್ಯನು ಸಾಗರವನ್ನು ಬತ್ತಿಸಬಲ್ಲನು ಎಂದು ನಾರಾಯಣನು ಸೂಚಿಸಿದ್ದುದು (೧-೧೦). ದೇವತೆಗಳು ಅಗಸ್ತ್ಯನನ್ನು ಬೇಡಿಕೊಂಡಿದುದು (೧೧-೧೭).
ದೇವಾ ಊಚುಃ|
ಇತಃ ಪ್ರದಾನಾದ್ವರ್ತಂತೇ ಪ್ರಜಾಃ ಸರ್ವಾಶ್ಚತುರ್ವಿಧಾಃ|
ತಾ ಭಾವಿತಾ ಭಾವಯಂತಿ ಹವ್ಯಕವ್ಯೈರ್ದಿವೌಕಸಃ||
ದೇವತೆಗಳು ಹೇಳಿದರು: ಚತುರ್ವಿಧ ಪ್ರಜೆಗಳೆಲ್ಲರೂ ಇಲ್ಲಿಂದ ಬರುವ ಅನುಗ್ರಹದಿಂದಲೇ ಜೀವಿಸುತ್ತವೆ. ಹೀಗೆ ಅಭಿವೃದ್ಧಿಹೊಂದಿದ ಅವರು ಹವ್ಯಕವ್ಯಗಳ ಮೂಲಕ ದೇವತೆಗಳ ಅಭಿವೃದ್ಧಿಗೆ ಕಾರಣರಾಗುತ್ತಾರೆ.
ಲೋಕಾ ಹ್ಯೇವಂ ವರ್ತಯಂತಿ ಅನ್ಯೋನ್ಯಂ ಸಮುಪಾಶ್ರಿತಾಃ|
ತ್ವತ್ಪ್ರಸಾದಾನ್ನಿರುದ್ವಿಗ್ನಾಸ್ತ್ವಯೈವ ಪರಿರಕ್ಷಿತಾಃ||
ಹೀಗೆ ಲೋಕಗಳು ಅನ್ಯೋನ್ಯರನ್ನು ಅವಲಂಬಿಸಿ ನಡೆಯುತ್ತವೆ. ನಿನ್ನ ಪ್ರಸಾದದಿಂದ ಪರಿರಕ್ಷಿತರಾಗಿ ಲೋಕಗಳು ವಿಘ್ನಗಳಿಲ್ಲದೇ ಹೀಗೆಯೇ ನಡೆಯುತ್ತಿವೆ.
ಇದಂ ಚ ಸಮನುಪ್ರಾಪ್ತಂ ಲೋಕಾನಾಂ ಭಯಮುತ್ತಮಂ|
ನ ಚ ಜಾನೀಮ ಕೇನೇಮೇ ರಾತ್ರೌ ವಧ್ಯಂತಿ ಬ್ರಾಹ್ಮಣಾಃ||
ಈಗ ಈ ಅತೀವ ಭಯವು ಲೋಕಗಳಿಗೆ ಬಂದೊದಗಿದೆ. ರಾತ್ರಿಯಲ್ಲಿ ಬ್ರಾಹ್ಮಣರನ್ನು ಯಾರು ಕೊಲ್ಲುತ್ತಿದ್ದಾರೆ ಎಂದು ತಿಳಿಯಲಾರೆವು.
ಕ್ಷೀಣೇಷು ಚ ಬ್ರಾಹ್ಮಣೇಷು ಪೃಥಿವೀ ಕ್ಷಯಮೇಷ್ಯತಿ|
ತತಃ ಪೃಥಿವ್ಯಾಂ ಕ್ಷೀಣಾಯಾಂ ತ್ರಿದಿವಂ ಕ್ಷಯಮೇಷ್ಯತಿ||
ಬ್ರಾಹ್ಮಣರು ನಾಶವಾದರೆ ಭೂಮಿಯೂ ವಿನಾಶ ಹೊಂದುತ್ತದೆ. ಮತ್ತು ಭೂಮಿಯು ಕ್ಷೀಣವಾದರೆ, ದೇವಲೋಕವೂ ನಾಶಗೊಳ್ಳುತ್ತದೆ.
ತ್ವತ್ಪ್ರಸಾದಾನ್ಮಹಾಬಾಹೋ ಲೋಕಾಃ ಸರ್ವೇ ಜಗತ್ಪತೇ|
ವಿನಾಶಂ ನಾಧಿಗಚ್ಚೇಯುಸ್ತ್ವಯಾ ವೈ ಪರಿರಕ್ಷಿತಾಃ||
ಮಹಾಬಾಹೋ ಜಗತ್ಪತೇ ನಿನ್ನ ಕರುಣೆಯಿಂದ ಲೋಕಗಳೆಲ್ಲವೂ ನಾಶವಾಗದಿರಲಿ. ಅವೆಲ್ಲವನ್ನೂ ಪರಿರಕ್ಷಿಸು.
ವಿಷ್ಣುರುವಾಚ|
ವಿದಿತಂ ಮೇ ಸುರಾಃ ಸರ್ವಂ ಪ್ರಜಾನಾಂ ಕ್ಷಯಕಾರಣಂ|
ಭವತಾಂ ಚಾಪಿ ವಕ್ಷ್ಯಾಮಿ ಶೃಣುಧ್ವಂ ವಿಗತಜ್ವರಾಃ||
ವಿಷ್ಣುವು ಹೇಳಿದನು: ಸುರರೇ ಪ್ರಜೆಗಳೆಲ್ಲರೂ ನಾಶಗೊಳ್ಳುತ್ತಿರುವುದರ ಕಾರಣವನ್ನು ನಾನು ತಿಳಿದಿದ್ದೇನೆ. ನಾನು ಹೇಳುತ್ತೇನೆ - ಭಯವನ್ನು ತೊರೆದು ಕೇಳಿ.
ಕಾಲೇಯ ಇತಿ ವಿಖ್ಯಾತೋ ಗಣಃ ಪರಮದಾರುಣಃ|
ತೈಶ್ಚ ವೃತ್ರಂ ಸಮಾಶ್ರಿತ್ಯ ಜಗತ್ಸರ್ವಂ ಪ್ರಬಾಧಿತಂ||
ಕಾಲೇಯರೆಂದು ವಿಖ್ಯಾತರಾದ ಒಂದು ಪರಮದಾರುಣ ಗುಂಪಿದೆ. ಅವರು ವೃತ್ರನನ್ನು ಆಶ್ರಯಿಸಿ ಜಗತ್ತುಗಳನ್ನೆಲ್ಲವನ್ನೂ ಬಾಧಿಸುತ್ತಿದ್ದರು.
