ಭೂಪ್ರಸವ ಶಾಂತಿ ಪ್ರಯೋಗ
ಶ್ರೀ ಗುರುಭ್ಯೋ ನಮಃ ಹರಿ ಓಂ
( ಸಂಸ್ಕಾರ ಕೌಸ್ತುಭ, ಸ್ಮೃತಿ ಕೌಸ್ತುಭ ಶ್ರೀ ಆಪದೇವ ಸುತ ಅನಂತದೇವ ಕೃತಿ )
ಜನನ ಶಾಂತಿ, ವೈಧೃತಿ, ವ್ಯತಿಪಾತ, ಅತಿಗಂಡ, ಕುಯೋಗ ಜನನ ಸೂಚಿತ ಸಕಲಾರಿಷ್ಟ ನಿರಸನಕ್ಕೆ ಶ್ರೀ ಭೂದೇವ್ಯಾಂತರ್ಗತ. ಪರಮೇಶ್ವರ ಪ್ರೀತಿಯೇ ಭೂ ಪ್ರಸವ ಶಾಂತಿ ಕರ್ಮವನ್ನು (ಗೋಮುಖ ಪ್ರಸವ ಶಾಂತಿಗೆ ಪರ್ಯಾಯವಾಗಿಯೂ) ಪ್ರತಿಯೊಂದು ಜನನ ಶಾಂತಿ ಕರ್ಮಗಳಲ್ಲಿ ಮಾಡಬಹುದು ಎಂದು ದೃಷ್ಟಾರರ ಅಭಿಪ್ರಾಯಗಳಿವೆ.
ಜನನಿ ಶಾಂತಿ ವಿಚಾರ : ತಿಥಿ : ಕೃಷ್ಣ ಪಕ್ಷ ೧೪, ೩೦ ನಕ್ಷತ್ರ: ಆಶ್ಲೇಷ ಜ್ಯೇಷ್ಠ ಮೂಲ ಚಿತ್ರ ೧-೨ ಚರಣ, ಪುಷ್ಯ ೨-೩ ಚರಣ, ಉತ್ತರ ೧ ನೇಮ ಚರಣ, ಪೂರ್ವಾಷಾಢಾ ೩ ನೇಮ ಚರಣ, ಮೇಘಾ ಒಂದನೇ ಚರಣ, ವಿಶಾಖಾ ೪ ನೇಮ ಚರಣ, ರೇವತಿಯ ಕೊನೆಯ ೪೮ ಮಿನಿಟುಗಳು ರಡು, ಅಶ್ವಿನಿಯ ಮೊದಲ ೪೮ ಮಿನಿಟುಗಳಲ್ಲಿಜ ನನವಾದರೇ, ಪಿತ್ರೇಕ ನಕ್ಷತ್ರ, ಮಾತ್ರೇಕ ನಕ್ಷತ್ರ, ಭ್ರಾತ್ಯೇಕ ನಕ್ಷತ್ರ, ಭಗಿನ್ಯೇಕ ನಕ್ಷತ್ರ, ತಿಥಿ ಗಂಡಾಂತ, ಲಗ್ನ ಗಂಡಾಂತ, ನಕ್ಷತ್ರ ಗಂಡಾಂತ ಇವುಗಳಲ್ಲಿ ಯಾವುದೇ ಒಂದು ಇದ್ದರೂ ಭೂ ಪ್ರಸವ ಶಾಂತಿ ಮಾಡುವುದು ಅವಶ್ಯಕ.
