ವಾರಿಜಾಪತಿ ಸದನದೆಡೆ ಬಂದು ಕೈ ಮುಗಿದ ||ವೈಭವದೋಳ್ ವೈಕುಂಠ ವಾಸಿ ದೇವಂ ಶ್ವೇತಾಂಬರಾವೃತವರಂ |
ಸೌಭದ್ರಾ ವನಮಾಲೆ ಭೂಷಿತ ಹರಿಂ ಶ್ರೀ ಶಂಖ ಚಕ್ರಾ ಧರಾ ||
ಸೌಭಾಗ್ಯಾSಭಯ ಪದ್ಮ ಗದಾ ಧರವರಾ ಆದ್ಯಂತ ಮಧ್ಯಾ ವೃತಾ |
ಸ್ವಾಭಾವೈ ವೈಗುಣ್ಯ ನಿರ್ಗುಣ ನಮೋ ದುರಿತಂಗಳಾ ಪಾಹಿಮಾಂ ||
ನಾರದರೇ ನಿಮ ಆಗಮಕೆ ಕಾರಣ |
ಸಾರ ಇಚ್ಚೆಯ ಅರುಹಿರೆಂತಲೂ |
ಮೀರಿ ದುಃಖವ ಪಡೆಯೆ ಜನ ಮೃತ್ಯು ಲೋಕದಲಿ ||
ನೋಡಲಾಗದ ಪೀಡೆಯದು ಇರೆ |
ಕಾಡುತಿಹ ದುಮ್ಮಾನ ಒಂದೆಡೆ |
ಮಾಡುವಂತಹ ಸುಲಭೋ ಪಾಯ ಕೃಪೆಮಾಡಿ ||
ಒಳ್ಳೆ ಚಿಂತನೆ ಪರಹಿತಕ್ಕಿರೆ |
ಇಲ್ಲ ಸಂಶಯ ನಿನ್ನ ಪ್ರಶ್ನೆಗೆ |
ಒಳ್ಳೆ ದುರ್ಲಭ ವ್ರತವ ಒಂದಿರೆ ಕೇಳು ಶಾಂತದಲಿ ||
ಸತ್ಯ ನಾರಾಯಣನ ವ್ರತವದು |
ಮಿಥ್ಯ ವಲ್ಲದೆ ಯಥಾ ವಿಧಿಯಿಂ |
ಸತ್ಯದಲಿ ಇಹ ಭೋಗ್ಯ ಭಾಗ್ಯವ ಕೊನೆಗೆ ಮುಕ್ತಿಯದು ||
ತಾವು ಹೇಳಿದ ವ್ರತದ ಕ್ರಿಯೆಯನು |
ಯಾವಾಗ ಯಾರ್ಯಾರು ಮಾಡಿರೆ |
ನೀವೆಲ್ಲವು ಹೇಳಿ ಪೂಜೆಯು ಹೇಗೆ ಮಾಡುವುದು ||
ಮಾಡೆ ಪೂಜೆಯು ಶೋಕ ನಾಶಕೆ |
ನೋಡುತಲೇ ಧನ ಧಾನ್ಯ ವೃದ್ಧಿಸಿ |
ಒಡನೆ ಸ್ತ್ರೀಯರು ಭಾಗ್ಯದಾಪತ್ಯ ಪಡೆಯುವರು ||
ಪುರುಷ ವಿಜಯಗಳೆಲ್ಲ ಕಾರ್ಯಕೆ |
ನಿರುತ ಶ್ರದ್ಧಾ ಭಕ್ತಿಯಿಂದಲಿ |
ಇರುವ ಯಾವುದೇ ದಿನದಲಿ ವ್ರತವನ್ನು ಮಾಡುವುದು ||
ಮುಂಜಾವು ಮಧ್ಯಾಹ್ನ ಸಮಯದಿ |
ಸಂಜೆ ಬಾಂಧವ ಬಂಧುಗಳ ಜೊತೆ |
ಕಂಜನಾಂಜನ ವ್ರತವು ಭಕ್ತಿಯಲಿಂದ ಆಚರಿಸು ||
ಪೂಜೆ ಮುಗಿದು ನೈವೇದ್ಯ ಅರ್ಪಿಸಿ |
ಸಾಜು ತುಪ್ಪ ಹಾಲು ಬೆಲ್ಲವ |
ಸಜ್ಜುಗೆಯು ಬಾಳೆ ಎಲ್ಲವೂ ಒಕ್ಕಾಲು ಲೆಖ್ಖದಲಿ ||
ದ್ವಿಜರಿಂಗೆ ದಕ್ಷಿಣೆಯನಿತ್ತು |
ನೈಜ ಭಕ್ತಿಯ ಕಥೆಯ ಶ್ರವಣವ |
ನಿಜ ಪ್ರಸಾದ ಎಲ್ಲರೂ ಸ್ವೀಕರಿಸಿ ಪದಕೆರಗಿ ||
ಆರತಕ್ಷತೆ ನೃತ್ಯ ಗೀತೆಯ |
ಸಿರವ ಬಾಗಿಸಿ ಆತ್ಮರೊಡನೆಯೇ |
ಭೂರಿ ಬ್ರಾಹ್ಮಣ ಭೋಜದಿಂ ತೃಪ್ತ ಗೊಂಡಿರಲು ||
ಎಲ್ಲರಿಷ್ಟಾರ್ಥವನೇ ಪೂರ್ಣವು |
ಇಲ್ಲ ಕಲಿಯುಗದನ್ಯ ವ್ರತವದು |
ನಿಲ್ಲು ವ್ರತ ಸ್ಕಂದ ರೇವಾ ಖಂಡ ಪ್ರಥಮ ಕಥೆ ||
ಇತಿ ಶ್ರೀ ಸ್ಕಂದ ಪುರಾಣೆ ರೇವಾಖಂಡೆ ಶ್ರೀ ಸತ್ಯನಾರಾಯಣ ಕಥಾಯಾಂ ಪ್ರಥಮೊಧ್ಯಾಯಃ ಪುಂಡರೀಕ ವರದ ಹರಿ ವಿಠ್ಠಲ ಸೀತಾಕಾಂತಃ ಸ್ಮರಣ ಜಯ ಜಯ ರಾಮ || ಮಂಗಲಂ ಭಗವಾನ ವಿಷ್ಣು ಮಂಗಲಂ ಗರುಡ ಧ್ವಜ ಮಂಗಲಂ ಪುಂಡರೀಕಾಕ್ಷ ಮಂಗಲಾಯ ತನಂ ಹರಿಃ ಅನಂತ ಕೋಟಿ ಬ್ರಹ್ಮಾಂಡ ನಾಯಕ ದೇವ ದೇವೋತ್ತಮ ಕಪಟ ನಾಟಕ ಸೂತ್ರಾಧಾರ ಶ್ರೀ ಲಕ್ಷ್ಮೀ ರಮಣ ಗೋವಿಂದಾ ಗೋವಿಂದ ( ಘಂಟೆ ಜಾಗಟೆ ಸಹಿತ ಮಂಗಳಾರತಿ ಮಾಡಬೇಕು )
ಅಥ ದ್ವಿತೀಯೋಧ್ಯಾಯಃ
ಪುರ್ವದಲಿ ಶ್ರೀ ಸತ್ಯದೇವರ |
ಪಾರ್ವ ಶೌನಕರಾದಿ ಋಷಿಗಳೇ |
ಊರ್ವರಿತವೀಮನೋಹರ ಕಥೆಯ ಪೇಳುವೆನು ||
ವಾರಣಾಸಿಯ ಬಡವ ಬ್ರಾಹ್ಮಣ |
ಸಾರಸರಿಯಲಿ ಅನ್ನ ಸಿಗದಲೇ |
