Monday, May 27, 2024

*SHRINIVAS KALYANA ಶ್ರೀ ನಿವಾಸ ಕಲ್ಯಾಣ


         ಶ್ರೀನಿವಾಸ ಕಲ್ಯಾಣ



ಸ್ತ್ರೀಯರೆಲ್ಲರು ಬನ್ನಿರೆ । ಶ್ರೀನಿವಾಸನ ಪಾಡಿರೇ
ಜ್ಞಾನಗುರುಗಳಿಗೊಂದಿಸಿ । ‏ ಮುಂದೆ ಕಥೆಯ ಪೇಳುವೆ ||
 
ಗಂಗಾ ತೀರದಿ ಋಷಿಗಳು । ಅಂದು ಯಾಗವ ಮಾಡ್ಡರು
ಬಂದು ನಾರದ ನಿಂತುಕೊಂಡು । ಯಾರಿಗೆಂದು ಕೇಳಲು
ಅರಿತು ಬರಬೇಕು ಎಂದು । ಆ ಮುನಿಯು ತೆರಳಿದ-ಭೃಗುಮುನೀಯು ತೆರಳಿದ | ನಂದಗೋಪನ ಮಗನ ಕಂದನ । ಮಂದಿರಕಾಗೆ ಬಂದನು
 
ವೇದಗಳನೆ ಓದುತಾ । ಹರಿಯನೂ ಕೊಂಡಾಡುತಾ
ಇರುವ ಬೊಮ್ಮನ ನೋಡಿದ । ಕೈಲಾಸಕ್ಕೆ ಬಂದನು
ಶಂಭುಕಂಠನು ಪಾರ್ವತೀಯೂ । ಕಲೆತಿರುವುದ ಕಂಡನು | ಸೃಷ್ಟಿಯೊಳಗೆ ನಿನ್ನ ಲಿಂಗ । ಶ್ರೇಷ್ಠವಾಗಲೆಂದನು
 
ವೈಕುಂಠಕ್ಕೆ ಬಂದನು । ವಾರಿಜಾಕ್ಷನ ಕಂಡನು
ಕೆಟ್ಟ ಕೋಪದಿಂದ ಒದ್ದರೆ । ಎಷ್ಟು ನೊಂದಿತೆಂದನು
ತಟ್ಟನೆ ಬಿಸಿನೀರಿನಿಂದ । ನೆಟ್ಟಗೆ ಪಾದ ತೊಳೆದನು
ಬಂದ ಕಾರ್ಯ ಆಯಿತೆಂದು । ಅಂದು ಮುನಿಯು ತೆರಳಿದ
 
ಬಂದು ನಿಂದು ಸಭೆಯೊಳಗೆ । ಇಂದಿರೇಶನ ಹೊಗಳಿದ
ಪತಿಯ ಕೂಡೆ ಕಲಹ ಮಾಡಿ । ಕೊಲ್ಹಾಪುರಕೆ ಹೋದಳು| ಸತಿಯು ಪೋಗೆ ಪತಿಯು ಹೊರಟು । ಗಿರಿಗೆ ಬಂದು ಸೇರಿದ | ಹುತ್ತದಲ್ಲೆ ಹತ್ತು ಸಾವಿರ ವರುಷ । ಗುಪ್ತವಾಗಿ ಇದ್ದನು
 
ಬ್ರಹ್ಮ ಧೇನುವಾದನು । ರುದ್ರ ವತ್ಸನಾದನು
ಧೇನು ಮುಂದೆ ಮಾಡಿಕೊಂಡು । ಗೋಪಿ ಹಿಂದೆ ಬಂದಳು | ಕೋಟಿ ಹೊನ್ನು ಬಾಳುವೋದು । ಕೊಡದ ಹಾಲು ಕರೆವುದು| ಪ್ರೀತಿಯಿಂದಲಿ ತನ್ನ ಮನೆಗೆ । ತಂದುಕೊಂಡನು ಚೋಳನು
 