ತೇ ವೃತ್ರಂ ನಿಹತಂ ದೃಷ್ಟ್ವಾ ಸಹಸ್ರಾಕ್ಷೇಣ ಧೀಮತಾ|
ಜೀವಿತಂ ಪರಿರಕ್ಷಂತಃ ಪ್ರವಿಷ್ಟಾ ವರುಣಾಲಯಂ||
ಧೀಮಂತ ಸಹಸ್ರಾಕ್ಷನು ವೃತ್ರನನ್ನು ಸಂಹರಿಸಿದುದನ್ನು ಕಂಡು ಅವರು ವರುಣಾಲಯವನ್ನು ಹೊಕ್ಕಿ ತಮ್ಮ ಜೀವಗಳನ್ನು ರಕ್ಷಿಸಿಕೊಂಡರು.
ತೇ ಪ್ರವಿಶ್ಯೋದಧಿಂ ಘೋರಂ ನಕ್ರಗ್ರಾಹಸಮಾಕುಲಂ|
ಉತ್ಸಾದನಾರ್ಥಂ ಲೋಕಾನಾಂ ರಾತ್ರೌ ಘ್ನಂತಿ ಮುನೀನಿಹ||
ಈಗ ಅವರು ಘೋರ ಮೊಸಳೆ ತಿಮಿಂಗಿಲಗಳು ತುಂಬಿರುವ ಸಮುದ್ರವನ್ನು ಸೇರಿದ್ದಾರೆ. ಲೋಕಗಳ ವಿನಾಶಕ್ಕಾಗಿ ಅವರು ರಾತ್ರಿಯಲ್ಲಿ ಇಲ್ಲಿರುವ ಮುನಿಗಳನ್ನು ಕೊಲ್ಲುತ್ತಿದ್ದಾರೆ.
ನ ತು ಶಕ್ಯಾಃ ಕ್ಷಯಂ ನೇತುಂ ಸಮುದ್ರಾಶ್ರಯಗಾ ಹಿ ತೇ|
ಸಮುದ್ರಸ್ಯ ಕ್ಷಯೇ ಬುದ್ಧಿರ್ಭವದ್ಭಿಃ ಸಂಪ್ರಧಾರ್ಯತಾಂ||
ಅಗಸ್ತ್ಯೇನ ವಿನಾ ಕೋ ಹಿ ಶಕ್ತೋಽನ್ಯೋಽರ್ಣವಶೋಷಣೇ||
ಸಮುದ್ರದಲ್ಲಿ ಆಶ್ರಯ ಪಡೆದಿರುವ ಅವರನ್ನು ಕೊಲ್ಲಲು ಶಕ್ಯವಿಲ್ಲ. ಸಮುದ್ರವನ್ನೇ ನಾಶಗೊಳಿಸುವುದರ ಕುರಿತು ನಿಮ್ಮ ಬುದ್ಧಿಯನ್ನು ಓಡಿಸಬೇಕು. ಅಗಸ್ತ್ಯನನ್ನು ಬಿಟ್ಟು ಬೇರೆ ಯಾರು ತಾನೇ ಸಮುದ್ರವನ್ನು ಬತ್ತಿಸಲು ಶಕ್ಯರಿದ್ದಾರೆ?
ಏತಚ್ಛೃತ್ವಾ ವಚೋ ದೇವಾ ವಿಷ್ಣುನಾ ಸಮುದಾಹೃತಂ|
ಪರಮೇಷ್ಠಿನಮಾಜ್ಞಾಪ್ಯ ಅಗಸ್ತ್ಯಸ್ಯಾಶ್ರಮಂ ಯಯುಃ||
ವಿಷ್ಣುವಿನ ಈ ಮಾತುಗಳನ್ನು ಕೇಳಿ ಸಂತೋಷಗೊಂಡ ದೇವತೆಗಳು ಪರಮೇಷ್ಠಿಯಿಂದ ಬೀಳ್ಕೊಂಡು ಅಗಸ್ತ್ಯನ ಆಶ್ರಮಕ್ಕೆ ಬಂದರು. 
ತತ್ರಾಪಶ್ಯನ್ಮಹಾತ್ಮಾನಂ ವಾರುಣಿಂ ದೀಪ್ತತೇಜಸಂ|
ಉಪಾಸ್ಯಮಾನಮೃಷಿಭಿರ್ದೇವೈರಿವ ಪಿತಾಮಹಂ||
ಅಲ್ಲಿ ಅವರು ದೇವತೆಗಳ ಮಧ್ಯೆ ಪಿತಾಮಹನಂತೆ ಋಷಿಗಳ ಮಧ್ಯೆ ಕುಳಿತಿದ್ದ ದೀಪ್ತತೇಜಸ್ವಿ ಮಹಾತ್ಮ ವಾರುಣಿಯನ್ನು ಕಂಡರು.
ತೇಽಭಿಗಮ್ಯ ಮಹಾತ್ಮಾನಂ ಮೈತ್ರಾವರುಣಿಮಚ್ಯುತಂ|
ಆಶ್ರಮಸ್ಥಂ ತಪೋರಾಶಿಂ ಕರ್ಮಭಿಃ ಸ್ವೈರಭಿಷ್ಟುವನ್||
ಆಶ್ರಮದಲ್ಲಿದ್ದ ಆ ಮಹಾತ್ಮ, ಮೈತ್ರಾವರುಣಿ, ಅಚ್ಯುತ, ತಪೋರಾಶಿಯನ್ನು ಅವನ ಕರ್ಮಗಳನ್ನು ಪ್ರಶಿಂಸಿಸುತ್ತಾ ಭೇಟಿಯಾದರು.
ದೇವಾ ಊಚುಃ|
ನಹುಷೇಣಾಭಿತಪ್ತಾನಾಂ ತ್ವಂ ಲೋಕಾನಾಂ ಗತಿಃ ಪುರಾ|
ಭ್ರಂಶಿತಶ್ಚ ಸುರೈಶ್ವರ್ಯಾಲ್ಲೋಕಾರ್ಥಂ ಲೋಕಕಂಟಕಃ||
ದೇವತೆಗಳು ಹೇಳಿದರು: ಹಿಂದೆ ನಹುಷನಡಿಯಲ್ಲಿ ಪರಿತಪ್ತ ಲೋಕಗಳಿಗೆ ನೀನೇ ಗತಿಯಾಗಿದ್ದೆ[1]. ಲೋಕಗಳ ಮೇಲೆ ಸುರರ ಅಧಿಪತ್ಯಕ್ಕಾಗಿ ಆ ಲೋಕಕಂಟಕನನ್ನು ಹೊರಹಾಕಿದ್ದೆ.
ಕ್ರೋಧಾತ್ಪ್ರವೃದ್ಧಃ ಸಹಸಾ ಭಾಸ್ಕರಸ್ಯ ನಗೋತ್ತಮಃ|
ವಚಸ್ತವಾನತಿಕ್ರಾಮನ್ವಿಂಧ್ಯಃ ಶೈಲೋ ನ ವರ್ಧತೇ||
ಭಾಸ್ಕರನ ಮೇಲಿನ ಕೋಪದಿಂದ ಪರ್ವತೋತ್ತಮ ವಿಂಧ್ಯವು ಒಂದೇಸಮನ ಬೆಳೆಯತೊಡಗಿದಾಗ ನಿನ್ನ ಮಾತನ್ನು ಮೀರಲಾಗದೇ ಆ ಶೈಲವು ಬೆಳೆಯುವುದನ್ನು ನಿಲ್ಲಿಸಿತು.