ಈರ್ವ ದ್ವಿಜ ದುಃಖಿತರು ಪ್ರಭು ದೃಷ್ಟಿ ಗೋಚರದಿ ||
ನಿನ್ನ ದುರಿತಗಳೆಲ್ಲ ಕಂಡಿರೆ |
ನಿನ್ನ ಬಯಕೆಗಳೆನೇನು ಪೇಳು |
ನನ್ನ ಬಡತನ ನಿವಾರಣೋಪಾಯ ಪೇಳೆಂದ ||
ದ್ವಿಜರೆ ನೀವು ಸತ್ಯ ಪ್ರಭುವಿನ |
ನಿಜ ವ್ರತವನು ಮಾಡೆ ಭಕ್ತಿಯ |
ನಿಜದಿ ಭಜಿಪರ ದುಃಖ ದುರಿತವ ದೂರ ಮಾಡುವುದು ||
ಪ್ರಥಮ ಅಧ್ಯಾಯದಲಿ ಹೇಳಿದ |
ಪ್ರಥಮ ಪೂಜಾ ಪ್ರಸಾದ ವಿಧಿಯನೆ |
ಕಥನ ಮಾಡಿದ ದೇವ ಅಂತರ್ಧಾನರಾಗಿಹರು ||
ವೃದ್ಧ ಬ್ರಾಹ್ಮಣ ವ್ರತದ ವಿಧಿಯಲಿ |
ನಿದ್ರೆಯಿಲ್ಲದೆ ರಾತ್ರಿ ಕಳೆದನು |
ಬದ್ಧ ಕಂಕಣನಾಗಿ ಪ್ರಾತಃ ಸಮಯದೊಳು ಎದ್ದು ||
ಸ್ನಾನ ಸಂಧ್ಯಾಗಳನೆ ತೀರಿಸಿ |
ತಾನೆ ನಿತ್ಯದ ಹೊರಟು ಭಿಕ್ಷೆಗೆ |
ಮಾನ ಭಿಕ್ಷೆಯು ಅಧಿಕ ದೊರೆತಿರೆ ಸತ್ಯ ಸಂಕಲ್ಪ ||
ದೇವರೊಲಿಯಲು ಏಕ ನಿಷ್ಥೆಯು |
ಭಾವ ಭಕುತಿಯ ನೋಡಿ ಪ್ರಭುವು |
ಕಾವ ದೇವರ ಕೃಪೆಗೆ ಆದಿನ ಹಣವು ಭಿಕ್ಷೆಯಲಿ ||
ಹರ್ಷದಿಂದಲಿ ದ್ವಿಜನು ತನ್ನಯ |
ಕರ್ಷಣದಿ ಬಾಂಧವರೆಲ್ಲ ಕೂಡಿಯೇ |
ಹರ್ಷದೊಳು ವಿಧಿಯುಕ್ತ ವ್ರತವನು ಮಾಡುತಿರಲಾಗಿ ||
ಸಂತುಷ್ಟ ನಾರಾಯಣನು ದ್ವಿಜನ |
ಸಾಂತ್ವನದಿ ದಾರಿದ್ರ್ಯವನೆ ದೂರಿಸಿ |
ಅಂತ್ಯದಲಿ ಸಂಪತ್ತಿ ಚಿರ ಭೋಗ ಹೊಂದಿಹನು ||
ಧೃಡ ಭಕ್ತಿಯಿಂ ವೃದ್ಧ ವಿಪ್ರನು |
ತಡೆಯು ಇಲ್ಲದೆ ಪ್ರತಿ ಮಾಸದಲಿಯೇ |
ಮಾಡೆ ವ್ರತ ಪಾಪ ಮುಕ್ತದಿ ಮೋಕ್ಷವನು ಪಡೆದ ||
ಭಗವಂತ ಪೇಳಿದುದನ್ನೇ ಹೇಳಿದ |
ಮಿಗಿಲು ಸೂತರು ಶೌನಕರಲ್ಲಿ ತಿಳಿಸಿ |
ಆಗಲೇ ಮತ್ತೊಂದು ಕಥೆ ಸೂತ ಪೇಳುತಲಿ ||
ಕಾಶಿ ಬ್ರಾಹ್ಮಣನಿಂದ ವ್ರತವನು |
ಈಶ ಸತ್ಯ ದೇವ ಚರಿತೆಯ |
ಕಾಶಿ ದ್ವಿಜ ವೈಭವದಿ ದೇವರ ಪೂಜೆ ಮಾಡುತಿರೆ ||
ಆಪ್ತ ವರ್ಗದ ಜೊತೆಯೇ ವಿಪ್ರನು |
ಪ್ರಾಪ್ತಿಯಿಂ ಪ್ರಭುದೇವ ಪೂಜೆಯ |
ಪ್ರಾಪ್ತ ಸಮಯದಿ ಕಾಷ್ಠಕ್ರೆತ ನೋಡುತಿರ್ದನು ||
ಕಟ್ಟಿಗೆಯ ಹೊರೆ ಹೊರಗಿರಿಸಿ ತಾನೇ |
ನಿಟ್ಟಿನೋಳು ನೀರಡಿಕೆಯಿಂದಲಿ |
ಕಷ್ಟದಿಂ ನೋಡಿ ದ್ವಿಜರಲಿ ಪೂಜೆ ನಡೆಯುತಿರೆ ||
ಕಾಷ್ಠ ಕ್ರೆತನು ವಿಪ್ರಕೇಳುತ |
ಇಟ್ಟ ವ್ರತವದೇನು ಪ್ರಯೋಜನ |
ನಷ್ಟವಿಲ್ಲದೆ ಎಲ್ಲವನು ಪೇಳುವೆನು ಕೇಳೆಂದ ||
ಮೊದಲು ನಾನವನೊಬ್ಬ ಬಡವನು |
ವಿಧದಿ ಭಿಕ್ಷೆಯ ಬೇಡುತಿರಲು |
ಮುದದಿ ಪ್ರಭುವಿನ ಪುಜೆಯಿಂ ನೆಮ್ಮದಿಯ ಪಡೆದಿಹೆನು ||
ವ್ರತ ವಿಧಾನವನೆಲ್ಲ ಕೇಳುತ |
ಕ್ರೆತ ಹರ್ಷಿತ ಕೇಳಿ ಮಹತಿಯ |
ಪ್ರೀತನಾಗಿಯೆ ಕಟ್ಟಿಗೆಯ ಮಾರಲು ಹೊರಡುತಿರಲಾಗಿ ||
ಸಂಕಲ್ಪ ಸಿದ್ಧಿಯು ಆಗುತಿರಲು |
ಸಂಕಲದಿ ಶ್ರೀಮಂತರೋಣಿಗೆ |
ಸಂಕಲ್ಪದಿಂದಲೇ ಎರಡು ಪಟ್ಟು ಹಣವು ದೊರೆತಿರಲು ||
ಸಂತುಷ್ಟನಾಗಿಹ ಕಾಷ್ಠ ಕ್ರೆತನು |
ಸಂತೋಷದಿಂದಲಿ ಸತ್ಯ ದೇವರ |
ಹಂತ ಹಂತದಿ ಸತ್ಯ ಪ್ರಭುವಿನ ವ್ರತವ ಮಾಡುತಲಿ ||
ಬಂಧು ಬಾಂಧವರೊಡನೆ ಕೂಡಿ |
ಹೊಂದಿ ವಿಧಿ ವಿಧಿಯುಕ್ತ ಪೂಜಿಸಿ |
