Tuesday, October 17, 2023

#Mangalarati JALADHI ALANGISI ಜಲಧಿ ಆಲಂಗಿಸಿ

 JALADHI ALANGISI  ಜಲಧಿ  ಆಲಂಗಿಸಿ  

ಜಲಧಿಯಾಲಂಘಿಸಿದವಗೆ ಜಯ ಮಂಗಳಂ  |  ನಮ್ಮ ಸುಲಧಿತ  ಮುಖ್ಯ ಪ್ರಾಣಗೆ ಶುಭ ಮಂಗಳಂ |ಜಲಧಿಯಾಲಂಘಿಸಿದವಗೆ ಜಯಮಂಗಳಂ ||

ಅಗ್ರಜನ ಭಯದಲ್ಲಿದ್ದ |ಸುಗ್ರೀವನ ತಂದು ಲಕ್ಷ್ಮ |ಣಾಗ್ರಜನ ಪಾದಕಮಲಕ್ಕೆ ಹಾಕಿಸಿ | ನಿಗ್ರಹಿಸಿ ವಾಲಿಯನ್ನು  |ಶೀಘ್ರದಿಂದ ಕಪಿಗಳೊಳಗೆ |ಅಗ್ರೇಶನ ಮಾಡಿದ ಮುಖ್ಯ ವಿಗ್ರಹನಿಗೆ ||

ಏಕಚಕ್ರ ಪುರದಲ್ಲಿದ್ದ |ನೇಕ ವಿಪ್ರ ಸಮೂಹಕ್ಕೆ | ಭೀಕರನಾಗಿದ್ದ ಬಕನ |ನೂಕಿ ಹಾಕಿದ  ಲೋಕಕ್ಕೆ ಕಂಟಕನಾದ | ಕಾಕು ದುರ್ಯೋಧನನ ಕೊಂದ | ಶ್ರೀ ಕೃಷ್ಣನ ಭಕ್ತ ಜಗದೇಕ ವೀರನಿಗೆ ||

ಜೀವ ದೇಹ ಒಂದೆ ಎಂಬ |ಮಾಯವಾದಿ ಮತವ ಮುರಿದು  | ಜೀವ ಭೇದ ಜನಕ ಭೇದ ಎಂದು ಸ್ಥಾಪಿಸಿ  |ದೇವ ಶ್ರೀ ಪುರಂದರ ವಿಠ್ಠಲ ಪರದೈವವೆಂದು  | ಕಾವ ಗುರು ಕರುಣಾನಿಧಿ ಮಧ್ವಮುನಿಗೆ || ಜಲಧಿಯಾಲಂಘಿಸಿದವಗೆ ಜಯ ಮಂಗಳಂ  |  ನಮ್ಮ ಸುಲಧಿತ  ಮುಖ್ಯ ಪ್ರಾಣಗೆ ಶುಭ ಮಂಗಳಂ |ಜಲಧಿಯಾಲಂಘಿಸಿದವಗೆ ಜಯಮಂಗಳಂ ||

                           .......ಪುರಂದರದಾಸರು 

No comments:

Post a Comment