ತಮಸಾ ಚಾವೃತೇ ಲೋಕೇ ಮೃತ್ಯುನಾಭ್ಯರ್ದಿತಾಃ ಪ್ರಜಾಃ|
ತ್ವಾಮೇವ ನಾಥಮಾಸಾದ್ಯ ನಿರ್ವೃತಿಂ ಪರಮಾಂ ಗತಾಃ||
ಲೋಕವು ಕತ್ತಲೆಯಲ್ಲಿ ಮುಳುಗಿದಾಗ ಮತ್ತು ಪ್ರಜೆಗಳು ಮೃತ್ಯುವಿನ ಹಿಂಸೆಗೊಳಗಾಗಿದ್ದಾಗ ನೀನೇ ನಾಥನಾಗಿ ಅವರಿಗೆ ಬಿಡುಗಡೆ ನೀಡಿ ಪರಮ ಗತಿಯನ್ನು ಒದಗಿಸಿದೆ.
ಅಸ್ಮಾಕಂ ಭಯಭೀತಾನಾಂ ನಿತ್ಯಶೋ ಭಗವಾನ್ಗತಿಃ|
ತತಸ್ತ್ವಾರ್ತಾಃ ಪ್ರಯಾಚಾಮಸ್ತ್ವಾಂ ವರಂ ವರದೋ ಹ್ಯಸಿ||
ಭಗವನ್ ಭಯಭೀತರಾದ ನಮಗೆ ನಿತ್ಯವೂ ನೀನು ಗತಿಯಾಗಿದ್ದೀಯೆ. ಆದುದರಿಂದ, ವರದ ಆರ್ತರಾದ ನಾವು ನಿನ್ನಲ್ಲಿ ವರವೊಂದನ್ನು ಕೇಳುತ್ತಿದ್ದೇವೆ.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಏಕಾಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ನೂರಾಒಂದನೆಯ ಅಧ್ಯಾಯವು.
ಅಗಸ್ತ್ಯನು ನಹುಷನಿಗೆ ಶಾಪವನ್ನಿತ್ತು ಇಂದ್ರಾಣಿಯನ್ನು ರಕ್ಷಿಸಿದ ಕಥೆಯು ಉದ್ಯೋಗಪರ್ವದಲ್ಲಿ ಬರುತ್ತದೆ.
9) ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ ೧೦೨
ಅಗಸ್ತ್ಯನು ವಿಂಧ್ಯ ಪರ್ವತವನ್ನು ಬೆಳೆಯದಂತೆ ತಡೆದುದು (೧-೧೪). ದೇವತೆಗಳ ಬೇಡಿಕೆಯಂತೆ ಸಮುದ್ರವನ್ನು ಕುಡಿಯಲು ಅಗಸ್ತ್ಯನು ಸಮುದ್ರದ ಬಳಿ ಬಂದುದು (೧೫-೨೩).
ಯುಧಿಷ್ಠಿರ ಉವಾಚ|
ಕಿಮರ್ಥಂ ಸಹಸಾ ವಿಂಧ್ಯಃ ಪ್ರವೃದ್ಧಃ ಕ್ರೋಧಮೂರ್ಚಿತಃ|
ಏತದಿಚ್ಚಾಮ್ಯಹಂ ಶ್ರೋತುಂ ವಿಸ್ತರೇಣ ಮಹಾಮುನೇ||
ಯುಧಿಷ್ಠಿರನು ಹೇಳಿದನು: ಕ್ರೋಧಮೂರ್ಛಿತ ವಿಂಧ್ಯವು ಏಕೆ ತಕ್ಷಣವೇ ಬೆಳೆಯಲು ಪ್ರಾರಂಭಿತು? ಮಹಾಮುನೇ ಇದರ ಕುರಿತು ವಿಸ್ತಾರವಾಗಿ ತಿಳಿಯ ಬಯಸುತ್ತೇನೆ.
ಲೋಮೇಶ ಉವಾಚ|
ಅದ್ರಿರಾಜಂ ಮಹಾಶೈಲಂ ಮರುಂ ಕನಕಪರ್ವತಂ|
ಉದಯಾಸ್ತಮಯೇ ಭಾನುಃ ಪ್ರದಕ್ಷಿಣಮವರ್ತತ||
ಲೋಮಶನು ಹೇಳಿದನು: ಭಾನುವು ಉದಯವಾಗುವ ಮತ್ತು ಅಸ್ತನಾಗುವ ಸಮಯಗಳಲ್ಲಿ ಅದ್ರಿರಾಜ, ಮಹಾಶೈಲ ಕನಕಪರ್ವತ ಮೇರುವನ್ನು ಪ್ರದಕ್ಷಿಣೆ ಮಾಡುತ್ತಿದ್ದನು.
ತಂ ತು ದೃಷ್ಟ್ವಾ ತಥಾ ವಿಂಧ್ಯಃ ಶೈಲಃ ಸೂರ್ಯಮಥಾಬ್ರವೀತ್|
ಯಥಾ ಹಿ ಮೇರುರ್ಭವತಾ ನಿತ್ಯಶಃ ಪರಿಗಮ್ಯತೇ||
ಪ್ರದಕ್ಷಿಣಂ ಚ ಕ್ರಿಯತೇ ಮಾಮೇವಂ ಕುರು ಭಾಸ್ಕರ||
ಅದನ್ನು ಕಂಡ ವಿಂಧ್ಯ ಪರ್ವತನು ಸೂರ್ಯನಿಗೆ ಹೇಳಿದನು: ಭಾಸ್ಕರ ಹೇಗೆ ಮೇರುವನ್ನು ಪ್ರತಿದಿನ ಸುತ್ತುವರೆಯುತ್ತೀಯೋ ಹಾಗೆ ನನ್ನನ್ನೂ ಕೂಡ ಪ್ರದಕ್ಷಿಣೆ ಮಾಡು.
ಏವಮುಕ್ತಸ್ತತಃ ಸೂರ್ಯಃ ಶೈಲೇಂದ್ರಂ ಪ್ರತ್ಯಭಾಷತ|
ನಾಹಮಾತ್ಮೇಚ್ಚಯಾ ಶೈಲ ಕರೋಮ್ಯೇನಂ ಪ್ರದಕ್ಷಿಣಂ||
ಏಷ ಮಾರ್ಗಃ ಪ್ರದಿಷ್ಟೋ ಮೇ ಯೇನೇದಂ ನಿರ್ಮಿತಂ ಜಗತ್||
ಸೂರ್ಯನು ಶೈಲೇಂದ್ರನ ಈ ಮಾತಿಗೆ ಉತ್ತರಿಸಿದನು: ಶೈಲ ನನ್ನ ಇಚ್ಛೆಯಿಂದ ನಾನು ಅವನಿಗೆ ಪ್ರದಕ್ಷಿಣೆ ಮಾಡುತ್ತಿಲ್ಲ. ಈ ಜಗತ್ತನ್ನು ಯಾರು ಸೃಷ್ಟಿಸಿದನೋ ಅವನೇ ನನಗೆ ಈ ಮಾರ್ಗವನ್ನು ಹಾಕಿ ಕೊಟ್ಟಿದ್ದಾನೆ.