ಸಂದಿರಲು ಸಂಪತ್ತು ಸಂತತಿ ಪಡೆದನಂತ್ಯದಲಿ ||
ಎಲ್ಲರಿಷ್ಟಾರ್ಥವನೆ ಪೂರ್ಣವು |
ಇಲ್ಲ ಕಲಿಯುಗದನ್ಯ ಪೂಜೆಯ |
ನಿಲ್ಲು ವ್ರತ ಸ್ಕಂದ ರೇವಾಖಂಡ ದ್ವಿತೀಯ ಕಥೆ ||
ಇತಿ ಶ್ರೀ ಸ್ಕಂದ ಪುರಾಣೆ ರೇವಾಖಂಡೆ ಶ್ರೀ ಸತ್ಯನಾರಾಯಣ ಕಥಾಯಾಂ ದ್ವಿತಿಯೋಧ್ಯಾಯಃ ಪುಂಡರೀಕ ವರದ ಹರಿ ವಿಠ್ಠಲ ಸೀತಾಕಾಂತಃ ಸ್ಮರಣ ಜಯ ಜಯ ರಾಮ || ಮಂಗಲಂ ಭಗವಾನ ವಿಷ್ಣು ಮಂಗಲಂ ಗರುಡ ಧ್ವಜ ಮಂಗಲಂ ಪುಂಡರೀಕಾಕ್ಷ ಮಂಗಲಾಯ ತನಂ ಹರಿಃ ಅನಂತ ಕೋಟಿ ಬ್ರಹ್ಮಾಂಡ ನಾಯಕ ದೇವ ದೇವೋತ್ತಮ ಕಪಟ ನಾಟಕ ಸೂತ್ರಾಧಾರ ಶ್ರೀ ಲಕ್ಷ್ಮೀ ರಮಣ ಗೋವಿಂದಾ ಗೋವಿಂದ ( ಘಂಟೆ ಜಾಗಟೆ ಸಹಿತ ಮಂಗಳಾರತಿ ಮಾಡಬೇಕು )
ಅಥ ತೃತೀಯೋಧ್ಯಾಯಃ
ಶೌನಕರೆ ಕೇಳಿ ಮತ್ತೊಂದು ಕಥೆಯನು |
ತಾನೇ ಉಲ್ಕಾಮುಖನು ರಾಜನು |
ದಾನಿ ಬುದ್ಧಿ ಸತ್ಯ ಶಾಲಿ ಪ್ರಜಾ ತತ್ಪರನು ||
ಅವನ ಸತಿ ಸರೋಜ ವದನೆಯು |
ಇವರು ಸಂಕಲ್ಪಿತರು ಪೂಜೆಗೆ |
ಅವರು ವ್ರತವನು ಭದ್ರಶಿಲಾ ನದಿಯ ತಟದಲ್ಲಿ ||
ಇಷ್ಟ ಮಿತ್ರರು ಬಂಧು ಜೊತೆಯಲಿ |
ನಿಷ್ಠೆಯಿಂದಲಿ ಸತ್ಯ ದೇವರ |
ಸ್ಪಷ್ಟವಿರೆ ದಂಪತಿಗಳಿವರು ಪೂಜೆ ಗೈದಿಹರು ||
ನದಿಯ ದೆಸೆಯಿಂ ವಣಿಜನೊಬ್ಬನು |
ಮುದದಿ ರಾಜನ ಪೂಜೆ ನೋಡಿರೆ |
ಪದಕೆರಗಿ ನೃಪನ ಕೇಳಿದ ಯಾವ ವ್ರತವಿಹುದು ||
ವಣಿಜ ವ್ಯಾಪಾರವನು ಮಾಡುತ |
ಧನವತುಂಬಿದ ಹಡಗದೊಡೆಯನು |
ಜನರ ಸಂದಣಿ ನೋಡಿ ನಾವೆಗಳನೆ ನಿಲ್ಲಿಸಿದ ||
ಸಾಧು ವಣಿಜನೆ ಸತ್ಯದೇವರ |
ಮೇದಿನಿಯ ಸಮನಿಲ್ಲ ವಿಷ್ಣುವ |
ಕಾದು ಬಳಗವ ಕೂಡಿ ವ್ರತವನ್ನು ಗೈದಿಹೆನು ||
ಸತ್ಯ ಪ್ರಭುವಿನ ವ್ರತದಿ ಸಕಲವ |
ಭೃತ್ಯನಾಗಿಹ ನಾನು ಈ ವ್ರತ |
ನಿತ್ಯ ಸತ್ಯವು ಪುತ್ರ ಧನ ಕನಕಾದಿ ಲಭಿಸುವವು ||
ರಾಜನಿಂ ಪ್ರೇರಿತನು ವೈಶ್ಯನು |
ತೇಜದಿಂ ಅಣಿಯಾಗಿ ಪೂಜೆಗೆ |
ನೈಜವಾಗಿಯೇ ನನಗೆ ಸಂತತಿಯೋಗ ಬೇಕೆಂದ ||
ಮುಂದುವರಿಯದೆ ವಣಿಜ ತಿರುಗಿ |
ಸಂಧಿಸಿಯೇ ತಾ ಮಡದಿ ಬಾಂಧವ |
ನಿಂದು ಸತಿಯಲಿ ವ್ರತದ ರೀತಿಯನು ಪೇಳಿದನು ||
ನಾವು ಸಂತತಿಗಾಗಿ ವ್ರತವನು |
ಆವ ಪೂಜೆಯು ಸತ್ಯ ದೇವರ |
ನಾವು ಸಂತತಿ ಯಾದ ಕೂಡಲೇ ವ್ರತವ ಮಾಡೋಣ ||
ಸತಿಯು ಲೀಲಾವತಿಗೆ ಸಂಭ್ರಮ |
ಅತಿಯ ಆನಂದದಲಿ ಇರುತಿರೆ |
ವ್ರತೆಯಲಂಕುರ ಬೆಳೆಯುತಿರ್ಪುದು ದೇವನುಗ್ರಹದಿ ||
ಬಳಿಕ ದಶಮಾಸದಲಿ ಹೆಂಡತಿ |
ಬೆಳೆದ ಗರ್ಭದಿ ಕನ್ಯೆ ಪ್ರಸವಿಸಿ |
ಬೆಳೆವ ಶಿಸುವು ಶುಕ್ಲ ಪಕ್ಷದ ಚಂದ್ರನಂತಿಹುದು ||
ಕನ್ಯೆ ಹೆಸರದು ಕಲಾವತಿಯೇಂ |
ಮುನ್ನ ಇಟ್ಟಿರೆ ನೆನಪು ಸತಿಯಲಿ |
ತನ್ನ ಗಂಡಗೆ ಸತ್ಯ ದೇವರ ಬಗ್ಗೆ ನೆನಹಿದಳು ||
ಸಂತತಿಯ ನಂತರದಿ ಪೂಜೆಯು |
ಸಂತಸದಿ ಮಾಡುವುದಾಗಿ ಕಲ್ಪಿಸಿ |
ಅಂಥಹ ವೃತ ನಾವು ಮಾಡುವುದೆಂದು ಕೇಳಿದಳು ||
ಹೆಣ್ಣು ಮಗುವಿದು ಲಗ್ನ ಸಮಯದಿ |
ಇನ್ನು ವೃತ ಮಾಡುವುದು ಎನ್ನಲು |
ತನ್ನ ವ್ಯಾಪಾರದಲಿ ವ್ಯಾಪ್ತಿ ಬಗೆಯ ಚಿಂತಿಸುತ ||
