Sunday, November 05, 2023

*GOVINDARAAYA ಈರೇಳು ಲೋಕ

 ಶ್ರೀ ವಾದಿರಾಜ ಗುರು ಸಾರ್ವಭೌಮರು ರಚಿಸಿದ 
ಶ್ರೀ ಗೋವಿಂದರಾಜ ದೇವರ ಕೀರ್ತನೆ (Kannada)
           
ಈರೇಳು ಲೋಕದೊಳಗೆ ಇವಗೆಣೆ ಕಾಣೆ ಗೋವಿಂದರಾಯನಿಗೆ |   

ಮಾರನ್ನ ಪೆತ್ತ ಮನೋಹರ ಮೂರುತಿ ಗೋವಿಂದರಾಯನಿಗೆ || ಪ ||

ನೀಲನೀರದ ನಿಭ ನಿರ್ಮಲಕಾಯ  ಗೋವಿಂದರಾಯನಿಗೆ |

ಪಾಲಸಾಗರದಲ್ಲಿ ಪವಡಿಸಿ ಪಾಲಿಪ ಗೋವಿಂದರಾಯನಿಗೆ || 1 ||

ಮತ್ಸ್ಯ ಕೂರ್ಮ ವರಾಹ ನರಸಿಂಹ ವಾಮನ  ಗೋವಿಂದರಾಯನಿಗೆ |

ಕುತ್ಸಿತ ರಾಯರ ಕೊಂದ ಕೊಡಲಿಯ ಗೋವಿಂದರಾಯನಿಗೆ || 2 ||

ರಘುಕುಲ ಯದುಕುಲ ಬುದ್ಧ ಕಲ್ಕಿಯ ಗೋವಿಂದರಾಯನಿಗೆ |

ಸೊಗಸು ನುಡಿಯ ಮೆಚ್ಚಿ ಶೋಕವ ಕಳೆವ ಶ್ರೀ ಗೋವಿಂದರಾಯನಿಗೆ || 3 ||

ಕಡಗೋಲ ಪಿಡಿದು ಶ್ರೀ ಉಡುಪಿಲಿ  ನೆಲೆಸಿದ  ಗೋವಿಂದರಾಯನಿಗೆ |

ಬಡ ನಡುವಿನ ಭಾವಕಿಯರೋಡನಾಡುವ ಗೋವಿಂದರಾಯನಿಗೆ || 4 ||

ವರ್ಣಿಸಿ ಪೊಗಳುವ ವಾದಿರಾಜಗೊಲಿದ  ಶ್ರೀ ಗೋವಿಂದರಾಯನಿಗೆ |

ಚೆನ್ನಾದ ಚೆಲುವನೆ ಜಯ ಹಯ ವದನ ಗೋವಿಂದರಾಯನಿಗೆ || 5 
                                             .........ಹಯವದನ 

|| ಪ್ರೀತೋಸ್ತು ಕೃಷ್ಣಃ ಪ್ರಭು ಶ್ರೀ ರಮಾ ತಿವಿಕ್ರಮ ದೇವತಾ ಪ್ರಸೀದತು ||  


No comments:

Post a Comment