ಒಂದು ದಿವಸ ಕಂದಗೆ ಹಾಲು । ಚೆಂದದಿಂದಲಿ ಕೊಡಲಿಲ್ಲ | ಅಂದು ರಾಯನ ಮಡದಿ ಕೋಪಿಸಿ । ಬಂದು ಗೋಪನ ಹೊಡೆದಳು| ಧೇನು ಮುಂದೆ ಮಾಡಿಕೊಂಡು । ಗೋಪ ಹಿಂದೆ ನಡೆದನು| 
ಕಾಮಧೇನು ಕರೆದ ಹಾಲು । ಹರಿಯ ಶಿರಕೆ ಬಿದ್ದಿತು
 
ಇಷ್ಟು ಕಷ್ಟ ಬಂದಿತೆಂದು । ಪೆಟ್ಟು ಬಡಿಯೆ ಹೋದನು
ಕೃಷ್ಣ ತನ್ನ ಮನದಲ್ಯೋಚಿಸಿ । ಕೊಟ್ಟ ತನ್ನ ಶಿರವನು
ಏಳು ತಾಳೆಮರದ ಉದ್ದ । ಏಕವಾಗಿ ಹರಿಯಿತು
ರಕ್ತವನ್ನು ನೋಡಿ ಗೋಪ । ಮತ್ತೆ ಸ್ವರ್ಗಕ್ಕೇರಿದ
 
ಕಷ್ಟವನ್ನು ನೋಡಿ ಗೋವು । ಅಷ್ಟು ಬಂದ್-ಹೇಳಿತು
ತಟ್ಟನೆ ರಾಯ ಎದ್ದು ಗಿರಿಗೆ । ಬಂದು ಬೇಗ ಸೇರಿದ
ಏನು ಕಷ್ಟ ಇಲ್ಲಿ ಹೀಗೆ । ಯಾವ ಪಾಪಿ ಮಾಡಿದ
ಇಷ್ಟು ಕಷ್ಟ ಕೊಟ್ಟವಾಗೆ । ಭ್ರಷ್ಟಪಿಶಾಚಿಯಾಗೆಂದ
 
ಪೆಟ್ಟು ವೇದನೆ ತಾಳಲಾರದೆ । ಬೃಹಸ್ಪತೀಯ ಕರೆಸಿದ
ಅರುಣ ಉದಯದಲ್ಲೆದ್ದು । ಔಷಧಕ್ಕೆ ಪೋದನು
ಕ್ರೋಡರೂಪಿಯ ಕಂಡನು । ಕೂಡಿ ಮಾತನಾಡಿದನು
ಇರುವುದಕ್ಕೆ ಸ್ಥಳವು ಎನಗೆ । ಏರ್ಪಾಡಾಗಬೇಕೆಂದ
 
ನೂರು ಪಾದ ಭೂಮಿ ಕೊಟ್ಟರೆ । ಮೊದಲು ಪೂಜೆ ನಿಮಗೆಂದ | ಪಾಕ ಪಕ್ವ ಮಾಡುವುದಕ್ಕೆ । ಆಕೆ ಬಕುಳೆ ಬಂದಳು | ಭಾನುಕೋಟಿತೇಜನೀಗ । ಬೇಟೆಯಾಡ ಹೊರಟನು| ಮಂಡೆ ಬಾಚಿ ದೊಂಡೆ ಹಾಕಿ । ದುಂಡುಮಲ್ಲಿಗೆ ಮುಡಿದನು
 
ಹಾರ ಪದಕ ಕೊರಳಲ್ಹಾಕಿ । ಫಣೆಗೆ ತಿಲಕವಿಟ್ಟನು
ಅಂಗುಲಿಗೆ ಉಂಗುರ । ರಂಗಶ್ವಂಗಾರವಾದವು
ಪಟ್ಟೆನುಟ್ಟು ಕಚ್ಚೆ ಕಟ್ಟಿ । ಪೀತಾಂಬರವ ಹೊದ್ದನು
ಢಾಳು ಕತ್ತಿ ಉಡಿಯಲ್ ಸಿಕ್ಕಿ । ಜೋಡು ಕಾಲಲ್ಲಿ ಮೆಟ್ಟಿದ
 
