Thursday, November 01, 2018

GOTRA What is ? ( ಗೋತ್ರ ಅ೦ದರೇನು ? )

ಗೋತ್ರ ಅ೦ದರೇನು ?

ಗೋತ್ರಗಳ ಹಿಂದಿರುವ ವೈಜ್ಞಾನಿಕ ಮಹತ್ವ:
 
ನಮ್ಮಲ್ಲಿ ಎಷ್ಟೋ ಜನರಲ್ಲಿ ಇರುವ ಗೊಂದಲ ಅಂದರೆ:
* ಗೋತ್ರ ಎಂದರೇನು? 
* ಗೋತ್ರ ಪದ್ಧತಿ ನಮ್ಮಲ್ಲಿ ಯಾಕೆ ಇದೆ? 
* ಯಾಕೆ ನಾವು ವಿವಾಹ ಮಾಡುವ ಮೊದಲು ಕಡ್ಡಾಯವಾಗಿ ಗೋತ್ರ ನೋಡುತ್ತೇವೆ? 
* ಏಕೆ ಮಗ ಮಾತ್ರ ತಂದೆಯ ಗೋತ್ರವನ್ನು ಮುಂದುವರೆಸುತ್ತಾನೆ ಮಗಳಲ್ಲ?
* ಹೇಗೆ ಮಗಳ ಗೋತ್ರವು ಮದುವೆಯ ಬಳಿಕ ಬದಲಾಗುತ್ತದೆ?

ಪ್ರಥಮತವಾಗಿ "ಗೋತ್ರ" ಎಂಬ ಶಬ್ಧವು ಸಂಸ್ಕೃತದ ಎರಡು ಅಕ್ಷರಗಳಿಂದ ಉಂಟಾಗಿದ್ದು 'ಗೋ' ಅಂದರೆ ಹಸು, 'ತ್ರಾಹಿ' ಅಂದರೆ ಕೊಟ್ಟಿಗೆ ಎಂದರ್ಥ. ಗೋತ್ರವು 'ಹಸುವಿನ ಕೊಟ್ಟಿಗೆ' ಎಂದಾಗಿದ್ದು, ಪುರುಷ ತಳಿಯ ವಾಹಕವಾಗಿದೆ. ಹಾಗಾದರೆ ನಾವೆಲ್ಲರೂ ನಮ್ಮ ಮೂಲ ಪುರುಷ ಯಾವುದೋ ಋಷಿಗಳಲೊಬ್ಬರ ಅನುಯಾಯಿ ಆಗಿದ್ದು, ನಮ್ಮ ಗೋತ್ರವು ಆ ಮೂಲ ಪುರುಷ ಋಷಿಯ ಹೆಸರಿನಿಂದ ಗುರುತಿಸಿ ಕೊಳ್ಳುವೆವು. 