ಏವಮುಕ್ತಸ್ತತಃ ಕ್ರೋಧಾತ್ಪ್ರವೃದ್ಧಃ ಸಹಸಾಚಲಃ|
ಸೂರ್ಯಾಚಂದ್ರಮಸೋರ್ಮಾರ್ಗಂ ರೋದ್ಧುಮಿಚ್ಚನ್ಪರಂತಪ||
ಪರಂತಪ ಇದನ್ನು ಕೇಳಿ ಕೋಪಗೊಂಡ ಆ ಪರ್ವತವು ತಕ್ಷಣವೇ ಬೆಳೆದು ಸೂರ್ಯ ಮತ್ತು ಚಂದ್ರರ ಮಾರ್ಗಗಳನ್ನು ತಡೆಗಟ್ಟಿದನು.
ತತೋ ದೇವಾಃ ಸಹಿತಾಃ ಸರ್ವ ಏವ|
ಸೇಂದ್ರಾಃ ಸಮಾಗಮ್ಯ ಮಹಾದ್ರಿರಾಜಂ|
ನಿವಾರಯಾಮಾಸುರುಪಾಯತಸ್ತಂ|
ನ ಚ ಸ್ಮ ತೇಷಾಂ ವಚನಂ ಚಕಾರ||
ಆಗ ಇಂದ್ರನೂ ಸೇರಿ ಸರ್ವ ದೇವತೆಗಳೂ ಆ ಮಹಾ ಪರ್ವತರಾಜನಲ್ಲಿಗೆ ಹೋಗಿ ಅವನನ್ನು ತಡೆಯಲು ಪ್ರಯತ್ನಿಸಿದರು. ಆದರೆ ಅವರು ಹೇಳಿದಂತೆ ಮಾಡಲು ಅವನು ನಿರಾಕರಿಸಿದನು.
ಅಥಾಭಿಜಗ್ಮುರ್ಮುನಿಮಾಶ್ರಮಸ್ಥಂ|
ತಪಸ್ವಿನಂ ಧರ್ಮಭೃತಾಂ ವರಿಷ್ಠಂ|
ಅಗಸ್ತ್ಯಮತ್ಯದ್ಭುತವೀರ್ಯದೀಪ್ತಂ|
ತಂ ಚಾರ್ಥಮೂಚುಃ ಸಹಿತಾಃ ಸುರಾಸ್ತೇ||
ಅನಂತರ ಆ ಸುರರು ಒಟ್ಟಿಗೇ ಆಶ್ರಮದಲ್ಲಿದ್ದ ತಪಸ್ವಿ, ಧಾರ್ಮಿಕರಲ್ಲಿಯೇ ವರಿಷ್ಠ ಮುನಿ, ಅದ್ಭುತ ವೀರ್ಯದೀಪ್ತ ಅಗಸ್ತ್ಯನಲ್ಲಿಗೆ ಹೋಗಿ ವಿಷಯವನ್ನು ತಿಳಿಸಿದರು.
ದೇವಾ ಊಚುಃ|
ಸೂರ್ಯಾಚಂದ್ರಮಸೋರ್ಮಾರ್ಗಂ ನಕ್ಷತ್ರಾಣಾಂ ಗತಿಂ ತಥಾ|
ಶೈಲರಾಜೋ ವೃಣೋತ್ಯೇಷ ವಿಂಧ್ಯಃ ಕ್ರೋಧವಶಾನುಗಃ||
ದೇವತೆಗಳು ಹೇಳಿದರು: ಕ್ರೋಧವಶನಾದ ಶೈಲರಾಜ ವಿಂದ್ಯನು ಸೂರ್ಯ-ಚಂದ್ರರ ಮತ್ತು ನಕ್ಷತ್ರಗಳ ಗತಿಯನ್ನು ನಿಲ್ಲಿಸಿದ್ದಾನೆ.
ತಂ ನಿವಾರಯಿತುಂ ಶಕ್ತೋ ನಾನ್ಯಃ ಕಶ್ಚಿದ್ದ್ವಿಜೋತ್ತಮ|
ಋತೇ ತ್ವಾಂ ಹಿ ಮಹಾಭಾಗ ತಸ್ಮಾದೇನಂ ನಿವಾರಯ||
ದ್ವಿಜೋತ್ತಮ ಮಹಾಭಾಗ ನಿನ್ನ ಹೊರತಾಗಿ ಬೇರೆ ಯಾರೂ ಅವನನ್ನು ನಿಲ್ಲಿಸಲು ಶಕ್ಯರಿಲ್ಲ. ಆದುದರಿಂದ ಇದನ್ನು ನಿಲ್ಲಿಸು.
ಲೋಮೇಶ ಉವಾಚ|
ತಚ್ಛೃತ್ವಾ ವಚನಂ ವಿಪ್ರಃ ಸುರಾಣಾಂ ಶೈಲಮಭ್ಯಗಾತ್|
ಸೋಽಭಿಗಮ್ಯಾಬ್ರವೀದ್ವಿಂಧ್ಯಂ ಸದಾರಃ ಸಮುಪಸ್ಥಿತಃ||
ಲೋಮಶನು ಹೇಳಿದನು: ಸುರರ ಆ ಮಾತುಗಳನ್ನು ಕೇಳಿದ ವಿಪ್ರನು ತನ್ನ ಪತ್ನಿಯೊಡನೆ ವಿಂಧ್ಯಪರ್ವತಕ್ಕೆ ಹೋಗಿ ಅವನಿಗೆ ಹೇಳಿದನು:
ಮಾರ್ಗಮಿಚ್ಚಾಮ್ಯಹಂ ದತ್ತಂ ಭವತಾ ಪರ್ವತೋತ್ತಮ|
ದಕ್ಷಿಣಾಮಭಿಗಂತಾಸ್ಮಿ ದಿಶಂ ಕಾರ್ಯೇಣ ಕೇನ ಚಿತ್||
ಪರ್ವತೋತ್ತಮ ನಿನ್ನಿಂದ ನಾನು ದಾರಿಯನ್ನು ಕೇಳುತ್ತಿದ್ದೇನೆ. ನೀಡು. ಯಾವುದೋ ಕಾರ್ಯಕ್ಕಾಗಿ ದಕ್ಷಿಣದಿಕ್ಕಿಗೆ ಹೋಗುತ್ತಿದ್ದೇನೆ.