ಕರದಿ ವೀಳ್ಯವನ್ನೆ ಪಿಡಿದು । ಕನ್ನಡಿಯ ನೋಡಿದ
ಕನಕಭೂಷಣವಾದ ತೊಡಿಗೆ । ಕಮಲನಾಭ ತೊಟ್ಟನು
ಕನಕಭೂಷಣವಾದ ಕುದುರೆ । ಕಮಲನಾಭ ಏರಿದ
ಕರಿಯ ಹಿಂದೆ ಹರಿಯು ಬರಲು । ಕಾಂತೆರೆಲ್ಲ ಕಂಡರು
 
ಯಾರು ಇಲ್ಲಿ ಬರುವರೆಂದು । ದೂರ ಪೋಗಿರೆಂದರು
ನಾರಿಯರಿರುವ ಸ್ಥಳಕೆ । ಯಾವ ಪುರುಷ ಬರುವನು
ಎಷ್ಟು ಹೇಳೆ ಕೇಳ ಕೃಷ್ಣ । ಕುದುರೆ ಮುಂದೆ ಬಿಟ್ಟನು
ಅಷ್ಟು ಮಂದೀರೆಲ್ಲ ಸೇರಿ । ಪೆಟ್ಟುಗಳನು ಹೊಡೆದರು
 
ಕಲ್ಲುಮಳೆಯ ಕರೆದರಾಗ । ಕುದುರೆ ಕೆಳಗೆ ಬಿದ್ದಿತು
ಕೇಶ ಬಿಚ್ಚಿ ವಾಸುದೇವ । ಶೇಷಗಿರಿಗೆ ಬಂದನು
ಪರಮಾನ್ನ ಮಾಡಿದ್ದೇನೆ । ಉಣ್ಣು ಬೇಗ ಎಂದಳು
ಅಮ್ಮ ಎನಗೆ ಅನ್ನ ಬೇಡ । ಎನ್ನ ಮಗನೆ ವೈರಿಯೇ
 
ಕಣ್ಣಿಲ್ಲಾದ ದೈವ ಅವಳ । ನಿರ್ಮಾಣವ ಮಾಡಿದ
ಯಾವ ದೇಶ ಯಾವೋಳಾಕೆ । ಎನಗೆ ಪೇಳು ಎಂದಳು
ನಾರಾಯಣನ ಪುರಕೆ ಪೋಗಿ । ರಾಮಕೃಷ್ಣರ ಪೂಜಿಸಿ
ಕುಂಜಮಣಿಯ ಕೊರಳಲ್ಹಾಕಿ । ಕೂಸಿನ್ ಕೊಂಕಳಲೆತ್ತಿದಾ
 
ಧರಣಿದೇವಿಗೆ ಕಣಿಯ ಹೇಳಿ । ಗಿರಿಗೆ ಬಂದು ಸೇರಿದ
ಕಾಂತೆರೆಲ್ಲ ಕೂಡಿಕೊಂಡು । ಆಗ ಬಕುಳೆ ಬಂದಳು
ಬನ್ನಿರೆಮ್ಮ ಸದನಕೆನುತ । ಬಹಳ ಮಾತನಾಡಿದರು
ತಂದೆತಾಯಿ ಬಂಧುಬಳಗ । ಹೊನ್ನು ಹಣ ಉಂಟೆಂದರು
 
ಇಷ್ಟು ಪರಿಯಲ್ಲಿದ್ದವಗೆ । ಕನ್ಯೆ ಯಾಕೆ ದೊರೆಕಲಿಲ್ಲ
ದೊಡ್ಡವಳಿಗೆ ಮಕ್ಕಳಿಲ್ಲ । ಮತ್ತೆ ಮದುವೆ ಮಾಡ್ವೆವು
ಬೃಹಸ್ಪತೀಯ ಕರೆಸಿದ । ಲಗ್ನಪತ್ರಿಕೆ ಬರೆಸಿದ (ಕಳುಹಿದ)
ಶುಕಾಚಾರ್ಯರ ಕರೆಸಿದ |ಮದುವೆ ಓಲೆ ಬರೆಸಿದ
 