{ ಋಷಿಗಳು: ವಸಿಷ್ಠ, ವಿಶ್ವಾಮಿತ್ರ, ಅತ್ರಿ, ಆಂಗೀರಸ, ಜಮದಗ್ನಿ, ಕಶ್ಯಪ, ಗೌತಮ, ಭಾರಧ್ವಾಜ ಅಗಸ್ತಿ ,ಮುದ್ಗಲ ,ಕೌಂಡಿನ್ಯ  ಮುಂತಾದವರು }
ಸಪ್ತಧಾತು ಸಮಪಿಂಡಂl ಸಮಯೋನಿ ಸಮುದ್ಭವಂl ಆತ್ಮಜೀವ ಸಮಾಯುಕ್ತಂl ಸೃಷ್ಟಿಕಾರ್ಯ ನಿರಂತರಂll
ತಂದೆ ಹಾಗೂ ತಾಯಿಯಿಂದ ಉತ್ಪತ್ತಿಯಾದ ಸಪ್ತಧಾತುಗಳು ಸೇರಿ, ತಾಯಿ ಗರ್ಭದಲ್ಲಿ ಸಮಪಿಂಡವಾಗಿ ಇಬ್ಬರ ಅಂಶದಿಂದ ಬಂದ ಪ್ರಾಣ, ಪ್ರಜ್ಞೆ, ಆತ್ಮಾಂಶಗಳು ಸಂಯುಕ್ತವಾಗಿ ತಂದೆಯ ಇಪ್ಪತ್ತ ಮೂರು, ತಾಯಿಯ ಇಪ್ಪತ್ತ ಮೂರು ವರ್ಣತಂತುಗಳ ಕೂಡುವಿಕೆಯಿಂದ ಒಂದೇ ಒಂದು ಮೂಲ ಜೀವಕೋಶ ರಚನೆಯಾಗಿ ಅದೇ ಕೋಶ ವಿಭಜನೆಗೊಂಡು ಪ್ರತಿ ಶಿಶುವು ಜನ್ಮ ತಾಳುವುದು. ತಂದೆಯ ಇಪ್ಪತ್ತ ಮೂರು 'XY' ತಾಯಿಯ ಇಪ್ಪತ್ತ ಮೂರು 'XX' ವರ್ಣತಂತುಗಳ ಗುಣಾಂಶ ಹಾಗೂ ವಂಶವಾಹಿನಿಯಾಗಿ ಬರುತ್ತದೆ. ಮಗುವಿಗೆ ತಾಯಿಯ ಗುಣಾಂಶ 'X' ಸಾಮಾನ್ಯವಾಗಿದ್ದು, ತಂದೆಯ 'Y' 
ಗುಣಾಂಶವು ತಾಯಿಯ 'XX' ಗುಣಾಂಶವನ್ನು ಮೀರಿ ತಂದೆಯಿಂದ 'Y' ಬರುವುದರಿಂದ ಮಗಳಿಗೆ ತಂದೆಯ 'Y' ಬರಲು ಅಸಾಧ್ಯವಾಗಿದ್ದು, ತಂದೆಯಿಂದ ಗೋತ್ರವು ಮಗನಿಗೆ, ಮೊಮ್ಮಗನಿಗೆ, ಮರಿಮಗನಿಗೆ ಮಾತ್ರ ಮುಂದುವರಿಯುವುದು.