ದಿನಗಳೊಂದಿಗೆ ಕಲಾವತಿಯಲಿ |
ಸುನಯ ಮುದದಿಂ ಬೆಳೆಯುತಿರಲು |
ಮನಸು ದೇಹಗಳೆರಡುಪಕ್ವದಿ ಪ್ರಾಪ್ತಳಾಗಿಹಳು ||
ಉಪವರನ ಶೋಧನೆಗೆ ವಣಿಜನು |
ಉಪಾಯದಿ ದೂತರನು ಕಳುಹಿಸಿ |
ನೆಪವ ತೋರದೆ ದೂತ ಕಾಂಚನಪುರಕೆ ಕಳುಹಿದನು ||
ವರ ಕುವರ ಜೊತೆ ತಿರುಗಿ ದೂತನು |
ವರನು ಸದ್ಗುಣಿ ಎಂದು ತಿಳಿದು |
ವರನ ಬಗೆಯೆ ತೋಷದಿಂ ಮಡದಿಯನು ಕರೆದರುಹಿ ||
ಇಷ್ಠ ಬಾಂಧವರೆಲ್ಲ ಕರೆದು ತಾ - |
ನಿಷ್ಠೆ ಆನಂದದಲಿ ಮಗಳನು |
ಇಷ್ಟ ವರನಿಗೆ ಕೊಟ್ಟು ವಿವಾಹ ಮಾಡಿದನು ||
ಲಗ್ನಸಮಯವು ತೀರಿ ಹೋಯಿತು |
ಮಗ್ನದಲಿ ವ್ರತ ಮರೆತು ಹೋಗಿ ಉ- |
ದ್ವಿಗ್ನದಲಿ ಸತ್ಯದೇವರ ಪೂಜೆ ಮರೆತಿರಲು ||
ಮನೆಯ ಅಳಿಯನ ಮಾಡಿಕೊಂಡಿರೆ |
ಮನದಿ ಹರ್ಷಿತ ಅಳಿಯ ನಡೆಯಿಂ |
ವಿನಯಿ ಕುಶಲಳಿಯ ಜೊತೆ ವ್ಯವಹರಿಸಲನುವಾಗಿ||
ಸಿಂಧು ಸನಿಹದ ತಟದಿ ಈರ್ವರು |
ಬಂದು ರತ್ನಸ್ಸಾರ ಪುರದೊಳು |
ನಿಂದು ಸಾಧು ಅಳಿಯ ಜೊತೆ ವ್ಯಾಪಾರ ಬೆಳೆಸುತಲಿ ||
ಚಂದ್ರಕೇತು ಎಂಬ ಅರಸನು |
ಇಂದ್ರ ರತ್ನಸಾರ ಪುರವನು |
ಮಂದ್ರದಿಂ ವ್ಯವಹರಿಸಲೀರ್ವರು ಶುಧ್ಧ ಮನದಿಂದ ||
ವಚನ ತಪ್ಪಿದ ಸಾಧು ವಣಿಜಗ |
ರಚಿತ ಕಷ್ಟವು ಪ್ರಾಪ್ತವಾಗಿರೆ |
ರಚನೆ ದೇವರ ಲೀಲೆಯದು ಶಾಪವಾಗಿರಲು ||
ಒಂದುದಿನ ಅರಮನೆಗೆ ಕಳ್ಳರು |
ಸಂದು ದೋಚಿದ ವಸ್ತುಗಳ ಜೊತೆ |
ಬಂದು ಕಳ್ಳರು ಸಾಧು ವಣಿಜನ ಸದನದಲಿ ಬಿಸುಟು ||
ಭಟರು ತಸ್ಕರರೊಡನೆ ಅಟ್ಟಿರೆ |
ತಟದಿ ವಾಸಿಸುತಿದ್ದ ವಣಿಜನ |
ದಿಟದಿ ತನ್ನಯ ಸದನದಲಿ ಕಳವಾಗಿರ್ಪ ವಸ್ತುಗಳ ||
ಸಾಧು ಅಳಿಯರೇ ಕಳ್ಳರೆಂತಲೂ |
ಸಾಧ್ಯ ಕಳವಿನ ವಸ್ತು ಜೊತೆಯಲಿ |
ಸಾಧಿಸಿಬ್ಬರ ಎಳೆದು ತಂದರು ರಾಜಭಟರವರು||
ರಾಜಧನ ಜೊತೆ ಭಟರು ಕಳ್ಳರ |
ರಾಜಮುಂದಲೇ ತಂದು ನಿಲ್ಲಿಸಿ |
ರಾಜಮಂದಿರಕಳವು ಮಾಡಿದ ರೀರ್ವತಸ್ಕರರ ||
ದೂತ ಮಾತನು ಕೇಳಿರಾಜನು |
ಆತ ಯಾವ ವಿಚಾರ ಮಾಡದೇ |
ಮಾತು ಕಾರಾಗೃಹದ ಶಿಕ್ಷೆಯ ವಿಧಿಸಿ ಬಿಟ್ಟರಲಿ ||
ಸಾಧು ಮಾತನ್ನೊಂದು ಕೇಳದೆ |
ವಿಧಿಸಿರಲು ಕಾರಾಗೃಹದ ಶಿಕ್ಷೆಯು |
ಸಾಧು ದ್ರವ್ಯವು ನೃಪನ ಸ್ವಾಧೀನ ವಾಯಿತದು ||
ಕಳವು ಆಗಿರೆ ವಣಿಜ ಮನೆಯಲಿ |
ಸ್ಥಳದಿ ಧನವದು ಎಲ್ಲ ಹೋಯಿತು |
ನಿಲುವು ದುಃಖವು ತಾಯಿಮಗಳಲಿ ತಾಪಉಂಟಾಗಿ ||
ವಿಧಿಯ ಕೋಪಕೆ ಹೊಟ್ಟೆಗಿಲ್ಲದೆ |
ಆದಿ ವ್ಯಾಧಿಗಳಿಂದ ದುಃಖಿತ |
ಏದುಸಿರು ಬಿಡುತಲೇ ಇಬ್ಬರೊಟ್ಟಿಗೆ ಭಿಕ್ಷೆ ಬೇಡುತಲಿ ||
ತಾಯಿತೆರ ಮಗಳು ದುಃಖಿತ |
ನಾಯಿ ಪಾಡೆಂದೆನುತ ಭಿಕ್ಷೆಗೆ |
ಆಯತಪ್ಪಿದ ಹಸಿವೆ ಬಳಲಿಕೆಯಿಂದ ಬೆಂಡಾಗಿ ||
ಅಲ್ಲಿ ನಡೆದಿಹ ಪೂಜೆ ನೋಡುತ |
ಇಲ್ಲ ಅನ್ಯವು ಕಥೆಯ ಕೇಳುತ |
ಸಲ್ಲು ಸತ್ಯದೇವ ಪ್ರಾಸಾದವನೆ ಸ್ವೀಕರಿಸಿ ||ಕಥೆಯು ವ್ರತವನ ಕೇಳಿನೋಡಿರೆ |
ಅತಿಯಾದ ರಾತ್ರಿಯಲಿ ಮನೆಯೆಡೆ |
ಮಾತೆ ಕೋಪಲಿ ಮಗಳ ಕೇಳಿದಳು ದುಃಖದಲಿ ||