ಗ್ರಹ ಮಖ ಶಾಂತಿ: ಸೂರ್ಯ ನಕ್ಷತ್ರದಿಂದ ದಿನ ನಕ್ಷತ್ರದ ವರೆಗೆ ಲೆಕ್ಕ ಹಾಕಿ ಪ್ರತಿ ಗ್ರಹಕ್ಕೆ ಸೂರ್ಯ ನಕ್ಷತ್ರದಿಂದ ಮೂರನೇ ನಕ್ಷತ್ರ ಹೀಗೆ ಕ್ರಮವಿಟ್ಟು, ಕ್ರಮವಾಗಿ ಸೂರ್ಯ, ಬುಧ, ಶುಕ್ರ, ಶನಿ, ಚಂದ್ರ,ಮಂಗಳ, ಗುರು ರಾಹು ಕೇತು ಇದರಲ್ಲಿ ಶುಭ ಗ್ರಹಗಳಲ್ಲಿ ನಕ್ಷತ್ರವಿದ್ದರೇ ಶುಭಪ್ರದ
ಗಣಪತಿ ಪೂಜೆ : ಅಡಿಕೆಬೆಟ್ಟುಗಳು ೧೦, ಕೊಬ್ಬರಿ ತೋಯಿಸಿದ ಹೂಬತ್ತಿಗಳು, ಅಕ್ಷತೆ, ಆರತಿ ತಟ್ಟೆ, ನೀಲಾಂಜನ ೨, ಕೊಬ್ಬರಿ ತುಕಡಿಗಳು ೧೦, ನಾಣ್ಯಗಳು ೧೦, ದೊನ್ನೆಗಳು ೨, ಹೂ ತುಳಸಿ ಕುಂಕುಮ ಅರಿಷಿಣ ಮಾವಿನ ಎಲೆಗಳು ವಿಳ್ಯದ ಎಲೆಗಳು ೨೦, ಕರ್ಪುರ ತೆಂಗಿನ ಕಾಯಿ ೧. ಶ್ರೀ ವಿಘ್ನೇಶ್ವರ ದೇವರ ಪಂಚೋಪಚಾರ ಪೂಜೆ ಮಾಡಬೇಕು
ಪುಣ್ಯಾಹ ವಾಚನ : ಮಣೆ ೧ ತಂಬಿಗೆ ೨ ಸುಲಿಯದ ತೆಂಗಿನ ಕಾಯಿ ೨ ಝಂಪರ ಪೀಸಗಳು ೩ ಕೊಬ್ಬರಿ ಬಟ್ಟಲುಗಳು ೩ ಅಡಿಕೆ ಬೆಟ್ಟುಗಳು ೩೦ ಉತ್ತತ್ತಿ, ಅರಿಷಿಣ ಬೇರು, ಬಾದಾಮಿ, ಕೊಬ್ಬರಿ ತುಕಡಿಗಳು, ನಾಣ್ಯಗಳು ಹೂ ತುಳಸಿ, ದಕ್ಷಿಣೆ. ಗೆಜ್ಜೆ ವಸ್ತ್ರ ೨, ದೊನ್ನೆಗಳಲ್ಲಿ ಹೆಸರು ಬೇಳೆ, ಕಡಲೆ ಬೇಳೆ, ಉದ್ದಿನ ಬೇಳೆ, ಮಾವಿನ ಎಲೆಗಳು ೧೦,
ಏಕ ಕಲಶದಿಂದ ಪುಣ್ಯಾಹ ವಾಚನ ಮಾಡುವುದು
ಗ್ರಹ ಮಖ ಶಾಂತಿ:
ಇಟ್ಟಂಗಿಗಳಿಂದ, ಅಥವಾ ಲೋಹದ ಹೋಮಕುಂಡ ತಯಾರಿಸಿ ಕೆಳಗೆ ಮರಳು, ಎರೆ ಮಣ್ಣು ಹಾಕುವುದು ಒಣಗಿದ ಕಟ್ಟಿಗೆ ಚಕ್ಕೆಗಳು, ಬಿಲ್ವಪತ್ರೆ ಕಾಯಿ ೩, ಹಿತ್ತಾಳೆ ಪಾತ್ರೆ, ಮುಚ್ಚಳ, ಸೌಟು, ಅನ್ನಕ್ಕಾಗಿ ಅಕ್ಕಿ, ತುಪ್ಪಕ್ಕಾಗಿ ಹಿತ್ತಾಳೆ ಚಿಕ್ಕ ಬುಟ್ಟಿ, ಅಂಚಿನ ಖಣ, ಕಪ್ಪುದಪ್ಪ ದಾರ, ಎಳೆಬತ್ತಿ, ಕೊಬ್ಬರಿ ಗುಂಡ ೧ ಜೋಡು ಜನಿವಾರ, ದರ್ಭೆ,ಗೋಪೀಚಂದ, ಗೋಮೂತ್ರ, ಗೋಮಯ, ಸಮಿಧೆ ಕೊಟ್ಟು, ಕರ್ಪುರ, ಕರಿ ಎಳ್ಳು, ವಿಳ್ಯದ ಎಲೆಗಳು ೨೦, ಊದಕಡ್ಡಿ, ಮೊಸರು, ಜೇನು ತುಪ್ಪ, ತುಪ್ಪ, ಅಮೃತ ಬಳ್ಳಿಯ ಎಲೆಗಳು ೧೦೮,
ಗೋಮೂತ್ರ ಗೋಮಯ ಲೇಪಿತ ಸ್ವಚ್ಛ ನೆಲದ ಮೇಲೆ ರಂಗೋಲಿಯಿಂದ ಕೋನ ಭಾಗ ಕೆಳಗಾಗುವಂತೆ ಸಮಭುಜ ತ್ರಿಕೋನ ಯಂತ್ರ ತೆಗೆದು ದರ್ಭೆಯಿಂದ ಅಗಿದಹಾಗೆ ತ್ರಿಕೋಣ ಭಾಗದಲ್ಲಿ ತಗ್ಗು ಆಗಿದೆ ಎಂದು ಕಲ್ಪಿಸಬೇಕು ಆ ತ್ರಿಕೋನ ಯಂತ್ರದ ಮುಂಭಾಗ ಎಡ ಮತ್ತು ಬಲದ ಕೋನಗಳಲ್ಲಿ ಅಡಿಕೆ ಬೆಟ್ಟುಗಳನ್ನಿಟ್ಟು ....
ಗೋವಿಂದ ಗೋವಿಂದ ಗೋವಿಂದ ಶ್ರೀ ಮದ್ಭಗವತೋ...
....ಮಮ ಅಸ್ಯ ಕನ್ಯಕ:/ ಪುತ್ರಸ್ಯ ಜನನ ಶಾಂತಿ, ವೈಧೃತಿ, ವ್ಯತಿಪಾತ, ಅತಿಗಂಡ, ಕುಯೋಗ ಜನನ ಸೂಚಿತ ಸಕಲಾರಿಷ್ಟ ನಿರಸನ ದ್ವಾರಾ ಶ್ರೀ ಭೂದೇವ್ಯಾಂತರ್ಗತ. ಪರಮೇಶ್ವರ ಪ್ರೀತಿಯೇ ಶ್ರೀ ಭೂದೇವಿ ಪ್ರೀತ್ಯರ್ಥ, ಭೂ ಪ್ರಸವ ಶಾಂತಿಂ ಕರ್ಮ ಕರಿಷ್ಯೇ...