ಯಾವದಾಗಮನಂ ಮಹ್ಯಂ ತಾವತ್ತ್ವಂ ಪ್ರತಿಪಾಲಯ|
ನಿವೃತ್ತೇ ಮಯಿ ಶೈಲೇಂದ್ರ ತತೋ ವರ್ಧಸ್ವ ಕಾಮತಃ||
ಏವಂ ಸ ಸಮಯಂ ಕೃತ್ವಾ ವಿಂಧ್ಯೇನಾಮಿತ್ರಕರ್ಶನ|
ಅದ್ಯಾಪಿ ದಕ್ಷಿಣಾದ್ದೇಶಾದ್ವಾರುಣಿರ್ನ ನಿವರ್ತತೇ||
ನಾನು ಹಿಂದಿರುಗಿ ಬರುವವರೆಗೆ ನಿನ್ನ ಎತ್ತರವನ್ನೂ ಹೀಗೆಯೇ ಇಟ್ಟಿರು. ಶೈಲೇಂದ್ರ ನಾನು ಹಿಂದಿರುಗಿದ ನಂತರ ನಿನಗಿಷ್ಟವಾದಷ್ಟು ಬೆಳೆಯಬಹುದು ಹೀಗೆ ಆ ಅಮಿತ್ರಕರ್ಷಣನು ವಿಂಧ್ಯದೊಂದಿಗೆ ಒಪ್ಪಂದವನ್ನು ಮಾಡಿಕೊಂಡನು. ಇದೂವರೆಗೂ ವಾರುಣಿಯು ದಕ್ಷಿಣದೇಶದಿಂದ ಹಿಂದಿರುಗಲಿಲ್ಲ
ಏತತ್ತೇ ಸರ್ವಮಾಖ್ಯಾತಂ ಯಥಾ ವಿಂಧ್ಯೋ ನ ವರ್ಧತೇ|
ಅಗಸ್ತ್ಯಸ್ಯ ಪ್ರಭಾವೇನ ಯನ್ಮಾಂ ತ್ವಂ ಪರಿಪೃಚ್ಚಸಿ||
ನೀನು ನನ್ನನ್ನು ಕೇಳಿಕೊಂಡಂತೆ ಅಗಸ್ತ್ಯನ ಪ್ರಭಾವದಿಂದ ವಿಂಧ್ಯವು ಹೇಗೆ ಬೆಳೆಯುತ್ತಿಲ್ಲ ಎನ್ನುವುದನ್ನೆಲ್ಲವನ್ನೂ ಹೇಳಿದ್ದೇನೆ.
ಕಾಲೇಯಾಸ್ತು ಯಥಾ ರಾಜನ್ಸುರೈಃ ಸರ್ವೈರ್ನಿಷೂದಿತಾಃ|
ಅಗಸ್ತ್ಯಾದ್ವರಮಾಸಾದ್ಯ ತನ್ಮೇ ನಿಗದತಃ ಶೃಣು||
ರಾಜನ್ ಅಗಸ್ತ್ಯನಿಂದ ವರವನ್ನು ಪಡೆದು ಸುರರೆಲ್ಲರೂ ಹೇಗೆ ಕಾಲೇಯರನ್ನು ನಾಶಪಡೆಸಿದರು ಎಂದು ಹೇಳುತ್ತೇನೆ, ಕೇಳು.
ತ್ರಿದಶಾನಾಂ ವಚಃ ಶ್ರುತ್ವಾ ಮೈತ್ರಾವರುಣಿರಬ್ರವೀತ್|
ಕಿಮರ್ಥಮಭಿಯಾತಾಃ ಸ್ಥ ವರಂ ಮತ್ತಃ ಕಿಮಿಚ್ಚಥ||
ಏವಮುಕ್ತಾಸ್ತತಸ್ತೇನ ದೇವಾಸ್ತಂ ಮುನಿಮಬ್ರುವನ್||
ಮೂವತ್ತು ದೇವತೆಗಳ ಮಾತುಗಳನ್ನು ಕೇಳಿದ ಆ ಮೈತ್ರಾವರುಣಿಯು ಹೇಳಿದನು: ನೀವು ಇಲ್ಲಿಗೆ ಏಕೆ ಬಂದಿದ್ದೀರಿ? ನನ್ನಿಂದ ಏನು ವರವನ್ನು ಕೇಳುತ್ತಿದ್ದೀರಿ? ಅವನು ಹೀಗೆ ಹೇಳಲು ದೇವತೆಗಳು ಮುನಿಗೆ ಹೇಳಿದರು:
ಏವಂ ತ್ವಯೇಚ್ಚಾಮ ಕೃತಂ ಮಹರ್ಷೇ|
ಮಹಾರ್ಣವಂ ಪೀಯಮಾನಂ ಮಹಾತ್ಮನ್|
ತತೋ ವಧಿಷ್ಯಾಮ ಸಹಾನುಬಂಧಾನ್|
ಕಾಲೇಯಸಂಜ್ಞಾನ್ಸುರವಿದ್ವಿಷಸ್ತಾನ್||
ಮಹರ್ಷೇ ಮಹಾತ್ಮನ್ ನೀನು ಸಮುದ್ರವನ್ನು ಕುಡಿಯಬೇಕು ಎಂದು ಬಯಸುತ್ತೇವೆ. ಅನಂತರ ನಾವು ಆ ಸುರದ್ವೇಷಿ ಕಾಲೇಯರನ್ನು ಅವರ ಬಾಂಧವರೊಂದಿಗೆ ವಧಿಸುತ್ತೇವೆ.
ತ್ರಿದಶಾನಾಂ ವಚಃ ಶ್ರುತ್ವಾ ತಥೇತಿ ಮುನಿರಬ್ರವೀತ್|
ಕರಿಷ್ಯೇ ಭವತಾಂ ಕಾಮಂ ಲೋಕಾನಾಂ ಚ ಮಹತ್ಸುಖಂ||
ದೇವತೆಗಳ ಮಾತನ್ನು ಕೇಳಿ ಮುನಿಯು ಹಾಗೆಯೇ ಆಗಲಿ ಲೋಕಗಳ ಮಹಾ ಹಿತಕ್ಕಾಗಿ ನಿಮ್ಮ ಆಸೆಯನ್ನು ನೆರವೇರಿಸುತ್ತೇನೆ ಎಂದು ಹೇಳಿದನು.
ಏವಮುಕ್ತ್ವಾ ತತೋಽಗಚ್ಚತ್ಸಮುದ್ರಂ ಸರಿತಾಂ ಪತಿಂ|
ಋಷಿಭಿಶ್ಚ ತಪಹ್ಸಿದ್ಧೈಃ ಸಾರ್ಧಂ ದೇವೈಶ್ಚ ಸುವ್ರತಃ||
ಹೀಗೆ ಹೇಳಿದ ನಂತರ ಅವನು ಋಷಿ, ತಪಃಸಿದ್ಧ, ಸುವ್ರತರು ಮತ್ತು ದೇವತೆಗಳೊಡಗೂಡಿ ಸರಿತಾಪತಿ ಸಮುದ್ರದಬಳಿ ಹೋದನು.