ಹರೆಯದ ಮಗಳು ಹೊರಗಡೆ |
ಹೊರಗೆ ಸರಿ ರಾತ್ರಿಯೊಳು ಉಳಿಯಲು |
ಕರದಿ ಭಿಕ್ಷಾ ಪಾತ್ರೆ ಕೊಟ್ಟಿದೆ ತನ್ನ ತಪ್ಪೆಂದು ||
ಸಂಶಯವು ಇರೆ ತಾಯಿ ಮಗಳಲಿ |
ಸಂಶಯದ ಕಳವಳದಿ ವ್ರತವ ನಿ:_ |
ಸಂಶಯದಿ ದ್ವಿಜರಲ್ಲಿ ಸತ್ಯದೇವ ವ್ರತಒಂದ ||
ಸಾದ್ಯಂತ ಪೂಜೆಯನು ನೋಡುತ |
ಆದ್ಯಂತ ಕಥೆಯನ್ನೆ ಕೇಳುತ |
ವಿದ್ಯಮಾನ ಪ್ರಸಾದ ಕೊಂಬರುವುದಕೆ ಹೊತ್ತಾಗಿ ||
ಸತಿಯು ಲೀಲಾವತಿಗೆ ನೆನಪಲಿ |
ವ್ರತದ ಸಂಕಲ್ಪವದು ಮಾಡಿದ |
ಕಥೆಯು ಪೂಜೆ ಸತ್ಯ ದೇವರ ಮಾಡುತೆಂದರುಹಿ ||
ಬಂಧು ಬಾಂಧವರೊಡನೆ ಸತಿಯಳು |
ಬಂದ ಕಷ್ಟವ ದೂರಗೊಳಿಸಲು |
ಮಿಂದು ಸತ್ಯ ದೇವ ವ್ರತವನೆ ಮಾಡಲುದ್ಯುಕ್ತ ||
ಪತಿಯು ಅಳಿಯನು ಮನೆಗೆ ಬರಲಿ |
ಸತಿಯು ಪ್ರಾರ್ಥಿಸೆ ಸತ್ಯ ದೇವರ |
ಪತಿ ಅಳಿಯರಪರಾಧವ ಕ್ಷಮಿಸೆಂದು ಬೇಡಿದಳು ||
ಇತ್ತ ದೇವರ ಪೂಜೆಯಾಗಲು |
ಸತ್ಯ ಪ್ರಭುವಿನ ಕೃಪೆಯು ಹೊಂದಿರೆ |
ಅತ್ತ ರಾಜಗೆ ಕನಸು ಬಿದ್ದಿಹುದು ಸೂಕ್ಷ್ಮಮದಲಿ ||
ನೃಪನೆ ನೀ ಬಂಧನದಲ್ಲಿ ಇಟ್ಟಿಹ |
ಕಪಟ ಕಳ್ಳರು ಅವರು ಅಲ್ಲವೇ |
ನೆಪವ ಹೇಳದೆ ಅವರನ್ನು ಆದರದಿ ಬಿಡುಎಂದು ||
ತೆಗೆದು ಕೊಂಡಿಹ ಅವರ ದ್ರವ್ಯವ |
ಮಿಗಿಲು ಇನ್ನೊಂದಿಷ್ಟು ಕೂಡಿಸಿ |
ಹೀಗೆಮಾಡೆ ನಿನ್ನ ಸಂಪತಿ ಅಳಿಯದು ಜೋಕೆ ? ||
ಸ್ಮರಣದೊಳು ಇರುವ ಕನಸವ |
ಸರಣಿ ಬಿಡದಲೆ ಜಾವರಾಜನು |
ಭರದಿ ಓಲಗದಲ್ಲಿ ಮಂತ್ರಿಗಳನೆ ಪೇಳಿದನು ||
ಎಲ್ಲರಾಲೋಚನೆಯ ನಿರ್ಣಯ |
ಸಲ್ಲದಲಿ ಬಂಧನದಿ ಇರಿಸಲು |
ನಿಲ್ಲಿಸಲು ನೃಪನ ಎದುರಲ್ಲಿ ಈರ್ವರನು ||
ಭಯಭೀತರಾ ಸಾಧು ಅಳಿಯರ |
ದಯವ ತೋರುತ ಕ್ಷೌರ ಕರ್ಮವ |
ಭಯವಬಿಡಿ ನಿಮಮೇಲೆ ದೇವರ ಕೃಪೆಯು ಉಂಟಾಗಿ ||
ಅವರ ವಸ್ತ್ರಾಭರಣಗಳನೆ ಇತ್ತು |
ದ್ರವ್ಯ ಅವರದು ಮತ್ತೆ ತನ್ನದು |
ದ್ರವ್ಯಭರಿಸಿದೆ ನಿಮ್ಮ ತಾಣಕೆ ಪೋಗೇಂದು ಬಿಳ್ಕೊಟ್ಟ ||
ಎಲ್ಲರಿಷ್ಠಾರ್ಥವನೆ ಪೂರ್ಣವು |
ಆಳರಸಲಿ ವಂದಿಸಿಯೇ ವಣಿಜನು |
ನಿಲ್ಲು ಸ್ಕಂದ ರೇವ ಖಂಡ ತೃತೀಯ ಕಥೆಯಿರಲು ||
ಇತಿ ಶ್ರೀ ಸ್ಕಂದ ಪುರಾಣೆ ರೇವಾಖಂಡೆ ಶ್ರೀ ಸತ್ಯನಾರಾಯಣ ಕಥಾಯಾಂ ತ್ರಿತಿಯೋಧ್ಯಾಯಃ ಪುಂಡರೀಕ ವರದ ಹರಿ ವಿಠ್ಠಲ ಸೀತಾಕಾಂತಃ ಸ್ಮರಣ ಜಯ ಜಯ ರಾಮ || ಮಂಗಲಂ ಭಗವಾನ ವಿಷ್ಣು ಮಂಗಲಂ ಗರುಡ ಧ್ವಜ ಮಂಗಲಂ ಪುಂಡರೀಕಾಕ್ಷ ಮಂಗಲಾಯ ತನಂ ಹರಿಃ ಅನಂತ ಕೋಟಿ ಬ್ರಹ್ಮಾಂಡ ನಾಯಕ ದೇವ ದೇವೋತ್ತಮ ಕಪಟ ನಾಟಕ ಸೂತ್ರಾಧಾರ ಶ್ರೀ ಲಕ್ಷ್ಮೀ ರಮಣ ಗೋವಿಂದಾ ಗೋವಿಂದ ( ಘಂಟೆ ಜಾಗಟೆ ಸಹಿತ ಮಂಗಳಾರತಿ ಮಾಡಬೇಕು )
ಅಥ ಚತುರ್ಥೋಧ್ಯಾಯಃ
ತೃತೀಯ ಸಂಧಿಯೇ ಮುಂದು ವರಿಯುತ |
ತತ್ಪ್ರಭಾವದಿ ಮುಕ್ತ ರಾಗಿಹ |
ಸತ್ಯ ದೇವರು ಈರ್ವರನು ವೀಕ್ಷಿಸುವುದೆಂದು ||
ಸನ್ಯಾಸಿ ರೂಪದ ಸತ್ಯಪ್ರಭುಗಳು |
ಇನ್ನೇನು ಇರುವುದು ನಿನ್ನಹಡುಗದಿ |
ಸನ್ಯಾಸಿ ಇರ್ಪನೀನು ದ್ರವ್ಯಹರಣ ಮಾಡುವಿಯಾ ||