ಪುತ್ರಕಾರಕ ಸಂಯೋಗ  
ಸ್ತ್ರೀಯ ದಿಮ್ಭಾನುವಿನಲ್ಲಿಯ ಕ್ಷ ಕ್ಷ  ಗುಣಾಂಶದ ಮತ್ತು ಪುರುಷ ವಿರ್ಯಾಣುವಿನಲ್ಲಿಯ  ಕ್ಷ ಯ ಗುಣಾಂಶಗಳಲ್ಲಿ  , ಕ್ಷ ಗುಣಾಂಶ ಸಾಮಾನ್ಯವಾಗಿ, ಉಳಿದ ವಿಷಮ  ಕ್ಷ ಯ ಗುಣಾಂಶಗಳ ಸಂಯೋಗದಿಂದ ಪುತ್ರ ಜನನವಾಗುತ್ತದೆ ಅಂದರೆ ಗಂಡು ಮಗುವಿನಲ್ಲಿ  ಕ್ಷ ಯ ಪರಂಪರೆ ನಿರಂತರವಾಗಿ ಒಂದೆ ವಂಶವಾಹಿನಿಯಲ್ಲಿ ಮುಂದುವರಿಯುತ್ತದೆ 

ಕನ್ಯಾಕಾರಕ ಸಂಯೋಗ 
ಸ್ತ್ರೀಯ ದಿಮ್ಭಾನುವಿನಲ್ಲಿಯ ಕ್ಷ ಕ್ಷ  ಗುಣಾಂಶದ ಮತ್ತು ಪುರುಷ ವೀರ್ಯಾಣುವಿನಲ್ಲಿಯ  ಕ್ಷ ಯ ಗುಣಾಂಶಗಳಲ್ಲಿ  , ಕ್ಷ ಸಾಮಾನ್ಯವಾಗಿ, ಉಳಿದ ವಿಷಮ  ಕ್ಷ ಯ ಗುಣಾಂಶಗಳ ಸಂಯೋಗವಾಗದೆ ಕೇವಲ ಕ್ಷ ಕ್ಷ ಗುಣಾಂಶಗಳ ಸಂಯೋಗ ವಾಗುವುದಾದ್ದರಿಂದ ಕನ್ಯಾ ಜನನವಾಗುತ್ತದೆ  ಕ್ಷ ಕ್ಷ  ಗುಣಾಂಶದ ಕನ್ಯೆ ಇನ್ನೊಂದು ಮನೆಗೆ ಮದುವೆಯಾಗಿ ಹೋಗುವುದರಿಂದ ಮತ್ತೊಂದು ಮನೆಯ  ಕ್ಷ ಯ ಗುಣಾಂಶದ ಪರಂಪರೆಗೆ  ನಿರಂತರವಾಗಿ ಬೇರೊಂದು ವಂಶವಾಹಿನಿಯಲ್ಲಿ ಮುಂದುವರಿಯಲು ಸಹಾಯಕಳಾಗುತ್ತಾಳೆ  ಎಂದಾಗುತ್ತದೆ  

ಮೇಲೆ ಹೆಸರಿಸಿದ ಋಷಿಗಳಲ್ಲಿ ವಿಭಿನ್ನ 'Y' ಗುಣಾಂಶದ ವರ್ಣತಂತುಗಳಿದ್ದು, ಆ ತಳಿಮೂಲಾಂಶದ ವಂಶವಾಹಿನಿ ನಾವಾಗಿದ್ದೇವೆ ಹಾಗೂ ನಾವು ಯಾವ ಮೂಲ ಪುರುಷನ ಸಂತತಿ ಎಂಬುದು ತಿಳಿಯುತ್ತದೆ. ವಿವಾಹ ವಿಚಾರದಲ್ಲಿ ನಾವು ಸ್ವಗೋತ್ರರಲ್ಲಿ ನೆಂಟಸ್ತಿಕೆ ಮಾಡಿದಲ್ಲಿ Y' ಗುಣಾಂಶದ ವರ್ಣತಂತುಗಳು ಭವಿಷ್ಯದಲ್ಲಿ ಮುಂದುವರೆಯಲಾಗದೆ ನಿಃಶಕ್ತ, ನಿತ್ರಾಣ, ವ್ಯಂಗ, ಬೆಳವಣಿಗೆ ಕುಂಠಿತ, ರಕ್ತ ಸಂಬಂಧಿ ಕಾಯಿಲೆ, ಪುತ್ರವಿಹೀನ, ಸಂತಾನ ಹೀನ-ಇತ್ಯಾದಿ ಹಲವಾರು ಸಮಸ್ಯೆಗಳು ಕಾಣಿಸುತ್ತದೆ. ಹಾಗಾಗಿ ಗೋತ್ರವು 'Y' ಗುಣಾಂಶದ ವರ್ಣತಂತುಗಳ ರಕ್ಷಕನಾಗಿದೆ. ಇಂತಹಾ ಉದಾತ್ತ ಋಷಿ 
ಪರಂಪರೆಯಲ್ಲಿ ಹುಟ್ಟಿದ ಹಾಗೂ ಪ್ರಪಂಚದ ಇತರೆ ನಾಗರಿಕತೆಯು ಕಣ್ಬಿಡುವ ಮುನ್ನ ವೈಜ್ಞಾನಿಕ ಕ್ರಾಂತಿಯನ್ನೇ ಮಾಡಿದ ನನ್ನ ಭಾರತಾಂಬೆಯ ಮಡಿಲಿಗೆ ಕೋಟಿ ಕೋಟಿ ನಮನಗಳು.

....... ಸಂಗ್ರಹಿಸಿದ್ದು

No comments:

Post a Comment