ಮನುಷ್ಯೋರಗಗಂಧರ್ವಯಕ್ಷಕಿಂಪುರುಷಾಸ್ತಥಾ|
ಅನುಜಗ್ಮುರ್ಮಹಾತ್ಮಾನಂ ದ್ರಷ್ಟುಕಾಮಾಸ್ತದದ್ಭುತಂ||
ಮನಷ್ಯ-ಉರಗ-ಗಂಧರ್ವ-ಯಕ್ಷ-ಕಿಂಪುರುಷರು ಆ ಮಹಾತ್ಮನ ಅದ್ಭುತ ಕಾರ್ಯವನ್ನು ನೋಡಲು ಅಲ್ಲಿಗೆ ಬಂದು ಸೇರಿದರು.
ತತೋಽಭ್ಯಗಚ್ಚನ್ಸಹಿತಾಃ ಸಮುದ್ರಂ ಭೀಮನಿಸ್ವನಂ|
ನೃತ್ಯಂತಮಿವ ಚೋರ್ಮೀಭಿರ್ವಲ್ಗಂತಮಿವ ವಾಯುನಾ||
ಹಸಂತಮಿವ ಫೇನೌಘೈಃ ಸ್ಖಲಂತಂ ಕಂದರೇಷು ಚ|
ನಾನಾಗ್ರಾಹಸಮಾಕೀರ್ಣಂ ನಾನಾದ್ವಿಜಗಣಾಯುತಂ||
ಅವರೆಲ್ಲರೂ ಒಟ್ಟಿಗೇ ಭಯಂಕರವಾಗಿ ಭೋರ್ಗರೆಯುತ್ತಿರುವ, ಗಾಳಿಯಿಂದ ಅಲ್ಲೋಲಕಲ್ಲೋಲಗೊಂಡ ಅಲೆಗಳು ನಾಟ್ಯಮಾಡುವಂತೆ ತೋರುತ್ತಿರುವ, ನಗುತ್ತಿರುವಂತಿರುವ ನೊರೆಯ, ಒಡೆದ ಕಂದರಗಳುಳ್ಳ, ನಾನಾ ತರಹದ ಮೀನುಗಳಿಂದ ಮತ್ತು ನಾನಾ ವಿಧದ ಪಕ್ಷಿಗಣಗಳಿಂದ ಕೂಡಿದ ಸಮುದ್ರದ ಬಳಿ ಬಂದರು.
ಅಗಸ್ತ್ಯಸಹಿತಾ ದೇವಾಃ ಸಗಂಧರ್ವಮಹೋರಗಾಃ|
ಋಷಯಶ್ಚ ಮಹಾಭಾಗಾಃ ಸಮಾಸೇದುರ್ಮಹೋದಧಿಂ||
ಅಗಸ್ತ್ಯನೊಂದಿಗೆ ದೇವತೆಗಳು, ಜೊತೆಗೆ ಗಂಧರ್ವರೂ, ಮಹಾ‌ಉರುಗಗಳೂ, ಮಹಾಭಾಗ ಋಷಿಗಳೂ ಸುಮುದ್ರತೀರದಲ್ಲಿ ಬಂದು ಸೇರಿದರು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ದ್ವಾಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ನೂರಾಎರಡನೆಯ ಅಧ್ಯಾಯವು.

10) ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ ೧೦೩
ಅಗಸ್ತ್ಯನು ಕುಡಿದು ಸಮುದ್ರವನ್ನು ಬರಿದು ಮಾಡಲು ದೇವತೆಗಳು ಕಾಲೇಯರನ್ನು ಸಂಹರಿಸಿದ್ದುದು (೧-೧೨). ಕುಡಿದ ನೀರನ್ನು ಜೀರ್ಣಿಸಿಕೊಂಡಾಗಿರುವುದರಿಂದ ಸಾಗರವನ್ನು ಪುನಃ ತುಂಬಿಸಲು ಸಾಧ್ಯವಿಲ್ಲವೆಂದು ಅಗಸ್ತ್ಯನು ಹೇಳಲು ದೇವತೆಗಳು ಪುನಃ ಪಿತಾಮಹನಲ್ಲಿಗೆ ಹೋದುದು (೧೩-೧೯).
ಲೋಮೇಶ ಉವಾಚ|
ಸಮುದ್ರಂ ಸ ಸಮಾಸಾದ್ಯ ವಾರುಣಿರ್ಭಗವಾನೃಷಿಃ|
ಉವಾಚ ಸಹಿತಾನ್ದೇವಾನೃಷೀಂಶ್ಚೈವ ಸಮಾಗತಾನ್||
ಲೋಮಶನು ಹೇಳಿದನು: ಭಗವಾನ್ ಋಷಿ ವಾರುಣಿಯು ಸಮುದ್ರವನ್ನು ಸೇರಿ ಅಲ್ಲಿ ಕೂಡಿದ್ದ ದೇವತೆಗಳಿಗೆ ಮತ್ತು ಋಷಿಗಳಿಗೆ ಹೇಳಿದನು:
ಏಷ ಲೋಕಹಿತಾರ್ಥಂ ವೈ ಪಿಬಾಮಿ ವರುಣಾಲಯಂ|
ಭವದ್ಭಿರ್ಯದನುಷ್ಠೇಯಂ ತಚ್ಶೀಘ್ರಂ ಸಂವಿಧೀಯತಾಂ||
ಈಗ ಲೋಕಹಿತಕ್ಕಾಗಿ ನಾನು ಈ ವರುಣಾಲಯವನ್ನು ಕುಡಿಯುತ್ತೇನೆ. ನೀವು ಏನು ಮಾಡಬೇಕೆಂದಿರುವಿರೋ ಅದನ್ನು ಶೀಘ್ರದಲ್ಲಿಯೇ ಮಾಡಿ.
ಏತಾವದುಕ್ತ್ವಾ ವಚನಂ ಮೈತ್ರಾವರುಣಿರಚ್ಯುತಃ|
ಸಮುದ್ರಮಪಿಬತ್ಕ್ರುದ್ಧಃ ಸರ್ವಲೋಕಸ್ಯ ಪಶ್ಯತಃ||
ಈ ಮಾತನ್ನು ಹೇಳಿ ಅಚ್ಯುತ ಮೈತ್ರಾವರುಣಿಯು ಕೃದ್ಧನಾಗಿ ಸರ್ವ ಲೋಕವೂ ನೋಡುತ್ತಿದ್ದಂತೆ ಸಮುದ್ರವನ್ನು ಸಂಪೂರ್ಣವಾಗಿ ಕುಡಿದು ಬರಿದುಮಾಡಿದನು.
ಪೀಯಮಾನಂ ಸಮುದ್ರಂ ತು ದೃಷ್ಟ್ವಾ ದೇವಾಃ ಸವಾಸವಾಃ|
ವಿಸ್ಮಯಂ ಪರಮಂ ಜಗ್ಮುಃ ಸ್ತುತಿಭಿಶ್ಚಾಪ್ಯಪೂಜಯನ್||
ಅವನು ಸಮುದ್ರವನ್ನು ಕುಡಿದಿದ್ದುದನ್ನು ನೋಡಿ ಇಂದ್ರನೂ ಸೇರಿ ದೇವತೆಗಳು ಪರಮ ವಿಸ್ಮಿತರಾದರು ಮತ್ತು ಅವನನ್ನು ಸ್ತುತಿಸಿ ಪೂಜಿಸಿದರು.