ನಮ್ಮ ಹಡುಗಲಿ ಬೇರೇನು |
ಇಲ್ಲದೆ ಸುಮ್ಮನಿರು ಎಲೆ ಬಳ್ಳಿ ಇರ್ಪವು |
ನಿಮ್ಮ ಗರ್ವದ ನುಡಿಯಂತೆ ಆಗಲಿ ಎಂದನಾದೇವ ||
ಭೋಜನವು ನಿಜ ನಿತ್ಯ ಕರ್ಮವ |
ಯೋಜನೆಯ ತೆರ ತೆರಳಲನುವಾ - |ನಿಜವಾಗಿಯೇ ಹಡಗಿನಲಿ ಎಲೆ ಬಳ್ಳಿ ಗಳಿದ್ದವವು ||
ದ್ರವ್ಯ ಹೋಗಿ ಎಲೆ ಬಳ್ಳಿಯಾಯಿತು |
ಆವ ದೃಶ್ಯವ ಕಂಡು ಮೂರ್ಛಿತ |
ದ್ರವ್ಯ ಹೋಗಿಯ ಚಿಂತೆಯಲಿ ಬಳಲಿ ಹೊಗಿಹನು ||
ಶೋಕ ಮಾಡಲು ಏನು ಕಾರಣ ?|
ಯಾಕೆ ಸನ್ಯಾಸಿಯಲಿ ಸುಳ್ಳನು |
ಬೇಕು ಬೇಕಂತಲೆಯೇ ಹೇಳಿದುದಕ್ಕೆ ಶಾಪವಿದು ||
ಅವನ ಆಶೀರ್ವಾದ ದಿಂದಲೆ |
ಅವೆಲ್ಲವನೆ ಹಿಂದಿರುಗಿ ಪಡೆಯಲು ನಾವು |
ಅವನಲಿ ಶರಣು ಹೋದರೆ ಪಡೆಯ ಬಹುದೆಂದ ||
ಅಳಿಯ ಮಾತನು ಕೇಳಿ ಸಾಧುವು |
ಬಳಲಿ ಸನ್ಯಾಸಿಯನು ಕಂಡಿರೆ |
ಬಳಿಕ ಪಾದಕೆ ಎರಗಿ ಕ್ಷಮೆಯನು ತಾನೇ ಬೇಡಿದರು||
ಅಸತ್ಯನಡಿದ ಮನುಜ ನೀನು |
ಆ ಸತ್ಯ ಪೂಜೆಯ ಆಡಿ ತಪ್ಪಿದೆ |
ಅಸತ್ಯ ಹೇಳಿಕೆಯಿಂದಲೇ ದುಃಖ ಭೋಗಿಸುವಿ ||
ಬ್ರಹ್ಮಾದಿ ದೇವತೆಗಳಿಗೆ ತಿಳಿಯದ |
ಕಮ್ಮಟದ ಕರ್ತನೆ ನಿನ್ನ ಲೀಲೆಯ |
ಅಹಂಭಾವದ ಪಾಮರ ನಾನೆಂತು ತಿಳಿಯುವುದು ||
ಮೂಢ ನಾ ನಿನ್ನಯ ತಿಳಿಯಲಾರೆ |
ಆಢ್ಯದಿಂದಲೆ ತಪ್ಪು ಹೇಳಿದೆ |
ಮೂಢನಾಗಿಹ ನಮ್ಮಗಳ ಕ್ಷಮಿಸೆಂದು ಬೇಡಿದನು ||
ಪೂರ್ಣ ಶರಣಾಗತಿಯ ಹೊಂದಿರೆ |
ಪೂರ್ಣ ದ್ರವ್ಯವನೆಲ್ಲ ಖರ್ಚಿಸಿ |
ಪೂರ್ಣತ್ವ ವ್ರತವನು ವಿಜ್ರುಭಿಸಿ ಮಾಡಿ ಮುಗಿಸಿದನು ||
ಸತ್ಯದೇವರ ಕೃಪೆಯ ಫಲದಿಂ |
ಸತ್ಯವಾಗಿಯೇ ನೌಕೆ ದ್ರವ್ಯದಿ |
ಸತ್ಯಸಂಭ್ರಮದಿಂದ ತನ್ನಯ ಪುರಕೆ ಪಯಣಿಸಿದ ||
ಮಾರ್ಗ ಕ್ರಮಿಸುತ ರತ್ನಪುರಿಯೆಡೆ ವಿ - |
ಸರ್ಗ ದೂತರ ಕಳಿಸಿ ಮನೆಯಲಿ |
ನಿರ್ಗತಿಸೆ ಬಂದಿಹ ವಾರ್ತೆ ಹರ್ಷಮಾನಸದಿ ||
ಸತಿಯು ಸತ್ಯ ದೇವಪೂಜೆಯ |
ಪತಿಯು ಅಳಿಯರು ಬಂದುಬಿಟ್ಟರು |
ಕತೆಯು ಈ ದಿನದಂದೆ ಮಾಡಿದುದ ದಿಟವಹುದು ||
ಪೂಜೆತಿರ್ಥ ಪ್ರಸಾದ ಸೇವಿಸಿ |
ಭಜಿಪ ವ್ರತವನು ಮಗಳಿಗರುಹಿ |
ನೈಜ ಪೂಜೆ ಪ್ರಸಾದಗೊಂಡು ಬೇಗ ಬಾ ಎಂದು ||
ಮಗಳು ಪೂಜೆಯ ಮಾಡಿ ಗಡಿಬಿಡಿ |
ಅಗಲಿದಾ ಪತಿಯನ್ನು ಸಂಧಿಸೆ |
ಆಗ ಪ್ರಸಾದವನೆ ಸ್ವೀಕರಿಸದೆ ಪೋಗಿಹಳು||
ಇತ್ತ ನದಿ ದಂಡೆಯಲಿ ಅಘಟಿತ | ಎತ್ತ ನೋಡಲು ಅಳಿಯ ನೌಕೆಯ |
ಎತ್ತ ಕಾಣದೆ ಸಾಧು ದಂಪತಿ ಮೂರ್ಛೆ ಹೋಗಿಹರು ||
ದ್ರವ್ಯ ಸಹಿತದಿ ನೌಕೆ ಅಳಿಯರು |
ಆವುದದು ತಾ ಕಾಣದಿರಲು |
ಆವ ದುಃಖದಿ ಧರೆಗೆ ಬಿದ್ದಿಹ ಮಗಳ ನೋಡಿರಲು||
ಭಯಗ್ರಸ್ತನು ವಣಿಕ ಚಿಂತೆಯ ಅ -|
ಳಿಯ ನೌಕೆಯ ಸಹಿತ ಮುಳುಗಲು |
ನಿಯತಿ ತಪ್ಪಿದ ದೇವ ಕೋಪಕೆ ಹೀಗೆ ಆಗಿಹುದು ||
ಮಗಳು ತಾಯಿಯು ದುಃಖದಿಂದಲೆ |
ತೆಗಳಿ ದೇವರ ಮಾಯೇ ಕಂಡೆವು |
ಮಿಗಿಲು ಇನ್ನೇನಿಹುದು ಎಂ ಭಯದಿ ಕಂಪಿತರು ||
ಮಗಳು ಪತಿ ಪಾದುಕೆಗಳೊಂದಿಗೆ ಸ- |
ಹಗಮನ ಮಾಡುವುದಕ್ಕೆ ಸಿದ್ಧಳು |