ವಲ್ಲಭೆಯ ಕರೆವುದಕ್ಕೆ । ಕೊಲ್ಹಾಪುರಕೆ ಪೋದರು
ಗರುಡನ್ ಹೆಗಲನೇರಿಕೊಂಡು । ಬೇಗ ಹೊರಟು ಬಂದರು|ಅಷ್ಟವರ್ಗವನ್ನು ಮಾಡಿ । ಇಷ್ಟದೇವರ ಪೂಜಿಸಿ| ಲಕ್ಷ್ಮೀಸಹಿತ ಆಕಾಶರಾಜನ । ಪಟ್ಟಣಕ್ಕೆ ಬಂದರು
 
ಕನಕಭೂಷಣವಾದ ತೊಡಿಗೆ । ಕಮಲನಾಥ ತೊಟ್ಟನು
ಕನಕಭೂಷಣವಾದ ಮಂಟಪ । ಕಮಲನಾಭ ಏರಿದ
ಕಮಲನಾಭಗೆ ಕಾಂತೆಮಣಿಯ । ಕನ್ಯದಾನವ ಮಾಡಿದ
ಕಮಲನಾಭ ಕಾಂತೆ ಕೈಗೆ । ಕಂಕಣವನ್ನೆ ಕಟ್ಟಿದ
 
ಶ್ರೀನಿವಾಸ ಪದ್ಮಾವತಿಗೆ । ಮಾಂಗಲ್ಯವಕಟ್ಟಿದ
ಶ್ರೀನಿವಾಸನ ಮದುವೆ ನೋಡೆ । ಸ್ಟೀಯರೆಲ್ಲರು ಬನ್ನಿರೇ
ಪದ್ಮಾವತಿಯ ಮದುವೆ ನೋಡೆ । ಮುದ್ದು ಬಾಲೆಯರ್ ಬನ್ನಿರೇ | ಶಂಕೆಯಿಲ್ಲದೆ ಹಣವ ಸುರಿದು । ವೆಂಕಟೇಶನ ಕಳುಹಿದ
 
ಲಕ್ಷ ತಪ್ಪು ಎನ್ನಲುಂಟು । ಪಕ್ಷಿವಾಹನ ಸಲಹೆನ್ನ
ಕೋಟಿ ತಪ್ಪು ಎನ್ನಲುಂಟು ಕುಸುಮನಾಭ ಸಲಹೆನ್ನ
ಶಂಕೆಯಿಲ್ಲದೆ ವರವ ಕೊಡುವ ವೆಂಕಟೇಶ ಸಲಹೆನ್ನ
ಭಕ್ತಿಯಿಂದಲಿ ಹೇಳ್ಕೇಳ್ದವರಿಗೆ । ಮುಕ್ತಿ ಕೊಡುವ ಹಯವದನ
 
ಜಯ ಜಯ ಶ್ರೀನಿವಾಸನಿಗೆ । ಜಯ ಜಯ ಪದ್ಮಾವತಿಗೆ | ಒಲಿದಂತಹ ಶ್ರೀಹರಿಗೆ । ನಿತ್ಯ ಶುಭ ಮಂಗಳ| ಶೇಷಾದ್ರಿಗಿರಿವಾಸ । ಶ್ರೀದೇವಿ ಅರಸಗೆ ಕಲ್ಯಾಣ ಮೂರುತಿಗೆ । ನಿತ್ಯಜಯ ಮಂಗಳ ||

ಶ್ರೀ ವೆಂಕಟೇಶಾರ್ಪಣಮಸ್ತು 

No comments:

Post a Comment