ತ್ವಂ ನಸ್ತ್ರಾತಾ ವಿಧಾತಾ ಚ ಲೋಕಾನಾಂ ಲೋಕಭಾವನಃ|
ತ್ವತ್ಪ್ರಸಾದಾತ್ಸಮುಚ್ಚೇದಂ ನ ಗಚ್ಚೇತ್ಸಾಮರಂ ಜಗತ್||
ಲೋಕಭಾವನ ನೀನೇ ನಮ್ಮ ಮತ್ತು ಲೋಕಗಳ ತ್ರಾತ, ವಿಧಾತ. ನಿನ್ನ ಪ್ರಸಾದದಿಂದ ಅಮರರು ಮತ್ತು ಜಗತ್ತು ಈ ಕಷ್ಟದಿಂದ ಪಾರುಗೊಂಡಿವೆ.
ಸಂಪೂಜ್ಯಮಾನಸ್ತ್ರಿದಶೈರ್ಮಹಾತ್ಮಾ|
ಗಂಧರ್ವತೂರ್ಯೇಷು ನದತ್ಸು ಸರ್ವಶಃ|
ದಿವ್ಯೈಶ್ಚ ಪುಷ್ಪೈರವಕೀರ್ಯಮಾಣೋ|
ಮಹಾರ್ಣವಂ ನಿಃಸಲಿಲಂ ಚಕಾರ||
ಆ ಮಹಾತ್ಮನು ಮಹಾಸಾಗರವನ್ನು ನೀರಿಲ್ಲದೇ ಮಾಡಿದ ನಂತರ ದೇವತೆಗಳಿಂದ ಪೂಜಿಸಲ್ಪಡಲು ಗಂಧರ್ವರು ಎಲ್ಲೆಡೆಯೂ ನಾದವನ್ನು ತುಂಬಿಸಿದರು. ಅವನ ಮೇಲೆ ದಿವ್ಯ ಪುಷ್ಪಗಳನ್ನು ಸುರಿಸಲಾಯಿತು.
ದೃಷ್ಟ್ವಾ ಕೃತಂ ನಿಃಸಲಿಲಂ ಮಹಾರ್ಣವಂ|
ಸುರಾಃ ಸಮಸ್ತಾಃ ಪರಮಪ್ರಹೃಷ್ಟಾಃ|
ಪ್ರಗೃಹ್ಯಯ ದಿವ್ಯಾನಿ ವರಾಯುಧಾನಿ|
ತಾನ್ದಾನವಾಂ ಜಘ್ನುರದೀನಸತ್ತ್ವಾಃ||
ಆ ಮಹಾಸಾಗರವು ನೀರಿಲ್ಲದೇ ಬತ್ತಿಹೋದದನ್ನು ಕಂಡು ಸುರರೆಲ್ಲರೂ ಪರಮ ಹೃಷ್ಟರಾದರು. ದಿವ್ಯ ಶ್ರೇಷ್ಠ ಆಯುಧಗಳನ್ನು ಹಿಡಿದು ಸಂತೋಷದಿಂದ ಆ ದಾನವರನ್ನು ಸಂಹರಿಸಿದರು.
ತೇ ವಧ್ಯಮಾನಾಸ್ತ್ರಿದಶೈರ್ಮಹಾತ್ಮಭಿರ್|
ಮಹಾಬಲೈರ್ವೇಗಿಭಿರುನ್ನದದ್ಭಿಃ|
ನ ಸೇಹಿರೇ ವೇಗವತಾಂ ಮಹಾತ್ಮನಾಂ|
ವೇಗಂ ತದಾ ಧಾರಯಿತುಂ ದಿವೌಕಸಾಂ||
ಮಹಾತ್ಮ ದೇವತೆಗಳಿಂದ ಮಹಾವೀರ, ಮಹಾ ವೇಗದಲ್ಲಿ ಹೋಗಬಲ್ಲ ಆ ದಾನವರು ನಿರ್ನಾಮಗೊಂಡರು. ವೇಗಶಾಲಿ ಮಹಾತ್ಮ ದಿವೌಕಸರ ವೇಗದ ಧಾಳಿಯನ್ನು ಅವರು ಸಹಿಸಲಾರದಾದರು.
ತೇ ವಧ್ಯಮಾನಾಸ್ತ್ರಿದಶೈರ್ದಾನವಾ ಭೀಮನಿಸ್ವನಾಃ|
ಚಕ್ರುಃ ಸುತುಮುಲಂ ಯುದ್ಧಂ ಮುಹೂರ್ತಮಿವ ಭಾರತ||
ಭಾರತ ಭಯಂಕರ ಘರ್ಜನೆಯೊಂದಿಗೆ ನಡೆದ ಆ ಮಹಾ ಯುದ್ಧದಲ್ಲಿ ಒಂದೇ ಕ್ಷಣದಲ್ಲಿ ದೇವತೆಗಳು ದಾನವರನ್ನು ವಧಿಸಿದರು.
ತೇ ಪೂರ್ವಂ ತಪಸಾ ದಗ್ಧಾ ಮುನಿಭಿರ್ಭಾವಿತಾತ್ಮಭಿಃ|
ಯತಮಾನಾಃ ಪರಂ ಶಕ್ತ್ಯಾ ತ್ರಿದಶೈರ್ವಿನಿಷೂದಿತಾಃ||
ಭಾವಿತಾತ್ಮರಾದ ಮುನಿಗಳ ತಪಸ್ಸಿನಿಂದ ಮೊದಲೇ ದಗ್ಧರಾಗಿದ್ದ ಪರಮ ಶಕ್ತಿಯನ್ನುಪಯೋಗಿಸಿ ಹೋರಾಡಿದರೂ ದೇವತೆಗಳಿಂದ ನಾಶಹೊಂದಿದರು.
ತೇ ಹೇಮನಿಷ್ಕಾಭರಣಾಃ ಕುಂಡಲಾಂಗದಧಾರಿಣಃ|
ನಿಹತ್ಯ ಬಹ್ವಶೋಭಂತ ಪುಷ್ಪಿತಾ ಇವ ಕಿಂಶುಕಾಃ||
ಬಂಗಾರದ ಕವಚಾಭರಣಗಳು, ಕುಂಡಲ ಮತ್ತು ಅಂಗಗಳನ್ನು ಧರಿಸಿದ್ದ ಅವರು ವಧಿಸಲ್ಪಟ್ಟು ಹೂಬಿಟ್ಟ ಕಿಂಶುಕಗಳಂತೆ ಶೋಭಿಸಿದರು.