ಹಗೆ ಯಾರದು ನನ್ನ ಮೇಲೆ ತಿಳಿಯದದು ಎಂದ ||
ಸಂತಪ್ತದೊಳ್ ಸಾಧು ಬಣಜಿಗ |
ಸಂತಪ್ತ ಸತ್ಯ ಪ್ರಭುವ ಮಾಯೆಯ |
ಸಂತಸದಿ ಸೇವೆ ಮಾಡುವೆನು ಅಳಿಯ ನೋಡಿರಲು ||
ನಮ್ರತೆಯ ಬೇಡಿಕೆಯು ದೀವಗೆ |
ನಮನದಿಂ ಭಗವಂತ ತುಷ್ಟನು |
ಗಮನ ಗಗನ ಧ್ವನಿಯು ಕೇಳಿತು ಯೆಲ್ಲರಚ್ಚರಿಯ ||
ಮಗಳು ಸದನದಿ ಪೂಜೆಗೈದಿರೆ |
ಬೇಗ ಪತಿಯನು ಕನುವುದಕೆ |
ವೇಗದಿಂ ಬರುವುದಕೆ ಪ್ರಸಾದ ತ್ಯಜಿಸಿದಳು ||
ಪತಿಯ ಜೊತೆ ನೌಕೆಯದು ಕಣ್ಮರೆ |
ಸತಿಯು ತೀವ್ರದಿ ಮನೆಗೆ ಹೋಗಿರೆ |
ಅತಿ ಬೇಗ ಪ್ರಸಾದಗೊಂಡಿರೆ ಪತಿಯ ಕಾಣುವಳು ||
ಮನೆಗೆ ತೆರಳಿದ ಕಲಾವತಿಯಳು |
ವಿನಯದಿಂ ಪೂಜೆ ಗೈದಿರೆ |
ಮನದಿ ನೈವೇದ್ಯವನೆ ಸ್ವೀಕರಿಸಿ ಬಂದಿಹಳು ||
ನೌಕೆ ಅಳಿಯರು ಪೂರ್ಣ ಕಂಡಿರೆ |
ಆಕೆ ಎಲ್ಲರಲಿಯು ನಮಿಸುತ |
ಸಾಕು ಮನೆಗೆ ಹೋಗಿ ಪ್ರಭುವಿನ ಪೂಜೆ ಮಾಡೋಣ ||
ತೋಷದಿಂ ಬಣಜಿಗನು ಪೂಜೆಯ |
ಮೇಷವೆನಿಸದೆ ವೆಚ್ಚ ಮಾಡುತ |
ವಾಸಮಾಡಿಹರೆಲ್ಲ ಬಾಂಧವರೊಡನೆ ಒಡಗೂಡಿ ||
ವಾಣಿ ಬಣಜಿಗ ವ್ರತವ ಮಾಡುತ |
ಕಾಣೆ ಆಮರಣಾಂತ ಪೂಜೆಯ |
ಮಾಣಿ ಇಹ ಸುಖ ಭೋಗಿ ಅಂತ್ಯದಿ ಮೋಕ್ಷವ ಪಡೆದ ||
ಎಲ್ಲರಿಷ್ಟಾರ್ಥವನೆ ಪುಣ್ಯದಿ |
ಇಲ್ಲ ಕಲಿಯುಗದನ್ಯ ವ್ರತವದು |
ನಿಲ್ಲುವುದು ಸ್ಕಂದ ರೇವಾಖಂದ ಚತುರ ಕಥೆ ||
ಇತಿ ಶ್ರೀ ಸ್ಕಂದ ಪುರಾಣೆ ರೇವಾಖಂಡೆ ಶ್ರೀ ಸತ್ಯನಾರಾಯಣ ಕಥಾಯಾಂ ಚತುರ್ಥೋಧ್ಯಾಯಃ ಪುಂಡರೀಕ ವರದ ಹರಿ ವಿಠ್ಠಲ ಸೀತಾಕಾಂತಃ ಸ್ಮರಣ ಜಯ ಜಯ ರಾಮ || ಮಂಗಲಂ ಭಗವಾನ ವಿಷ್ಣು ಮಂಗಲಂ ಗರುಡ ಧ್ವಜ ಮಂಗಲಂ ಪುಂಡರೀಕಾಕ್ಷ ಮಂಗಲಾಯ ತನಂ ಹರಿಃ ಅನಂತ ಕೋಟಿ ಬ್ರಹ್ಮಾಂಡ ನಾಯಕ ದೇವ ದೇವೋತ್ತಮ ಕಪಟ ನಾಟಕ ಸೂತ್ರಾಧಾರ ಶ್ರೀ ಲಕ್ಷ್ಮೀ ರಮಣ ಗೋವಿಂದಾ ಗೋವಿಂದ ( ಘಂಟೆ ಜಾಗಟೆ ಸಹಿತ ಮಂಗಳಾರತಿ ಮಾಡಬೇಕು )
ಅಥ ಪಂಚಮೋಧ್ಯಾಯಃ
ಶೌನಕರೆ ಕೇಳಿ ಒಂದು ಕಥೆಯನು |
ತಾನೆ ಅಂಗಧ್ವಜನೆ ರಾಜನು |
ಮಾನ್ಯ ಮಾಡದೆ ಇರುವ ರಾಜನ ಬವಣೆ ಹೇಳುವೆನು ||ಪ್ರಜರ ಪಾಲನೆಯಲ್ಲಿ ತತ್ಪರ | ವಿಜಯ ಗೈಯುತ ರಾಜ್ಯವಾಳುತ |
ನಿಜದಿ ಒಂದಿನ ಬೇಟೆಯಂದಡವಿಯೆಡೆ ಹೊರಟ ||
ಬೇಟೆಯಾಡಿಯೆ ದಣಿದ ನೃಪನು |
ಅಟವಿಯಲಿ ವ್ಯಾಘ್ರಾದಿ ಮೃಗಗಳ |
ಮಟ್ಟ ಮಧ್ಯಾಹ್ನದಲಿ ಒಂದೆಡೆಯಲ್ಲಿ ವಿಶ್ರಮಿಸಿ ||
ಆಟವಿ ದನಗಾಹಿಗಳು ಪೂಜೆಯ |
ವಟ ವೃಕ್ಷ ದಡಿಯಲ್ಲಿ ಮಾಡಿರೆ |
ದಿಟದಿ ಬಾಲರು ಜಲ ಹಸಾದವ ರಾಜ ಮುಂದಿಟ್ಟು ||
ಅಡವಿ ಬಾಲರ ಪೂಜೆಯಲ್ಲವೆ ? |
ಪೂಡವಿಪಗೆ ಆಢ್ಯತೆ ಯೊಂದುಬಂದು |
ಪೊಡಮಡದೆ ಹಸಾದಗೊಳ್ಳದೆ ತಿರುಗಿ ಊರೆಡೆಗೆ||
ದನಗಾಹಿಗಳು ಪ್ರಸಾದ ಸೇವಿಸಿ |
ವಿನಯ ವ್ರತ ಸಾಂಗತವ ಮಾಡಿರೆ |
ಮಾನ ಅಪಮಾನವದು ಸತ್ಯ ಪ್ರಭುವಿಗಾಯಿತದು ||
ನೂರು ಜನ ಪುತ್ರ ರಾಜ್ಯವ |
ಸೇರು ಸಂಪತ್ತೊಂದು ಉಳಿಯದೆ |
ಮಾರು ಧನ ಧಾನ್ಯವನು ಕಳೆದಿರೆ ದುಃಖ ಗೊಳ್ಳುತಲಿ ||
ದೇವ ಕೋಪವ ತಿಳಿದು ರಾಜನು |