೧) ಓಂ ವಿಷ್ಣುರ್ಯೋನಿಂ ಕಲ್ಪಿಯತು..೦. ಪೃಥ್ವಿ ರೂಪ ಯೋನೈ ನಮಃ ಪೃಥ್ವಿರೂಪಾ ಯೋನಿಂ ಆವಾಹಯಾಮಿ ( ಶ್ರೀ ವಿಷ್ಣು...ಆಜ್ಯ ) ಆಹುತಿ ೩
೨) ಓಂ ಭಗಐವ ಭಗವಾನ ..೦. ಭಗಮಾಲಿನ್ಯೈ ನಮಃ ಭಗಮಾಲಿನಿಂ ಆವಾಹಯಾಮಿ ( ಶ್ರೀ ವರುಣ... ದಧೀ ) ಆಹುತಿ ೩
೩) ಓಂ ಬಿಭ್ರಾಡ ಬೃಹತ್ ಸುಭೃತಂ..೦. ಶ್ರೀ ಯಮಧರ್ಮಾಯ ನಮಃ ಧರ್ಮಂ ಆವಾಹಯಾಮಿ ( ಯಮಧರ್ಮ ...ಮಧು ) ಆಹುತಿ ೩ ಹೀಗೆ ಮೂವರೂ ದೇವತೆಗಳ ಪೂಜೆ ಮಾಡಬೇಕು
ನವ ಗ್ರಹಗಳ ಆಹುತಿಗಳು ೯, ಏಕಾದಶ ದಿಕ್ಪಾಲರ ಆಹುತಿ ಗಳು ೧೧, ಕುಲದೇವರ ಆಹುತಿಗಳು ೨೫ ಪ್ರತಿ ಆಹುತಿಗೆ ಸ್ವಾಹಾ ಎಂದು ತಕ್ಷಣ ಆಜ್ಯ, ತಿಲ ಮಿಶ್ರಿತ ಚರು, ಸಮಿಧೆ ಜೊತೆಗೆ ಜೇನು ತುಪ್ಪದಲ್ಲಿ ಅದ್ದಿದ ಅಮೃತ ಬಳ್ಳಿಯ ಎಲೆಗಳು ೨ ಅರ್ಪಿಸಬೇಕು ಮತ್ತು ಉದ್ದಿನ ಹಿಟ್ಟಿನಲ್ಲಿ ಬೆಲ್ಲ ಮಿಶ್ರಿತ ೧೮ ಗುಳಿಗೆಗಳು ಅರ್ಪಿಸಬೇಕುಮಾತಾ ಪೃಥ್ವಿ ಪಿತಾ ಧರ್ಮ: ಸ್ಥಾಪಯೇತ ಮಮ ಕನ್ಯಕಾ: /ಪುತ್ರಸ್ಯ ಏವಮ್ ಧಾರಯ ಮಾತಸ್ ತ್ವಮ್
ಜನನಿ ತತ್ ಕ್ಷಣೋ ಭವ | ಹೀಗೆ ಪ್ರಾರ್ಥನೆ ಮಾಡಿ ತ್ರಿಕೋಣಾಕಾರದ ಯಂತ್ರದ ಒಳ ಭಾಗದಲ್ಲಿ ಗೋಧಿಯನ್ನು ಹರಡಿ ಅದರ ಮೇಲೆ ತ್ರಿಕೋನಾಕಾರದಲ್ಲಿ ಕೆಂಪು ವಸ್ತ್ರವನ್ನು ಪಸರಿಸಿ ಯಂತ್ರದ ಮೇಲೆ ಹಳದಿ ವಸ್ತ್ರ ಹಾಸಿದ ಮೊರದಲ್ಲಿ ಪುತ್ರ / ಕನ್ಯೆಯನ್ನು ಮಲಗಿಸಿ / ಕೂಡಿಸಿ, ಕೆಂಪು ವಸ್ತ್ರವನ್ನು ಹೊದಿಸಬೇಕು.
ಆಚಾರ್ಯರು ಆಗ ಪುತ್ರ / ಕನ್ಯೆಯನ್ನು ವಸ್ತ್ರ ಸಹಿತವಾಗಿ ಎತ್ತಿಕೊಂಡು ...ಭವ ಐವ..೦ ಈ ಮಂತ್ರ ಹೇಳುತ್ತ.. ಮಾತಾ ಪೃಥ್ವಿ ಮಯಾ ಪುತ್ರ / ಕನ್ಯಾ ತ್ವದರ್ಥ ಪ್ರತಿಪದ್ಯತೇ. ಸರ್ವಾರಿಷ್ಟ ವಿನಾಶಾಯ ಪುತ್ರ / ಕನ್ಯಾ ಕುಶಲಂ ಕುರು.... ಹೀಗೆ ಪ್ರಾರ್ಥನೆ ಸಲ್ಲಿಸಿ ಭೂ ಸೂಕ್ತವನ್ನು ಪಠಿಸುತ್ತಿರಬೇಕು
ದೇವಸ್ಯತ್ವಾ ಸವಿತು:
ಪ್ರಸವೇ ಶ್ವನೋರ್ಬಾಹುಭ್ಯಾಂ ಪೂಷ್ಣೋ ಹಸ್ತಾಭ್ಯಾಂ....೦..