ಹತಶೇಷಾಸ್ತತಃ ಕೇ ಚಿತ್ಕಾಲೇಯಾ ಮನುಜೋತ್ತಮ|
ವಿದಾರ್ಯ ವಸುಧಾಂ ದೇವೀಂ ಪಾತಾಲತಲಮಾಶ್ರಿತಾಃ||
ಮನುಜೋತ್ತಮ ಸಾಯದೇ ಉಳಿದ ಕೆಲವು ಕಾಲೇಯರು ದೇವಿ ವಸುಧೆಯನ್ನು ಬಗೆದು ಪಾತಾಲತಳವನ್ನು ಆಶ್ರಯಿಸಿದರು.
ನಿಹತಾನ್ದಾನವಾನ್ದೃಷ್ಟ್ವಾ ತ್ರಿದಶಾ ಮುನಿಪುಂಗವಂ|
ತುಷ್ಟುವುರ್ವಿವಿಧೈರ್ವಾಕ್ಯೈರಿದಂ ಚೈವಾಬ್ರುವನ್ವಚಃ||
ದಾನವರು ಹತರಾದುದನ್ನು ನೋಡಿದ ದೇವತೆಗಳು ಮುನಿಪುಂಗವನನ್ನು ವಿವಿಧ ವಾಕ್ಯಗಳಿಂದ ಪ್ರಶಂಸಿಸಿ ಹೇಳಿದರು:
ತ್ವತ್ಪ್ರಸಾದಾನ್ಮಹಾಭಾಗ ಲೋಕೈಃ ಪ್ರಾಪ್ತಂ ಮಹತ್ಸುಖಂ|
ತ್ವತ್ತೆಜಸಾ ಚ ನಿಹತಾಃ ಕಾಲೇಯಾಃ ಕ್ರೂರವಿಕ್ರಮಾಃ||
ಮಹಾಭಾಗ ನಿನ್ನ ಪ್ರಸಾದದಿಂದ ಲೋಕಗಳಿಗೆ ಮಹಾ ಸುಖವು ಪ್ರಾಪ್ತವಾಯಿತು. ಮತ್ತು ನಿನ್ನ ತೇಜಸ್ಸಿನಿಂದ ಈ ಕ್ರೂರವಿಕ್ರಮಿ ಕಾಲೇಯರು ಹತರಾದರು.
ಪೂರಯಸ್ವ ಮಹಾಬಾಹೋ ಸಮುದ್ರಂ ಲೋಕಭಾವನ|
ಯತ್ತ್ವಯಾ ಸಲಿಲಂ ಪೀತಂ ತದಸ್ಮಿನ್ಪುನರುತ್ಸೃಜ||
ಲೋಕಭಾವನ ಮಹಾಬಾಹೋ ಈಗ ಈ ಸಮುದ್ರವನ್ನು ತುಂಬಿಸು. ನೀನು ಕುಡಿದ ನೀರನ್ನು ಪುನಃ ಇದರಲ್ಲಿ ಬಿಡು.
ಏವಮುಕ್ತಃ ಪ್ರತ್ಯುವಾಚ ಭಗವಾನ್ಮುನಿಪುಂಗವಃ|
ಜೀರ್ಣಂ ತದ್ಧಿ ಮಯಾ ತೋಯಮುಪಾಯೋಽನ್ಯಃ ಪ್ರಚಿಂತ್ಯತಾಂ||
ಪೂರಣಾರ್ಥಂ ಸಮುದ್ರಸ್ಯ ಭವದ್ಭಿರ್ಯತ್ನಮಾಸ್ಥಿತೈಃ||
ಇದನ್ನು ಕೇಳಿದ ಭಗವಾನ್ ಮುನಿಪುಂಗವನು ಉತ್ತರಿಸಿದನು: ನಾನು ಕುಡಿದ ನೀರನ್ನು ಈಗಾಗಲೇ ಜೀರ್ಣಿಸಿಕೊಂಡಿದ್ದೇನೆ. ಸಮುದ್ರವನ್ನು ತುಂಬಿಸಲು ಬೇರೆ ಯಾವುದಾದರೂ ಉಪಾಯವನ್ನು ಯೋಚಿಸಬೇಕು. ನೀವೇ ಪ್ರಯತ್ನ ಮಾಡಬೇಕು.
ಏತಚ್ಛೃತ್ವಾ ತು ವಚನಂ ಮಹರ್ಷೇರ್ಭಾವಿತಾತ್ಮನಃ|
ವಿಸ್ಮಿತಾಶ್ಚ ವಿಷಣ್ಣಾಶ್ಚ ಬಭೂವುಃ ಸಹಿತಾಃ ಸುರಾಃ||
ಭಾವಿತಾತ್ಮ ಮಹರ್ಷಿಯ ಈ ಮಾತುಗಳನ್ನು ಕೇಳಿದ ಸುರರು ಒಟ್ಟಿಗೇ ವಿಸ್ಮಿತರೂ ವಿಷಣ್ಣರೂ ಆದರು.
ಪರಸ್ಪರಮನುಜ್ಞಾಪ್ಯ ಪ್ರಣಮ್ಯ ಮುನಿಪುಂಗವಂ|
ಪ್ರಜಾಃ ಸರ್ವಾ ಮಹಾರಾಜ ವಿಪ್ರಜಗ್ಮುರ್ಯಥಾಗತಂ||
ಮಹಾರಾಜ ಮುನಿಪುಂಗವನಿಗೆ ನಮಸ್ಕರಿಸಿ, ಪರಸ್ಪರರನ್ನು ಬೀಳ್ಕೊಂಡು ಎಲ್ಲರೂ ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು.
ತ್ರಿದಶಾ ವಿಷ್ಣುನಾ ಸಾರ್ಧಮುಪಜಗ್ಮುಃ ಪಿತಾಮಹಂ|
ಪೂರಣಾರ್ಥಂ ಸಮುದ್ರಸ್ಯ ಮಂತ್ರಯಿತ್ವಾ ಪುನಃ ಪುನಃ||
ಊಚುಃ ಪ್ರಾಂಜಲಯಃ ಸರ್ವೇ ಸಾಗರಸ್ಯಾಭಿಪೂರಣಂ||
ಸಮುದ್ರವನ್ನು ಪುನಃ ತುಂಬಿಸುವುದರ ಕುರಿತು ಮತ್ತೆ ಮತ್ತೆ ಮಂತ್ರಾಲೋಚನೆ ಮಾಡಿ ದೇವತೆಗಳು ವಿಷ್ಣುವಿನೊಂದಿಗೆ ಪಿತಾಮಹನಲ್ಲಿಗೆ ಹೋದರು. ಅವರೆಲ್ಲರೂ ಕೈಜೋಡಿಸಿ ಸಾಗರವನ್ನು ತುಂಬಿಸುವುದರ ಕುರಿತು ಹೇಳಿದರು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ತ್ರ್ಯಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ನೂರಾಮೂರನೆಯ ಅಧ್ಯಾಯವು.




 



No comments:

Post a Comment