ಅವ ದೇವ ಪ್ರಸಾದ ತ್ಯಜಿಸಿರೆ |
ಈವ ದೇವನೆ ತೆಗೆದುದಂದರಿತು ಹೋಗಿಹನು ||
ಬಾಲ ಅಟವಿಕರಲ್ಲಿ ನೃಪ ಆ -|
ಗಲೇ ಮಾಡಿದ ಪೂಜೆ ಹಸದವ |
ಮೇಲೆ ಶ್ರಿಜಲ ಕೊಡಿರೆಂದು ಕೇಳಿದನು ||
ಆಟಪೂಜೆಯು ನಮ್ಮದು ದೊರೆ |
ದಿಟದಿ ಪ್ರಸಾದವ ಎಲ್ಲಮುಗಿದಿರೆ |
ಆಟವಿಕರು ನಿಮಗೇನು ಕೊಡುವುದು ಎಂದುನಮ್ರದಲಿ ||
ರಾಜ ತಾನೆ ಮುಂದೆ ನಿಂತಿರೆ |
ದ್ವಿಜರ ಕರೆದು ಬಾಲರಿಂದಲೆ |
ವ್ಯಾಜ್ಯ ವಿಲ್ಲದೆ ಸತ್ಯ ಪ್ರಭುವಿನ ವ್ರತವ ಮಾಡಿರಲು ||
ಪೂಜೆ ಮುಗಿಸಿ ಪ್ರಸಾದ ಸೇವಿಸಿ |
ನೈಜದೊಳು ಭೃತ ಭೃತ್ಯ ನಾಗಿರೆ |
ರಾಜ್ಯ ಭೋಗವ ಮರಳಿ ಪಡೆ ಪುತ್ರರಾದಿ ಯಲಿ ||
ಸತ್ಯ ದೇವರ ಕೃಪೆಯು ಹೊಂದಿರೆ |
ಸತ್ಯದಿಂ ಧನ ಧಾನ್ಯ ವೃಧ್ಯಿಯು |
ನಿತ್ಯ ಇಹ ಲೋಕವನೆ ಭೋಗಿಸಿ ಅಂತ್ಯ ಮುಕ್ತಿಯನು ||
ಯಾರು ವ್ರತ ಆಚರಣೆಗೈವರೋ |
ಯಾರು ಶ್ರವಣ ಸಂಕೀರ್ತನೆ ಮಾಳ್ಪರೋ |
ಸಾರ ಧನಧಾನ್ಯ ಪಡೆಧನವಂತನಾಗುವನು ||
ಬಧ್ಧ ನಿದ್ದವ ಮುಕ್ತ ನಾಗುವ |
ಇದ್ದ ಭೂತದ ಬಾಧೆ ನೀಗುವ |
ಇದ್ದ ಇಷ್ಟಾರ್ಥವನೆ ಹೊಂದಿ ಸುಖ ದುಃಖ ಕಡೆಗಾಗಿ ||
ಶೌನಕರೆ ಎಲ್ಲ ಕಥೆಯ ಕೇಳ್ದಿರಿ |
ವಿನಯದಿಂ ಪೂಜೆಯನೆ ಮಾಳ್ಪುದು |
ಮಾನ್ಯ ವ್ರತದಿಂ ಸತ್ಯ ಲೋಕವು ಪ್ರಾಪ್ತವಾಗುವುದು ||
ಕಲಿ ಯುಗದ ಈ ವ್ರತದ ಫಲವದು |
ಹಲವು ನಾಮಗಳೆಲ್ಲ ಪ್ರಭುವಿಗೆ |
ನಿಲುವಿನಲಿ ಸತ್ಯನಾರಾಯಣನ ಹೊಂದಿಹರು ||
ಸತ್ಯ ದೇವನೆ ಸತ್ಯ ಪ್ರಭುವೆ |
ಸತ್ಯ ಕಾಲನೆ ಸತ್ಯ ಈಶನೆ |
ಸತ್ಯ ಶಂಕರ ವರದ ಶಂಕರನೆಂದು ಕರೆಯುತಿರೆ ||
ಭಕ್ತರಿಷ್ಟಾರ್ಥವನು ಪೂರ್ತಿಸಿ |
ಭಕ್ತರಾರಿಷ್ಟಗಳ ದೂರಿಸಿ |
ಭಕ್ತ ಪಾಪವ ನಷ್ಟಮಾಡುವ ವ್ರತವ ಪೇಳಿದೆನು ||
ವಿಷ್ಣು ನಾರದರಲ್ಲಿ ಪೇಳಿದ |
ಜಿಷ್ಣು ಶೌನಕರಲ್ಲಿ ಕೇಳಿದ |
ವಿಷ್ಣು ಕಥೆಯನು ಹೇಳು ಕೇಳುಗರೆಲ್ಲ ಮುಕ್ತಿಯನು ||
ಎಲ್ಲವನು ಒಳಗಿರುವ ರೂಪವೇ |
ಎಲ್ಲರನು ಹೊಂದಿರುವ ಪ್ರಭುವೆ |
ಎಲ್ಲ ಭಕುತರು ಕೇಳಿ ಕಥೆಯ ವೇದವ್ರತ ನಿಂದ ||
ಎಲ್ಲ ರಿಷ್ಟಾರ್ಥವನೆ ಪುಣ್ಯದಿ |
ಇಲ್ಲ ಕಲಿಯುಗದನ್ಯ ವ್ರತವದು |
ನಿಲ್ಲುವುದು ಸ್ಕಂದ ರೇವಾಖಂಡ ಪಂಚ ಕಥೆ ||
ಇತಿ ಶ್ರೀ ಸ್ಕಂದ ಪುರಾಣೆ ರೇವಾಖಂಡೆ ಶ್ರೀ ಸತ್ಯನಾರಾಯಣ ಕಥಾಯಾಂ ಪಂಚಮೋಧ್ಯಾಯಃ ಪುಂಡರೀಕ ವರದ ಹರಿ ವಿಠ್ಠಲ ಸೀತಾಕಾಂತಃ ಸ್ಮರಣ ಜಯ ಜಯ ರಾಮ || ಮಂಗಲಂ ಭಗವಾನ ವಿಷ್ಣು ಮಂಗಲಂ ಗರುಡ ಧ್ವಜ ಮಂಗಲಂ ಪುಂಡರೀಕಾಕ್ಷ ಮಂಗಲಾಯ ತನಂ ಹರಿಃ ಅನಂತ ಕೋಟಿ ಬ್ರಹ್ಮಾಂಡ ನಾಯಕ ದೇವ ದೇವೋತ್ತಮ ಕಪಟ ನಾಟಕ ಸೂತ್ರಾಧಾರ ಶ್ರೀ ಲಕ್ಷ್ಮೀ ರಮಣ ಗೋವಿಂದಾ ಗೋವಿಂದ ( ಘಂಟೆ ಜಾಗಟೆ ಸಹಿತ ಮಂಗಳಾರತಿ ಮಾಡಬೇಕು )
ವೇದವ್ರತ ( ಶ್ರೀ ವೇದವ್ಯಾಸಾಚಾರ್ಯ ಸೀತಾರಾಮಾಚಾರ್ಯ ಕಟ್ಟಿ ನಿವರಗಿ ಕೃತ)
ಶ್ರೀ ಕೃಷ್ಣಾರ್ಪಣಮಸ್ತು
Readers can also search the following posts on the same topic