ಈ ಮಂತ್ರ ಹೇಳುತ್ತ ಪುತ್ರ / ಕನ್ಯೆಯನ್ನು ತಾಯಿಯ ಮಡಿಲಲ್ಲಿ ಹಾಕುವುದು, ಮಾತಾ ಪಿತೃಗಳು ಪುತ್ರ / ಕನ್ಯೆಯ ಮುಖಾವಲೋಕನ ಮಾಡಬೇಕು ಪ್ರದಕ್ಷಿಣೆ ಪೂರ್ವಕ ಪೂರ್ಣಾಹುತಿ ( ಹಿತ್ತಾಳೆ ಪಾತ್ರೆಯಲ್ಲಿ ಝಂಪರಪೀಸ, ತೆಂಗಿನ ಕಾಯಿ ಅಡಿಕೆ ಬೆಟ್ಟು, ಬಿಲ್ವಪತ್ರೆ ಕಾಯಿ ೧, ಕೊಬ್ಬರಿ ಗುಂಡ ೧, ವಿಳ್ಯದ ಎಲೆ ೨, ದಕ್ಷಿಣೆ, ಯಜ್ಞೋಪವೀತ ಜೋಡಿ ಸಹಿತ ಅರ್ಪಿಸಬೇಕು ) ಬಲಿಹರಣ ಮಾಡುವುದು (ಒಂದು ಹಿತ್ತಾಳೆ ಪಾತ್ರೆಯಲ್ಲಿ ಪತ್ರೋಳಿಯನ್ನಿಟ್ಟು ಉಳಿದ ಚರು ಪೇರಿಸಿ ಅರಿಷಿಣ, ಕುಂಕುಮ ಹೂವು ಅರ್ಪಿಸಿ ಅಷ್ಟ ದಿಕ್ಪಾಲಕರಲ್ಲಿ ಕರ್ಪುರ ಹಚ್ಚಿ ಕಣಕಿನ ದೀಪ ತಯಾರಿಸಿ ಎಣ್ಣೆಯಲ್ಲಿ ಕರಿಬತ್ತಿ ಹಾಕಿ ದೀಪ ಹಚ್ಚುವುದು ಅದನ್ನು ನಿವಾಳಿಸಿ ಒಂದು ಕೈಯಲ್ಲಿ ಹಿತ್ತಾಳೆಯ ಆ ಪಾತ್ರೆ ಮತ್ತೊಂದು ಕೈಯಲ್ಲಿ ನೀರಿನ ತಂಬಿಗೆ ತೆಗೆದು ಕೊಂಡು ಹಿಂತಿರುಗಿ ನೋಡದೆ ಮನೆಯಿಂದ ದೂರ ಹೊರ ಭಾಗದಲ್ಲಿ ಭೂತದಯೆ ಎಂದು ಇಟ್ಟು ಕೈ ಕಾಲುಗಳು ತೊಳೆದುಕೊಂಡು ಕಣ್ಣಿಗೆ ನೀರು ಹಚ್ಚಿಕೊಂಡು ಹಿಂತಿರುಗಿ ನೋಡದೆ ಮನೆಗೆ ಬರುವುದು)...ಯಾಂತು ದೇವಗಣಾಸ್ಸರ್ವೇ...೦
ಅನೇನ ಭೂ ಪ್ರಸವ ಶಾಂತಿ ವಿಧೀನಾ ಪೃಥಿವ್ಯಾದಯ: ಪ್ರೀಯಂತಾಂ ಪ್ರೀತೋ ಭವತು ಶ್ರೀ ಕೃಷ್ಣಾರ್ಪಣಮಸ್ತು
ಸರ್ವೇ ಜನಾ ಸುಖಿನೋ ಭವಂತು
No comments:
Post a Comment